ಜೈಮಿನಿ ಭಾರತ
ಜೈಮಿನಿ ಭಾರತ 17
ಎಂಟನೆಯ ಸಂಧಿ ಮೊದಲ ಭಾಗ
ಪದ್ಯ ,1 ರಿಂದ 25
ಅರ್ಜುನನ ಪಯಣ
ನಿರೂಪಣೆ: ಸುಬ್ಬುಲಕ್ಷ್ಮಿ
ಸಂಕ್ಷಿಪ್ತ ರೂಪ
ಅನುಸಾಲ್ವನೊಂದಿಗೆ ಸೆಣಸಿದ ನಂತರ ಶಾಸ್ತ್ರೋಕ್ತವಾಗಿ ಯಾಗಶಾಲೆಯ ನಿರ್ಮಾಣ ಕಾರ್ಯ ನಡೆಯಿತು. ವಸಂತ ಋ ತು ಬಂದಿತು. ಎಲ್ಲೆಲ್ಲೂಹಸಿರು. ಚಿಗುರು ಕಾಣಿಸಿತು. ಕಂಪು ಬೀರುವಗಾಳಿ, ಪಕ್ಷಿಗಳ ಕೂಜನ, ಭ್ರಮರಗಳ ಹಿಂಡು ಎಲ್ಲವೂ ವಿರಹಿಗಳ ಎದೆಯಲ್ಲಿ ನೋಯಿಸುವಂತೆ ಇದ್ದವು.
ಎಲ್ಲೆಲ್ಲೂ ಮನ್ಮಥನ ದರ್ಬಾರು ನಡೆದಿತ್ತು.
ಮಲ್ಲಿಗೆ, ಸಂಪಿಗೆ, ಕೆಂದಾವರೆಗಳು, ಚಿಗುರಿದ ಅಶೋಕೆ, ಬಣ್ಣಬಣ್ಣದ ಹೂಗಳು ತುಂಬಿ ಆ ಮಧುಮಾಸ ಶೋಭಿಸಿತು. ಆ ಚೈತ್ರಮಾಸವು ಧರ್ಮಜನ ಕೀರ್ತಿಯನ್ನು ಎಲ್ಲೆಡೆಗೂ ಹೊತ್ತು ಒಯ್ಯುವಂತೆ ಮಂದಾನಿಲದಿಂದ ಕೂಡಿತ್ತು.
ನಂತರ ಧರ್ಮಜನು ವ್ಯಾಸರ ಅನುಜ್ಞೆಯಂತೆ ಎಲ್ಲ ಮುನಿಗಳನ್ನು ಕರೆಸಿ ಯಜ್ಞ ಶಾಲೆಯನ್ನು ರಚಿಸಿ ದೀಕ್ಷೆಯನ್ನು ವಹಿಸಿದನು. ಯಾಗದ ಕುದುರೆಯನ್ನು ಅಲಂಕರಿಸಿ ಅದರ ಹಣೆಯಲ್ಲಿ ಸುವರ್ಣಪಟ್ಟಿಕೆಯಲ್ಲಿ ಯಾಗದ ಕುದುರೆಯಿದು ಎಂದು ಬರೆಸಿದನು. ನಂತರ ಪೂಜಿಸಿ ಬೀಳ್ಕೊಟ್ಟರು. ಧರ್ಮಜನು ವ್ರತನಿಷ್ಠನಾದನು.
ಅದರ ರಕ್ಷಣೆಗೆ ಅರ್ಜುನನನ್ನು ನೇಮಿಸಿದನು. ಅವನೊಂದಿಗೆ ಅನುಸಾಲ್ವ, ಯೌವನಾಶ್ವ, ಕರ್ಣಜ, ಸಾತ್ಯಕಿ, ಪ್ರದ್ಯುಮ್ನ ಮೊದಲಾದವರು ಹೊರಟರು. ಅವರವರ ರಾಣಿಯರು ತಮ್ಮ ಕಾಂತರನ್ನು ಆರತಿ, ಸೇಸೆಯೊಂದಿಗೆ ಬೀಳ್ಕೊಟ್ಟರು. ರಾಣಿಯರನ್ನು ಮುದ್ದಿಸಿ, ಮುಂಗುರುಳು ತೀಡಿ ಇವರುಗಳು ಹೊರಟರು.
ಆ ಹಯವು ಸ್ವೇಚ್ಛೆಯಿಂದ ನಡೆಯುತ್ತ ತೆಂಕ ಮುಖವಾಗಿ ನಡೆಯಿತು. ಅಲ್ಲಿ ಮಾಹಿಷ್ಮತೀ ನಗರವು ಎದುರಾಯಿತು. ನೀಲಧ್ವಜನೆಂಬುವನು ಅದರ ಅರಸು. ಅವನ ಮಗ ಪ್ರವೀರ. ರಾಣಿಯರೊಡಗೂಡಿ ಉದ್ಯಾನದಲ್ಲಿ ವಿಹಾರಕ್ಕೆ ಬಂದಿದ್ದರು.
ಕರ್ಣಕಾರವನ್ನು, ಸಂಪಗೆಯನ್ಬು ಕುರುಳುಗಳಲ್ಲಿ ಮುಡಿದ ಸುಂದರಿಯರ ತನುಪರಿಮಳಕ್ಕೆ ದುಂಬಿಗಳು ಮುತ್ತಿದುವು.
ಅವರು ಹೂಗಳನ್ನು ಕೊಯ್ದು, ಚಿಗುರುಗಳನ್ನು ತಳೆದ ತರುಗಳಂತೆ ಶೋಭಿಸಿದರು. ಅವರ ತೋರ ಮೊಲೆಗಳ ಭಾರವನ್ನು ಸೈರಿಸಲಾರದೆ ನಡು ಬಡವಾಯಿತೇನೋ ಎಂಬಂತೆ ಇತ್ತು. ಕಣ್ಣಬೆಳಕು ಎಲ್ಲೆಲ್ಲೂ ಕಂಗೊಳಿಸಿತು. ನಡುವಿನ ಗಟ್ಟಿತನಕ್ಕೆ ಪಟ್ಟಿಯೋ ಎಂಬಂತೆ ತ್ರಿವಳಿಗಳು ಸುಳಿದವು. ಕಾಲಿನ ಗೆಜ್ಜೆಗಳ ಶಬ್ದ ಮೋಹಕವಾಗಿತ್ತು. ಹೀಗೆ ಅಲ್ಲಿ ವಿಹಾರಕ್ಕೆಂದು ಬಂದಿದ್ದ ಹೆಣ್ಣುಗಳನ್ನು ನಾನಾ ವಿಧವಾಗಿ ವರ್ಣಿಸಿದ್ದಾನೆ ಕವಿ. ಅವರು ಅಶ್ವಮೇಧದ ಕುದುರೆಯನ್ನು ಕಂಡರು. ಅವರಲ್ಲಿ ಮದನಮಂಜರಿ ಅದರ ಹಣೆಯ ಮೇಲಿದ್ದ ಫಲಕವನ್ನು ಓದಿದಳು. ಯಮಸುತನ ಅಗ್ಗಳಿಕೆಯನ್ನು ಕಂಡು ತನ್ನ ಪತಿಗೆ ಈ ವಿಷಯವನ್ನು ತಿಳಿಸಲು ಕನಲಿದ ಅರಸನು ಪರಿವಾರವನ್ನು ಅರಮನೆಗೆ ಕಳಿಸಿ ಕುದುರೆಯನ್ನು ಕಟ್ಟಿಹಾಕಿ ಸೇನೆಯನ್ನು ಬರಹೇಳಿದನು. ಪ್ರವೀರನಿಗೆ ಅಗ್ನಿಯ ಬಲವಿತ್ತು. ಅದರಿಂದಾಗಿ ಕುದುರೆಯನ್ನು ಕಟ್ಟಿದನು. ಅಗ್ನಿಯು ಅವರ ಮನೆಯ ಅಳಿಯ.
ಎಂಟನೆಯ ಸಂಧಿ ಮೊದಲ ಭಾಗ
ಪದ್ಯ 1 ರಿಂದ 25
ಸೂಚನೆ | ಅಧ್ವರೋಪಕ್ರಮದೊಳಮಲಹಯಮ್ಮೆದೆ ನೀ | ಲಧ್ವಜನ ಪಟ್ಟಣದೊಳಗ್ನಿಯಂ ಕಂಡರಿಬ | ಲದ್ಧಂಸಿ ಪಾರ್ಥನವನು ಜಯಿಸೆ ಭಂಗದಿಂ ತನ್ನ ಪುರಮಂ ಪೊಕ್ಕನು |
ರಾಯ ಕೇಳನುಸಾಲ್ವನಂ ಕೂಡಿಕೊಂಡು ಕಮ | ಲಾಯತಾಂಬಕನಖಿಳಯಾದವರ ಗಡಣದಿಂ । ದಾ ಯುಧಿಷ್ಠಿರನೃಪನ ಸನ್ಮಾನಮಂ ತಳೆಯುತಿರೆ ಜಾಹ್ನವೀತಟದೊಳು|| ಆಯಿತಧ್ವರಶಾಲೆ ಶಾಸ್ತ್ರ ವಿಶ್ರುತದ ವಿವಿ | ಧಾಯಿತ ವಿಚಿತ್ರ ವೈಭವದಿಂದ ಬಳಿಕಾ ಮ | ಹಾ ಯಾಗದನುಪಮ ಪ್ರಾರಂಭಕಾಲದ ವಸಂತರ್ತು ಸಂಭವಿಸಿತು||೧||
ಒಂದೆಡೆಯೊಳಂ ತನಗೆ ನಿಲವಿಲ್ಲದತಿವೇಗ | ದಿಂದೆ ನಿರುತಂ ಪ್ರಬಲವಾಗಿ ಬೀಸುವ ಗಾಳಿ | ಚಂದನದ್ರು ಮಮಂ ತೊಡರ್ದಹಿಗಳಾಹಾರವಂ ಕೊಂಡುಕೊಂಡು ಮಿಕ್ಕು | ಮಂದತ್ವಮಂ ತಳೆದು ಮಲಯಾಚಲದ ಸೀಮೆ | ಯಿಂದೆ ಸರಸಿಜದೊಳ್ ಭ್ರಮಿಸುವ ಮರಿದುಂಬಿಗಳ | ವೃಂದಮಂ ಕೂಡಿಕೊಂಡಲೆವೆಲರ್ ಬಂದುದು ವಿರಹಿಗಳೆದೆಯಾರುವಂತೆ ||೨||
ಮಿರುಗುವ ತಳಿರ್ದೊರಣಂಗಳಂ ಕಟ್ಟಿಸುತೆ | ಮರಿಗೋಗಿಲೆಗಳ ಬಾಯ್ಗಳ ಬಲಿದ ಬಂಧನದ | ಸೆರೆಗಳಂ ಬಿಡಿಸುತ್ತೆ ತುಂಬಿಗಳ ದಳಕೆ ಕಮ್ಮಲರ್ಗಳಂ ಸೂರೆವಿಡುತೆ || ಕಿರುವೆಲರೊಳೆತ್ತಲುಂ ಸಾರಿಸುತೆ ವಿರಹಿಗಳ | ನೆರಗಿಸುತೆ ಜೊನ್ನದ ಜಸಂ ಪೆರ್ಚೆ ಮಧುನೃಪಂ | ಪೊರಮಟ್ಟು, ಮಾಗಿಯನ್ನು ಡುಗಿಸಿ ಸಮಸ್ತ ವನರಾಷ್ಟ್ರಮಂ ಕೈಕೊಂಡನು || ೩ ||
ಪೊಸಮಾವಶೋಕೆಯೊಳ್ ಮರಿದುಂಬಿ ಕೋಗಿಲೆಯೊ | ಳೆಸೆವ ಸಂಪಗೆ ಪೊಚ್ಚ ಪೊಂದಾವರೆಯೊಳೊಳ್ ! ಡಸಿದ ಮಲ್ಲಿಗೆಯಲರ್ ಬೆಳತ ಬೆಳ್ದಿಂಗಳೊಳ್ ಗಿಳಿವಿಂಡು ಬನಸಿರಿಯೊಳು || ಎಸೆದುವೊಂದೊಂದರೊಳ್ ಮಧುಮಾಸಕಂಗಜನ | ದೆಸೆಯಂತೆ ಖತಿಯಂತೆ ಧನದಂತೆ ಜಸದಂತೆ | ಪಸುರ್ವೆಳಸಿನಂತೆ ಕೆಂಪಸಿತಂ ಪಳದಿ ಪಳುಕುಪಚ್ಚೆಗಳ ಬಣ್ಣದಿಂದೆ||೪||
ತಳಿತೆಸೆವ ತರುಗಳ ನೆಳಲ್ಗಳಂ ಸಾರ್ದು ಶೀ | ತಳದ ನಿರ್ಮಲಸುವಾರಿಯನೀಂಟಿ ನವ್ಯ ಪರಿ | ಮಳದಿಂದ ಸೊಗಸ ತೀಡುವ ತೆಳುವೆಲರ್ಗೆ ಮೈಯೊಡ್ಡಿ ಮಾರ್ಗಶ್ರಮವನು|| ಕಳೆದರಧ್ವರಗರೋಪದೊಳ್ ನೆರೆದು ವಿರಹಿಗಳ್ | ಮಲಯಜದ ಘನಸಾರದೊಳ್ ತಂಪುವೆತ್ತು ನಿ | ಚ್ಚಳದ ಕರುವಾಡದೊಳ್ ಭೋಗಿಸಿದರಂದು ಚೈತ್ರಾಗಮದ ಸಂಭ್ರಮದೊಳು ॥ ೫॥
ಆ ಚೈತ್ರಮಾಸಮೆಸೆದುದು ಧರ್ಮಜನ ಕೀರ್ತಿ | ಭೂಚಕ್ರಮಂ ಮುಸುಕಿದಂತೆ ಬೆಳುದಿಂಗಳಿರೆ | ಯಾಚಕರನೆತ್ತಲುಂ ಕೂಗಿ ಕರೆವಂತುಲಿಯೆ ಕೋಗಿಲೆಗಳಿಳೆಯ ಜನದ || ಲೋಚನಕುದಯಿಸುವ ಪಸದಂತೆ ಚೂತಾಂಕುರಂ | ಗೋಚರಿಸೆ ಪಾತಕಕ್ಷಯದಂತೆ ಮಾಗಿಯ ವಿ | ಮೋಚನಂ ಕಾಣಿಸಲ್ ಪುಣ್ಯವಾಸನೆಯಂತೆ ದಕ್ಷಿಣದ ವಾಯು ಸುಳಿಯೆ ॥ ೬ ॥
ಧಾತ್ರೀಶ ಕೇಳ್ ಬಳಿಕ ಧರ್ಮಜಂ ತಾಮರಸ | ನೇತ್ರ ವೇದವ್ಯಾಸರಾಜ್ಞೆಯಿಂದಖಿಳರ್ಷಿ ! ಗೋತ್ರದ ಮುನಿಗಳೆಲ್ಲರಂ ಕರೆಸಿ ಮೇಲವರನುಜ್ಞೆಯಿಂದಾ ಯಜ್ಞದ || ಸೂತ್ರಪ್ರಕಾರದಿಂದಾರಾಜಿಸುವ ಬಹಿಃ | ಕ್ಷೇತ್ರದದ್ವರಶಾಲೆಯೊಳ್ ದೀಕ್ಷೆಯಂ ತಳೆದು | ಚೈತ್ರಸಿತಪೌರ್ಣಮಾಸಿಯ ದಿನದೆ ಬಿಟ್ಟ ನರ್ಚಿಸಿ ಹಯವನುತ್ಸವದೊಳು | ೭ |
ಇಂದುಕುಲದಗ್ಗಳೆಯ ಪಾಂಡುವಸುಧಾಪಾಲ | ನಂದನ ಯುಧಿಷ್ಠಿರ ನರೇಂದ್ರನಧ್ವರಹಯಮಿ | ದಂ ದಿಟ್ಟ ರಾರಾದೊಡಂ ಕಟ್ಟಿಕೊಳ್ಳಲಾರ್ಪೊಡಿಳೆಯೊಳೆಂಬೀ ಲಿಪಿಯನು | ಸಂದಿಸಿ ಬರೆದ ಕನಕಪಟ್ಟ ಮನದರ ಪಣೆಯೊ । ಳೊಂದಿಸಿ ತುರಂಗಮವನಮಲವಸ್ತ್ರಾಭರಣ | ದಿಂ ದಿವ್ಯ ಗಂಧಮಾಲ್ಯಾಕ್ಷತೆಗಳಿಂದಲಂಕರಿಸಿ ಬಿಟ್ಟರ್ ಶುಭದೊಳು||೮||
ಶ್ಲಾಘ್ಯದಿಂದಾದ ಮಜ್ಜನಭೋಜನದ ಸದಾ | ರೋಗ್ಯದಿಂ ತಾಂಬೂಲ ವಸ್ತ್ರ ಭೂಷಣದ ಸೌ । ಭಾಗ್ಯದಿಂ ಕುಸುಮ ಪರಿಮಳಲೇಪನಂಗಳಿಂ ಸ್ತ್ರೀಪುರುಷರೇಕಾಂತಕೆ| | ಯೋಗ್ಯವಹ ಸಜ್ಜೆ ವನೆಯೊಳಗೀರ್ವರುಂ ದಿವ್ಯ | ಭೋಗ್ಯಮೆನಿಪೊಂದು ಮಂಚದೊಳೊರಗಿ ಕಾಮ | ರಾಗ್ಯವಾಗಿರ್ಪುದಸಿಪತ್ರವ್ರತಂ ತದ್ವ್ರ ತದೊಳರನಸ ನಿರುತಿರ್ದನು||೯||
ತದ್ಯಾಗವೊಂದು ಬರಿಸಕೆ ಮುಗಿವುದನ್ನೆ ಗಂ! ಸದ್ಯಾಜಮಾನದೀಕ್ಷೆಯನವನಿಪಂ ತಾಳ | ನುದ್ಯುಕ್ತರಾದರರ್ಜುನನೊಡನೆ ಹಯರಕ್ಷೆಗಸುರಹರನಾಜ್ಞೆಯಿಂದೆ || ಉದ್ಯತ್ಪರಾಕ್ರಮಿಗಳನುಸಾಲ್ವ ಸಾತ್ಯಕಿ | ಪ್ರದ್ಯುಮ್ನ ಕೃತವರ್ಮ ಯೌವನಾಶ್ವಾತಿಬಲ | ಖದ್ಯೋತಸುತನು ಮೊದಲಾದ ವೀರರೊದಗಿತು ಚಾತುರಂಗದೊಡನೆ ||೧೦||
ಇಭಮುಖಾರ್ಚನೆಯಂ ನವಗ್ರಹದ ಪೂಜೆಯಂ | ವಿಭವದಿಂ ಮಾಡಿ ಧರ್ಮಜ ಭೀಮ ಕುಂತಿಗ | ಳ್ಗಭಿನಮಿಸಿ ಕೃಷ್ಣನ ಪದಾಂಬುಜಕ್ಕೆರಗಿ ದಿಕ್ಷಾಲರಂ ಬೇಡಿಕೊಂಡು|| ಶುಭಮಹೂರ್ತದೊಳರಸಿಯರ ಸೇಸೆವೆತ್ತು ಮುನಿ | ಸಭೆಗೆ ವಂದಿಸಿ ಪರಕೆಗೊಂಡು ಪಾಠಕರ ಜಯ | ರಭಸದಿಂದೆಸೆವ ಮಂಗಳವಾದ್ಯ ಘೋಷದಿಂದರ್ಜುನಂ ಪೊರಮಟ್ಟನು||೧೧||
ಮುರಹರನ ರಾಣಿಯರ್ ಧುರಧೀರ ಕರ್ಣಸುತ | ನರಸಿಯೆಂದೆನ್ನ ಪೊಗಳ್ವಂತೆ ಮಿಗೆ ಸಂಗರದೊ | ಳರಿಗಳಂ ಗೆಲ್ವುದೆಂದಾರತಿಯನೆತ್ತಿ ಮುತ್ತಿನ ಸೇಪೆಗಳನೆ ಸೂಸಿ ॥ ಭರದಿಂದ ಬಂದಪ್ಪಿದಂಗನೆಯ ಮೊಗನೋಡಿ | ಕುರುಳುಗಳನುಗುರ್ಗಳಿಂ ತಿದ್ದಿ ಮುದ್ದಿಸಿ ತನ್ನ | ಬೆರಳುಂಗುರಂಗೊಟ್ಟು ಸಂತೈಸಿ ವೃಷಕೇತು ಕಾಂತೆಯಂ ಬೀಳ್ಕೊಂಡನು ||೧೨||
ಅಂಕೆಯಿಂದರ್ಜುನಂಗಂದು ಯಾದವಸೈನ್ಯ! ಮಂ ಕೂಡಿಕೊಟ್ಟು ದಳಪತಿಯಾಗಿ ತನಯನಂ । ಮುಂಕೇಳಿಸಿ ಕರ್ಣಜ ಸುವೇಗಾನುಸಾಲ್ವರ ಸಹಾಯಮಂ ಕೈವರ್ತಿ ಸಿ ॥ ಪಂಕರುಹಲೋಚನಂ ಪೊರಮಟ್ಟನಿಬರೆಲ್ಲ | ರಂ ಕಳುಹಿ ತಿರುಗಿದಂ ಸ್ಟೇಚ್ಛೆಯಿಂದಾ ಹಯಂ | ತೆಂಕಮೊಗವಾಗಿ ನಡೆದುದು ಕರಿತುರಗರಥಪದಾತಿಗಳ್ ಸಂದಣಿಸಲು |೧೩|
ಊಹಿಸುವೊಡರಿದೆನೆ ತುರಂಗಮದ ಕೂಡೆ ಸ | ನ್ನಾಹದಿಂ ಮೇರೆದಪ್ಪಿದ ಮಹಾರ್ಣವದ ಪ್ರ | ವಾಹಮೆನೆ ತಳ್ತಿಡಿದ ತರುಗುಲ್ಕಲತೆಗಳಿಂ ನಡೆಗೊಂಡ ಕಾನನವೆನೆ || ಮೋಹರಂ ಭೂತಳಮನೊಳಕೊಂಡು ಬರುತಿರ್ದು | ದಾಹಯಂ ಬಳಿಕ ದಕ್ಷಿಣದಿಶಾಮುಖವಾಗಿ 1 ಮಾಹಿಷ್ಮ ತೀಪಟ್ಟಣದ ಬಹಿರ್ಭಾಗದುಪವ ನದೆಡೆಗೆ ನಡೆತಂದುದು||೧೪||
ಆ ನಗರದರಸು ನೀಲಧ್ವಜಂ ಮೇಣವನ | ಸೂನು ಪ್ರವೀರನೆಂಬವನಾಗಳಲ್ಲಿಗು | ದ್ಯಾನಕೇಳಿಗೆ ಬಂದನೊಲವಿಂದ ಮದನಮಂಜರಿಯೆಂಬ ಕಾಂತೆಯೊಡನೆ|| ಆ ನಳಿನಲೋಚನೆಯ ಕೆಳದಿಯರ್ ಬಿಡಯದಿಂ । ದಾನಂದನದೊಳು ಸಂಚರಿಸುತಿರ್ದರ್ ಒಳಿಕ | ಮಾನಕೇತನ ಮಹೀಪಾಲನರಮನೆಯ ಸೊಕ್ಕಾನೆಗಳ ತಂಡದಂತೆ||೧೫||
ನೋಡಿ ತಿಲಕವನಪ್ಪಿ ಕುರುವಕವನೆಳನಗೆಯೊ | ಕೂಡಿ ಸಂಪಗೆಯಂ ಪ್ರಿಯಂಗುವಂ ಸೋಂಕಿ ಮುರಿ | ದಾಡಿ ಚೂತಮನೊದೆದಶೋಕೆಯಂ ಬಕುಳಮಂ ಮುಕ್ಕುಳಿಸಿ ಮದ್ಯದಿಂದ|| ಪಾಡಿ ಪುನ್ನಾಗಮಂ ಕರ್ಣಕಾರವನೆ ಕೊಂ| ಡಾಡಿ ಮಂದಾರಮಂ ಜಾಣ್ಣುಡಿದು ಪುಷ್ಪಿ ತಂ । ಮಾಡಿ ತೋರಿದರಂಬುಜಾಕ್ಷಿಯರ್ ನಾನಾವಿಲಾಸದಿಂದಾ ಬನದೊಳು||೧೬||
ಮುಟ್ಟಲ್ ಪ್ರಿಯಂಗು ಪೂವಹ ತರಳೆಯರ ಕೈಗೆ | ನಿಟ್ಟಿಸಲ್ ತಿಲಕಮಲರಹ ನೀರೆಯರ ಕಣ್ಗೆ| ಮೆಟ್ಟಿದೊಡಶೋಕಮಂಕುರಮಪ್ಪ ಬಾಲೆಯರ ಮೆಲ್ಲಡಿಗೆ ಮಿಗೆ ಬೆಳ್ಳಗೆ || ಪುಟ್ಟ ಸಂಪಗೆ ಮುಗುಳ್ದೋರ್ಪ ಸುದತಿಯರ | ಬಟ್ಟ ಮೊಗಕೆಣೆಯಹವೆ ತಾವರೆಗಳೆಂದವಂ | ಬಿಟ್ಟು ತುಂಬಿದ ಜೌವನೆಯರ ತನುಪರಿಮಳಕೆ ಕವಿದುವಾ ಬನದಳಿಗಳು ॥೧೭॥
ಸಣ್ಣ ನಡು ಸೈನಿಮಿರೆ ತೋಳಮೊದಲೊಸೆಯೆ | ತಿಣ್ಣ ಮೊಲೆಗಳ ಪೊದಳೆ ಬೆನ್ನ ಸೋರ್ಮುಡಿಯಲೆಯೆ | ಕಣ್ಣ ಬೆಳಗಾಗಸವನಾವರಿಸೆ ಮೊಗಮೆತ್ತಿ ತುದಿಗಾಲ್ಗಳಿಂದೆ ನಿಂದು || ಬಣ್ಣವಳಿಯದ ಪೂಗಳಂ ಕೊಯ್ದು ಬೆಂಡಾಗಿ | ತಣ್ಣಿಲರ್ಗೊಡ್ಡಿ ಮೈಬೆಮರನಾರಿಸಿಕೊಂಡು | ಪೆಣ್ಣು ವಿಂಡಾ ಬನದೊಳಲರ್ಗಳಂ ತಮ್ಮ ತನುವಿನ ಕಂಪಿನಿಂ ಪೊರೆದರು ॥೧೮॥
ನಿಲುಕಿ ಪೂಗೊಯ್ವ ಲಲಿತಾಂಗಿಯರ ಬಟ್ಟ ಬ | ಲ್ಗೊಲೆಗಳಂ ಪೊರಲಾರದಸಿಯ ಸೆಳೆನಡುವಿದು ಶಿ | ಥಿಲವೆಂದು ಹರಿನೀಲದೆಸೆವೊಂದು ಸಣ್ಣ ಸರಳಂ ಮನೋಜಂ ನಿರ್ಮಿಸಿ | ನಿಲಿಸಿ ಬಿಗಿದನೊ ಮೂರು ಕಟ್ಟ ನಡೆಗೆಡೆಗೆನಲ್ | ಸಲೆ ರಾಜಿಸಿತು ವಳಿಯದ ಚೆಲ್ವಿಕೆಯಿಂದೆ | ಲಲನೆಯರ ಮಧ್ಯದೊಳೊಗೆದ ಬಾಸೆ ಕುಸುಮಾಪಚಯಸಮಯದೊಳ್ ಪೊಸಶೆನೆ||೧೯||
ತುಂಬಿಗಳನೋಡಿಸದ ಚಂಪಕಂ ಸೊಕ್ಕಾನೆ | ಯಂ ಬೆದರಿಸದ ಸಿಂಗಮಿಡಿದಂಧಕಾರಮಂ । ತುಂಬಿಸದ ಚಂದ್ರಮಂಡಲಮಿರಲ್ ಕಂಡಿಲ್ಲಿ ನಾವು ಮಿರ್ದೊಡೆ ನಮ್ಮನು|| ಶಂಬರಾರಿಯ ತರಂ ಕಾಡದಿರುಳಿನ ವಿರಹ | ಕೆಂಬ ನಿಶ್ಚಯದೊಳಗಲದೆ ಬಾಲಿಕೆಯರುರವ | ನಿಂಬುಗೊಂಡೆಣೆವಕ್ಕಿಯೆನಲೆಸೆದುವಲರ್ಗೊಯ್ವ ನೀರೆಯರ ನೆಲೆಮೊಲೆಗಳು||೨೦||
