ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎ಼ ಪಿ. ಸುಬ್ರಹ್ಮಣ್ಯಂ


ಎ಼ ಪಿ. ಸುಬ್ರಹ್ಮಣ್ಯಂ


ಪುತ್ತೂರಿನವರಾದ ಆತ್ಮೀಯ ಎ. ಪಿ. ಸುಬ್ರಹ್ಮಣ್ಯಂ ಅವರು ಕೃಷಿ ತಜ್ಞರಾಗಿ ಹಾಗೂ ತಮ್ಮ ಸಾಹಿತ್ಯ - ಸಂಸ್ಕೃತಿ - ಕಲೆ - ಸಾಮಾಜಿಕ ಕಾಳಜಿಗಳಲ್ಲಿನ ಆಸಕ್ತಿಯಿಂದಾಗಿ ಅನೇಕಾನೇಕ ವಿಷಯಗಳನ್ನು ನಿರಂತರವಾಗಿ ನಮ್ಮ ಗಮನಕ್ಕೆ ಸೆಳೆಯುತ್ತ ಬಂದವರು.

ಡಿಸೆಂಬರ್ 19 ಸುಬ್ರಹ್ಮಣ್ಯರ ಜನ್ಮದಿನ.  ನಾವು ಪರಸ್ಪರ ಕಂಡವರಲ್ಲ. ಆದರೂ ನಾನು ಫೇಸ್ಬುಕ್ಕಿಗೆ ಬಂದ ದಿನಗಳಿಂದಲೂ ಅವರು ನನ್ನ ಪ್ರೋತ್ಸಾಹಿಸುತ್ತ ಬಂದಿರುವ ರೀತಿ ಅವಿಸ್ಮರಣೀಯ.

ಎ. ಪಿ. ಗೌರಿಶಂಕರ ಅವರ ಪುತ್ರರಾದ ಸುಬ್ರಹ್ಮಣ್ಯ ಎಂ.ಬಿ. ಎ. ಓದಿ ಬ್ಯಾಂಕ್ನಲ್ಲಿ ಉದ್ಯೋಗಿಯಾಗಿದ್ದರು.  ಮುಂದೆ ಆ ಹುದ್ದೆಗೆ ರಾಜಿನಾಮೆ ಕೊಟ್ಟು ಪುತ್ತೂರು ಸಮೀಪ ಮರಿಕೆಯ ತಮ್ಮ ಪಿತ್ರಾರ್ಜಿತ ಭೂಮಿಯಲ್ಲಿ ವ್ಯವಸಾಯ ಮಾಡುತ್ತ ಸಂತೃಪ್ತ ಜೀವನ ನಡೆಸುತ್ತಿರುವ ಪ್ರಗತಿಪರ ಕೃಷಿಕರಾಗಿದ್ದಾರೆ. ಸಂಗೀತ, ಸಾಹಿತ್ಯದಲ್ಲಿ ಇವರಿಗೆ ಅಪಾರ ಆಸಕ್ತಿ.  ಶಾಸ್ತ್ರೀಯ ಸಂಗೀತ ಕಲಿತಿದ್ದಾರೆ. ಯಕ್ಷಗಾನ ಪ್ರಿಯರು.  ಅವರಿರುವ ಕಡೆ ಸದಾ ಹಾಸ್ಯ, ನಗು, ಆತ್ಮೀಯ ವಾತಾವರಣ ಎಂಬುದು ಅವರ ಆತ್ಮೀಯರ ಮಾತು. 

ಸುಬ್ರಹ್ಮಣ್ಯರಿಗೆ ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. ನಿಮ್ಮ ಬೆಂಬಲ ಮತ್ತು ಮಾರ್ಗದರ್ಶನ ಸದಾ ನನಗಿರಲಿ.
🎂🎉🍰🎁🍦💐😊

Happy birthday  A P Subrahmanyam ಸಾರ್ 🌷🙏🌷



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