ಮೊಳೆವಲ್ಲ ಮೊಲ್ಲೆಯಂ ಚೆಂದುಟಿಯ ಬಂದುಗೆಯ |ನೆಳನಗೆಯ ಮಲ್ಲಿಗೆಯ ನೆಸಳ್ಗಣ್ಣ ನೈದಿಲಂ । ನಳಿತೋಳ ಸಿರಿಸಮಂ ಸೆಳ್ಳುಗುರ ಕೇತಕಿಯ ನುಣ್ಮೊಗದ ತಾವರೆಯನು || ತೊಳಗುವ ಸುನಾಸಿಕದ ಸಂಪಗೆಯನವಯವದೊ | ಳಳವಡಿಸಿ ಕುಸುಮಗಂಧಿಯರೇತಕಿನ್ನು ಪೂ | ಗಳನರಸಿ ಕೊಯ್ವರೆಂದವರ ನಡು ಚಿಂತಿಸಿಯೇ ಬಡವಾದುದೆನಲೆಸೆದುದು |೨೧||
ಕರವೀರವರ್ಗಮುಂ ಬಾಗಿಸಿದರದಟರಂ | ತಿರದೆ ಪುನ್ನಾಗಮಂ ಪತ್ತಿರಂಜಿಸಿದರ್ ಚ | ದುರಮಾವುತಿಗರಂತೆ ಜಾತಿಯಂತರವನರಿದಾಯ್ದ ರವನೀತರಂತೆ || ಸುರಗಿಯಂ ತುಡುಕಿದರ್ ಭಟರಂತೆ ಬಗೆಗೆಳಸಿ । ಪರಿದರ್ ಸುವಿಟರಂತೆ ಪಾದರಿಯನರಸಿ ಪಿಡಿ | ದುರವಣಿಸಿದರ್ ನಗರಶೋಧನೆಯ ತಳವಾರರಂತೆ ಬನದೊಳ್ ಪೆಣ್ಣಳು ||೨೨||
ಜಾತಿ ಸೇವಂತಿಗೆ ಶಿರೀಷಮೊದಲಾದ ಪೂ | ಜಾತಿಗಳೊಳಿಂತಲರ್ಗೊಯ್ಯುತುಪವನದೊಳ್ ನಿ। ಜಾತಿಶಯಲೀಲೆಯಿಂದಿರುತಿರ್ದಳಾ ಮದನಮಂಜರಿ ಕೆಳದಿಯರೊಡನೆ || ಭೂತಳದೊಳಿದು ಶುಭಾಕಾರದಿಂದಾಶ್ಚರ್ಯ| ಭೂತಮೆನೆ ಮೈದೋರಿತಾಗಳಮರೇಂದ್ರ ಸಂ| ಭೂತನ ತುರಂಗಮಮದಂ ಕಂಡು ಮುತ್ತಿದರ್ ಮತ್ತಗಜಗಾಮಿನಿಯರು ॥೨೩||
ವನಿತೆಯರೊಳಾ ಮದನಮಂಜರಿ ಹಯದ ಪಣಿಯ | ಕನಕಪಟ್ಟದ ಲೇಖನವನೋದಿಕೊಂಡು ಯಮ । ತನುಜನಗ್ಗಳಿಕೆಯಂ ಕಂಡು ನಸುನಗುತೆ ನಿಜಪತಿಗಾಗಳದನುಸಿರಲು || ಕನಲ್ದಿ ನಿಯಳಂ ನೋಡುತವನೆದ್ದು ಕಾಣಬಹು | ದೆನುತೆ ಪಿಡಿದಶ್ವಮಂ ಕಟ್ಟಿ ಪಟ್ಟಣಕೆ ಮಾ | ನಿನಿಯರಂ ಕಳುಹಿ ಪರಿವಾರಮಂ ಕರೆಸಿ ನರನೊಳ್ ಕಾದಲನುವಾದನು ||೨೪||
ಭೂಲೋಲ ಕೇಳಗ್ನಿ ಮನೆಯಳಿಯನಾಗಿಹಂ। ನೀಲಧ್ವಜಂಗದೆಂತೆನೆ ಮುನ್ನ ವನ ಮಗಳ್ | ಮೂಲೋಕದೊಳ್ ಸುಭಗರಾರೆಂದರಸಿ ನೋಂತು ಪಾವಕನ ನೊಲಿಸೆ ಮೆಚ್ಚಿ ಬಾಲಿಕೆಯನಂದುಮೊದಲಾಗಿ ವೈಶ್ವಾನರಂ | ಪಾಲಿಪಂ ಪತಿರೂಪದಿಂದಾ ಪುರದೊಳವನ | ಮೂಲ ಬಲದಿಂ ಪ್ರವೀರಂ ಪಿಡಿದು ಕಟ್ಟಿದಂ ಪಾರ್ಥನ ತುರಂಗಮವನು ||೨೫||
ಜೈಮಿನಿ ಭಾರತ 18
ಎಂಟನೆಯ ಸಂಧಿ ಕೊನೆಯ ಭಾಗ
ಪದ್ಯ 26 ರಿಂದ 49
ಅಗ್ನಿಯ ಪ್ರಾಬಲ್ಯ
ನಿರೂಪಣೆ: ಸುಬ್ಬುಲಕ್ಷ್ಮಿ
ಸಂಕ್ಷಿಪ್ತ ರೂಪ
ಕಟ್ಟಿದ್ದ ಕುದುರೆಯನ್ನು ಕಂಡ ಭಟರು ಅರ್ಜುನನಿಗೆ ವರದಿ ಮಾಡಲು ಅವನು ನಸುನಕ್ಕು ತನ್ನ ಸೈನ್ಯವನ್ನು ಸಜ್ಜುಗೊಳಿಸಿದನು. ಚತುರಂಗ ಸೈನ್ಯದ ಆಘಾತಕ್ಕೆ ಭೂಮಿ ನಡುಗಿತು. ರಣಭೇರಿಗಳು ಮೊಳಗಿದವು. ಉಕ್ಕಿದ ಸಮುದ್ರದಂತೆ ಇತ್ತು ಪಾರ್ಥನಸೇನೆ. ಪ್ರವೀರನನ್ನು ಮುಸುಕಿತು. ಪ್ರವೀರನ ಸೈನ್ಯವೂ ಜೋರಾಗಿದ್ದಿತು. ಅವನ ಬಾಣಗಳು ಸುವೇಗ, ಯೌವನಾಶ್ವ, ವೃಷಕೇತು, ಸಾತ್ಯಕಿ ಕೃತವರ್ಮರನ್ನು ತಾಕಿದವು. ಬಾಣಗಳ ಮಳೆಯೇ ಸುರಿಯಿತು.ಇವನು ಕಾಳಗ ನಡೆಸುತ್ತಿರುವಾಗ ನೀಲಧ್ವಜನ ಸೇನೆಯೂ ಪುರದಿಂದ ಹೊರ ಬಂದು ಸೇರಿತು. ಇಡೀ ಭೂಮಿಯು ಧೂಳಿನಿಂದ ಆವೃತವಾಯಿತು.
ಆ ಮಹಾ ಸೈನ್ಯವನ್ಬು ಪಾಂಡವರ ಸೇನೆಯು ಎದುರಿಸಿತು. ರಕ್ತದ ಹೊಳೆಯೇ ಹರಿಯಿತು.ಹೆಣಗಳ ರಾಶಿ , ಮರುಳುಗಳ ಕೋಲಾಹಲ ಮೇರೆಮೀರಿತು. ಒಬ್ಬರಿಗೊಬ್ಬರು ಮೂದಲಿಸುತ್ತ ಕಾದಿದರು. ಕೇಶಾಕೇಶಿ ಯುದ್ಧ ನಡೆಯಿತು.
ಕೃತವರ್ಮನ ಕೆಚ್ಚು, ಪ್ರದ್ಯುಮ್ನನ ಕೆಚ್ಚು, ಸಾತ್ಯಕಿಯ ಶೌರ್ಯ, ಸಾಲ್ವನ ಉಬ್ಬಟೆ ಇತ್ಯಾದಿ ಆರ್ಭಟಗಳಿಂದ ನೀಲಧ್ವಜನ ಸೇನೆ ಧೃತಿಗೆಟ್ಟಿತು. ಅರ್ಜುನನ ಬಾಣಗಳೂ ಸೇರಿ ಅವನ ಸೈನ್ಯ ಕೆದರಿತು. ಅರ್ಜುನನ ಕೋಪಕ್ಕೆ ಸಿಕ್ಕು ಪುಡಿಯಾಗತೊಡಗಿತು.
ಮತ್ತೆ ತಂದೆಮಕ್ಕಳ ಶೌರ್ಯ ಮೇಲಾಯಿತು. ಎದುರು ಬಂದವರನ್ನೆಲ್ಲ ಹೊಡೆಯುತ್ತ ಸಾಗಿದರು. ಅರ್ಜುನನು ಕನಲಿ ಅವರನ್ನು ತಡೆಯಲು ನೀಲಧ್ವಜನು ಅಳಿಯನಾದ ಅಗ್ನಿಯನ್ನು ಕುರಿತು ನೀನಿದ್ದೂ ನಾವು ಹೀಗೆ ವ್ಯಥೆಪಡಬೇಕೆ? ಎನ್ನಲು ಅಗ್ನಿಯು ಪಾರ್ಥನ ಸೈನ್ಯವನ್ನು ಸುಡತೊಡಗಿದನು.
ಛತ್ರ, ಚಾಮರ, ಸೀಗುರಿ, ರಥಗಳು, ದ್ವಜಗಳು, ವಾಹನಗಳು, ವಸ್ತ್ರಗಳು ಸುಡತೊಡಗಿದವು. ಬೆಂಕಿಯ ಜ್ವಾಲೆ ಗಗನಕ್ಕೆ ಚಿಮ್ಮಿತು. ಧಗಧಗನೆ, ನೆಗೆನೆಗೆದು, ಚಟಚಟನೆ, ಮೊಗೆಮೊಗೆದು, ದುಗುದುಗುಸಿ ಇತ್ಯಾದಿ ಪದಗಳ ಸಮೂಹ ಬೆಂಕಿಯ ತೀವ್ರತೆಯನ್ನು ಸೂಚಿಸುತ್ತದೆ. ( ಪದ್ಯ 39 )
ರಾಮನ ಕೋಪಕ್ಕೆ ಸಿಕ್ಕ ಸಮುದ್ರ ತೊಳಲಿದಂತೆ ಅಗ್ನಿಯ ಉರುಬೆಗೆ ಪಾರ್ಥನ ಸೈನ್ಯ ಬೆಂದು ಬಸವಳಿಯಿತು. ಕೆಲವರು ಸುಟ್ಟು ಬೂದಿಯಾದರು. ಹಲವರು ಗಾಯಗೊಂಡರು. ಕವಚ ಸುಟ್ಟು ನಗ್ನರಾದರು. ಪಾವಕನ ಈ ಆರ್ಭಟ ಕಂಡು ಅರ್ಜುನನು ಚಿಂತಿಸಿದನು.
ಶುಚಿಯಾಗಿ ಕುಳಿತು ಅಗ್ನಿಸೂಕ್ತಗಳಿಂದ ಅಗ್ನಿಯನ್ನು ಪ್ರಾರ್ಥಿಸಿದಾಗ ಅಗ್ನಿಯು ಪ್ರತ್ಯಕ್ಷನಾದನು. ಅವನಿಗೆ ನಮಿಸಿ ಏಕೆ ಈ ಮುನಿಸು ? ಮೂರುಲೋಕಕ್ಕೂ ನೀನೇ ಬೇಕಾದವನು, ದಾರಿ ತೋರು ಎಂದು ಪ್ರಾರ್ಥಿಸಿದನು. ಆದಿನ ನೀನೇ ನನಗೆ ಗಾಂಡೀವವನ್ನು ಕೊಟ್ಟಿದ್ದೆಯಲ್ಲವೆ ಎಂದನು. ಅಲ್ಲದೆ ಪಾಂಚಾಲಿ ನಿನ್ನಿಂದ ಬಂದವಳಲ್ಲವೆ ಎಂದನು. ಅಗ್ನಿಯು ಮೆಚ್ಚಿ ನಾವು ನಿನಗೆ ಮುಳಿಯೆವು. ಹರಿಯ ಒಲವಿರಲು ಈ ಯಾಗದ ಅವಶ್ಯಕತೆಯೇಕೆ ಎಂದು ಕೇಳಿದನು. ಅದಕ್ಕೆ ಇದು ಮುನಿಯ ಆಜ್ಞೆಯೆಂದೂ, ಇದಕ್ಕೆ ಹರಿಯೂ ಸಮ್ಮತಿ ನೀಡಿರುವನೆಂದು ಉತ್ತರಿಸಲು ಅಗ್ನಿಯು ಶಾಂತನಾದನು.ಆಗ ಅವನು ನೀಲಧ್ವಜನಿಗೆ ಯುದ್ಧ ಬೇಡವೆಂದು ತಿಳಿಸಿದನು.
ಆ ವೇಳೆಗೆ ಸೂರ್ಯಾಸ್ತದ ಸಮಯವಾಯಿತು. ಆಕಾಶದಲ್ಲಿ ಎಲ್ಲೆಡೆಯೂ ಕೆಂಪು ಹರಡಿತು. ಪಕ್ಷಿಗಳು ಗೂಡು ಸೇರಿದವು. ಕತ್ತಲೆಯ ಕಿಡಿಗಳಂತೆ ಕಪ್ಪು ಕವಿಯಿತು. ಕಮಲಗಳು ಮುಚ್ಚಿಕೊಂಡವು. ಗೂಗೆಗಳು ಎಚ್ಚತ್ತವು. ನೀಲಧ್ವಜನು ತನ್ನ ನಗರದೆಡೆಗೆ ತಿರುಗಿದನು.
ಎಂಟನೆಯ ಸಂಧಿ ಕೊನೆಯ ಭಾಗ
ಪದ್ಯ 26 ರಿಂದ 49
ಕಟ್ಟಿರ್ದ ಕುದುರೆಯಂ ಕಂಡು ಕಾಪಿನ ಭಟರ್ | ದಟ್ಟಿಸಿದೊಡಾ ಪ್ರವೀರಂ ಕೆರಳ್ತಾಹವಂ | ಗೊಟ್ಟೆ ನಾರ್ಪೊಡೆ ಬರಲಿ ತನ್ನೊಡನೆ ಕಾಳಗಕೆ ಪಡೆಸಹಿತ ಪಾರ್ಥನೆಂದು || ತೊಟ್ಟಂ
ಶರಾಸನದೊಳಂಬನವನೀ ಮಾತು | ಮುಟ್ಟಿದುದು ಫಲುಗುಣಂಗೆಳನಗೆಯ ಕೋಪದಿಂ | ದಟ್ಟಿ ನೋಡಿದೊಡಾಗ ನಡೆದುದು ಚತುರ್ಬಲಂ ಸರ್ವಸನ್ನಾಹದಿಂದ ||೨೬|
ಚೂಳಿಯ ಚತುರ್ಬಲದ ಧಾಳಿ ನಗರಿಗೆ ನಭಕೆ | ದೂಳಿ ದೆಸೆದೆಸೆಗಳೆ ಘೀಳಿಡುವವಾದ್ವರವ | ದೋಳಿ ನೆರೆ ಮುಸುಕಿತೊಂದೇ ಬಾರಿ ಪುರಜನಕೆ ರವಿಗೆ ದಿಕ್ಷಾಲಕರ್ಗೆ | ಬಾಳುವೆ ಮಹಾತೇಜಮತಿತಯದ ಪದವಿಗಳ್ | ಕಾಳಹುದು ಮಸುಳಿವುದು ಚಲನಮಹುದೆಂದು ಹೇ | ರಾಳಭಯದಿಂ ಶಂಕೆಯಿಂದದ್ಭುತಂಗಳಿಂ ಧೃತಿ ಗತಿ ಮತಿಗಳಳಿದುವು||೨೭|ا
ಮೇರೆದಪ್ಪಿದ ಮಹಾರ್ಣವದಂತೆ ಭುವನಸಂ | ಹಾರಕಾಲದ ಮೇಘಚಯದಂತೆ ಭರದಿಂದೆ ಪ್ರ | ವೀರನಂ ಮುಸುಕಿತರ್ಜುನನ ಮುಂಚೂಣಿಯ ಚತುರ್ಬಲಂ ದೆಸೆದೆಸೆಯೊಳು || ತೇರೈನದಿರ್ದನವನತಿಸತ್ವದಿಂದ ಸಂ | ಸಾರಪ್ರಲಾಪಮಾಲಾಕುಲಮನಧ್ಯಾತ್ಮ | ಸಾರದಿಂ ತಡೆವ ಯೋಗೀಶ್ವರನ ಚಿತ್ತದಂತೆಚ್ಚರಿನ ಧಾತುಗೆಡದೆ||೨೮||
ಮೇಗೆ ಮುಸುಕಿದ ಚೂಣ್ಇಯನಿತು ಚಾತುರ್ಬಲವ | ನಾಗಳೊರ್ವನೆ ಚಾರಿವರಿವರಿದು ಬಾಣಪ್ರ | ಯೋಗಂಗಳಿಂ ಪ್ರದ್ಯುಮ್ನ ಸಾತ್ಯಕಿ ವೃಷಧ್ವಜ ಸು || ಯೋಗಂಗಳಿಂ ಪ್ರವೀರಂ ಕೊಲ್ವುದಂ ಕಂಡು ಬಿಲ್ಗೊಂಡು ಕೋಪದಿಂದೆ| ವೇಗಾನುಸಾಲ್ವ, ಕೃತವರ್ಮಾದಿ ಪಟುಭಟರ್ | ತಾಗಿದರ್ ಕಲ್ಪ ಮೇಘಂಗಳಿಂ ತಡೆವಿಟ್ಟ ಮಳೆಯೆನಲ್ ಕಣಿಗರೆಯುತೆ||೨೯||
ಆ ಪ್ರವೀರಂ ಬಳಿತನಿದರೆಲ್ಲರೊಡನೆ ನಾ| ನಾಪ್ರಕಾರದ ಸಮರದೊಳ್ ಕಾದಲಿತ್ತ ಸೇ | ನಾಪ್ರತತಿಸಹಿತ ನೀಲಧ್ವಜಂ ನಗರಮಂ ಪೊರೆಮಟ್ಟನೇ ಪೇಳ್ವೆನು || ಈ ಪ್ರಭಾಕರಕಿರಣವಮೀ ವಾಯುಸಂಚರಣ । ಮೀ ಪ್ರವಹಿಸುವ ನದಿಗಳೀ ಗಗನಮೀ ದರೆ ಮ | ಹಾಪ್ರಳಯಕಡಗುವಂತಡಗಿ ಭುವನತ್ರಯಂ ಬರಿದೂಳಿಮಯವಾಗಲು ॥೩೦||
ಬೊಗಸಿದರ್ ಪರಬಲವನಾಗ ಪ್ರವೀರನಂ । ತೆಗೆಸಿದರ್ ಪಿನ್ನೆಲೆಗೆ ರಿಪುಸೈನ್ಯದಳವಿಯಂ 1 ತೆಗೆಸಿದರ್ ತಮತಮಗೆ ಕೈಕೊಂಡು ವಾರಣ ವರೂಥ ವರವಾಜಿಗಳನು || ಪುಗಿಸಿದರ್ ವೈರಿಮೋಹರದೊಳಗೆ ಸಾಹಸಂ | ಮಿಗಿಸಿದರ್ ಪೊಯ್ದಾಡಿ ತನಿವೀರರನದಿಂದ | ಸೊಗಸಿದರ್ ಧುರಧೀರ ನೀಲಧ್ವಜನ ಮನೆಯ ಚತುರ ಚತುರಂಗದವರು |೩೧||
ಮಗ್ಗಿದರ್ ಮಸಗಿದಂಬುಧಿಯ ತೆರೆಯಂತೆ ಸಲೆ | ಮುಗ್ಗಿದರ್ ಮುಗಿಲಮೊಗ್ಗ ರದಂತೆ ಭೋಂಕರಿಸು | ತೊಗ್ಗಿದರ್ ಕವಿದು ಜೇನ್ನೊಣದಂತೆ ಪೊಯ್ದಾಡಿ ರಿಪುಸೈನ್ಯಕಾನನವನು | ನೆಗ್ಗಿರ್ದ ನೆಲೆಗೆಡಿಸಿ ಬಿರುಗಾಳಿಯಂತೈದೆ | ನುಗ್ಗಿದರ್ ನುಚ್ಚು ನುರಿಯಾಗೆ ಬರಸಿಡಿಲಂತೆ |ಹಿಗ್ಗಿದರ್ ಪೆಚ್ಚಿ ವೀರಾವೇಶದಿಂದ ಪಟುಭಟರಾಗಳಾಹವದೊಳು||೩೨||
ಪೊಯ್ದಾಡಿ ಮಡಿದ ಕಲಿಗಳ ಶರೀರಂಗಳಂ | ಪೊಯ್ದೆಳೆದು ಪರಿತಿಂಬ ಮರುಳ್ಳ ಳಂ ಮೇಣವರ | ನೊಯ್ದಲ್ಲಿ ದಿವ್ಯತನುಗಳೊಳಪ್ಪಿ ಚುಂಬಿಸುವ ಸುರಸತಿಯರಂ ಕಾಣುತೆ|| ಮೆಯ್ದೆಗೆದಪರೆ ವೀರರೆಂದೊರ್ವರೊರ್ವರಂ | ಬಯ್ದು ಮೂದಲಿಸಿ ರಣರಂಗದೊಳ್ ಪಟುಭಟರ್ | ತರುತಿರ್ದರೊಡವೆರಸಿ ಕೇಶಾಕೇಶಿಯುದ್ಧದಿಂದಳವಳಿಯದೆ||೩೩||
ಕೃತವರ್ಮನುರವಣಿಯನನುಸಾಲ್ವನುಬ್ಬಟೆಯ | ನತಿಬಲಸುವೇಗನ ಪರಾಕ್ರಮವನಾದಿತ್ಯ | ಸುತಸುತನ ಶೌರ್ಯಮಂ ಸಾತ್ಯಕಿಯ ವೀರ್ಯಮಂ ವರಯೌವನಾಶ್ವನೃಪನ || ಅತುಳವಿಕ್ರಮವನನಿರುದ್ಧ ನಾಟೋಪಮಂ । ಪ್ರತಿಭಟಭಯಂಕರ ಪ್ರದ್ಯುಮ್ನನದಟನು | ನ್ನತಿಗೆಡಿಸಿತಾಗ ನೀಲಧ್ವಜನ ಪರಿವಾರಮೇವೇಳ್ವೆನಾಹವದೊಳು||೩೪||
ಅರ್ಜುನಂ ಕಂಡನಹಿತ ಪ್ರಬಲಬಲಮಸುರ | ನಿರ್ಜರರ್ಗರಿದೆನೆ ಕಠೋರವಾಗಲ್ ತನ್ನ | ವರ್ಜಯಿಸಲರಿಯರೇನೆಂದು ಕಡುಗೋಪದಿಂ ಚಾಪಮಂ ಪಿಡಿದು ಮಿಡಿದು 1| ಗರ್ಜನೆಯೊಳೆಯ್ದೆ ಕಡೆಗಾಲದೊಳ' ಮಳೆಗರೆವ | ಪರ್ಜನ್ಯನಂತಾರ್ದಿಸುತೆ ನಡೆ ಯಲಿದಿರಾಂತ | ವರ್ಜಗದೊಳುಂಟೆ ಮುರಿದುದು ಪುರಕೆ ನೀಲಧ್ವಜನ ಸೇನೆ ಕೆಟ್ಟು ಕೆದರಿ |೩೫|
ಮುರಿದು ಬಹಸೇನೆಯಂ ಕಂಡಾ ಪ್ರವೀರನುರೆ ಜರೆದು ಕೋದಂಡಮಂ ಕೊಂಡು ಕೌಂತೇಯನಂ | ತರುಬಲಡಹಾಯ್ದು ವೃಷಕೇತು ಬರಲಾತನೊಳ್ ಸರಿಯಾಗಿ ಕಾದುತಿರಲು|| ಪೆರಗಿಕ್ಕಿ ಕರ್ಣಿಯಂ ಮುಂದೆ ನಿಂದನುಸಾಲ್ವ ನುರುಬಿದೊಡವಂ ನೋಯೆ ನೀಲಧ್ವಜಂ ತಾನೆ | ತುರುಗಿದಗ್ಗದ ಸಕಲಬಲ ಸಹಿತ ನೂಕಿದಂ ಫಲುಗುಣನ ಪಡೆಯ ಮೇಲೆ |೩೬|
ವಾನರವರಧ್ವಜಂ ಮುಳಿದು ನೀಲಧ್ವಜನ | ಸೇನೆಯಂ ತಡೆಗಡಿಯುತಾತನಂ ಮುಸುಕಿದನ | ನೂನಶರಜಾಲದಿಂ ಬಳಿಕವಂ ಕಂಗೆಟ್ಟು ಪಾವಕಂ ಪೊರೆಯೊಳಿರಲು || ನೀನಳಿಯನಾಗಿರ್ದುಮೆನಗಿನಿತಪಾಯಮೇ | ಕೀನರನ ದೆಸೆಯ ಭಯಮಂ ಬಿಡಿಸಬೇಕೆನೆ ಕೃ | ಶಾನು ಕೇಳ್ದಾಗ ಸುಡತೊಡಗಿದಂ ತಾನೆ ಪೊಕ್ಕರ್ಜುನನ ಸೈನಿಕವನು ॥೩೭॥
ಛತ್ರ ಚಾಮರ ಹರಿಗೆ ಹಕ್ಕರಿಗೆ ಹಲ್ಲಣ ವಿ | ಚಿತ್ರದ ಪತಾಕೆ ಸೀಗುರಿ ಸಿಂಧ ಸೀಸಕ ತ । ನುತ್ರ ರಂಜಿಕೆ ಪಾಶ ವಸ್ತ್ರ ವಾಹನ ವಾದ್ಯ ಕೈದು ಬತ್ತಳಿಕೆ ಬಂಡಿ || ಪತ್ರ ಬಂದುರ ಬಾಣ ಕೋದಂಡ ರಥ ರಥಾಂ | ಗ ತ್ರಿವೇಣುಕ ಯುಗಾಕ್ಷಂಗಳುರಿಗೊಳೆ ಪಾಂಡು | ಪುತ್ರ ಸೇನೆಯೊಳೆಲ್ಲರುಂ ಬೆದರಿದರ್ ಕೆಟ್ಟು ಕೆದರಿದರ್ ಕಿಡಿಯನೊದರಿ ॥೩೮||
ಹೊಗೆಹೊಗೆದು ಹೊಗೆ ಸುತ್ತಿ ಹೊಗುವ ದೆಸೆ ದೆಸೆಗಳಂ | ಮೊಗೆಮೊಗೆದು ಮೊಗಸಿ ಪಲಮೊಗದೊಳವ್ವಳಿಸಿ ಪುಟ | ನೆಗೆನೆಗೆದು ನೆಗಳು ಸೋನೆಗಳಾಗಿ ಸುರಿವ ಕಿರುಗಿಡಿಗಳ ತುಷಾರದಿಂದೆ | ಧಗಧಗಧಗನೆ ಪೊತ್ತುವಾ ಜ್ವಾಲೆಗಳ ಮಾಲೆ | ಮುಗುರುಗುಭುಗಿಲ್ಬುಗಿಲ್ಬುಗಿಲೆಂದು ಡಾವರಿಸೆ | ತೆಗೆತೆಗೆದು ತಗುಳ್ದಲ್ಲರಂ ದಹಿಸತೊಡಗಿದವು ದಳ್ಳುರಿ ನರನ ಬಲದೊಳು |೩೯||
ಕಟ್ಟು ಗ್ರ ಕೋಪದಿಂ ಮುಳಿದಂದು ರಾಘವಂ | ತೊಟ್ಟ ಬಾಣದ ಮೊನೆಯ ದಳ್ಳುರಿಯ ಜಳಕೆ ಕಂ | ಗೆಟ್ಟು ಸಿಡಿಮಿಡಿಗೊಂಡ ಸಾಗರದ ಜೀವಾಳಿಯಂತೆ ಪಾಂಡವನ ಸೇನೆ | ಅಟ್ಟಿ ಸುಡುವನಲ ಧೂಮಜ್ವಾಲೆಯೊಡನೆ ಗೋ | ಳಿಟ್ಟು ಹೊದಕುಳಿಗೊಂಡು ಹೊರಳುತಿರಲುಬ್ಬೆಗಂ । ಬಟ್ಟು ಪಾರ್ಥ೦ ಚಿಂತಿಸಿದನೆತ್ತಣದ್ಭುತಮಿದೆಂದು ಪಾವಕನುರುಬೆಗೆ||೪೦||
ಭಗ್ನ ರಾದರ್ ಕೆಲರ್ ಕವಚಾದಿಗಳ್ ಬೆಂದು | ನಗ್ನ ರಾದರ್ ಕೆಲರ್ ಹೆಚ್ಚಿದುರಿಗಿಚ್ಚಿನೊಳ್ ಮಗ್ನರಾದರ್ ಕೆಲರ್ ತನ್ನ ಸೇನೆಯೊಳಕಟ ಧರ್ಮಜನ ಹಯಮೇಧಕೆ 1 ವಿಘ್ನು ಮಾದುದೆ ಶಿವಶಿವೆನುತೆ ಚಿಂತಿಸಿದನಿದ | ಕಗ್ನಿ ಯಂ ಭಜಿಸಿ ನೋಡುವೆನೆಂದು ನಿಜ ಕರ ವಿ | ಲಗ್ನ ಚಾಪವನಿಳುಹಿ ಶುಚಿಯಾಗಿ ಪಾವಕನನರ್ಜುನಂ ಪ್ರಾರ್ಥಿಸಿದನು ॥೪೧||
ಬಳಿಕನಲ ಸೂಕ್ತಗಳಿಂದ ನುತಿಗೆಯು ಭೂ | ತಳಕೊಂದಿ ಸಾಷ್ಟಾಂಗದಿಂದೆರಗಿ ನಿಂದು ನೀಂ | ಮುಳಿಯಲೇಕೀ ಮಖಂ ನಿನಗೈಸಲೇ ನಿನ್ನ ದೆಸೆಯಿಂದಖಿಳ ಸುರರ್ಗೆ | ತಳೆವುದು ಹವಿರ್ಭಾಗಮೀ ಚರಾಚರದ ಪೊರೆ | ಗೊಳಗೆಲ್ಲಮುಂ ನೀನೆ ನಿನ್ನಿಂದೆ ಮೂಲೋಕ | ದಳಿವುಳಿವು ಸಾಕದಂತಿರಲೆನಗೆ ಮಾರ್ಗಮಂ ಕೊಟ್ಟುಳುಹಬೇಕೆಂದನು ||೪೨||
ದೇವ ನೀನಂದು ಗಾಂಡೀವಮಂ ತನಗಿತ್ತೆ ! ಭಾವಿಸಲ್ ಪಾಂಚಾಲೆ ನಿನ್ನೊಳುದ್ಭವಿಸಿದಳ್ | ನಾವು ಲೋಗರೆ ನಿನಗೆ ಪೇಳೆಂದು ನುತಿಸಿ ಕುಂತೀಸುತಂ ಬೇಡಿಕೊಳಲು | ಪಾವಕಂ ಮೆಚ್ಚಿ ನುಡಿದಂ ಪಾರ್ಥ ಕೇಳಾದೊ | ಡಾವು ಮುಳಿಯೆವು ನಿಮಗೆ ಹರಿ ಸಮೀಪದೊಳಿರ್ದು | ಮೀ ವಾಜಿಮೇಧಮೇಕಮೃತಮಿರಲಳೆಗೆಳೆಸಿದಂತಾಯ್ತು ನಿಮಗೆಂದನು ॥೪೩|
ಅಹುದು ನೀವೆಂಬುದಂ ಮೀರಬರ್ಪುದೆ ಹರಿಯ | ಸಹವಾಸಮೇ ಸಾಕು ಜಗದೊಳ್ ಸ್ವಧರ್ಮಮಂ | ವಹಿಸದವರಾರು ಮುನಿವರನಾಜ್ಞೆ ಯಾದಪುದು ಮೇಣಂತುವಲ್ಲದೆಮಗೆ | ವಿಹಗೇಂದ್ರ ವಾಹನಂ ಮಾಡವೇಳೆಂದನು | ಗ್ರಹಿಸಿದಂ ಮುಖಮನಿದಕೆಂತೆಂದು ನರನೆನಲ್ | ದಹಿಪುದಂ ಮಾಣ್ದೆನೆಂದಭಯಮಿತ್ತಗ್ನಿ ನೀಲಧ್ವಜಂಗಿಂತೆಂದನು||೪೪||
ಸಂಗರಂ ಬೇಡ ನರನೊಡನೆ ಸಾಕಾತನ ತು | ರಂಗಮವ ಬಿಡು ನಡೆ ನಗರಕೆಂದು ವೈಶ್ವಾನ | ರಂ ಗುಣದೊಳರಸನಂ ತಿರುಗಿಸಿದನತ್ತಲರ್ಜುನನುರಿಯ ಡಾವರವನು || ಭಂಗಿಸಿದನೆಚ್ಚು ನಾರಾಯಣಾಸ್ತ್ರದೊಳನ್ನೆ | ಗಂ ಗಗನ ಮಣಿ ಪಶ್ಚಿಮಾಂಗನೆಯ ಬೈತಲೆಯ | ರಂಗು ಮಾಣಿಕದಂತೆ ಕಣ್ಗೆ ಕಾಣಿಸುತಿರ್ದುದಸ್ತಗಿರಿ ಮಸ್ತಕದೊಳು||೪೫||
ರಂಜಿಸುವ ಪಶ್ಚಿಮಾಚಲ ಕಿರಾತಂ ತೊಟ್ಟ । ಗುಂಜಾಭರಣಮೊ ಮೇಣ್ ಗಗನಾಂಬುಧಿಯ ತಡಿಯ | ಮಂಜು ವಿದ್ರುಮ ಲತೆಯೊ ಮೇಣಪರ ದಿಗ್ವಧುವಿನಂಗ ಕುಂಕುಮ ಲೇಪವೋ|| ಆಂಜನೇಭದ ಸಿಂಧುರವೊ ಶಿವನ ಮಸ್ತಕದ | ಕೆಂಜೆಡೆಯೊ ವಿಷ್ಣು ಪದ ಪಂಕರುಹದರುಣತೆಯೋ | ಸಂಜೆವೆಣ್ಣುಟ್ಟ ರಕ್ತಾಂಬರವೊ ಹೇಳೆನಲ್ಕಾ ಬೈಗುಗೆಂಪೆಸೆದುದು||೪೬||
ಬಿಚ್ಚು ವೆಣಿವಕ್ಕಿಗಳ ಹೃದಯಮಂ ಬೇಯಿಸುವ | ಪೊಚ್ಚ ಪೊಸಕೆಂಡಂಗಳೆನೆ ಲೋಕಮಂ ನುಂಗ ಲಿಚ್ಚಯಿಸಿ ಬಪ್ಪ ಕತ್ತಲೆಯೆಂಬ ಕಾಳರಕ್ಕಸಿ ಕೋಪದಿಂದುಗಳ || ಕಿಚ್ಚಿನ ಕೆದರ್ಗಿಡಿಗಳೆನೆ ತನ್ನ ಬಾಳುವೆಗೆ | ನಚ್ಚಿನವಳೇ ರಾತ್ರಿ ವಧುವೆಂದು ಹಿಮಕರಂ | ಮೆಚ್ಚಿ ಮುಂಗಳು ವಿದೆಳಮಾಣಕಗಳೆಂಬಂತೆ ಸಂಜೆದಾರೆಗಳೆಸೆದುವು||೪೭||
ಓಡಿದುವು ಪಕ್ಷಿಗಳ್ ಗೂಡಿಂಗೆ ದೆಸೆಗಳಂ| ನೋಡಿದುವು ಘೂಕಂಗಳಳಿಗಳಂ ಸೆರೆಗೆಯ್ದು ! ಪೂಡಿದುವು ಬಾಗಿಲಂ ಕಮಲಂಗಳರಲ್ದು ವಿಂದೀವರಂಗಳ್ ನಭದೊಳು|| ಮೂಡಿದುವು ತಾರೆಗಳ್ ಚಕ್ರವಾಕಂಗಳಂ| ಕಾಡಿದುವು ವಿರಹತಾಪಂಗಳಿಳೆಯೆಲ್ಲಮಂ | ತೀಡಿದುವು ಕತ್ತಲೆಗಳಲ್ಲಿಗಲ್ಲಿಗೆ ಮನೆಮನೆಗೆ ಸೊಡರ್ ಕಣ್ಗೆಸೆದುವು || ೪೮ |
ರವಿ ಪಶ್ಚಿಮಾದ್ರಿಯಂ ಮರೆಗೊಳೆ ತಮಸ್ತೋಮ | ಮವನಿಯಂ ಮುಸುಕಿ ತೆರೆದೊಳಸಿತಧ್ವಜಂ | ಬವರದೊಳ್ ಮುರಿದು ಭಂಗಿತನಾಗಿ ತಿರುಗಿದಂ ತನ್ನ ಪಟ್ಟಣಕಿತ್ತಲು || ಪವನ ಸಖನಂ ಬೇಡಿಕೊಂಡು ನಾರಾಯಣಾ | ಸ್ತ್ರವನೆಚ್ಚು ಪೆರ್ಚದುರಿಯಂ ಕಿಡಿಸಿ ನಿಜ ಸೈನಿ । ಕವನೆಲ್ಲ ಬಿಡಿಸಿದಂ ದೇವಪುರ ಲಕ್ಷ್ಮೀಪತಿಯ ಮೈದುನಂ ಮುದದೊಳು ||೪೯||
ಜೈಮಿನಿ ಭಾರತ 19
ಒಂಬತ್ತನೆಯ ಸಂಧಿ
ಪದ್ಯ 1 ರಿಂದ 34
ಜ್ವಾಲಾ ಪ್ರಕರಣ
ಸಂಕ್ಷಿಪ್ತ ರೂಪ
ನೀಲದ್ವಜನ ಹೆಂಡತಿ ಜ್ವಾಲೆಯು ತನ್ನ ಪತಿಯು ಕುದುರೆಯನ್ನು ಅರ್ಜುನನಿಗೆ ಹಿಂದಿರುಗಿಸುವುದನ್ನು ತಡೆದಳು
ಈ ನಡುವೆ. ಜನಮೇಜಯನು ಅಗ್ನಿಯು ಈ ಮನೆಯ ಅಳಿಯ ಹೇಗಾದ ಎಂದು ವಿವರವಾಗಿ ಹೇಳಿರೆನ್ನಲು ಆ ವೃತ್ತಾಂತ ಬರುತ್ತದೆ. ನೀಲದ್ವಜನಿಗೆ ಸ್ವಾಹಾ ಎಂಬ ಲೋಕಸುಂದರಿ ಗುಣವತಿ ಪುತ್ರಿಯಿದ್ದಳು. ಪ್ರಾಪ್ತ ವಯಸ್ಸಿಗೆ ಬರಲು ವಿವಾಹದ ಪ್ರಯತ್ನ ನಡೆಯಿತು. ಅವಳು ಯಾರನ್ನೂ ಒಪ್ಪಲಿಲ್ಲ. ಕೊನೆಗೆ ಅಗ್ನಿಯನ್ನು ಮೆಚ್ಚಿದಳು . ಅದಕ್ಕಾಗಿ ಉದ್ಯಾನದಲ್ಲಿ ತಪವನ್ಬು ಆಚರಿಸಿ ಅಗ್ನಿಯನ್ನು ಪ್ರಾರ್ಥಿಸಿದಳು. ಅಗ್ನಿಯು ಇದೇ ವೇಳೆಗೆ ಬ್ರಾಹ್ಮಣನ ವೇಷ ಧರಿಸಿ ರಾಜನಲ್ಲಿಗೆ ಬಂದು ತನಗೆ ಕನ್ಯಾದಾನ ಮಾಡಬೇಕೆಂದು ಕೇಳಿದನು. ಆಗ ರಾಜನು ಅವಳು ಅಗ್ನಿಯನ್ನು ಮೆಚ್ಚಿರುವ ವಿಚಾರ ತಿಳಿಸಲು ತಾನೇ ಅಗ್ನಿಯೆಂದು ಹೇಳಿದನು. ಪರೀಕ್ಷಿಸಲು ಹೊರಟ ರಾಜನ ಗಡ್ಡ ಮೀಸೆಗಳು ಉರಿದವು. ರಾಣಿಯ ದುಕೂಲ ಸುಟ್ಟಿತು. ನಂತರ ರಾಜನು ಅಗ್ನಿಯನ್ನು ತನ್ನ ಮನೆಯಲ್ಲಿಯೇ ಇರಲು ಕೇಳಿಕೊಂಡನು. ಅಗ್ನಿಯು ಒಪ್ಪಿದನು. ವಿವಾಹವಾಯಿತು. ಹೀಗೆ ಅಗ್ನಿಯು ಅಳಿಯನಾದನೆಂದು ವಿವರಿಸಿದರು.
ಮರುದಿನ ಬೆಳಗಾಯಿತು. ಮತ್ತೆ ಪಾರ್ಥನ ಸೇನೆಯನ್ನು ಮುತ್ತಿದರು. ಅಗ್ನಿಯ ರೋಷವನ್ನೇ ತಡೆದವನಿಗೆ ಇದಾವ ಮಹಾ? ಅರ್ಜುನನ ಬಾಣಗಳಿಗೆ ಸಿಕ್ಕಿ ನೀಲದ್ವಜನ ಸೇನೆ ನುಚ್ಚು ನೂರಾಯಿತು. ಸುತನೂ ಅಳಿದನು. ಆಗ ನೀಲದ್ವಜನು ಸೋತು ಶರಣಾಗಿ ಕುದುರೆಯೊಂದಿಗೆ ಧನಕನಕ ಸಮಸ್ತವನ್ನೂ ಒಪ್ಪಿಸಿದನು. ತನ್ನ ಹೆಂಡತಿಯನ್ನು ದೂಷಿಸಿ ಮನೆಯಿಂದ ಹೊರಗೆ ಅಟ್ಟಿದನು. ಅವಳು ತನ್ನ ತಮ್ಮನಲ್ಲಿಗೆ ಹೋಗಿ ಅರ್ಜುನನನ್ನು ಕೊಲ್ಲಲು ಹೇಳಿದಾಗ ಕೃಷ್ಣನ ಬಲವಿರುವ ಅವನನ್ನು ಗೆಲ್ಲಲು ಸಾಧ್ಯವೆ? ಅಪಾಯ ನಮಗೇ ಆಗುತ್ತದೆಂದು ಅವಳನ್ನು ಹಿಂದಕ್ಕೆ ಕಳಿಸಿದನು.
ನಂತರ ಗಂಗಾ ತೀರಕ್ಕೆ ಬಂದು ಅಲ್ಲಿದ್ದ ನಾವಿಕರನ್ಬು ಒಂದು ಹನಿ ನೀರು ಸೋಕದ ಹಾಗೆ ಆ ಕಡೆಯ ದಡಕ್ಕೆ ಕರೆದುಕೊಂಡು ಹೋಗಿರಿ ಎನ್ನಲು ಅವರು ಚಕಿತರಾದರು. ಎಲ್ಲರ ಪಾಪಗಳನ್ಬು ತೊಳೆಯುವ, ಶಿವನ ಜಟೆಯಿಂದ, ಹರಿಯ ಪಾದದಿಂದ ಬಂದ ಸುರಗಂಗೆಯ ಬಗ್ಗೆ ಹೀಗೆ ಹೇಳುತ್ತಾಳಲ್ಲ ಎಂದು ಕಾರಣ ಕೇಳುವರು. ತಾನು ನೇರವಾಗಿ ಗಂಗೆಗೇ ಉತ್ತರಿಸುವುದಾಗಿ ಹೇಳಲು ಮುನಿದ ಗಂಗೆ ರೋಷದಿಂದ ಪ್ರತ್ಯಕ್ಷಳಾದಳು.
ಮಕ್ಕಳಿಲ್ಲದವರ ಸ್ಪರ್ಶ ಬೇಡವೆಂದೆ ಎನ್ನಲು ಕೆರಳಿದ ಗಂಗೆ ಭೀಷ್ಮನಂತಹ ಮಗ ನನಗಿರಲಿಲ್ಲವೆ ಎನ್ನಲು ಹೌದು, ಅದು ಗೊತ್ತು. ಆದರೆ ಆ ಅರ್ಜುನ ಅವನನ್ನು ಸಾಯುವಂತೆ ಮಾಡಿದನಲ್ಲ. ಈಗ ನನ್ನ ಮಗನನ್ನೂ ಕೊಂದಿದ್ದಾನೆ ಎನ್ನುವಳು. ಹೀಗೆ ಗಂಗೆಯನ್ನು ಕೆರಳಿಸಿದಾಗ ಅವಳು ಅರ್ಜುನನಿಗೆ ತನ್ನ ಮಗನಿಂದ ಮರಣ ಬರಲಿ ಇನ್ನು ಆರು ತಿಂಗಳಲ್ಲಿ ಎಂದು ಶಾಪ ಕೊಡುವಳು. ಜ್ವಾಲೆಯು ಅಲ್ಲಿ ಅಗ್ನಿಪ್ರವೇಶ ಮಾಡಿ ಬಭ್ರುವಾಹನನ ಬತ್ತಳಿಕೆಯಲ್ಲಿನ ಒಂದು ಬಾಣವಾಗಿ ಸೇರಿಕೊಳ್ಳುವಳು. ಮುಂದೆ ಶ್ರೀಹರಿಯು ಇದನ್ನು ಹೇಗೆ ಪರಿಹರಿಸುವನೋ ಎಂಬಲ್ಲಿಗೆ ಈ ಸಂಧಿ ಮುಗಿಯುತ್ತದೆ
ಒಂಬತ್ತನೆಯ ಸಂಧಿ ಮೊದಲಭಾಗ
ಪದ್ಯ 1 ರಿಂದ 34
-ಜ್ವಾಲೆ ನಿಜ ಕಾಂತನಂ ಚಲದಿಂದೆ ಬಿಟ್ಟು ತ | ನ್ನಾಲಯದೊಳಿರದೆ ಪೊರಮಟ್ಟು ಬಂದರ್ಜುನನ | ಮೇಲೆ ತಂತ್ರವನಿಕ್ಕಿ ಶಾಪಮಂ ಕುಡಿಸಿದಳ್ ದೇವ ನದಿಯಂ ಕೆರಳ್ಚಿ
ಕುಲತಿಲಕ ಜನಮೇಜಯ ನರೇಂದ್ರ ಕೇ | ಳಂದು ನೀಲಧ್ವಜಂ ತಿರುಗಿ ತನ್ನ ರಮನೆಗೆ | ಬಂದು ವೈಶ್ವಾನರನನುಜ್ಞೆಯಿಂ ಪಾರ್ಥನ ತುರಂಗಮಂ ಬಿಡುವೆನೆಂದು || ನಿಂದು ಮಂತ್ರಿಗಳ ಕರಸಲ್ಕದಂ ಕೇಳ್ದು ನಡೆ | ತಂದು ನುಡಿದಳ್ ಜ್ವಾಲೆಯೆಂಬರಸಿ ಪತಿಗೆ ನೀ ! ನಿಂದು ಸಿತವಾಹನಂಗೀಯದಿರ್ ಕುದುರೆಯಂ ಬೆದರದಿರೆನುತೆ ತಡೆದಳು||೧||
-ಅನ್ನೆಗಂ ಕೇಲ್ದು ಜನಮೇಜಯ ನರೇಶ್ವರಂ | ತನ್ನ ಮನದೊಳ್ ಸಂದೆಗಂಬಟ್ಟು ಬೆಸಗೊಂಡ | ನಿನ್ನೊಮ್ಮೆ ತಿಳಿಪೆಲೆ ಮುನೀಂದ್ರ ಪಾವಕನೇತಕಾ ಪಟ್ಟಣದೊಳಿರ್ದನು || ಮನ್ನಣೆಯ ಮನೆಯಳಿಯನೆಂತಾದನಾ ನೃಪನ | ಕನ್ನಿಕೆಯದೇನ ಮಾಡಿದಳಿದರ ವೃತ್ತಾಂತ | ಮನ್ನಿರೂಪಿಸವೇಳ್ವುದೆನೆ ಮತ್ತೆ ಜೈಮಿನಿ ಧರಾಧಿಪಂಗಿಂತೆಂದನು||೨||
ಆಲಿಸಿನ್ನಾದೊಡೆಲೆ ಭೂಪ ನೀಲಧ್ವಜಂ | ಜ್ವಾಲೆಯೆಂಬರಸಿಯೊಳ್ ಪಡೆದನತಿರೂಪ ಗುಣ | ಶೀಲಗಳಿಂದೆದೆಸೆವ ತನುಜೆಯಂ ಸ್ವಾಹಾಭಿಧಾನದಿಂ ಬಳೆಯುತಿರುವ ॥ ಆ ಲೋಲ ಲೋಚನೆಗೆ ಜೌವನಂ ಬರೆ ಪಿತಂ ।ಮೂಲೋಕದೊಳಗುಳ್ಳ ಪುರುಷರ್ಕಳಂ ಪಟದ | ಮೇಲೆ ರೂಪಿಸಿ ತೋರಿಸಿದನಿದರೊಳಾರ್ ನಿನಗೆ ವಲ್ಲಭಂ ಪೇಳ್ವುದೆಂದು ||೩||
ವಿಫುಲ ಗಂಧರ್ವ ಯಕ್ಷೋರಗ ಸುರಾಸುರರ ನಪಹಾಸ್ಯಮಂ ಮಾಡಿ ಸಕಲ ಭೂಮಂಡಲದ | ನೃಪ ವರ್ಗಮಂ ಪಳಿದು ಹರಿ ಹರ ವಿರಿಂಚಿ ಶಕ್ರಾದಿಗಳನಿಳಿಕೆಗೆಯ್ದು ॥ ತಪನೇಂದು ಮನ್ಮಥ ವಸಂತರ್ಕಳಂ ಜರೆದ | ನುಪಮ ದಿಕ್ಪಾಲಕರ ನಡುವೆ ಕುಳ್ಳಿರ್ದು ರಾ | ಜಿಪ ನೀತಿಹೋತ್ರನಂ ಕಂಡವಳ್ ತೋರಿಸಿದಳೆನಗಿವಂ ಕಾಂತನೆಂದು||೪||
ಆ ನೀಲಕೇತು ನೃಪನವಳ ನುಡಿಗೇಳ್ದುಣುಗೆ | ನೀನಘಟಿತದ ವರನಮನ್ನಿಸಿದೆ ಹೇಳ್ಕೊಡಿ | ನ್ನೇನಪ್ಪುದೆಂದು ಚಿಂತಿಸುತಿರ್ಪ ತಾತನಂ ಜರೆದು ಬೀಳ್ಕೊಂಡು ಬಳಿಕ || ಮಾನಿಸಿ ಪುರೋದ್ಯಾನದೊಳ್ ಪ್ರವಹಿಸುವ ವರ | ದಾ ನದಿಗೆ ಬಂದಲ್ಲಿ ಮಿಂದು ಸುವ್ರತೆಯಾಗಿ | ನಾನಾ ವಿಧಾನದಿಂದರ್ಚಿಸಿದಳಗ್ನಿ ಯಂ ಭಕ್ತಿಯಿಂದನುದಿನದೊಳು||೫||
ಪಾವಕಂ ಬಳಿಕ ಮೆಚ್ಚಿದನವಳ ನೋಂಪಿಗೆ ಮ | ಹೀ ವಿಬುಧ ವೇಷಮಂ ತಾಳ್ದು ನೀಲಧ್ವಜನ | ಚಾವಡಿಗೆ ಬರಲಾತನಿದಿರೆದ್ದು ಸತ್ಕರಿಸಿ ಕೈಮುಗಿದು ವಿನಯದಿಂದ || ನೀವು ಬಿಜಯಂಗೈದ ಕಾರ್ಯಮಂ ಬೆಸಸಿಮೆನ | ಲಾವು ಕನ್ಯಾರ್ಥಿಗಳು ಕುಡು ನಿನ್ನ ಸುತೆಯೆ೦ದ | ಕಾವೆಣಿಕೆ ಬೇಡ ಭೂಭುಜರೀಯಬಹುದು ವಿಪ್ರರ್ಗೆಂದೊಡಿಂತೆಂದನು||೬||
ಕನಾರ್ಥಿಯಾಗಿ ನೀಂ ಬಂದು ಬೇಡುವುದಿಳೆಯೊ | ಳನ್ಯಾಯಮಲ್ಲ ವಿಪ್ರರ್ಗೆ ಕೊಡಬಹುದು ರಾ | ಜನ್ಯರದಕೇನೊಂದು ಚಲದಿಂದೆ ತನ್ನ ಕುವರಿಗೆ ಮರುತ್ಸಖನಲ್ಲದೆ || ಅನ್ಯರಂ ಪತಿಯಾಗಿ ವರಿಸಬೇಕೆಂಬ ಚೈ | ತನ್ಯ ಮಿಲ್ಲೇನು ಮಾಡುವೆನಿನ್ನು ನಿನಗೀವ | ಧನ್ಯತೆಗೆ ಬಾಹಿರಂ ತಾನಾದೆನೆನಲಾ ಕಪಟ ವಿಪ್ರನಿಂತೆಂದನು||೭||
ಪ್ರಾಪ್ತವಾದುದು ನಿನ್ನ ಮಗಳೆಣಿಕೆ ಸುವ್ರತ ಸ | ಮಾಪ್ತಿಯಂ ಮಾಡಿಸಿನ್ನಾನಗ್ನಿ ಸಂಶಯ | ವ್ಯಾಪ್ತಿಯಿಂ ಬಿಡು ಕುಡು ನಿಜಾತ್ಮಜೆಯನೆನೆ ನಂಬದಾನೃಪಂ ಬಳಿಕ ತನ್ನ || ಆಪ್ತ ಮಂತ್ರಿಯೊಳೀಗಳಿವನಂ ಪರೀಕ್ಷಿಸೆನೆ | ಗೋಪ್ತಾರನಾಜ್ಞೆಯಿಂ ಬಂದವಂ ನೋಡೆ ಶಿಖಿ | ದೀಪ್ತಿಯಂ ತೋರರೆವೆ ಗಡ್ಡ ಮೀಸೆಗಳುರಿಯಲನಲನೆಂದರಿದನಂದು||೮||
ಸಪ್ತರಸನಂ ತಪ್ಪದೆಂದಾ ನೃಪಂ ತಿಳಿದು | ಗುಪ್ತದಿಂದ ತನ್ನ ಸತಿಯನುಜೆಯಂ ಕರಸಿ ಲೋ| ಲುಪ್ತಿಯಿಂ ಬಂದವಗೀಯಬೇಕಣುಗಿಯಂ ಶಿಖಿಯಹುದೆ ನೋಡೆನ ॥ ದೃಪ್ತ ಭಾವದೊಳಾಕೆ ನಡೆ ತಂದು ನಿಟ್ಟಿಸಲ್ | ತಪ್ತ ಮಾದುದು ಮೇಲುದಿನ ವಸನಮಾಗಳಾ | ಕ್ಷಿಪ್ತ ಮಂ ಮಾಡಿ ನಗುತಿರ್ದನಾ ಭೂವರಂ ಸಭೆಯೊಳ್ ವಿನೋದದಿಂದೆ||೯||
ಭೂಕಾಂತ ಕೇಳ್ ಬಳಿಕ ನೀಲಧ್ವಜಾವನಿಪ | ನಾ ಕಪಟ ವಿಪ್ರನಂ ಕರೆದಗ್ನಿ ನೀನಾದೆ | ಡೀ ಕುವರಿಯಂ ಕುಡುವೆನಿಂದು ಮೊದಲಾಗಿ ಮಾಹಿಷ್ಮತಿಯ ಪಟ್ಟಣಕ್ಕೆ ॥ ಪ್ರಾಕಾರವಾಗಿ ಯೆನ್ನರಮನೆಯೊಳೆಂದುಮಿರ | ಬೇಕೆಂದು ಬೇಡಿಕೊಳಲೊಪ್ಪಿ ಪವಮಾನ ಸಖ | ನಾ ಕಮಲವದನೆಯಂ ಮದುವೆಯಾದಂ ವಿಧಿ ವಿಧಾನ ವಿಭವಂಗಳಿಂದೆ ॥೧೦||
ಶ್ರೀ ಹೈವವತಿ.ಪುರಂ ದುಗ್ದಾಬ್ದಿ ಹಿಮಗಿರಿಗ । ಳಾ ಹರಿಹರರ್ಗೆ ಕೊಟ್ಟಿಂಬಿಟ್ಟು ಕೊಂಡಿಹವೊ | ಲೀ ಹುತವಸಂಗಾತ್ಮಜೆಯನಿತ್ತು ನಿಲಿಸಿಕೊಂಡು ನೀಲಕೇತು ಬಳಿಕ 1 ಸ್ವಾಹಾ ವನಿತೆಯ ಸಮ್ಮೇಳದತಿಸೌಖ್ಯದಿಂ। ಮಾಹಿಷ್ಮತಿ ಪಟ್ಟಣದೊಳಿರ್ದ ನನಲಂ ಮ | ನೋಹರದ ವಿವಿಧ ಭೋಗದೊಳಂದು ಮೊದಲಾಗಿ ಸಂದು ಸಂತೋಷದಿಂದೆ ||೧೧॥
ಅಲ್ಲಿ ಪಾವಕನಿರ್ಪ ಕಾರಣಮಿದೀಗ ಮುಂ ದಿಲ್ಲಿಯ ಕಥಾಂತರವನರಸ ಕೇಳಾ ರಾತ್ರಿ | ಯಲ್ಲಿ ನೀಲಧ್ವಜಂ ಮನೆಯೊಳಾ ಜ್ವಾಲೆಯ ನಿರೂಪಮಂ ಶಿರದೊಳಾಂತು ||ಸಲ್ಲಲಿತ ವಾಜಿಯಂ ಬಿಡನೆನ್ನೊಡನೆ ಕಾದಿ | ದಲ್ಲದೆಂದಾ ಕಿರೀಟಿಗೆ ಪೇಳಿಸಿದನಿತ್ತ | ಪಲ್ಲವಿಸಿತಮಲ ಪೂರ್ವಾಶಾ ಲತಿಕೆಯೆನಲ್ ಕೆಂಪಡರ್ದುದು ಮೂಡಲು ||೧೨||
ತನ್ನ ಪಗೆಯಾದ ಕತ್ತಲೆಯ ಸಾರೂಪ್ಯದಿಂ | ದಿನ್ನಿ ರ್ದೊಡೆಮಗಿನಂ ಮುಳಿಯದಿರನೆಂದಂಜಿ | ಕನ್ನೆಯ್ದಿಲೆಯ ಮೊಗಂ ಬಾಡಿದುದು ಕೂಡೆ ನಗುತಿರ್ದುವರವಿಂದಂಗಳು|| ಗನ್ನದೊಳ್ ನೆರೆವ ಜಾರೆಯರ ಕುಂಟಣಿಯಂತೆ | ಸನ್ನೆ ಗೈದುವು ತಾಮ್ರ ಚೂಡಂಗಳೊಂದಿದುವು! ಮುನ್ನಿನಂತಿರೆ ಜಕ್ಕವಕ್ಕಿಗಳ್ ಪಾಡಿದುವು ತುಂಬಿಗಳ ಬಂಡನರಸಿ||೧೩||
ರಾಹು ಮುನ್ನೊಮ್ಮೆ ತನ್ನಂ ತುಡುಕಿ ಬಿಟ್ಟನೆ | ಬಾಹಗೆಯ ಮಗುಚಲೆ.ಒಳವೊಕ್ಕು ಪಾತಾಳದ ಮ | ಹಾಹಿ ಸಂಕುಲಮನಾಕ್ರಮಿಸಿ ಪೆಡೆಮಣಿಗಳಂ ತೆಗೆದುಕೊಂಡಾಗಳವನು ॥ ಸಾಹಸಂ ಮಿಗೆ ದೆಸೆದೆಸೆ ಗೆ ಚೆಲ್ಲುತರ್ಪ | ನೋ ಹರಿದ್ವಾಜಿ ಪೇಳೆನೆ ಪಸುಳೆಬಿಸಿಲ ಪ್ರ| ವಾಹಂಗಳೆತ್ತಲುಂ ಪರಿವಿನಂ ದಿನಪನುದಯಂಗೈದು ಬರುತಿರ್ದನು||೧೪||
ಇತ್ತಲವನೀತ ಕೇಳುದಯವಾಗದ ಮುನ್ನ ! ಮತ್ತೆ ಮಾಹಿಷ್ಮತಿಯ ಪಟ್ಟಣದ ಕೋಟೆಯಂ ಮುತ್ತಿಕೊಂಡುದು ನರನ ಚತುರಂಗಮೋಜೆಯೊಳ್ ನೀಲಕೇತುವಿನ ಸೇನೆ|| ಒತ್ತಿ ಕವಿದುದು ವೀರರೊದಗಿದರ್ ಪೊಯ್ದಾಡಿ | ತಿತ್ತಂಡಮೊಡವೆರಸಿ ಚೂಣ್ಗಾಳಗದ ಭಟ |ರೆತ್ತಿದರ್ ಪಂತಪಾಡುಗಳನಸಿತಧ್ವಜಂ ನಡೆದನರ್ಜುನನಮೇಲೆ||೧೫||
ತರಣಿ ತೊಲಗಿದ ಬಳಿಕ ಮಿಂಚುಬುಳುವಿಗೆ ತಮಂ | ತೆರಳಬಲ್ಲುದೆ ಕೃಶಾನುಜ್ವಾಲೆಗಳುಕದಾ! ನರನುಳಿದ ವೀರರಂ ಬಗೆವನೇ ಪಡೆವೆರಸಿ ನೂಕಿದಂ ಕಣೆಗರೆಯುತೆ|| ಮುರಿದುದುರವಣಿಗವನ ಸೇನೆ ಬಳಿಕಳವಿಗರ್/ತರಹರಿಸಿ ಸುತ ಸಹೋದರ ಮಂತ್ರಿ ಬಾಂಧವರ್ | ಧುರದೊಳಾಂತಳಿದರರ್ಜುನನೊಳಾತಂ ಕಾದಿ ನೊಂದು ಮೂರ್ಛಿತನಾದನು||೧೬||
ಬಳಿಕ ಸಾರಥಿ ಮನೆಗೆ ತಂದನಾ ಭೂಪನಂ । ಪೊಳು ಪರ್ಬಾಗಿಲ್ಗಳಿಕ್ಕಿದುವು ಕೋಟೆ ಕೋ | ತಳದ ಕಾವಲ್ಗಳಂ ಬಲಿದರಲ್ಲಲ್ಲಿ ಗಜಬಜವಾಯ್ತು, ನಗರದೊಳಗೆ || ತಿಳಿದುದಾತನ ಮೂರ್ಛೆ ಕಣ್ಣಿರೆದು ನೋಡಿ ಕೊಳು | ಗುಳದ ಪರಿಭವಕೆ ಬೆಂಡಾಗಿ ನಿಜ ತನಯರಳಿ | ದಳಲಿನಿಂ ಬೈದನಸಿತಧ್ವಜಂ ಜ್ವಾಲೆಯಂ ಪ್ರತಿಕೂಲೆಯಂ ಖತಿಯೊಳು ||೧೭||
ನಿನ್ನೆ ಪಾರ್ಥನ ಹಯವನಾತಂಗೆ ಬಿಡಲೀಯ | ದೆನ್ನ ಕೆಡಿಸಿದೆಯಲಾ ಪಾತಕಿಯೆ ಸುತರಳಿದ | ರಿನ್ನೇನು ಘಾತಕಿಯೆ ಮತ್ತುಲಕರಿಷ್ಟೆ ನೀನತಿಕಷ್ಟೆ ಪೋಗು ದುಷ್ಟೆ || ಎನ್ನರಮನೆಯೊಳಿರದಿರೆಂದಾಗಳಾ ಜ್ವಾಲೆ! ಯನ್ನೀಲಕೇತು ದಟ್ಟಿಸಿ ಬೈದು ಬಳಿಕಶ್ಯ | ಮನ್ನರನೆಡೆಗೆ ಕಳುಪಿ ತಾನಾ ಕಿರೀಟಿಯಂ ಕಾಣಲ್ಕೆ ಪೊರಮಟ್ಟನು ||೧೮||
ಕೊಂಡು ಬರಿಸಿದನಖಿಳ ವಸ್ತುಗಳನಮಲ ಮಣಿ | ಮಂಡನಾಳಿಗಳಂ ವಿವಿಧ ದುಕೂಲಂಗಳಂ | ಹಿಂಡಾಕಳಂ ಮಹಿಷಿಗಳನುತ್ತಮ ಸ್ತ್ರೀಯರಂ ಗಜ ಹಯಾವಳಿಯನು | ಭಂಡಾರದರ್ಥಮಂ ಗುಡ ತೈಲ ಧಾನ್ಯಮಂ| ಬಂಡಿಗಳ ಮೇಲೆ ತುಂಬಿಸಿ ಪಾರ್ಥನಂ ಬಂದು | ಕಂಡನಸಿತಧ್ವಜಂ ಬಳಿಕವನನರ್ಜುನಂ ಪ್ರೀತಿ ಮಿಗೆ ಮನ್ನಿಸಿದನು||೧೯||
ವಾಜಿ ನಡೆದುದು ಬಳಿಕ ತೆಂಕಮೊಗವಾಗಿ ಸೇ | ನಾ ಜಾಲಸಹಿತ ನೀಲಧ್ವಜಂ ಪೊರಮೊಟ್ಟ । ನಾ ಜನಪನಂ ಕೂಡಿಕೊಂಡು ಮುಂದಕೆ ಸವ್ಯಸಾಚಿ ತೆರಳಿದನಿತ್ತಲು| | ತೇಜವಿಲ್ಲದೆ ಮನೆಯೊಳಿಂ ಪೆಣ್ಣೊಡಲ್ವೆಳಸು ವೀ ಜೀವಮೇತಕೆನಗೆನುತೆ ನಿಜ ವಲ್ಲಭನ | ರಾಜ ಗೃಹಮಂ ಬಿಟ್ಟು ಪೋದಳಾ ಜ್ವಾಲೆಯುನ್ನು ಖನೆಂಬ ತಮ್ಮ ನೆಡೆಗೆ |೨೦||
ಉನ್ಮುಖಂ ಕಂಡಿದಿರ್ಗೊಂಡಗ್ರಜಾತೆಯಂ ಸನ್ಮಾನಿಸಿದನೇಕೆ ಬಂದೆಯೆನೆ ಫಲುಗುಣಂ | ಮನ್ಮನೋರಥಮೆಲ್ಲಮಂ ಕಿಡಿಸಿ ಮಕ್ಕಳಂ ಕೊಂದು ಪತಿಯಂ ಗೆಲ್ದನು ||ತನ್ನ ರಣಕೊಂದು ದಾಯವನೆಸಗದಿರಲೆನ್ನ | ಜನ್ಮ ವೇತಕೆ ನಿನ್ನ ದೆಸೆಯಿಂದ ನರನ ವಿಲ | ಸನ್ಮಳಿ ಮಸ್ತಕವನರಿಸದಿರೆನೆಂದೊಡಾ ಜ್ವಾಲೆಗವನಿಂತೆಂದನು||೨೧||
ವಾಯಕರ್ಜುನನ ತಲೆ ಬೀಳ್ದಪುದೆ ಕೃಷ್ಣನ ಸ | ಹಾಯಮಿರಲೆಲೆ ಮರುಳೆ ಹರಿಯ ಹಗೆಗೊಂಡು ಕೆಡು | ವಾಯಸಂ ತನಗೇಕೆ ರಾಘವಂ ಮಾಡಿದುಪಹತಿಯಂ ದಶಾನನಂಗೆ | ದಾಯಮಂ ಪೇಳ್ದವನ ವಂಶಮಂ ಸವರಿಸಿದ | ಮಾಯಕಾತಿಯವೊಲೆನ್ನಾಲಯಕೆ ಬಂದೆನಗೆ | ಪಾಯಮಂ ತಾರದಿಲ್ಲಂದ ಪೋಗೆಂದವಳನನ್ನು ಖಂ ಕೋಪಿಸಿದನು||೨೨ا
ಜ್ವಾಲೆ ಬಳಿಕನುಜನಂ ಬೈದು ಕೋಪದೊಳಾತ | ನಾಲಯದೊಳಿರದೆ ಪೊರಮಟ್ಟು ನಡೆತರೆ ಮುಂದೆ | ಲೀಲೆ ಮಿಗೆ ನಲಿನಲಿದು ಸುಳಿದಿಳಿದು ಬೆಳೆದಳಿದು ತಳೆದೆಳೆದು ಪೊಳೆದು ಸೆಳೆದು|| ಮೇಲೆಮೇಲೊದಗುವ ಘನಪ್ರವಾಹದ ಸುಕ | ಲ್ಲೋಲ ಮಾಲಾಕುಲದ ಬುದ್ದುದದ ಜಲ ಜಂತು । ಜಾಲದ ಬಳಿಯ ಲುಳಿಯ ಲಹರಿಗಳ ವಿಸ್ತರದ ವರ ಗಂಗೆಯಂ ಕಂಡಳು | ೨೩ |
ತೆಳುವುಡಿಯ ಮಳಲಿಡಿಯಲಿತ್ತಡಿಯ ತಳಗಡಿಯ | ಪೊಳೆ ನೆರೆಯಲುರೆ ಪೊರೆಯಲೊಳೊರೆಯ ರೆಯ ಬೆಳ್ನೊರೆಯ| ತೊಳಪೆಳೆಯ ಮಾನೊಳೆಯಲಿರದೆಳೆಯಲೆಡೆ ಸೆಳೆಯ ತುಂತುರಿನ ತನಿಗೆದರಿನ|| ಸುಳಿಸುಳಿಯಸವ್ವಳಿಯ ಬೊಬ್ಬುಳಿಯ ಕಡಲುಳಿಯ | ಜಳಚರದ ತರತರದ ಶೀಕರದ ಭೀಕರದ | ತುಳ ಗಂಗೆ ಸುತರಂಗೆ ನೋಳ್ಪಂಗೆ ಸಲೆ ಕಂಗೆಸೆದಳಂದು ದಿವಿಜಸಿಂಧು |೨೪|
ಕೂರ್ತುಗಡಿಯಾಗಿರ್ಪ ಗುಣ್ಪಿಂದೆ ತನ್ನೆಡೆಯೊ ಳಾರ್ಮುಳುಗಲವರಿಂದ್ರರಹರೆಂಬ ಪೆಂಪಿಂದೆ| ಘೂರ್ಮಿಸುವ ಗಂಗಾಪ್ರವಾಹಮಂ ಕಂಡಳಾ ಜ್ವಾಲೆಲ ಬಳಿಕ ನಿಂದು ಧಾರ್ಮಿಕರಿವರೊಳುಂಟೆ ತನ್ನ ನೆಂತಾದೊಡಂ | ನೀರ್ಮುಟ್ಟದಂತೊಯ್ಯನಾ ತಡಿಗೆ ದಾಂಟಿಸುವ। ಕೂರ್ಮೆಯುಳ್ಳವರೆಂದೊಡಲ್ಲಿರ್ದ ನಾವಿಕರ್ ಕೇಳ್ದವಳ್ಗಿಂತೆಂದರು||೨೫||
ಬಿಂದುಮಾತ್ರಂ ಮೇಲೆ ಬೀಳಲ್ಕೆ ವಿಪ್ರನಂ| ಕೊಂದ ಪಾಪಂ ಪೋಪುದಿಲ್ಲಿ ಮಿಂದವನ ಗತಿ । ಯಂದಮಂ ಬಣ್ಣಿಸುವೊಡಜನ ಪವಣಲ್ಲ ನೀನಿಲ್ಲಿಗೇನಂ ಪ್ರಾರ್ಥಿಸಿ|| ಬಂದೆ ಗಂಗಾಂಬುವಂ ಮುಟ್ಟದಿರಬಹುದೆ ಪೇ! ಳೆಂದೊಡಾ ಜ್ವಾಲೆ ನುಡಿದಳ್ ಜಾಹ್ನವಿಗೆ ದೋಷ | ಮೊಂದಿಹುದು ನಿಮಗೊರೆವುದಿಲ್ಲಮವಳೆನಗೆ ಮೈದೋರಲುಸಿರುವೆನೆಂದಳು |೨೬|
ನೈಜದಿಂದಜನ ಕರಪಾತ್ರದಗ್ರೋದಕಂ । ವೈಜಯಂತೀಧರನ ಪಾದಾಂಬು ಶಿವನ ತಲೆ | ಹೈಜಡೆವೆಳಸಿಗೆರೆದ ಜೀವನಂ ತಾನಂತುಮಲ್ಲದತಿಪಾಪಂಗಳ || ಮೈಜೋಡನುಗಿದು ಬಿಸುಡುವ ಗಂಗೆ ಬೆದರಿದಳ್ | ಜಗದೊಳಪವಾದಕಂಜದವರುಂಟೆ ಕೇ| ಳೈ ಜನಪ ಜಲದೆ ಜಾಹ್ನವಿ ಕೇಳ್ದು ಪೊರಮಟ್ಟಳವಳೆಂದ ನುಡಿಗೆ ನಡುಗಿ ॥೨೭||
ಅಂಬುರುಹ ರೋಲಂಬ ಮತ್ಸ್ಯಕಚ್ಛಪ ವಾರಿ। ಕಂಬು ಶೀಕರ ಚಕ್ರವಾಕ ಶೈವಾಲ ಕಾ | ದಂಬ ಗಂಭೀರ ಸೈಕತ ಮೃಣಾಳಂಗಳಿವು ತನಗವಯವಂಗಳಾಗೆ|| ಇಂದಾದ ಸೌಂದರ್ಯಮೀ ನದಿಯ ನಡುವೆ ಪ್ರತಿ | ಬಿಂಬಿಸಿದೊಲರೆ ದಿವ್ಯ ರೂಪನಳವಡಿಸಿ ಜಗ | ದಂಬೆ ಜಾಹ್ನವಿ ಸಲಿಲ ಮಧ್ಯದಿಂದೆದ್ದು ಬಂದಾ ಜ್ವಾಲೆಯಂ ಕೇಳ್ದಳು || ೨೮ ||
ದೋಷ ಹರೆ ತಾನೆಂದು ವೇದ ಶಾಸ್ತ್ರಂಗಳುರೆ | ಘೋಷಿಪುವು ಮುಟ್ಟಲಾಗದು ತನ್ನನೆಂದು ನೀಂ| ದೂಷಿಸುವ ಕಾರಣಮದಾವುದೌ ಜ್ವಾಲೆ ಪೇಳೆಂದು ಜಾಹ್ನವಿ ನುಡಿಯಲು|| ದೂಷಣದ ಮಾತನಾಡುವಳಲ್ಲ ಲೋಕದ ಸು | ಭಾಷಿತವನುಸಿರಬೇಹುದು ಪುತ್ರರಿಲ್ಲದಿಹ | ಯೋಷೆಯ೦ಗಸ್ಪರ್ಶನಂ ಪಾಪಮೆಂಬರದಕಾಗಿ ಬೆದರಿದೆನೆಂದಳು||೨೯|
ಎಂದೊಡೆ ಕೆರಳು ಭಾಗೀರಥಿ ಸಮಸ್ತ ನೃಪ। ವೃಂದದೊಳ್ ತನ್ನ ಮಗನುದ್ದಾ ಮನಾಗಿರ್ಪ ನೆಂದುಮಳಿವವನಲ್ಲವಂ ಯದೃಚ್ಛಾ ಮರಣಿ ಭಾಗವತ ಮಸ್ತಕಮಣಿ || ವೃಂದಾರಕೋಪಮಂ ಸತ್ಯಸಂಧಂ ಭೀಷ್ಮ | ನೆಂದು ಮೂಲೋಕದೊಳ್ ಪ್ರಖ್ಯಾತನಾಗಿಹಂ | ಮಂದಮತಿ ನೀನೆನಗೆಸುತರಿಲ್ಲೆ ನಲ್ ಬಹುದೆ ಪೋಗೆಂದೊಡಿಂತೆಂದಳು|| ೩೦||
ಉಂಟು ನೀನಾಡಿದಿನಿತೆಲ್ಲಮುಂ ತಥ್ಯವಹು | ದೆಂಟಕೊಂದುಳಿದುದಂ ಬಲ್ಲೆನಾನದರಿಂದೆ | ವೆಂಟಣಿಸಿನ್ನೆಗಂ ನೀನ್ನೇಳ್ಗೆ ಮೂಜಗದೊಳೀಗ ದಾಯಾದ್ಯರೊಳಗೆ|| ಗಂಟಿಕ್ಕಿದಾಹವದೊಳರ್ಜುನಂ ತವ ನೂನು | ನಂ ಟಕ್ಕಿನಿಂ ಕೊಂದನಲ್ಲದಿರ್ದೊಡೆ ಮತ್ತೆ | ಕಂಟಕಮದೆತ್ತಣದು ಕೇಳ್ ತವಾಭ್ಯುದಯಕೆಂದಾಜ್ವಾಲೆ ಕಾಳ್ಗೆಡೆದಳು || ೩೧ ||
ಪಚ್ಚೆಲೆಯ ತರುವನೊಣಗಿದ ಪೊರೆಯ ಮರದ ಕಾ | ಳ್ಕಿಚ್ಚು ಕೊಂಡುರಿವವೊಲ್ ಜ್ವಾಲೆಯ ಮುಳಿಸಿನೊಡನೆ | ಪೆಚ್ಚಿ ತಮರಾಪಗೆಯ ಕೋಪಮೆತ್ತಿದ ಹಸ್ತದಿಂ ಭೀಷ್ಮನಂ ಧುರದೊಳು || ಎಚ್ಚು ಕೊಂದರ್ಜುನನ ತಲೆಯನಾತನ ಸುತಂ | ಕೊಚ್ಚಿ ಕೆಡಹಲಿ ತಿಂಗಳಾರಕಾಹವದೊಳೆಂ | ದುಚ್ಚರಿಸಿ ಶಾಪಮಂ ಕೊಟ್ಟಡಗಿದಳ್ ಜಲದ ಮಧ್ಯದೊಳ್ ದಿವಿಜ ತಟಿನಿ |೩೨||
ನಾರಿಯರ ಚಲಮೆಂತುಟೋ ಕೇಳ್ ಮಹೀಶ ಭಾ । ಗೀರಥಿಗೆ ಕೋಪಮಂ ಬರಿಸಿ ಕೊಡಿಸಿದಳತಿ ಕ | ಠೋರತರ ಶಾಪಮಂ ಜ್ವಾಲೆ ಬಳಿಕದು ಸಾಲದಾ ನರನ ತಲೆಯನರಿವ | |ಕೂರಲಗಿನಸ್ತ್ರವಾದಪೆನೆಂದು ಸುರನದಿಯ | ತೀರದೊಳ್ ವಹ್ನಿ ಪ್ರವೇಶಮಂ ಮಾಡಿ ಜಂ | ಭಾರಿ ತನಯನ ಸೂನು ಬಭ್ರುವಾಹನನ ಮೂಡಿಗೆಯೊಳಂಬಾಗಿರ್ದಳು | |೩೩||
ಬಂದುದು ನರಂಗೆ ವಾಯದೊಳೀಗ ಶಾಪಮೀ | ಪಮಂದಾಕಿನಿಯ ಮಾತು ತಾಗಿದಲ್ಲದೆ ಮಾಣ | ದಿಂದು ಕುಲಮಳಿವುದೀತನ ಕೂಡೆ ಧರಣಾದಿಗಳಸುವಿಡಿಯಲರಿಯರು | ಮುಂದೆ ಸುರಪುರದ ಲಕ್ಷ್ಮೀಕಾಂತನಾನ ತೆರ! ದಿಂದೆ ಪರಿಹರಿಸುವನೊ ತನ್ನ ಶರಣಾಗತರ | ನೊಂದುಪಾಯದೊಳುಳಿಪದಿರನೆಂದು ಧೈಯಮಂ ತಾಳ್ದರಿಂದ್ರಾದಿ ಸುರರು ॥೩೪||
ಜೈಮಿನಿ ಭಾರತ 20
ಹತ್ತನೆಯ ಸಂಧಿ ಮೊದಲ ಭಾಗ
ಪದ್ಯ 1 ರಿಂದ 25
ನಿರೂಪಣೆ: ಸುಬ್ಬುಲಕ್ಷ್ಮಿ
ಸೌಭರಿ ಮುನಿಯ ಆಶ್ರಮ
ಸಂಕ್ಷಿಪ್ತ ರೂಪ
ಅರ್ಜುನನು ಕುದುರೆಯ ಹಿಂದೆ ಸಕಲ ಸೈನ್ಯದೊಂದಿಗೆ ನಡೆಯುತ್ತಿರಲು ವಿಂಧ್ಯ ಪರ್ವತ ಎದುರಾಯಿತು. ಪಾಂಡವರೆಲ್ಲರ ಪ್ರತಿನಿಧಿಯಂತೆ ಇದ್ದ ಅರ್ಜುನ ಪರ್ವತದ ಸೌಂದರ್ಯ, ಅಗಾಧತೆ ಗಳನ್ನು ಕಂಡನು. ಗಗನ ಮಂಡಲವನ್ನು ಚುಂಬಿಸುವಂತಿರುವ ಶೃಂಗಗಳಿಂದ, ನಾನಾ ವಿಧದ ತರುಗಳಿಂದ, ಖಗ ಮೃಗಗಳಿಂದ, ಗೈರಿಕಾದಿ ಧಾತುಗಳಿಂದ ಶೋಭಾಯಮಾನವಾಗಿತ್ತು ಆ ಪರ್ವತಶ್ರೇಣಿ. ಅಲ್ಲಲ್ಲಿ ಪುಣ್ಯಾಶ್ರಮಗಳು ಕಾಣುತ್ತಿದ್ದವು. ಹಕ್ಕಿಗಳ ಕಲರವ ಮಧುರವಾಗಿತ್ತು. ಮರದಿಂದ ಮರಕ್ಕೆ ನೆಗೆಯುತ್ತ ಚೇಷ್ಟೆ ಮಾಡುತ್ತಿದ್ದ ಕೋತಿಗಳೂ ಬಹಳಷ್ಟು ಇದ್ದವು. ಅಲ್ಲಿ ಬೀಸುತ್ತಿದ್ದ ಗಾಳಿಯು ವಿವಿಧ ಹೂಗಳ ಕಂಪನ್ನು ಹೊತ್ತು ತರುತ್ತಿತ್ತು.
ಅಲ್ಲಿ ವಿವಿಧ ನಾಗಗಳಿದ್ದರೂ ಶಿವನಲ್ಲ, ಬಿಳಿ ಮಂಜಿದ್ದರೂ ಹಾಲ್ಗಡಲಲ್ಲ, ಮಹಿಷಿಗಳಿದ್ದರೂ ರಾಜಗೃಹವಲ್ಲ ಇತ್ಯಾದಿ ಪದಗಳ ಚಮತ್ಕಾರ ಇಲ್ಲಿನ ವರ್ಣನೆಗಳಲ್ಲಿ ಮೂಡಿದೆ.
ಬಹಳ ಕಾಲದಿಂದ ಮಳೆಗರೆದ ನಭಕ್ಕೆ ಉತ್ತರಿಸುವಂತೆ ಪಾರ್ಥನ ಸೈನ್ಯದ ಬಹುಳತೆಯಿಂದ ಅಲ್ಲಿ ಆಕಾಶದವರೆಗೆ ಧೂಳೆದ್ದಿತು. ನೆಲ ನಡುಗಿತು. ಕ್ರಿಮಿಕೀಟಗಳು, ಮೃಗಪಕ್ಷಿಗಳು, ತರುಲತೆಗಳು, ನದನದಿಗಳು ಎಲ್ಲವನ್ನೂ ನೋಡುತ್ತ ಸೇನೆ ಮುನ್ನಡೆಯಿತು.
ಅಲ್ಲಿನ ದುರ್ಮಾರ್ಗವು ಸನ್ಮಾರ್ಗವಾಯಿತು.ಅಂಧಕಾರ ತೊಲಗಿ ಸುಪ್ರಸನ್ನ ಕಾಂತಿ ಬೆಳಗಿತು. ಇಲ್ಲಿ ಹರಿ ಎಂಬುದು ಕೃಷ್ಣ ಮತ್ತು ಕುದುರೆ ಎರಡೂ ಅರ್ಥವನ್ನು ಹೊಂದಿದೆ.
ಕುದುರೆಯು ಹೆಜ್ಜೆಯಿಟ್ಟ ನೆಲ ವಿಷ್ಣುಪದಮಾಯ್ತು ಎಂದು ಹೇಳುತ್ತ ಎರಡೂ ಅರ್ಥಗಳನ್ನು ಸಮನ್ವಯ ಮಾಡಿರುವುದು ಸೊಗಸಾಗಿದೆ.
ಮುಂದೆ ಸಾಗಿದ ಕುದುರೆ ದೊಡ್ಡದೊಂದು ಬಂಡೆಯನ್ನು ಕಂಡು ಅಲ್ಲಿ ಕಾಲಿಟ್ಟಿತು. ತಕ್ಷಣ ಅದು ಶಿಲೆಯಂತೆ ಕದಲಲಾರದೆ ನಿಂತುಬಿಟ್ಟಿತು. ಸ್ವಲ್ಪವೂ ಚಲಿಸಲಾಗಲಿಲ್ಲ. ಈ ವಿಚಿತ್ರವನ್ನು ಭಟರು ಅರ್ಜುನನಿಗೆ ತಿಳಿಸುದರು. ಅವನೂ ಇದನ್ನು ಕಂಡು ಚಕಿತನಾದನು. ಚಿಂತಿಸಿದನು.
ಇಲ್ಲಿ ಯಾರಾದರೂ ಮುನಿಯ ಆಶ್ರಮವಿರಬಹುದೆಂದು ಭಾವಿಸಿದ ಅರ್ಜುನ ದೂತರನ್ನು ಅಟ್ಟಿದನು. ಅವರು ಬಹಳ ಬೇಗ ಬಂದು ಅಲ್ಲೊಂದು ಆಶ್ರಮವಿರುವಬಗ್ಗೆ ತಿಳಿಸಿದರು. ತನ್ನ ಆಪ್ತರೊಂದಿಗೆ ನಡೆದನು. ಅಲ್ಲಿ ಪ್ರಶಾಂತ ವಾತಾವರಣ ಇತ್ತು.
ಯಾವುದೇ ವೈರವಿಲ್ಲದೆ ಎಲ್ಲ ಪ್ರಾಣಿಗಳಿದ್ದವು. ಅಲ್ಲಿ ಎಲ್ಲ ಋತುಗಳೂ ಮೇಳೈಸಿದ್ದಂತೆ ಇತ್ತು.
ಅರ್ಜುನನು ಅಲ್ಲಿದ್ದ ಮುನಿಗೆ ನಮಸ್ಕರಿಸಿದನು. ಅವರು ಇವನನ್ನು ಸತ್ಕರಿಸಿದರು.
ಕುಲಬಾಂಧವರನ್ನು ಕೊಂದ ಪಾಪದ ಪ್ರಾಯಶ್ಚಿತ್ತಕ್ಕಾಗಿ ಕೈಗೊಂಡಿರುವ ಅಶ್ವಮೇಧದ ಬಗ್ಗೆ ಹೇಳಿ ಕುದುರೆಯು ಶಿಲೆಯಲ್ಲಿ ಸಿಲುಕಿರುವ ವಿಷಯ ಹೇಳಿದನು. ಹರಿಯ ಕರಣೆಯಿರಲು ಯಾಗದ ಸಂಗೇಕೆ ಎಂದು ಮುನಿಯು ಹೇಳಲು ಹರಿಯನ್ನು ಮರೆವವರಲ್ಲ ನಾವು. ಅವನನ್ನು ಮುಂದೆ ಇಟ್ಟುಕೊಂಡೇ ಈ ಕಾರ್ಯ ಕೈಗೊಂಡಿರುವುದಾಗಿ ಹೇಳಿ ಕುದುರೆಯನ್ನು ಬಿಡಿಸಬೇಕಾಗಿ ಪ್ರಾರ್ಥಿಸಿದನು. ಕೃಷ್ಣನ ಸ್ಮರಣೆಯನ್ನು ಮಾಡಿ ಕುದುರೆಯನ್ನು ಮುಟ್ಟು. ಅದು ಚಲಿಸುವುದು ಎನ್ನಲು ಸಂತಸವಾಯಿತು. ಇಲ್ಲಿನ ವಿಚಿತ್ರದ ಬಗ್ಗೆ ಹೇಳೆನ್ನಲು ಮುನಿಯು ಚಂಡಿ ಉದ್ದಾಲಕರ ಕಥಾಭಾಗವನ್ನು ಹೇಳಲು ಆರಂಭಿಸಿದನು.
ಉದ್ದಾಲಕನ ಸತಿ ಚಂಡಿಯೆಂಬವಳು ಚಂಡಿತನದಲ್ಲಿಯೇ ಇದ್ದಳು. ಗೃಹಕೃತ್ಯ, ಮನೆವಾಳ್ತೆ, ಅತಿಥಿಸತ್ಕಾರ ಹೀಗೆ ಯಾವುದನ್ಬು ಮಾಡೆಂದರೂ ಮಾಡುವುದಿಲ್ಲ ಎಂದು ಚಂಡಿತನ ತೋರಿಸುತ್ತಿದ್ದಳು. ಮುಳ್ಳು ಹಿಡಿದ ಮರವನ್ನು ಹತ್ತಿದಂತಾಗಿ ಉದ್ದಾಲಕನು ಸದಾ ಚಿಂತಿಸುವಂತಾಯಿತು.
ಹೀಗಿರಲು ಕೌಂಡಿನ್ಯನೆಂಬ ಮುನಿ ಅಲ್ಲಿಗೆ ಬಂದು ಇವನ ಚಿಂತೆಯ ಕಾರಣ ಅರಿತು ಅವಳ ಒಡನೆ ವಿಪರೀತವಾಗಿ ನಡೆದುಕೋ ಮಾಡಬೇಡ ಎಂದರೆ ಮಾಡುವಳು ಎಂದು ಉಪಾಯ ಹೇಳಿಕೊಟ್ಟನು. ಹೀಗೇ ಸಾಗುತ್ತಿತ್ತು.
ಹತ್ತನೆಯ ಸಂಧಿ ಮೊದಲ ಭಾಗ
ಪದ್ಯ 1 ರಿಂದ 25
ಸೂಚನೆ : ಹರಿ ಶಿಲೆಯಮೇಲೆ ನಡೆಗಿ ಸವ್ಯಸಾಚಿ ಸೌ । ಭರಿಯ ದೆಸೆಯಿಂದ ಮುದ್ದಾಲಕನ ಕಥೆಗೇಳು| ತಿರದೆ ಹಂಸಧ್ವಜನ ಪಟ್ಟಣಕೆ ಬರಲವಂ ಕಾದಲ್ಕೆ ಪೊರಮಟ್ಟನು |
ಆಲಿಸೆಲೆ ಜನಮೇಜಯಕ್ಷಿತಿಪ ಮುಂದಣ ಕ | ಥಾಲಾಪ ಕೌತುಕವನುಚಿತದಿಂ ಫಲು`ಗುಣಂ 1 ನೀಲಧ್ವಜನ ಕಂಡ ಬಳಿಕಾತನಂ ಕೂಡಿಕೊಂಡಖಿಳ ಸೇನೆಸಹಿತ | |ಮೇಲೆ ನಡೆದಂ ತೆಂಕಮೊಗವಾಗಿ ಹಯದೊಡನೆ | ಕಾಲಿಡುವ ಮಂದಿಗಿಂಬಿಲ್ಲ ನೆಲನಾಗಸಂ | ಸಾಲದೇಳುವ ಧೂಳಿಗೆಣ್ದೆಸೆ ಕಠೋರ ವಾದ್ಯಧ್ವನಿಗೆ ನೆರೆಯದೆನಲು||೧||
ಸಹದೇವನಾಗಿ ಸಮುದಿತ ನಕುಲನಾಗಿ ಸ | ನ್ನಿಹಿತಾರ್ಜುನನುಮಾಗಿ ವರ ವೃಕೋದರನಾಗಿ | ಮಹದಿಳಾ ಭದ್ರಾಜನಾಗಿ ಶಶಿಕಾಂತ ಕುಲದಿಂದೆ ಪಾಂಡವನುವಾಗಿ || ಅಹಿತರುಗಳಂ ಧಾರ್ತರಾಷ್ಟ್ರರಂ ಕೂಡಿಕೊಂ | ಡಿಹುದರಿಂದಚಲನಾಗಿಹೆನೆಂದು ಹರಿಯೊಡನೆ | ಬಹ ಪಾರ್ಥನಂ ಕರೆದು ಮೂದಲಿಪ ತೆರದಿಂದೆ ವಿಂಧ್ಯಾದ್ರಿ ಮುಂದೆಸೆದುದು||೨||
ಎಸೆದುದಾ ಗಿರಿ ಗಗನ ಮಂಡಲವನಂಡಲೆನ | ಲಸದುನ್ನತದ ಶೃಂಗದುಷ್ಕರದ ಸತ್ಕರದ | ಶಶಿಕಾಂತಮಯವಾದ ರಮಣೀಯ ಕಮನೀಯ ಕಂದರದ ಸೌಂದರದೊಳು|| ಮುಸುಕಿ ತಪ್ಪಲ ಮೇವ ಮಂಜುಗಳ ನಂಜುಗಳ | ದಶನದುಗ್ರಾಹಿಗಳ ಪುತ್ತುಗಳ ಮುತ್ತುಗಳ | ಬೆಸಲಾದ ಪೆರ್ಬಿದಿರ ಕಾಡುಗಳ ಬೀಡುಗಳ ಶಬರಿಯರ ಸಂಕುಲದೊಳು ||೩||
ಪಕ್ಷಿ ಮೃಗಜಾತಿಗಳು ಲೀಲೆ ಮಿಗೆ ರಮಿಸುತಿಹ | ಯಕ್ಷ ಕಿನ್ನರ ಕಿಂಪುರುಷ ಗಂಧರ್ವ । ರಕ್ಷೋಗಣಂಗಳಿಂದಲ್ಲಲ್ಲಿಗೆಸೆವ ಪುಣ್ಯಾಶ್ರಮದ ಮುನಿಗಳಿಂದೆ || ಯಕ್ಷ ವಾನರ ಕುಲದ ವಿವಿಧ ಚೇಷ್ಟೆಗಳಿಂದೆ | ವೃಕ್ಷ ಲತೆಗಳ ಕುಸುಮ ಫಲ ಸಮೃದ್ಧಿಗಳಿಂದ 1 ಮಕ್ಷಿಗಚಂದ್ರಮೆಸೆದಿರ್ದುದು ಪುಳಿಂದಿಯರ ತನುಗಂಧ ಬಂಧುರದೊಳು||೪||
ಅಭಿಲಾಷೆಯಂತಿರೆ ಸದಾನವಂ ಸಿರಿಯಂತೆ ! ವಿಭವಾಸ್ಪದಂ ಕಲಾ ನಿಧಿಯಂತೆ ಮೃಗಧರಂ | ನಭದಂತೆ ಕುಜಯುತಂ ದ್ವಿಜನಂತೆ ವಂಶ ಪರಿಶೋಭಿತಂ ಸ್ವರ್ಗದಂತೆ| | ಶುಭ ಸುರಭಿ ಸಂಭ್ರತಂ ರಣದಂತೆ ಶರವೃತಂ | ನಭೆಯಂತೆ ಚಿತ್ರ ಪತ್ರಾನ್ವಿತಂ ದಿನಕರ | ಪ್ರಭೆಯಂತೆ ಪುಂಡರೀಕೋಲ್ಲಾಸಕರವಾಗಿ ತಚ್ಚೈಲಮೆಸೆದಿರ್ದುದು ||೫||
ನಾಗಭೂಷಣನಾಗಿ ಶಿವನಲ ಹರಿಗಿರ್ಕೆ | ಯಾಗಿ ಪಾಲ್ಗ ಡಲಲ್ಲ ಶಿಖಿ ನಿವಾಸಸ್ಥಾನ | ಮಾಗಿ ದಿಗ್ಭಾಗಮಲ್ಲಪ್ಪಾ ಪದೋದ್ಯಾಸವಾಗಿ ನೈಪಥ್ಯಮಲ್ಲ | ಗೋ ಗಣಾತವಾಗಿ ವ್ರಜಮಲ್ಲ ಖಡ್ಡ ಧರ | ನಾಗಿ ಪಟುಭಟನಲ್ಲ ಮಹಿಷೀ ವಿಲಾಸಕರ | ಮಾಗಿ ನೃಪಗೇಹಮಲ್ಲೆನಿಸಿರ್ದುದಾಶ್ಚರ್ಯ ಸಾಂದ್ರ ಮಚಲೇಂದ್ರಮೆಸೆದು||೬||
ಶೃಂಗಮಯಮುರುಶಿಲಾ ಸಂಗಮಯಮಧಿಕ ಮಾ | ತಂಗಮಯಮನುಪಮ ಭುಜಂಗಮಯಮುನ್ನತ ಲ ।
ವಂಗಮಯಮಮಿತ ಸಾರಂಗಮಯಮದ್ಭು ತದ ಸಿಂಗಮಯ ಶರಭಮಯಮು|| ಶೃಂಗಮಯಮವಿರಳ ವಿಹಂಗಮಯವೊಪ್ಪುವ ಕು | ರಂಗಮಯಮಮರಿಯರನಂಗಮಯ ಕೇಳಿಗಳ | ಸಂಗಮಯಮೆನಿಪ ಗಿರಿ ಭಂಗಮಯವಲ್ಲದುತ್ತುಂಗಮಯ ಮಾಗಿರ್ದುದು||೭||
ಬಹು ಕಾಲಮೆನಗೆ ನೀರ್ಮಳೆಗರೆದ ಪುರುಷಾರ್ಥ | ಕಹಹ ಮೃದ್ಬಿಂದುಗಳನೀಗ ಸುರಿದಪೆನೆಂದು |ಮಹಿ ನಭಸ್ಥಳಕೂರ್ಧ್ವಮುಖವಾಗಿ ಸೂಸುವ ರಜದ ಸೋನೆಯೆನೆ ದೂಳಿಗೆ|| ಬಹುಳ ತರು ಗುಲ್ಮಲತೆ ಮೃಗ ಪಕ್ಷಿ ಕ್ರಿಮಿ ಕೀಟ | ಗುಹೆ ದೊಣೆ ಮೊರಡಿ ಪಳ್ಳ ಕೊಳ್ಳ ಜರಿ ಸರಿ ಜಲುಗು | ಗಹನ ಗಹ್ವರದ ವಿಂಧ್ಯಾದ್ರಿಯಂ ಫಲುಗುಣನ ಸೇನೆ ತುಳಿದಸಿಯರೆದುದು||೮||
ಹರಿಯ ಸೇವಕರ ಬರವಂ ಕಾಣುತಾ ವಿಂಧ್ಯ | ಗಿರಿಯ ದುರ್ಮಾರ್ಗಮುಂ ಸನ್ಮಾರ್ಗವಾಯ್ತು ದು | ರ್ಧರ ಹೃದಯ ವನಜಾಂಧಕಾರಮುಂ ಸುಪ್ರಕಾಶಿತಮಾಯ್ತು ವಿಕೃತಿಯಡಗಿ|| ಉರುತರ ಪ್ರಭವ ದವಮುಕ್ತ ಭಾವಿತವಾಯ್ತು | ನಿರುಪಮಾಶಾ ಪರಿಜ್ಞಾನವಾಯ್ತಿರದೆ ಗೋ | ಚರಮಾಯ್ತು ವಿಷ್ಣು ಪದಮೆನೆ ನಡೆದುದಾ ಹಯಂ ಬೆಂಬಿಡದ ಸೇನೆಸಹಿತ||೯||
ಮಂದಿ ಸಂದಣಿಸಿ ಬೆಂಕೊಂಡು ನಡೆತರೆ ಕುದುರೆ | ಮುಂದೆ ಬರೆವರೆ ಕಂಡುದೊಂದು ಯೋಜನದಗಲ | ದಿಂದೆಸೆವ ಶಿಲೆಯನದರೊಳ್ ಪೊರಳ್ದಪೆನೆಂಬ ತವಕದಿಂದತಿಭರದೊಳು|| ಬಂದಡರ್ದಾ ಕಲ್ಲ ಮೇಲೆ ಹರಿ ಕಾಲಿಟ್ಟು | ದಂದು ಹರಿ ಮೆಟ್ಟಿದೊಡೆ ಪೆಣ್ಣಾದುದಂತೆ ಮೇ | ಣಿಂದಾಗದಿರ್ದಪುದೆ ಪೇಳೆಂಬಿನಂ ಮಹೀಪಾಲ ಕೇಳದ್ಭುತವನು||೧೦||
ಕಾಲಿಡಲ್ಕಾ ಶಿಲೆಯೊಳಾ ತುರಂಗದ ಖುರಂ | ಕೀಲಿಸಿತು ಭಿನ್ನಿಸದೆ ಕೂಡೆ ಬೆಚ್ಚಂದದಿಂ | ಮೇಲೆ ನಡೆಗೆಟ್ಟು ನಿಂದುದು ದರಿದ್ರನ ಮನೋರಥದಂತೆ ನಿಜ ತನುವಿನ|| ಲೀಲೆಯಡಗಿರ್ದುದಾಕೃತಿಯ ಭಂಜಿಕೆಯೆನಲ್ | ಭೂಲೋಲ ಕೇಳ್ಳೆಕ್ಯಮಾಗಿರ್ದುದಾ ಕಲ್ಲೊ | ಳಾ ಲಲಿತ ವಾಜಿ ಪೂರ್ಣೀಂದು ಮಂಡಲದೊಳೊಪ್ಪುವ ಮೃಗಾಂಕದಂತೆ||೧೧||
ಗಾಳಿಯಂ ಮಿಕ್ಕು ನಡೆವಾ ಹಯಂ ಕಾಲ್ಗಳಂ | ಕೀಳಲಾರದೆ ನಿಂದುದರೆಯೊಳೇನಚ್ಚರಿಯೊ | ಪೇಳಬೇಕೆಂದು ಚಾರರೈ ತಂದು ಪಾರ್ಥಂಗೆ ಕೈಮುಗಿದು ಬಿನ್ನೈ ಸಲು|| ಕೇಳಿ ವಿಸ್ಮಿತನಾಗಿ ಬಂದು ನೋಡಿದನಲ್ಲಿ | ಗಾಳನಟ್ಟಿದನಬ್ಬರಿಸಿ ಸೆಳೆಗಳಿಂದ ಪೊ |ಯ್ದೇಳಿಸಿದೊಡದು ವಜ್ರ ಲೇಪವಾದುದು ಸಿಲ್ಕಿತಾ ಕುದುರೆ ಕಲ್ಲೆಡೆಯೊಳು||೧೨||
ಬಳಿಕ ಚಿಂತಿಸಿದನರ್ಜುನನಿದೇನಾದೊಡಂ | ಮುಳಿದ ಮುನಿಪನ ಶಾಪವಾಗಬೇಕೀ ವನ | ಸ್ಥಳದೊಳಾಶ್ರಮಮುಂಟೆ ನೋಳ್ಪುದಗಲದೊಳೆಂದು ಚಾರರಂ ಕಳುಹಲವರು|| ತೊಳಲಿ ನಿಮಿಷದೊಳರಸಿ ಬಂದು ಬಿನ್ನೈಸಲ್ಕೆ| ಫಲುಗುಣಂ ಪ್ರದ್ಯುಮ್ನ ವೃಷಕೇತು ಸಾಲ್ವಪತಿ || ಕಲಿ ಯೌವನಾಶ್ವ ನೀಲಧ್ವಜರನೈವರಂ ಕೂಡಿಕೊಂಡೈತಂದನು||೧೩||
ವೆಗ್ಗಳಿಸರಿನ ಚಂದ್ರ ಪವನ ಶಿಖಿ ಪರ್ಜನ್ಯ | ರೊಗ್ಗಿ ಹವು ವೈರವಿಲ್ಲದೆ ನಿಖಿಳ ಮೃಗಪಕ್ಷಿ | ಮೊಗ್ಗಲರ್ ಕಾಯ್ಪಣ್ತಿಳಿರ್ಗಳಿಂ ಬೀಯವೆಂದೆಂದುಮೆಲ್ಲಾ ತರುಗಳು|| ಸಗ್ಗದವರಂತೆ ಬೇಡಿದನೀವುವಾವಗಂ | ಸುಗ್ಗಿಯಾಗಿಹುವಾರು ಋತುಗಳುಂ ಸಲೆ ಪೆಚ್ಚು | ತಗ್ಗು ಶೀತೋಷ್ಣ ಸುಖದುಃಖಂಗಳೊಗೆ ಯದಾಶ್ರಮಮೊಂದು ಮುಂದೆಸೆದಿರ್ದು||೧೪||
ವೇದಶಾಸ್ತ್ರಾಗಮ ಸ್ಮೃತಿ ಪುರಾಣಾವಳಿಯ | ಮೋದಿಸುವ ಕಶ ಸಮಿತ್ಪುಷ್ಪ ಫಲ ಮೂಲ ಪ | ರ್ಮಾದಿಗಳನೊದವಿಸುವ ಜಪ ತಪಸ್ಸಾನಾಗ್ನಿ ಹೋತ್ರ ವಿಧಿ ವೇಳೆಗಳನು|| ಕಾಧಿಸುವ ರವಿ ನಮಸ್ಕಾರ ಹರಿ ಹರ ಸಮಾ |ರಾಧನೆಗಳಂ ಮಾಡುವತಿಥಿಗಳನಳ್ತಿಯಿಂ | ಅದರಿಪ ಯೋಗಮಾರ್ಗದೊಳೆಸೆವ ಮುನಿಗಳಾಶ್ರಮದೆಡೆಯೊಳಿರುತಿರ್ದರು||೧೫||
ಸುಡದಿರ್ದ ಪಾವಕನೊ ಬಿಸಿ ಮಾಣ್ದ ರವಿಯೊ ತಂ |ಪಿಡಿದಿರದ ಚಂದ್ರಮನೊ ವಿಷಕಂಠನಾಗದಿಹ |ಮೃಡನೊ ರಜಮಂ ಪೊರ್ದದಂಬುಜಾಸನನೊ ಫಣಿ ತಲ್ಪನಲ್ಲದ ವಿಷ್ಣುವೊ|| ಕಡುತೇಜದೊಬ್ಬುಳಿಯೊ ಶಾಂತಿಯ ನಿಜಾಕಾರ | ದೊಡಲೊ ಪೇಳೆಂಬ ಸೌಭರಿ ಮುನಿಪನಾಶ್ರಮದ | ನಡುವೆ ಕುಳಿರ್ದು ಸುಖಯೋಗದೊಳಿರಲ್ಕೆ ನಡೆತಂದರ್ಜುನಂ ಕಂಡನು||೧೬||
ಬಂದು ಸಾಷ್ಟಾಂಗದಿಂದೆರಗಿ ಸೌಭರಿ ಮುನಿಯ | ಮು೦ದೆ ಕೈಮುಗಿದು ನಿಲಲಾ ಪಾರ್ಥನಂ ಪ್ರೀತಿ | ಯಿ೦ದೆ ಸತ್ಕರಿಸಿ ಕುಶಲಂಗಳಂ ಕೇಳಿಲ್ಲಿಗೇಕೆ ಬರವಾಯಿತೆನಲು|| ಅಂದು ಕುಲಗೋತ್ರಮಂ ಕೊಂದ ಪಾಪಂ ಪೋಗ | ಲೆಂದಶ್ವಮೇಧಮಂ ತೊಡಗಿ ಯೆನ್ನಂ ಧರ್ಮ | ನಂದನಂ ಕಳುಹಿದಂ ಹಯ ರಕ್ಷೆಗದರೊಡನೆ ಬರೆ ಸಿಲ್ಕಿ ತದು ಶಿಲೆಯೊಳು||೧೭||
ಎಲೆ ಮುವೀಶ್ವರ ತವಾನುಗ್ರಹದೊಳಲ್ಲದೀ | ಶಿಲೆಯೊಳೊಂದಿದ ಹಯಂ ಬಿಡುವಂದಮಂ ಕಾಣೆ | ನುಳುಹಬೇಕೆಂದೆರಗಲರ್ಜುನನ ಮೊಗ ನೋಡಿ ನಗುತೆ ಸೌಭರಿ ನುಡಿದನು|| ಕಳುಹಿದಂ ಪಿಂತೆ ಭಾರತ ಯುದ್ಧ ಮಧ್ಯದೊಳ್ |ನಳಿನದಾಭಂ ನಿನಗೆ ಮತ್ತೆಯುಮಹಂಕಾರ | ಮಳಿದುದಿಲ್ಲಕಟ ಜಗದೊಳ್ ಕೊಲ್ವರಾರ್ ಕಾವರಾರ್ ಬಲ್ಲೊಡುಸಿರೆಂದ||೧೮||
ಶ್ರೀಕೃಷ್ಣನಿರೆ ಮುಂದೆ ವಂಶಮಂ ಕೊಂದೆನೆಂ | ಬೀ ಕೃತ್ಯದಿಂ ಪಾತಕಂ ಬಹುದೆ ನಿಮ್ಮೊಳ್ ಸ | ಸದಾ ಕೃಪಾನಿಧಿಯ ಸಾನ್ನಿಧ್ಯಮಿರುತಿರಲಾಗಿ ವಾಜಿಮೇಧಂ ಬೇಹುದೆ || ಆ ಕೃಕಾಂತಕ ನರಿದುದಿಲ್ಲಲಾ ಲೋಕದೊಳ್ |ಪ್ರಾಕೃ ತರ ತೆರದಿಂದ ಹರಿ ಮನೆಯೊಳಿಗೆ ಗರ್ವ|ದಾಕೃತಿಯಹರಿಯೊಡನೆ ಬಂದೆ ಸುರ ಭೂಜಮಿರೆ ಶಾಲ್ಮಲಿಯನರಸುವಂತೆ||೧೯||
ಕೊಟ್ಟಿಗೆಯ ಕಾಮಧೇನುವನೊಲ್ಲದಳ್ತಿಯಿಂ | ಕಟ್ಟರಣ್ಯದ ಪುಲಿಯನರಸಿ ಕರೆಯಲ್ಕೊದೆಯ | ಕಟ್ಟುವೆಯಲಾ ತುರಗಮೇಮೆಧೇಗೈವುದಾ ಹರಿಯ ಸಾನ್ನಿಧ್ಯಮಿರಲು || ಹುಟ್ಟಿತಿಲ್ಲವೆ ನಿನಗರಿವು ಧರ ಸೂನು ಮತಿ | ಗೆಟ್ಟಿಹನೆ ಶಿವಶಿವ ವೃಥಾ ಪರಿಭ್ರಮವೆ ನಿಮ | ಗಟ್ಟಿ ತೆಂದನರೇಂದ್ರ ತನಯನಂ ಜರೆದು ಸೌಭರಿ ನುಡಿದೊಡೆಂತೆಂದನು | ೨೦ ||
ಹರಿಯನುಳಿದಾವು ಬದುಕುವರಲ್ಲ ಚಿತ್ತದೊಳ್ | ಭರಿತನಾಗಿಹನಾವಗಂ ಧರ ಸೂನು ಮರೆ | ದಿರನಾ ಮುರಾರಿಯ ನಿರೂಪದಿಂ ತೊಡಗಿ ಮಾಡುವನೀ ಮಹಾಕೃತುವನು || ತರಳತೆಯ ಮೆರೆವೆಗಿಂತರಿವನುಪದೇಶಿಪೊಡೆ | ಗುರುಗಳಲ್ಲವೆ ನೀವು ಧನ್ಯರಾದಪೆವಿನ್ನು | ಕರುಣದಿಂದೀ ಶಿಲೆಯೊಳೊಂದಿದ ತುರಂಗಮಂ ಬಿಡಿಸಿಕೊಡಬೇಕೆಂದನು ||೨೧||
ಇನ್ನು ಚಿಂತಿಸದೆ ಕೃಷ್ಣಸ್ಮರಣೆಯಂ ಮಾಡಿ | ನಿನ್ನ ಹಸ್ತಸ್ಪರ್ಶನಂ ಗೈಯ್ದೊಡಾ ಕುದುರೆ | ಮುನ್ನಿನಂತವನಿಯೊಳ್ ನಡೆದಪುದು ಪೋಗು ನೀನೆಂದು ಸೌಭರಿ ನುಡಿಯಲು|| ತನ್ನೊಳಗೆ ತಾನೆ ವಿಸ್ಮಿತನಾಗಿ ಪಾರ್ಥನದ | ರುನ್ನತಿಯ ತುದಿ ಮೊದಲನರುಪೆನಲ್ ಜ್ಞಾನ ಸಂ | ಪನ್ನ ತಾಪಸನರ್ಜುನಂಗೆ ವಿಸ್ತರಿಸಿದಂ ಮತ್ತೆ ಪೂರ್ವಾಪರವನು اووا|
ಆಲಿಸರ್ಜುನ ಮುನ್ನ ವಿಪ್ರನುಂಟೋರ್ವನು | ದ್ದಾಲಕಾಖ್ಯಂ ತಿಳಿದನಖಿಳಶಾಸ್ತ್ರಂಗಳಂ ! ಮೇಲೆ ವೈವಾಹದೊಳ್ ವಧುವಾದಳಾತಂಗೆ ಚಂಡಿಯೆಂದಾಕೆ ಬಳಿಕ )| ಕಾಲಕಾಲದ ಜಪಾನುಷ್ಠಾನಪೂಜೆಗಳಿ | ಗಾಲಸ್ಯಮಂ ಮಾಡದೆನ್ನ ಪರಿಚರೈಗನು | ಕೊಲೆಯಾಗಿರ್ದು ಮನೆವಾಳ್ತೆಯಂ ಸಾಗಿಪುದು ನೀನೆಂದೊಡಿಂತೆಂದಳು ॥೨೩||
ಎಳ್ಳನಿತು ನಿನ್ನ ಮಾತಂ ಕೇಳ್ವಳೆಂದೆಣಿಕೆ | ಗೊಳ್ಳದಿರ್ ಪರಿಚರ್ಯೆ ಮನೆವಾಳ್ತೆಯೆಂದೆಂಬ | ತಳ್ಳಿಯವಳಲ್ಲ ನೀನೆಂದುದಂ ಮಾಡೆನೆಂದಾ ಚಂಡಿ ಚಂಡಿಪೋರೆ || ಮುಳ್ಳಿಡಿದ ಮರವೇರಿದಂತಾದುದಿಹಪರಕಿ | ದೊಳ್ಳಿತಾದಪುದೆ ಬಂದುದು ತಪೋಹಾನಿಯೆಂ | ದಳ್ಳೆಯೊಳ್ ಕೋಲ್ಗೊಂಡ ತೆರದೊಳುದ್ದಾಲಕಂ ಚಿಂತಿಪಂ ಪ್ರತಿದಿನದೊಳು||೨೪||
ಇಂತಿರುತ್ತಿರಲ್ಕೆ ಕೌಂಡಿನ್ಯನೆಂಬೊರ್ವಮುನಿ | ಪಂ ತನ್ನ ಮನೆಗೆ ಬರಲಾತನಂ ಸತ್ಕರಿಸಿ | ಚಿಂತೆವೆತ್ತಿರಲವನಿದೇನೆಂದು ಬೆಸೆಗೊಂಡೊಡವಳ ಪ್ರತಿಕೂಲತೆಯನು || ಅಂತರಿಸದೆಲ್ಲಮಂ ಪೇಳ್ದೊಡವನಿದಕೆ ನೀಂ | ಮುಂತೆ ವಿಪರೀತಮಂ ಮಾಡಲಾದಪುದೆಂದು | ಸಂತಾಪಮಂ ಬಿಡಿಸಿ ಬೀಳ್ಕೊಂಡನಂ ತೀರ್ಥಯಾತ್ರೆಗೈದಿದನಿತ್ತಲು | ೨೫ ||
ಜೈಮಿನಿ ಭಾರತ 21
ಹತ್ತನೆಯ ಸಂಧಿ ಮುಂದುವರೆದ ಭಾಗ
ಪದ್ಯ 26 ರಿಂದ 54
ಹಂಸಧ್ವಜನ ವಿಚಾರ
ನಿರೂಪಣೆ: ಸುಬ್ಬುಲಕ್ಷ್ನಿ
ಸಂಕ್ಷಿಪ್ತ ರೂಪ
ಉದ್ದಾಲಕನು ಒಮ್ಮೆ ಪಿತೃಕಾರ್ಯ ಮಾಡಬೇಕಾಗಿ ಬಂತು. ಅವನು ದಿನವನ್ನೂ, ಸಾಮಗ್ರಿಗಳನ್ಬೂ, ವಿಪ್ರರನ್ನೂ ಕರೆಯುವ ಬಗ್ಗೆ ವಿಪರೀತವಾಗಿ ಹೇಳಲು ಚಂಡಿಯು ಎಲ್ಲವನ್ನೂ ಸರಿಯಾಗಿಯೇ ಮಾಡಬೇಕೆಂದು, ದಾನ ದಕ್ಷಿಣೆ, ವಸ್ತ್ರ, ಭೋಜನ ಎಲ್ಲವೂ ಸರಿಯಾಗಿ ಆಗಬೇಕೆಂದೂ ಆಗ್ರಹಿಸಿ ತಯಾರಿ ನಡೆಸಿದಳು. ಎಲ್ಲವೂ ಸಾಂಗವಾಗಿ ಮುಗಿಯಿತು. ಪಿಂಡವನ್ಬು ನದಿಯಲ್ಲಿ ವಿಸರ್ಜಿಸಬೇಕೆಂದು ಬಾಯಿತಪ್ಪಿ ಸರಿಯಾಗಿ ಹೇಳಿ ಬಿಟ್ಟ ಉದ್ದಾಲಕ. ಚಂಡಿಯು ಅದನ್ಬು ಬೀದಿಗೆಸೆದಳು. ಮುನಿಯ ತಾಳ್ಮೆ ತಪ್ಪಿತು. ಅವಳನ್ನು ಶಿಲೆಯಾಗು ಎಂದು ಶಪಿಸಿದ. ಮತ್ತೆ ಕರುಣೆಯಿಂದ ವಿಮೋಚನೆಯ ಬಗೆಗೂ ಹೇಳಿದ.
ಅಶ್ವಮೇಧದ ಕುದುರೆ ಬಂದು ಬಿಂತಾಗ ಅರ್ಜುನನ ಸ್ಪರ್ಶದಿಂದ ಶಾಪದ ವಿಮೋಚನೆ ಎಂದು. ಅದರಂತೆ ಅರ್ಜುನ ಹರಿಯನ್ನು ಸ್ಮರಿಸಿ ಕುದುರೆಯನ್ನು ಮುಟ್ಡಲು ಅದಕ್ಕೆ ಚಲನೆ ಬಂತು. ಚಂಡಿಯು ನಮಿಸಿ ತಪಕ್ಕೆ ನಡೆದಳು. ಅರ್ಜುನನ ಸೈನ್ಯ ಮುಂದೆ ಸಾಗಿತು. ಚಂಪಕಾಪುರಕ್ಕೆ ಬಂದರು.
ಅಲ್ಲಿನ ರಾಜ ಹಂಸಧ್ವಜನಿಗೆ ವಿಷಯ ತಿಳಿಯಿತು. ಅವನಿಗೆ ಶ್ರೀ ಕೃಷ್ಣನನ್ನು ಇಲ್ಲಿ ಕಾಣುವಾಸೆ. ಅದಕ್ಕೇ ಕುದುರೆಯನ್ನು ಕಟ್ಟಿ ಹಾಕಿ ಯುದ್ಧಕ್ಕೆ ತಯಾರಾದನು. ಇವನ ಅರಮನೆ, ಕೋಟೆಗಳು ವೈಭವದಿಂದ ಕೂಡಿದ್ದವು. ಸುಭಿಕ್ಷವಿತ್ತು. ಎಲ್ಲರೂ ಧರ್ಮ ಪ್ರವರ್ತಕರು. ಪಂಡಿತರು. ರಾಜನ ಕರಾರಿನಂತೆ ಏಕಪತ್ನೀವ್ರತಸ್ಥರೂ, ಧರ್ಮಭೀರುಗಳೂ ಆಗಿದ್ದರು. ಯಾರೇ ತಪ್ಪಿ ನಡೆದರೂ ಶಿಕ್ಷೆ ಖಚಿತವಾಗಿತ್ತು. ಹಂಸಧ್ವಜನು ಹೊರಟರೆ ಅವನ ಹಿಂದೆ ಆನೆ, ಕುದುರೆ, ವರೂಥ, ಕಾಲಾಳುಗಳ ಅತಿ ದೊಡ್ಡ ಸೈನ್ಯವಿರುತ್ತಿತ್ತು. ಏಳು ಜನ ಅನುಜರು, ನಾಲ್ವರು ಮಕ್ಕಳು, ಮಂತ್ರಿಗಳು ಇದ್ದರು. ಪುರಸ್ತ್ರೀಯ ಸೊಂಟದ ಪಟ್ಟಿಯಂತೆ ಅವನ ಕೋಟೆ ಕಂಗೊಳಿಸುತ್ತಿತ್ತು. ಅವನ ಮನದಲ್ಲಿ ಯುದ್ಧಕ್ಕಿಂತ ಮಿಗಿಲಾಗಿ ಕೃಷ್ಣನನ್ನು ಕಾಣುವ ಬಯಕೆ. ಹೀಗಾಗಿ ಕುದುರೆಯನ್ನು ಕಟ್ಟಿಸಿದನು.
ಅವನಿಗೆ ಶಂಖ ಲಿಖಿತರೆಂಬ ಪುರೋಹಿತರಿದ್ದರು. ಒಮ್ಮೆ ಶಂಖ ಅಣ್ಣನ ಬಳಿಗೆ ಹೊದವನು ಅಲ್ಲಿದ್ದ ಹಣ್ಣನ್ನು ಕೇಳದೆ ತಿಂದ ತಪ್ಪಿಗೆ ಅವನ ಕೈ ಕತ್ತರಿಸಲಾಯಿತು. ಮತ್ತೆ ಅಣ್ಣನ ತಪೋಬಲದಿಂದ ಕೈ ಬಂದಿತ್ತು. ಅರಸನು ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ವಿಧಿಸುತ್ತಿದ್ದನು. ಸದಾ ಕುದಿಯುವ ಎಣ್ಣೆಯ ಕೊಪ್ಪರಿಗೆ ಇರುತ್ತಿತ್ತು. ಯಾರಾದರೂ ಅವನ ಆಜ್ಞೆಯನ್ನು ತಕ್ಷಣ ಪಾಲಿಸದೆ ಇದ್ದರೆ ಅವರನ್ನು ಆ ಕೊಪ್ಪರಿಗೆಯಲ್ಲಿ ಸುಡುತ್ತಿದ್ದರು.
ಅವನು ಯುದ್ಧಕ್ಕೆ ಹೊರಟಾಗ ರಾಣಿಯರು ಆರತಿಯನ್ಬು ಎತ್ತಿ ಹರಸಿ ಬೀಳ್ಕೊಂಡು ಕೃಷ್ಣನನ್ನು ನೋಡುವಾಸೆಯಿಂದ ಅವರವರ ಮನೆಗಳ ಮಹಡಿಯನ್ನು ಹತ್ತಿದರು. ಎಲ್ಲರಿಗೂ ಕಾತರ.
ಹತ್ತನೆಯ ಸಂಧಿ ಮುಂದುವರೆದ ಭಾಗ
ಪದ್ಯ 26 ,ರಿಂದ 54
ಉದ್ಧಾಲಕಂ ಬಳಿಕ ತನ್ನ ಮಂದಿರದೊಳಿರು ! ತಿದ್ದ ಸಮಯಕೆ ಪಿತೃಶ್ರಾದ್ದ ದಿವಸಂ ಬಂದೊ | ಡೆದ್ದು ಚಂಡಿಯೊಳೆಲಗೆ ನಾಳೆ ಪೈತೃಕಮದಂ ನಾಡಿದಲ್ಲದೆ ಮಾಡೆನು || ಕದ್ದು ತಹೆನಧಮಧಾನ್ಯ ವ್ರೀಹಿ ಶಾಕಮಂ | ಪೊದ್ದಲೀಯೆಂ ಶುದ್ಧ ವಸ್ತುಗಳ ನೊಂದುಮಂ ! ತದ್ದಿನಕೆ ಮರುದಿವಸದೊಳ್ ಪೇಳ್ದುಬಹೆನಪಾತ್ರಂಗೆಂದೊಡಿಂತೆಂದಳು | ೨೬॥
ನಾಳೆ ಮಾಡಿಸುವೆನಾಂ ಪೈತೃಕವನುತ್ತಮದ | ಶಾಲಿಧಾನ್ಯ ವ್ರೀಹಿ ಶಾಕಮಂ ಕೊಂಡು ಬಹೆ | ನಾಲಯವನತಿಶುದ್ಧವಾದ ವಸ್ತುಗಳಿನಲ್ಲದೆ ಕೂಡೆನಳ್ತಿಯಿಂದೆ | |ಹೇಳಿಸುವೆನಂದಿನ ದಿನದ ಮೊದಲ ರಾತ್ರಿಯೆ ವಿ | ತಾಲಗುಣಸಂಪನ್ನ ವೇದಪಾರಂಗತ ಸು | ಶೀಲರಹ ಸತ್ಪಾತ್ರದವನಿಯಮರರ್ಗೆನಲ್ ಚಂಡಿಗವನಿಂತೆಂದನು||೨೭||
ಆದೊಡೆ ಕುತುಪಕಾಲಮಂ ಬಿಡುವೆನರ್ಚನೆಯೊ | ಳಾದರಿಸೆನಾಂ ಬಂದ ವಿಪ್ರರಂ ಪಾಕದ ನ |ವೋದನ ಸುಪಾಯಸ ಗುಡಾಜ್ಯ ಮಧು ತೈಲ ಮೃದುಭಕ್ಷ್ಯ ಭೋಜ್ಯಾದಿಗಳನು|| ಸ್ವಾದುಫಲ ಶರ್ಕರ ವಿನುತ ಶಾಕ ನಿಷ್ಕಲ ಪ। ಯೋದಧಿಗಳಂ ಸಕುತಮಾಗದಂತೆ ಸಂ | ಪಾದಿಸಿ ಪಿತೃಶ್ರಾದ್ಧಮಂ ಮಾಡಿ ವಸ್ತ್ರದಕ್ಷಿಣೆಗಳಂ ಕೊಡೆನೆಂದನು ||೨೮||
ಎಂದೊಡೆ ಕುತುಪಕಾಲಮಂ ಮಾರಲೀಯೆನಾಂ | ಬಂದ ವಿಪ್ರರನಾದರಿಸಿ ಪೂಜೆಗೈಸದಿರೆ | ನಿಂದೊಲ್ಲೆನೆಂದೊಕ್ಕಣಿಸಿದಿನಿತನೆಲ್ಲಮಂ ಸಂಪಾದಿಸದೆ ಮಾಣಿನು || ತಂದಮಲವಸ್ತ್ರ ತಾಂಬೂಲ ವರದಕ್ಷಿಣೆಗೆ | ಳಿಂದ ಸತ್ಕರಿಸಿ ಕಳುಹಿಸದೆ ಬಿಡೆನೆನುತೆ ನಲ ! ವಿಂದೊದಪಿಸಿದಳಖಿಲಸದ್ದ ವ್ಯಮಂ ಬಳಿಕ ಚಂಡಿ ಪಾಕಂಗೈದಳು||೨೯||
ಕಂಡನೀತರನನುದ್ದಾಲಕಂ ಸಂತಸಂ | | ಗೊಂಡು ಮನದೊಳ್ ಪೊರಗೆ ತಾನೊಪ್ಪದವನಾಗಿ| ಚಂಡಿ ಹೇಳಿದವೊಲಾ ಶ್ರಾದ್ಧಮಂ ಮಾಡಿ ಸಂಪ್ರೀತಿಯಿಂ ವಿಪರೀತದ || ತೊಂಡುತೊಳಸಂ ಮರೆದು ಕರ್ಮಾಂಗವಾಗಿರ್ದ | ಪಿಂಡಮಂ ತೆಗೆದು ಮಡುವಿನೊಳೆ ಹಾಯ್ಕೆಂದೊಡು | ದು|ದ್ದಂಡದಿಂದೆತ್ತಿ ಬೀದಿಗೆ ಬಿಸುಡಲಾ ದ್ವಿಜಂ ರೋಷಭೀಷಣನಾದನು||೩೦||
ಎಲೆಗೆ ನಿನ್ನೊಡನೆ ನಾನೇಂ ಹರಿಯಹೋರುವೆಂ | ಛಲಿತನಕಲಿಸಿದೆ ನೀನರೆಯಾಗಿ ಹೋಗೆಂದು | ಸಲೆ ಮುಳಿದು ಶಾಪವಂ ಕೊಟ್ಟು ಕಾರುಣ್ಯದಿಂದಾ ದ್ವಿಜಂ ಕೂಡೆ ತಿಳಿದು || ಕೆಲವುಕಾಲಕೆ ನಿನ್ನೊಳಧ್ವರಹಯಂ ಬಂದು |ನಿಲಲರ್ಜುನಂ ಬಿಡಿಸಿದೊಡೆ ಮೋಕ್ಷಮಹುದೆಂದು | ತೊಲಗಿದಂ ಸಂನ್ಯಾಸಕವನತ್ತಲವನಿಯೊಳ್ ಕಲ್ಲಾದಳಿವಳಿತ್ತಲು||೩೧||
ಮೋಕ್ಷಮಹುದಾಗಿ ಚಂಡಿಗೆ ಶಾಪಮಾಗಳುಪ | ಸಾಕ್ಷಿಗೈತಂದು ನಿಂದುದು ಹಯಂ ನೀಂ ಮುಟ್ಟ | ಲಾಕ್ಷಣದೊಳೆದ್ದು ಪೋದಪುದು ಪೋಗಿನ್ನು ಮುಂದಣ ನೃಪರ್ ಬಲವಂತರು || ರಾಕ್ಷಸಾರಿಯನೆ ಮರೆಯದಿರೆಂದು ಸೌಭರಿ ನಿ। ರೀಕ್ಷಿಸಿ ಕೃಪಾವಲೋಕನದಿಂದ ವರಸಹ | ಸ್ರಾಕ್ಷನ ಕುಮಾರನಂ ಕಳುಹಲಾನತನಾಗಿ ವಿನಯದಿಂ ಬೀಳ್ಕೊಂಡನು ||೩೨||
ತದನಂತರದೊಳರ್ಜುನಂ ಬಂದು ಕುದುರೆಯಂ| ಮುದದಿಂದ ಮುಟ್ಟಲದು ಬಿಟ್ಟು ನಡೆದುದು ಮುಂದ| ಕೊದರಿಕೊಳ್ಳುತೆದ್ದು ನರನಂ ಕಂಡು ಚಂಡಿ ತಪಕಾಗಿ ಕಳುಹಿಸಿಕೊಂಡಳು || ಒದವಿದ ಸಮಸ್ತ ಜನವಾಗ ವಿಸ್ಕಿ ತಮಾದು | ದುದಿರಿತು ಕುಸುಮವೃಷ್ಟಿ ಬಳಿಕ ದಕ್ಷಿಣಕೆ ನಡೆ | ದುದು ವಾಜಿ ಚಂಪಕಾಪುರಕಂದು ಹಿಂದೆ ಬಹ ಪಡೆಸಹಿತ ವಹಿಲದಿಂದ || ೩೩ ||
ಘನಘೋಷದಿಂದ ವಾಹಿನಿಗಳೈತರುತ್ತಿರಲ್ | ವನಧಿ ಮೇರೆಯನತಿಕ್ರಮಿಸಿ ಬಂದಪುದೆಂದು | ಮುನಿದು ಭೂಮಂಡಲಮಿರದೆ ನಭಸ್ಥಳಕೆ ಪೋಪಂತೆ ದೂಳೇಳುತ್ತಿರಲು || ಅನುಸಾಲ್ವ, ಸಾತ್ಯಕಿ ಪ್ರದ್ಯುಮ್ನ ಯೌವನಾ | ಶ್ವನರೇಶ ವೃಷಕೇತು ನೀಲಧ್ವಜರ ಸೈನ್ಯ | ಮನುಪಮಿತವಾಗಿ ನಡೆದುದು ಚಂಪಕಾನಗರಿಗರ್ಜುನನ ಹಯದಕೂಡೆ | ೩೪ ||
ತವೆ ಸರ ಮಂಗಳಾಸ್ಪದಮಾದೊಡಂ ಪರಾ | ಭವಯುಕ್ತವಾಗಿರ್ಪುದೆಂದು ಕೈಲಾಸಾಚ | ಲವನತುಳಲಕ್ಷ್ಮಿನಿಳಯವಾದೊಡಂ ಭಂಗಸಹಿತವಾಗಿರ್ಪುದೆಂದು || ಅವಿರಳಪಯೋನಿಧಿಯನಟ್ಟಹಾಸಂ ಮಾಡು | ವವೊಲಿರ್ದುದಾಪುರಂ ಪ್ರಾಸಾದಕೋಟೆಗಳ | ಧವಳಿಮ ಸುಧಾಕೀರ ರುಚಿಗಳಿಂ ಪೊರೆಗೆ ನೋಡುವ ಜನರ್ಗೇವೇಳ್ವೆನು |೩೫||
ಇದು ಪುರಸ್ತ್ರೀಯ ಮಣಿಕಾಂಚೀವಲಯ ಭೂ ! ಸುದತಿಯ ಕೊರಳ ವಿರಾಜಿಪ ರತ್ನ ಮಾಲಿಕೆಯೊ | ಶ್ರೀದತಪತಿ ಗಿರಿಗಳಂ ಕಡಿವಂದು ತೆಗೆದಿಡುವೆನೆಂದು ತಿರುಪಿದ ಕುಲಶದಾ ।| ಪೊದರುವೆಳಗಿಳೆಗಿಳಿದು ವಜ್ರಮಯವಾಗಿ ನಿಂ । ದುದೊ ವಿಮಲಕೀರ್ತಿಚಂದ್ರಕೆಯಂ ಪರಪುವ ನಗ| ರದ ರಾಜಮಂಡಲದ ಪರಿವೇಷಮೋ ಪೇಳೆನರ್ ಕೋಟೆ ಕಣ್ಣಿ ಸೆದುದು| ೩೬ ||
ಆ ನಗರದರಸು ಹಂಸಧ್ವಜಂ ಕೇಳ್ದನೀ | ಸೇನೆಸಹಿತರ್ಜುನಂ ವರಮಖ ತುರಂಗ ರ ಕ್ಷಾನಿಮಿತ್ತಂ ಬಂದು ಸೀಮೆಯಂ ಪೊಕ್ಕುದಂ ದೂತಮುಖದಿಂದ ಬಳಿಕ || ಧ್ಯಾನಿಸಿದನೊಂದೆರಡುಗಳಿಗೆ ತನ್ನಾ ಪ್ರ | ಧಾನರೆಲ್ಲರನಾಗ ಕರೆಸಿಕೊಂಡವರೊಳ್ ನಿ | ಧಾನಿಸಿ ನುಡಿದನಂದು ಶ್ರದ್ಧಾಳು ಸುಮತಿ ಪ್ರಮತಿಯೆಂಬ ಮಂತ್ರಿಗಳ್ಗೆ |೩೭||
ಈ ಧನಂಜಯನ ತುರಗವನೀಗ ಕಟ್ಟಿದೊಡೆ । ಮಾಧವಂ ತಾನೆ ಮೈದೋರುವನೆಮಗೆ ಕೃಷ್ಣ | ನೀಧರೆಯೊಳಿರುತಿರ್ದವಿನ್ನೆಗಂ ಕಂಡುದಿಲ್ಲಚ್ಯುತನ ಮೂರುತಿಯನು || ಬಾಧಿಸುವುದೀ ದೇಹಮಂ ನರೆತೆರೆಗಳನ್ನು | ಸಾಧಿಸುವುದೇನಸುರರಿಪು ಬಂದು ತನ್ನೊಳವಿ ರೋಧಿಸಿದೊಡಿನಿತರಿಂದಳಿದೊಡೇನುಳಿದೊಡೇನೆಂದನಾ ನೃಪತಿ ನಗುತೆ | ೩೮ ||
ಆ ನರಾಧಿಪತಿ ನಿಶ್ಚೈ ಸಿದಂ ಕದನಮಂ । ಭೂನಾಥ ಕೇಳವನ ಕಟ್ಟಳೆಯನೆಲ್ಲಮಂ | ತಾನಾಳ್ವ ದೇಶದೊಳ್ ತನ್ನ ನಗರದೊಳೇಕಪತ್ನಿ ವ್ರತದೊಳಿರದೊಡೆ || ದಾನವಾರಿಯ ಪೂಜೆಗೈಯ್ಯದೊಡೆ ಸಂತತಂ । ` ದಾನಧರ್ಮಂಗಳಂ ಮಾಡದೊಡೆ ಗತಿಗೆಟ್ಟು ! ಹೀನಜಾತಿಗಳೊಡನೆ ಕೂಡಿದೊಡೆ ಸೈರಿಸಂ ಪರಿವಾರದೊಳ್ ಪ್ರಜೆಯೊಳು | ೩೯||
ಅಂತುಮದರಿಂದೆಲ್ಲರೇಕಪತ್ನಿ ವ್ರತರ | ನಂತಪೂಜಾರತರ್ ಸೌಭಾಗ್ಯಸಂಯುತರ್ | ಸಂತತಮಲಂಕಾರಮಂಡಿತರ್ ನೀತಿಶಾಸ್ತ್ರ ಸ್ಮೃತಿ ವಿಚಾರರತರು ॥ ಕಂತುಶರನಿರ್ಜಿತರ್ ಮದಲೋಭವರ್ಜಿತರ್ | ಸಂತೋಷಭಾಷಿತರ್ ಸದ್ಗುಣವಿಭೂಷಿತರ್ | ಚಿಂತಿತಫಲಾಗತರ್ ಸಕಲಭೋಗಾನ್ವಿತರ್ ಪರಿವಾರದೊಳ್ ಪ್ರಜೆಯೊಳು||೪೦||
ಏಕಪತ್ನಿ ವ್ರತಂ ಪ್ರಾಯತಂ ಕೋಮಲಂ ಮಾಕಾಂತ ಕಿಂಕರನಲಂಕಾರ ಪೂಜ್ಯಂ ಶು | ಭಾಕಾರನಾರೋಗ್ಯಪಟು ಕರಣನಿರ್ಮಲನಕೈತವಂ ಬಲವಂತನು|| ಭೀಕರ ಪರಾಕ್ರಮ ವಿಶಾರದಂ ಸಂಗರವಿ | ವೇಕಿಯೆಂಬಿನಿತುಗುಣಮೊರ್ವನೊಳಿರವನ | ನೇ ಕರೆದು ಮನ್ನಿಸುವನಲ್ಲದರನುಳಿವನಂತೆಲ್ಲರೀತೆರದ ನರರು||೪೧||
ಉಣಲುಡಲ್ ತೊಡಲೀಯ್ದಲಿರಲೆಯ ಲುಂಟಾಗಿ | ತಣಿದಿಹುದಲಂಕಾರಪೂಜ್ಯದಿಂ ವಸ್ತ್ರಭೂ | ಷಣ ಗಂಧ ಮಾಲ್ಯಾನುಲೇಪನಂಗಳ ಪರಿಮಳಂಗಳಿಂ ಸೊಗಸಿರ್ಪುದು|| ಸೆಣಸುಗಳ ಬಿರುದುಗಳ ಪಚ್ಚಿರ್ದ ಮುಡುಹುಗಳ 1 ಹೊಣಕೆಗಳ ತಡಹುಗಳ ಕಲಿತನದ ಕಡುಹುಗಳ | ರಣದವಕದಿಂ ಕುದಿಯುತಿಹುದು ಹಂಸಧ್ವಜನ ಪರಿವಾರಮನುದಿನದೊಳು||೪೩||
ಮಣಿಮಯ ವರೂಥಮೆಪ್ಪತ್ತೊಂದು ಸಾಸಿರಂ | ಗಣನೆಗೆಪ್ಪತ್ತೊಂದುಸಾಸಿರಗಜಂ ತುರಗ ಮೆಣಿಸುವೊಡೆ ಲಕ್ಕಂ ಪದಾತಿ ಸಾಸಿರಮುಳಿಯ ಲಕ್ಷಮೋರ್ವನ ಬಳಿಯೊಳು|| ಗಣಿತಕಿಹುದಿನಿತು ಬಲಮಿನಿತುಬಲದಿಂದ ವೆಂ ! ಟಣಿಸಿರ್ಪ ದಳಪತಿಗಳೆಪ್ಪತ್ತು ಮಂದಿ ಸಂ | ದಣಿಸಿ ಬರುತಿಹುದು ಹಂಸಧ್ವಜ ನೃಪಾಲಕಂ ಪೊರಮಟ್ಟು ನಡೆವೆಡೆಯೊಳು||೪೩||
ಆತಂಗೆ ಧನಬಲಂ ಚಂದ್ರಸೇನಂ ಚಂದ್ರ | ಕೇತು ವರಚಂದ್ರದೇವಂ ವಿಡೂರಥನತಿ | ಖ್ಯಾತನಹ ಧರ್ಮವಾಹಂ ನ್ಯಾಯವರ್ತಿಯೆಂಬಿವರನುಜರೇಳುಮಂದಿ|| ಜಾತರ್ ಸುದರ್ಶನ ಸುಧನ್ವ ಸುಮನಸ್ಸುರಥ ! ರೀತೆರದ ನಾಲ್ವರಿವರೆಲ್ಲರ್ ಸಮರ್ಥರ್ ಮ | ಹಾತಿಬಲರಮಲಧರ್ಮಜ್ಞ ರಪ್ರತಿಮರ್ ಪರಾಕ್ರಮಯುತರ್ ವೀರರು||೪೪||
ವರಶಂಖಲಿಖಿತರೆಂಬವರಣ್ಣ ತಮ್ಮಂದಿ ರಿರಲವರೊಳಾ ಲಿಖಿತನಾಶ್ರಮಕೆ ಶಂಖನೈ | ತರುತೆ ಹೇಳದೆ ಬಿದ್ದ ಪಣ್ಣನಾಸ್ವಾದಿಸಲ್ ಕರೆದಿವಂ ದೋಷಿಯೆಂದು| | ಅರಮನೆಗೆ ತಂದೊಪ್ಪಿಸಲ್ಕಾ ನೃಪಂ ಕರವ | ನರಿಸಸಲ್ಕೆ ಮತ್ತೆ ಲಿಖಿತನ ತಪೋಬಲದಿಂದೆ|ಮರಳಿ ಕೈಯಂ ಪಡೆದನಾ ಶಂಖನವರಿರ್ವರುಂ ಪುರೋಹಿತರವಂಗೆ||೪೫||
ಆ ಶಂಖಲಿಖಿತರೆಂದವೊಲಾತನಿರ್ದಪನಿ | ಕೇಶ ಕೇಳವನದಿನ್ನೊಂದು ಕಟ್ಟಳೆಯಂ ಹು | ತಾಶನಜ್ವಾಲೆಯಿಂ ಕಾಯ್ದುಕ್ಕು ವೆಣ್ಣೆಗೊಪ್ಪರಿಗೆಯೊಳ್ ತಾಂ ಸಮರಕೆ|| ಆಶುವಿಂ ಪೊರಮಡುವ ದುಂದುಭಿಯ ಸನ್ನೆಯ ಮ | ಹಾಶಬ್ದ ಮಂ ಕೇಳ್ದು ಹಿಂದುಳಿದ ಭಟನಂ ಪ್ರ। ವೇಶಮಂ ಮಾಡಿಸುವುದಲ್ಲದೊಡೆ ತನ್ನ ಭಾಷೆಗೆ ಭಂಗಮಪ್ಪುದೆಂದು||೪೬||
ಬಳಿಕ ನಿಬರೆಲ್ಲರಂ ಕರೆಸಿ ಹಂಸಧ್ವಜಂ | ಸೆಲವಿತ್ತು ಫಲುಗುಣನ ತುರಗಮಂ ಪಿಡಿತಂದು | ಪೊಳಲೊಳಗೆ ಕಟ್ಟಬೇಕೆಂದು ಸಾರಿಸಿ ಡಂಗುರಂಬೊಯ್ಸಿ ಪೊರಮಡುತಿರೆ|| ಮೊಳಗಿದುವು ಮೇಲೆ ನಿಸ್ಸಾಳಂಗಳಾಹವಕೆ | ದಳದುಳಿಸಿತಾಗ ಸುಭಟಪ್ರತತಿ ಜೋಡಿಸಿತ | ಖಿಳ ಕರಿ ರಥಾಶ್ವಕುಲಮೊದಗಿತು ಪದಾತಿ ಸನ್ನಾಹದಿಂದಾ ಕ್ಷಣದೊಳು||೪೭||
ಸುರಪಸುತನೆಂಬ ವೈರಕೆ ಧನಂಜಯನ ಮೇ | ಲಿರದೆ ಮುಳಿದೆದ್ದು ದೊ ಕುಲಾದ್ರಿಗಳ ಬಳಗಮೆನೆ | ಕರಿಘಟೆಗಳೈದಿದುವು ತನ್ನ ಮಗನಂ ಕೊಂದನೆಂದು ನರನೊಳ್ ಕನಲ್ದು|| ತರಣಿ ತಾಳ್ದನೋ ನಿಜಾಕಾರಕೋಟಿಗಳನೆನೆ | ತೆರಳಿದುವು ಮಣಿಮಯವರೂಥಂಗಳೀದುದೋ | ಧರೆ ಮಂದಿ ಕುದುರೆಗಳನೆನೆ ನಡೆದುದಾಹವಕೆ ಪರಿವಾರಮಾನೃಪತಿಯ||೪೮||
ಕಂಸಾರಿ ಬಾರದೆ ನರಂಗೆ ಸೋಲ್ಪವನಲ್ಲ | ಹಂಸಧ್ವಜಂ ಧುರದೊಳಿನ್ನು ಕೃಷ್ಣನ ದರ್ಶ | ನಂ ಸುಲಭಮೆಲ್ಲರ್ಗೆ ಸಂದೇಹವಿಲ್ಲ ದೇಹಮನಾಂತು ಜನಿಯಿಸಿರ್ದ || ಸಂಸಾರಕಿದು ಸಫಲಮಹುದೆಂದು ಪರಿತೋಷ | ದಿಂ ಸಮರಕೈ ದುತಿರ್ದುದು ಸಕಲಪಟುಭಟರ | ದಂ ಸತಿಯರೀಕ್ಷಿಸಿದರುಪ್ಪರಿಗೆಗಳ ಮೇಲಿನಿಯರನಾದರಿಸಿ ಕಳುಹಿ||೪೯||
ಅಳಿಲಾದ ನಿರಿಯ ಬಳಲಿದ ಮುಡಿಯ ಸೊಪ್ಪಾದ ! ತಿಳಕದ ಕೆದರ್ದ ಕಾಡಿಗೆಯ ಬೆಮರಿದ ಮೈಯ । ಪುಳಕದವಯವದ ಕೆಂಬಾಸುಳೇರುಗಳ ಪರೆದನುಲೇಪನದ ತೊಡಕಿದ || ಗಳದ ಹಾರದ ಕೆಂಪುಗದಡಿದಧರದ ನುಡಿಯ | ಕಳವಳದ ಕಡೆಗಣ್ಣ ಕೊಂಬೊಗರ ಕದಪುಗಳ | ಕಲೆಯ ಕೋಮಲೆಯರಿನಿಯರ್ಕಳಂ ಕಳಿಸಿ ನೆಲೆವಾಡವನಡರ್ದರಂದು | ೫೦||
ಇನ್ನು ಮರ್ಜುನಕೃಷ್ಣರೊಡನೆ ಸಂಗರಕೆ ಸಂ| ಪನ್ನ ಪಟುಭಟರೊದಗಿ ಗಾಯವಡೆಯದಮುನ್ನ | ನಿನ್ನ ಧರಕೆಂತಾದುದಬಲೆ ಕೃಷ ಕ್ಷತಂ ಪೇಳೆಂದಸಿಯಳೊರ್ವಳು || ಕನ್ನೆ ಮತ್ತೋರ್ವಳಂ ಕೇಳ್ಕೊಡವಳೆಂದಳೆಲೆ ಪನ್ನ ಗಸುವೇಳ್ ಕೃಷ್ಣಾಂಕವಿಲ್ಲದವದನ | ಮುನ್ನಿಸಲ್ ಬಿಲಕೆ ಸರಿಯೆಂಬುದಂ ನೀನರಿಯದಕಟ ಮರುಳಾದೆಯೆಂದು || ೫೧||
ಒದಗದಿನ್ನುಂ ಮುರಾರಿಯ ಸಮರಮರ್ಜುನನ | ಕದನಂ ಪ್ರವರ್ತಿಸದು ಪ್ರದ್ಯಕ್ಮ್ನನಾಹವಂ| ಮೊದಲೆ ತಲೆದೋರಿತಿಂದೂರೊಳೆಂದೊರ್ವಳೇ ಪೊಸವಾರ್ತೆಯಂ ಪೇಳಲು|| ಚದುರೆ ಮತ್ತೊರ್ವಳಿದು ಜಗದೊಳಚ್ಚರಿಯೆ ಹರೆ | ಯದರ ಕೈ ಮುಂಚುವುದು ವರಸಂಗರಂಜಿತವ | ಹುದು ವರ್ತಮಾನದೊಳ್ ಜನಜನಿತವಿಲ್ಲಿ ನೂತನದ ಮಾತೇನೆಂದಳು || ೫೨|
ಇಂದುಮಂಡಲದ ಸಿರಿಯಂ ಸೂರೆಯಾಡಿದರ್ | ಬಂದು ವಿಷಯದೊಳೂರುಗಳನಿರಿದರೊತ್ತಾಯ | ದಿಂದ ದುರ್ಗಂಗಳಂ ಕೈಕೊಂಡರೊದಗಿದರ್ ಸೆಳೆಸೂರೆಗಾತುರದೊಳು || ಮುಂದುವರಿದಂಕವೇರಿದರೀಗ ಪರಸುಭಟ | ರೆಂದು ಪೊಸವಾರ್ತೆಯಂ ಪ್ರೌಡೆಯೋರ್ವಳ ಪೇಳ್ದೊ | ಡಂದು ಬಾಲೆಯರಾಕೆಯಂ ಜರೆದರರಸನಿಲ್ಲವೆ ಗೆಲ್ಲೊಡೆಂದು ನಗುತೆ||೫೩||
ವಿಮಲ ದಧಿ ಲಾಜ ದೂರ್ವಾಕ್ಷತೆಗಳಂ ತಳಿದು | ಕ್ರಮದೊಳಾರತಿಗಳಂ ತಂದೆ ಯಕ್ಷ ಕ | ರ್ಧಮ ವಿಲೇಪನ ಕುಸುಮ ತಾಂಬೂಲಮಂ ಕೊಟ್ಟು ಪರಸಿ ಸೇಸೆಗಳನಿಟ್ಟು|| ರಮಣರಂ ತೆಗೆದು ಬಿಗಿಯಪ್ಪಿ ಶುಭವಾಕ್ಯದಿಂ । ಸಮರಭೂಮಿಗೆ ಕಳುಹಿ ಸತಿಯರ್ ಸುರತ್ನಕು | ಟ್ಟಿಮದ ಹರ್ಮ್ಯಂಗಳ ನಡರ್ದರ್ ದಿವಿಜಪುರದ ಲಕ್ಷ್ಮೀತನಂ ನೋಡಲು ||೫೪||
ಜೈಮಿನಿ ಭಾರತ 22
ಹನ್ನೊಂದನೆಯ ಸಂಧಿ
ಪದ್ಯ 1 ರಿಂದ 41
ಸುಧನ್ವನ ಪ್ರಸಂಗ
ನಿರೂಪಣೆ: ಸುಬ್ಬುಲಕ್ಷ್ಮಿ Lrphks Kolar
ಸಂಕ್ಷಿಪ್ತ ರೂಪ
ಯುದ್ಧಕ್ಕೆ ಹೊರಟ ಸುಧನ್ವನು ತಾಯಿಗೆ ನಮಸ್ಕರಿಸುತ್ತಾನೆ. ಅವಳು ಆ ಹರಿಯನ್ನು ಅಂದರೆ ಕೃಷ್ಣನನ್ನು ಹಿಡಿಯುವ ಬುದ್ಧಿ ಮಾಡು ಎನ್ನುವಳು. ಅರ್ಜುನನನ್ನು ನೋಯಿಸಿದರೆ ಹರಿಯು ಬಾರದಿಹನೆ? ಎನ್ನುವನು. ಅವನ ಸೋದರಿಯು ಬಂದು ಆರತಿಯೆತ್ತಿ ನೀನು ಗೆದ್ದುಬಾ. ಇಲ್ಲದಿದ್ದರೆ ನನ್ನ ಮಾವನ ಮನೆಯಲ್ಲಿ ನನ್ನ ಮಾನ ಹೋಗುತ್ತದೆ ಎನ್ನುವಳು. ಅಲ್ಲಿಂದ ಹೊರಟು ಹೆಂಡತಿ ಪ್ರಭಾವತಿಯೆಡೆಗೆ ಬಂದನು.
ಋತುಸ್ನಾತಳಾಗಿದ್ದ ಅವಳು ಚಂದ್ರಮಂಡಲದಂತೆ ಅವಳ ಮುಖವು ಕಂಗೊಳಿಸುತ್ತಿತ್ತು. ತಿಲಕ ಹೊಳೆಯುತ್ತಿತ್ತು. ಬೆಡಗಿನ ನಡೆಯ, ಬಡನಡುವಿನ, ಸೊಂಪಾದ ತೊಡೆಗಳ, ಕುಂಭ ಕುಚಗಳ ಉದ್ದ ಕೂದಲಿನ ಅಲಂಕಾರಗಳಿಂದ ಶೋಭಿಸುತ್ತಿದ್ದ ರಾಣಿ ಅವನೆದುರಿಗೆ ಬಂದಳು.
ಅವಳಿತ್ತ ಕುಸುಮಗಳನ್ನು ಕೊಂಡು ಕಾಳಗಕೆ ಹೊರಡುವೆನೆನ್ನಲು ಅವಳು ತಡೆದಳು. ಕೃಷ್ಣನಿಗೆ ಎದುರಾಗಿ ಕಾದಿದಲ್ಲಿ ಮುಕ್ತಿಯಲ್ಲದೆ ಬೇರೊಂದಿಲ್ಲ. ಹಾಗಾದರೆ ಸಂತಾನವಿಲ್ಲದೇ ಹೋಗುವುದು. ಅದ್ದರಿಂದ ನನಗೆ ಸಂತಾನಭಿಕ್ಷೆಯನ್ನು ಕರುಣಿಸಿ ಹೋಗು ಎಂದಳು. ಇದು ಸೂಕ್ತಕಾಲವಾಗಿದೆ ಎನ್ನಲು ತಂದೆಯು ಕಾಳಗಕ್ಕೆ ಕರೆದಾಗ ತಡಮಾಡಿದರೆ ಕಷ್ಡವೆಂದು ಹೇಳಿದರೂ ಅವಳು ಒಪ್ಪಲಿಲ್ಲ.ಕಾತರದಿಂದ ಮೇಲೆ ಬಿದ್ದು ಆಲಂಗಿಸಿ ಚುಂಬಿಸಿ ತನ್ನ ವಕ್ಷಗಳನ್ನು ಅವನೆದೆಗೆ ಒತ್ತಿ ಓಲೈಸಿ ಮಣಿಮಂಚಕ್ಕೆ ಕರೆದೊಯ್ದಳು. ವಿವಿಧ ಬಗೆಯ ಶೃಂಗಾರ ಚೇಷ್ಟೆಗಳಿಂದ ಅವನ ಮನ ಸೆಳೆದಳು. ಮೊದಲಿಗೆ ಅಳುಕಿದರೂ ಅವನು ನಂತರ ಅವಳಿಗೆ ಪೂರ್ಣ ಸುಖ ಕೊಡುವುದರಲ್ಲಿ ನಿರತನಾದನು. ಅವಳ ಅಂಗಸಂಗದಲ್ಲಿ, ಮದನನ ಬಾಣಕ್ಕೆ ಸೋತನು. ಇಬ್ಬರೂ ಇನ್ನಿಲ್ಲದಂತೆ ರತಿಕ್ರೀಡೆಯಲ್ಲಿ ತೊಡಗಿದರು.ಇದರಲ್ಲಿ ತಪ್ಪಿಲ್ಲವೆಂದೂ ಅವನು ನಿಶ್ಚಯಿಸಿದನು.
ಒಲವಿನ ಪಿಸುಮಾತುಗಳಿಂದ, ನಾನಾಬಗೆಯ ರತಿಕ್ರೀಡೆಗಳಿಂದ, ಮುತ್ತುಗಳಿಂದ ಪರಸ್ಪರ ರಂಜಿಸಿದರು. ಅವಳು ತೃಪ್ತಿ ಹೊಂದಿ ಬೆವರಿ ಬಸವಳಿದು ಸೊಪ್ಪಾದಳು.
ಇತ್ತ ಯುದ್ಧಕ್ಕೆ ಹೊರಟ ಹಂಸಧ್ವಜ ಮಗನನ್ನು ಕಾಣದೆ ಸೇವಕರನ್ನು ಅಟ್ಟಲು ಅವರು ಸುಧನ್ವನನ್ನು ಕಟ್ಟಿ ತಂದರು ಅವನನ್ನು ನೋಡಿ ತಂದೆಯ ಕೋಪ ಇನ್ನೂ ಹೆಚ್ಚಾಯಿತು. ತಡವಾಗಲು ಕಾರಣ ಕೇಳಿದನು ಸತಿಯು ಸಂತತಿಯನ್ನು ಬಯಸಿದುದರಿಂದ ತಾನು ನಿಲ್ಲಬೇಕಾಯಿತೆಂದು ತಿಳಿಸಿದನು. ಆಗ ತನ್ನ ಪುರೋಹಿತರುಗಳಾದ ಶಂಖ ಲಿಖಿತರನ್ನು ಕರೆಸಿ ಇದಕ್ಕೆ ದಂಡನೆ ಏನೆನ್ನಲು ಅವರು ಎಲ್ಲರಿಗೂ ಒಂದೇ ಶಿಕ್ಷೆ. ರಾಜ ತನ್ನ ಮಗನನ್ನು ರಕ್ಷಿಸಿದನು ಎಂದು ಜನ ಆಡಿಕೊಳ್ಳುವುದಿಲ್ಲವೆ ಎನ್ನಲು ಸುಧನ್ವನನ್ನು ಕುದಿಯುತ್ತಿದ್ದ ಎಣ್ಣೆಯ ಕೊಪ್ಪರಿಗೆಗೆ ತಳ್ಳಲು ಆಜ್ಞೆ ಮಾಡಿದನು. ಅದನ್ನು ನಡೆಸಲು ಅಂಜಿದ ಮಂತ್ರಿಗೆ ಧೈರ್ಯ ಹೇಳಿ ತಾನು ವಿಷ್ಣುವಿನ ಧ್ಯಾನದಲ್ಲಿ ತೊಡಗಿದನು. ಅವನನ್ನು ಎತ್ತಿ ಕೊಪ್ಪರಿಗೆಗೆ ಎಸೆದರು. ಜನತೆ ಭೋರೆಂದು ಗೋಳಾಡಿತು. ಮರುಗಿತು.ಪುರೋಹಿತರನ್ನು ಶಪಿಸಿತು.
ಸುಧನ್ವನು ಹರಿಯನ್ನು ಪ್ರಾರ್ಥಿಸಿದನು. ಹಿಂದೆ ಪ್ರಹ್ಲಾದನನ್ಬು ಪೊರೆದೆ, ದ್ರೌಪದಿಯನ್ನು ರಕ್ಷಿಸಿದೆ, ನಿನ್ನ ಭಕ್ತನನ್ನು ನೀನೇ ನೋಡಿಕೋ ಎಂದು ನಿರ್ಭಯದಲ್ಲಿದ್ದನು.ಒಂದೇ ಪದ್ಯದಲ್ಲಿ ಹರಿಯ ಇಪ್ಪತ್ತಕ್ಕೂ ಹೆಚ್ಚು ಹೆಸರುಗಳನ್ನು ಬಳಸಿರುವುದು ಕವಿಯ ಕುಶಲತೆಗೆ ಸಾಕ್ಷಿ. ( ಪದ್ಯ 36 )
ಆಶ್ಚರ್ಯವೆಂದರೆ ಅವನನ್ನು ಆ ಕುದಿಯುವ ಎಣ್ಣೆಯು ಸುಡಲಿಲ್ಲ. ಬದಲಿಗೆ ಶೀತಲಸ್ಪರ್ಶ ಆಯಿತು. ಎಲ್ಲರಿಗೂ ಅಚ್ಚರಿ.ಬೆರಗಾದರು ಅವನು ಧರಿಸಿದ್ದ ಹೂಗಳೂ ಬಾಡಲಿಲ್ಲ. ಇದನ್ನು ಕಂಡ ಲಿಖಿತನು ಎಳನೀರುಗಳನ್ನು ಸುರಿಸಿದರೂ ಎಣ್ಣೆಯು ಸಿಡಿಯಲಿಲ್ಲ. ಆಗ ಅವನು ಹರಿಭಕ್ತಿಯನ್ನು ಅರಿತು ತಾನೂ ಆ ಕೊಪ್ಪರಿಗೆಗೆ ಹಾರಿದನು. ಪ್ರಾಯಶ್ಚಿತ್ತಕ್ಕಾಗಿ. ಆದರೆ ಅವನಿಗೂ ಏನೂ ಆಗಲಿಲ್ಲ. ರಾಜನು ವಿಸ್ಮಿತನಾಗಿ ಇವರಿಬ್ಬರನ್ನೂ ಕೆಳಗೆ ತರಿಸಿ ಪ್ರೀತಿ ತೋರಿಸಿದನು. ಪನ್ನೀರಿನಲ್ಲಿ ಮಿಂದು ಪೀತಾಂಬರವನ್ನು ಧರಿಸಿ ಅಲಂಕೃತನಾಗಿ ತನ್ನನ್ನು ರಕ್ಷಿಸಿದ ಹರಿಯನ್ನು ಕೊಂಡಾಡುತ್ತ ಸುಧನ್ವ ಮುಂದಿನ ಕಾಳಗಕ್ಕೆ ಸಿದ್ಧನಾದನು.
ಹನ್ನೊಂದನೆಯ ಸಂಧಿ
ಪದ್ಯ 1 ರಿಂದ41
ಸೂಚನೆ | ಹಿಂದುಳಿದನಾಹವಕ್ಕೆಂದು ಹಂಸಧ್ವಜಂ | ನಂದನನನೆಣ್ಣೆ ಗಾಯ್ದಿರ್ದ ಕೊಪ್ಪರಿಗೆಯೊಳ್ 1 ತಂದು ಕೆಡಹಿಸಲಚ್ಯುತಧ್ಯಾನದಿಂ ತಂಪುವಡೆದನವನಚ್ಚರಿಯೆನೆ?
ಭೂಹಿತಚರಿತ್ತ ಕೇಳುಳಿಯದೆ ಸಮಸ್ತಭಟ | ರಾಹವಕೆ ಪೊರಮಟ್ಟ ಬಳಿಕ ಹಂಸಧ್ವಜನ | ಮೋಹದ ಕುಮಾರಂ ಸುಧನ್ವನಾಯತವಾಗಿ ಬಂದು ನಿಜಮಾತೆಯಡಿಗೆ || ಬಾಹುಯುಗಮಂ ನೀಡಿ ಸಾಷ್ಟಾಂಗಮೆರಗೆ ಸಿತ | ವಾಹನನ ಹರಿಯಂ ಪಿಡಿದು ಕಟ್ಟಿ ಕದನದೊಳ್ | ಸಾಹಸಂಮಾಳ್ಪೆನೆನ್ನಂ ಪರಸಿ ಕಳುಹೆಂದು ಕೈಮುಗಿದೊಡೆಂತಿಂದಳು ||೧||
ಕಂದ ಕೇಳ್ ಫಲುಗುಣಂ ಪಾಲಿಪಂ ನಾಲ್ಕಡಿಯ । ದೊಂದು ಹರಿಯಂ ನಿನಗದರ ಚಿಂತೆ ಬೇಡ ಸಾ | ನಂದದಿಂ ಪಾರ್ಥನಂ ರಕ್ಷಿಸುವ ಹರಿಯನ್ನೇ ಹಿಡಿವ ಬುದ್ದಿಯನೆ ಮಾಡು || ಹಿಂದೆ ನಾರದಮುನಿಯ ಮುಖದಿಂದೆ ಕೇಳ್ದೆಂ ಮು | ಕುಂದನ ವಿಶಾಲಲೀಲಾಮಾಲೆಯಂ ಕೃಷ್ಣ | ನಿಂದು ಮೈದೋರಿದೊಡೆ ಕಣ್ಣಾರೆ ಕಾಣಬಹುದೆಂದೊಡವನಿಂತೆಂದನು||೨||
ತಾಯೆ ಚಿತ್ತೈಸಾದೊಡೀ ಭಾಷೆಯಂ ಕೃಷ್ಣ | ರಾಯನಂ ತನ್ನೆಡೆಗೆ ಬರಿಸಿಕೊಳ್ಪುದಕೊಂದು | ಪಾಯಮಂ ಬಲ್ಲೆನಾಂ ಕಯ್ಯಂ ಪಿಡಿದೊಡೆ ಮೈ ತಾನೆ ಬಹುದಿಂದ್ರಜನನು || ನೋಯಿಸಿದೊಡಗಧರಂ ಬಾರದಿರನಾನತರ | ಪಾಯಮಂ ಸೈರಿಸಂ ಬಳಿಕ ತೋರುವೆನಂಬು | ಜಾಯತಾಕ್ಷನ ಮುಂದೆ ತನ್ನ ಪೌರುಷವನೆನಲಾಕೆ ಮಗುಳಿಂತೆಂದಳು
||೩||
ಕರುವನೆಳಗಂದಿ ತಾನರಸಿಕೊಂಡೈತರ್ಪ | ತೆರದಿಂದೆ ಬಂದಪಂ ಮುರಹರಂ ಪಾರ್ಥನೆಡೆ | ಗರಿವೆನಿದು ನಿಶ್ಚಯಂ ಮಗನೆ ನೀನಾ ಹರಿಗೆ ವಿಮುಖನಾದೊಡೆ ತನ್ನನು || ಜರಿವರಿಕ್ಕೆಲದ ಬಂಧುಗಳಿನ್ನು ಸಮರದೊಳ್ | ನೆರೆ ಕೃಷ್ಣನಂ ಗೆಲ್ವರುಂಟೆ ಸಾಕೆನ್ನೊಡಲ | ಮರುಕಮಂ ಬಿಟ್ಟೆನವನಂ ಕಂಡ ಬಳಿಕ ಹಿಮ್ಮೆಟ್ಟದಿರ್ ಪೋಗೆಂದಳು||೪||
ಎಂದೊಡೆಲೆ ತಾಯೆ ಕೇಳ್ ಚ ಕ್ರಿಗೆ ವಿಮುಖನಾಗಿ | ಬಂದೆನಾದೊಡೆ ನಿನ್ನ ಗರ್ಭದಿಂದುದಯಿಸಿದ | ನಂದನನೆ ಹಂಸಧ್ವಜನ ಕುಮಾರನೆ ಮೇಣು ಹರಿಕಿಂಕರನೆ ವೀರನೆ || ಕೊಂದಂ ಪಾರ್ಥನ ಪತಾಕಿನಿಯನವನದಟ | ನಂದಗೆಡಿಸುವೆನೆನ್ನ ವಿಕ್ರಮವನಚ್ಯುತನ | ಮುಂದೆ ತೋರಿಸುವೆನಿನಿತರಮೇಲೆ ಸೋಲುಗೆಲುವುದು ಪುಣ್ಯವಶಮೆಂದನು | ೫ ||
ಅನಿತರೊಳ್ ಕುವಲೆಯೆಂಬುವಳೋರ್ವಳಾ ಸುಧ | ನ ್ವ ಸಹೋದರಿ ತಂದಳಾರತಿಯನನುಜ ಕೇ | ಳನುವರದೊಳಿಂದು ಶೌರಿಗೆ ವಿಮುಖನಾಗಿ ನೀಂ ಬಂದೆಯಾದೊಡೆ ಮಾವನ || ಮನೆಯೊಳಾಂ ತಲೆಯೆತ್ತಿ ನಡೆವೆನೆಂತದರಿಂದ | ವನಜಾಕ್ಷನಂ ಮೆಚ್ಚಿ ಸಾಹವದೊಳೆಂದು ಚಂ | ದನದ ನು ಣ್ಪಿಟ್ಟು ಕಪ್ಪು ರವೀಳೆಯಂಗೊಟ್ಟು ಕಳುಹಿದಳ್ ಸೇಸೆದಳೆದು||೬||
ಅರಸ ಕೇಳಾ ಸುಧನ್ವಂ ಬಳಿಕ ಜನನಿಸೋ | ದರಿಯರಂ ಬೀಳ್ಕೊಂಡು ಪೊರಮಟ್ಟು ತನ್ನ ಮಂ | ದಿರದ ಪೊರೆಗೈ ತರ ಲ್ಕಿದಿರಾಗಿ ಪೊಂದಟ್ಟೆಯೊಳ್ ಸಂಪಗೆಯ ಪೂವನು || ಸರಸ ಪರಿಮಳಗಂಧ ಕರ್ಪೂರವೀಟಿಕೆಯ | ನಿರಿಸಿಕೊಂಡೊಲವಿಂದ ಬಂದಳಂಗಜನ ಜಯ | ಸಿರಿ ತಾನೆನಲ್ ಪ್ರಭಾವತಿಯೆನಿಪವನರಾಣಿ ಸುಶ್ರೇಣಿ ಸರ್ಪವೇಣಿ||೭||
ಚಂದ್ರಮಂಡಲ ಸದೃಶ ವದನದೆಳನಗೆಯ ನವ | ಚಂದ್ರಿಕೆಯೆನಲ್ ಮೇಲುದಿನ ದುಕೂಲಂ ಮೆರೆಯೆ | ಚಂದ್ರತಿಲಕದ ರಾಗಮುಂ ಚಿತ್ರದನುರಾಗಮಂ ಸೂಚಿಪಂತೆ ಸೊಗಸೆ || ಇಂದ್ರನೀಲದ ಮಣಿ ಮಿರುಗುವ ಲಲಿತಕಾಂತಿ | ಸಾಂದ್ರಮಾದವೊಲೆಸೆವಳಕಪಾಶದಿಂದ ನಯ | ನೇಂದ್ರಿಯವನುರೆ ಕಟ್ಟಿ ಕೆಡಪದಿರಳೆಂಬಿನಂ ರಂಜಿಸಿದಳಾ ಮೃಗಾಕ್ಷಿ||೮||
ಸ್ಪುರಿಸುವೊಳ್} ದೊಡೆಯ ಬೆಡಗಿನ ನಡೆಯ ನಿರಿಯ ಸಿಂ | ಗರದುಡೆಯ ತೆಳ್ವಾದಸಿಯ ಪೊಡೆಯ ಚೆಲ್ವುದಳೆ | ದುರದೆಡೆಯ ನಿಂಬುಗೊಂಡಿಟ್ಟೆಡೆಯ ಬಲ್ಮೊಲೆಯ ಪೊಳೆವ ಕಲರ ಕಡೆಯ| | ತ್ವರಿಪ ಭುಜವಲ್ಲರಿಯ ತೊಡವುಗಳ ಮೈಸಿರಿಯ | ಬಿರಿಮುಗುಳ ಕಬರಿಯ ಕಲೆಗಳಿಡಿದ ಸೌಂದರಿಯ | 'ದರಸಿ ನಿಜಪತಿಯ ಮುಂದಚ್ಚರಿಯ ಬಗೆಗೊಂಡಳಂದು ಬೇರೊಂದು ಪರಿಯ ॥೯||
ಮುಡಿಯ ಪೊಸಮಲ್ಲಿಗೆಯ ಸೂಸುವೆಳನಗೆಯ ಸವಿ | ನುಡಿಯ ಬಾಯ್ದೆರೆಯ ಹೊಳೆಹೊಳೆವ ದಶನದ ಮಿಸುಪ | ಕಡೆಗಣ್ಣ ತೊಳಗುವ ನಖಾವಳಿಯ ಥಳಥಳಿಪ ಕಂಠಮಾಲೆಯ ಮುತ್ತಿನ || ತೊಡವುಗಳ ಘನಸಾರದನುಲೇಪನದ ಸಣ್ಣ | ಮಡಿದುಕೂಲದ ಬೆಳ್ಳಿಗರ್ ಕೋಮಲಾಂಗದೊಳ್ | ಬಿಡದೆ ಪಸರಿಸೆ ಚಂದ್ರಕಾಂತದಿಂ ನಿರ್ಮಿಸಿದ ಪುತ್ತಳಿವೊಲವಳೆಸೆದಳು || ೧೦ |
ಕರಯುಗದೊಳಾಂತ ಪೊಂದಟ್ಟೆಯನದರ ಮೇಲೆ | ಪರೆಪಿರ್ದ ಸಂಪಗೆಯ ಪೂಗಳಂ ತನ್ನ ಮೆ | ಯೊರಗೆ ಸರಿಯಾದಪುವೆ ನೋಡೆಂದು ತೋರ್ಪಂತೆ ಕೊಂಡುಬಂದಿದಿರೆ ನಿಂದ ತರಳೆಯಿಂ ಕಡೆಗಳೊಯ್ಯನೀಕ್ಷಿಸಿ ನಗುತೆ | ಸರಸ ಪರಿಮಳ ನವ್ಯ ಕುಸುಮಂಗಳಂ ಕೊಂಡು | ಭರದಿಂದೆ ಕೊಳುಗುಳಕೆ ಪೊರಮಡುವ ಗಮನದಿಂ ಕಾಂತೆಗವನಿಂತೆಂದನು ||೧೧|l
ಕಾಂತೆ ಕೇಳಿಂದು ಸಮರದೊಳರ್ಜುನಂಗೆ ಮಾ | ರಾಂತವನ ಬಿಂಕಮಂ ಮುರಿವೆನಾ ಹರಿಬಕಸು | ರಾಂತಕಂ ಬಂದೊಡಾತನ ಮುಂದೆ ತೋರಿಸುವೆನೆನ್ನ ಭುಜವಿಕ್ರಮನು || ನಾಂ ತಳೆವೆನಾರ್ಪಿಂದೆ ವಿಜಯಮಂ ಮಾರ್ದೊಡೆ ಭ | ವಾಂತರವನ್ನೋದಿ ಸನ್ಮುಕ್ತಿಯಂ ಪಡೆದಪಂ | ನೀಂ ತಳಮಳಿಸದಿರೆಂದಿನಿಯಳಂ ಸಂತೈಸಿ ಪೊರಮಡಲ್ ತಡೆದೆಂದಳು || ೧೨||
ಯುಕ್ತ ಮಲ್ಲದು ರಮಣ ನಿನಗೆ ಕೇಳ್ ಕಾದುವಾ | ಸಕ್ತಿಯಿಂ ಚಕ್ರಿಗಭಿಮುಖನಾದ ಬಳಿಕಲ್ಲಿ | ಮುಕ್ತಿಯಲ್ಲದೆ ಬೇರೆ ಜಯಮುಂಟೆ ಜನಿಸದು ವಿವೇಕಸಂತತಿ ನಿನ್ನೊಳು || ವ್ಯಕ್ತದಿಂ ತನಗೊಂದಪತ್ಯಮುಲದಯಿಸದೊಡೆ ವಿ | ರಕ್ತಿಯಿಂ ಕೈವಲ್ಯವಾದಪುದೆ ಸಮರಕು | ದ್ಯುಕ್ತನಪ್ಪಾ ತಂಗೆ ಸಂತಾನವಿಲ್ಲದಿರಲಪ್ಪುದೇ ಹೇಳೆಂದಳು||೧೩||
ಅದರಿಂದಮಾತ್ಮ ಜವಿವೇಕವಿಲ್ಲದೊಡೆ ನನ | ಗಿದುವೆ ಜಲದೋದಯದ ಋತುಸಮಯವಿಾ ಪದದೊ | ಳುದುಭವಿಸುವುದು ನಿನ್ನ ಭೂಮಿಯೊಳ್ ಬೀಜಮಂ ಬಿತ್ತಿದೊಡೆ ಬೆಳೆ ಬಾಳ್ಕೆಗೆ || ಕದನಕೈ ದುವವೇಳೆಯಲ್ಲೆಲವಂ ಮುಂದೆ | ಬೆದೆಗಾಲಮುಂಟೆಂದೊಡವಳೆಣಿಸಿ ಮಳೆಗಳಂ | ತುದಿವಿಶಾಖೆಗೆ ಬಂದುದಿನ್ನು ಮೇಲಂಕುರಿಸಲರಿಯದೆನಲಿಂತೆಂದನು||೧೪||
ರಮಣಿ ನೀನೆಂಬುದನುನಯಮಪ್ಪುದಾದೊಡಂ | ಸಮಯಮಲ್ಲಿದು ಮೊಳಗುತಿದೆ ಭೇರಿ ಪೊರಮಟ್ಟು | ಸಮರಕಯ್ಯಂ ಪೋದನುಳಿದೆನಾದೊಡೆ ತಾತನಾಜ್ಞೆಗೊಳಗಾಗದಿರೆನು || ಕ್ರಮವನರಿಯದಳೆ ನೀನೆನಗೆ ಸೈರಿಸಲಳವೆ | ಗಮನಕನುಕೂಲೆಯಾಗೆನುತ ಗಲ್ಲಂಬಿಡಿದು ! ಕಮಲಾಕ್ಷಿಯಂ ಮುದ್ದು ಗೈದು ಬೀಳ್ಕೊಳ್ಳಿನಂ ಕಾತರಿಸಿ ಮೇಲ್ವಾಯ್ದಳು ||೧೫ ||
ಅಂಗವಿಲ್ಲದನ ಸಮರಂಗಮಂ ಪುಗಲಂಜಿ | ತುಂಗವಿಕ್ರಮವಿಜಯಸಂಗರಕೆಳಸುವೆನೆಂ | ಬಂಗವಣಿಯೆಂತುಂಟೆಂದಂಗನೆ ಬಲಾತ್ಕಾರದಿಂ ಗುರುಕುಚದ್ವಯವನು || ನಂಗಡಿಸುವಂತಾರ್ಪಿನಿಂ ಗಾಢತರದೊಳಾ | ಲಿಂಗನಂಗೈದು ಕುಡಿಗಂಗಳಿಂದವನ ಮೊಗ | ದಿಂಗಿತವನಾರೈವ ಶೃಂಗಾರಚೇಷ್ಟೆಯ ಬೆಡಂಗನದನೇವೇಳ್ವೆನು !|೧೬||
ಮಿಡಿದೊದೊಡೆವಂತಮೃತರಸದಿಂದೆ ಮೆರೆವ ಪೊಂ | ಗೊಡಮೊಲೆಯನವನ ವಕ್ಷಸ್ಥಳದೊಳಿಟ್ಟೊ ತ್ತಿ। ದೊಡೆ ಹಿಸಿದೊಳಗಣ ತನುಸುಧೆಯೊಸರ್ದು ತೊಟ್ಟಿಡುವ ಬಿಂದುಗಳ ಸಾಲಿದೆನಲು || ಕಡಿಕಿ ಪರಿದುಗುವ ಹಾರದ ಮುತ್ತುಗಳ ಮಣಿಗ | ಳೆಡೆವಿಡದೆ ಸೂಸುತಿರೆ ಸೊಕ್ಕು ದೆಕ್ಕೆಯಳ್ ಸೊಗಸು | ವಡೆದಳಾಕಾಂತೆ ಪ್ರಿಯನಂಗದೊಳ್ ಮೋಹನೋತ್ಸಂಗದೊಳ್ ಬಗೆಗೊಳಿಸುತೆ||೧೭||
ಪ್ರಿಯನ ತನುಚಂದನಮಹೀಜಮಂ ಸುತ್ತಿದ ಫ | ಣಿಯೊ ವಲ್ಲಭಾಂಗದಾಲಸ್ತಂಭಮಂ ತೊಡ | ರ್ದಯುಗತರಕರಿಯ ಸುಂಡಿಲೊ ಕಾಂತಕಾಯಬಲಮುಂ ಬಂಧಿಸಿದ ಮದನನ || ಜಯಪಾಶವೇ ರಮಣ ದೇಹ ಕಲ್ಪ ದ್ರುಮಾ | ಶ್ರಯದ ಕೋಮಲಲತೆಯೊ ಪೊಸತಾದುಂದೆಂಬಂತಿ | ನಿಯನನಪ್ಪಿದ ಹರಿಣಲೋಚನೆಯ ನಳಿತೋಳಳೆಸೆದುವತಿಗಾಢದಿಂದೆ || ೧೮ ||
ಕಣ್ಯಲರ್ ಕಾತರಿಸೆ ಮುಡಿ ಪೂಗಳಂ ಸೂಸೆ | ನುಣ್ಮೊಗಂ ಬೇರೊಂದು ಪಯಾಗೆ ನುಡಿ ದೈನ್ಯ | ಮುಣ್ ಹೀನಸ್ವರದೊಳೆಸೆಯೆ ಕೈ ಕಲೆಗಳೊಳೆ ಸೋಂಕೆ ಮೈ ಪುಳಕದಿಂದೆ || ಪೊಣೆ ಮದನಾತುರಂ ತಲೆದೋರೆ ಮೇಲುದಂ | ಬಿಳ್ಮೊಲೆಗಳೋಸರಿಸೆ ನಿರಿಯ ಬಿಗಿ ಪೈಸರಿಸೆ | ಪೆಣ್ಮಂಚದಂಚೆದುಪ್ಪುಳ್ವಾಸಿಗೆಳೆದೊಯ್ದಿ ನಿಯನಂ ಬ ಲ್ಪಿನಿಂದೆ||೧೯||
ನತಿಗೆ ಷೋಡಶದ ಋತುಸಮಯಮೇಕಾದಶೀ | ವ್ರತಮಲಂ ಘ್ಯ ಶ್ರಾದ್ಧ ಮಿನಿತೊಂದುದಿನ ಸಂ | ಗತಮಾದೊಡೆಂತು ಕರ್ತವ್ಯಮೆನೆ ಪೈತೃಕದ ಶೇಷಾನ್ನ ಮಾಘ್ರಾಣಿಸೆ|| ಕೃತಭೋಜ್ಯಮಾದಪುದು ನಡುವಿರುಳಳಿದಾ ವ | ನ ಇತೆಯನೊಡಗೂಡಬಹುದದರಿಂದ ದರ್ಮಪ | ಧೃತಿಯನೀಕ್ಷಿಸಲವಳನಿಂದು ಮೀರುವುದು ಮತವಲ್ಲೆಂದವಂ ತಿಳಿದನು || ೨೦ ||
ತಾತನಾಜ್ಞೆಯನುಳಿದು ಕೃಷ್ಣ ದರ್ಶನಕೈದ | ರೀತರಳೆಗಿಂದು ಋತುದಾನಮಂ ಮಾಡಿದೊಡೆ | ಪಾತಕಂ ತನಗಿಲ್ಲವೆಂದು ನಿಶ್ಚೈಸಿ ಬಳಿಕಾ ಸುಧನ್ವಂ ಮನದೊಳು || ಭೀತಿಯಂ ತೊರೆದು ಕಾಂತೆಯ ಕೂಡೆ ರಮಿಸಿದಂ | ಪ್ರೀತಿಯಿಂದುಗುರೊತ್ತು ಸರಸ ಚುಂಬನ ಲಲ್ಲೆ | ವಾತುಗಳರವ ನೇಮಗಲೆ ತಾಡವಫ್ರೌಢಿ ಬಂಧ ಸಮ್ಮೋಹನದೊಳು || ೨೧ ||
ನಾಣೀಸಲಳಿದವಯವದ ಭೇದಮಂ ಮರೆದು i ಜಾಳ್ಮೆಗಳ ಬಂಧಂಗಳೊಳ್ ಬಳಸಿ ಸೊಗಯಿಸುವ | ಗೋಣಿಳಗಿನಿಂಚರಂಗಳನೆಸಗಿ ಮೊನೆವಲ್ಲ ಕರ್ದುಂಕನುಗುರೊತ್ತನು || ಮಾಷ್ಮಾಣಿನಲ್ ಕೈಗೊಳಿಸಿ ಲಲ್ಲೆಗೈದೊಲವ | ನಾಣ್ಯಂಗೆ ಕಾಣಿಸಿದಳವಳೊಡನೆ ಕೊರ್ಮೆಯಿಂ | ಮೇಲ್ಮಾನಿನಿಗೆ ಮದನಕಲೆಗಳಂ ತೋರಿಸಿದನವನಂದು ಸಮರತಿಯೊಳು || ೨೨||
ಒದವಿದ ಸೊಬಗಿನ ಶೃಂಗಾರದಾತುರದ ವೀ | ರದ ಲಲ್ಲೆ ವಾತಿನ ಕರುಣದ ನಗೆಮೊಗದ ಹಾ | ಸ್ಯದ ನಖಕ್ಷತದ ರೌದ್ರದ ಕಾತುರದ ಭಯದ ಬೆಮರೊಗೆದ ಭೀಭತ್ಸದ | ಪುದಿದ ರೋಮಾಂಚದದ್ಭುತದ ಸೊಗಸಿನ ಮೋಹ | ನದ ಶಾಂತದೆಸೆವ ನವರಸದೊಳೆ ಯಾದ ಸುರ | ತದ ನವರಸವನುರೆ ಸವಿದು ಸೊಕ್ಕಿ ಮರೆದರನ್ಯೂನ್ಯಭಾವವನವರ್ಗಳು | ೨೩ ||
ಕೂರುಗುರ್ಗಳ ಗೆರೆಯ ಸೂತ್ರಬಂಧದೊಳೆಸೆವ | ತೋರಮೊಲೆಗಳ ಕುಂಭಸಂಸ್ಥಾಪನಂಗೈಯ್ದು | ಚಾರುತರ ಗಳರವದ ಮಂತ್ರದಿಂ ರೋಮಾಂಚನದ ಕುಶಾಗ್ರಂಗಳಿಂದ | ವೀರರತಿ ಸಾಮ್ರಾಜ್ಯ ಪಟ್ಟದೊಳ್ ಬೆಮರ್ವನಿಯ | ವಾರಿಸೇಚನದಿಂದ ಕೃತಕೃತ್ಯನಾದಂತೆ | ರಾರಾಜಿಸಿದನವಂ ವೆ.ಲಾಸಿನೊಳ್ ಮೆರೆವ ಮಣಿಮಂಚದಾನನದೊಳು || ೨೪ ||
ಪ್ರಕಟಿಸಿದ ಕಟಿ ತಳ್ಳುವಳ್ಳಿ ಬೆಂಡಾದ ಮೈ | ಸುಕಲೆಗಳನಾಂತ ಮೊಲೆ ಕದಡುಲೇಪದ ಬೆಮರ್ | ವಿಕಸಿತಸುಖದೊಳದ್ದ ಮನವೆದ್ದ ರೋಮಾಂಚಮನವಳಿದಕ್ಕೆ ಮಸುಳ್ವ || ಮಕರಪತ್ರದ ಕದಪು ಮಾ ರ್ದವದೊಳೊರಲ್ | ಮುಕುಳಿತವಿಲೋಚನಂ ನರುಸುಯ್ತಿನಿಮರ್ದ ನಾ | ಸಿಕಮಳಿದ ತಿಲಕಂ ಪರೆದ ಕುರುಳ್ ಸೊಪ್ಪಾದಧರನೊಪ್ಪಿ ತಾ ಕಾಂತೆಗೆ | ೨೫ |
ಮನ್ವಾದಿಋಷಿಗಳಭಿಮತವಿದೆಂದರಿದಾ ಸು | ಧನ್ವಂ ಋತುಸ್ನಾತೆಯಂ ಮೀರದೊಡಗೂಡಿ । ತನ್ವಿಯಂ ಬೀಳ್ಕೊಂಡು ಸಮರಕನುವಾಗಲಿರಲಿತ್ತ ಕುರುಕುಲದ ನೃಪರ || ಅನ್ವಯಕೆ ತೊಡವಾದ ನರನ ಹಯಮಂ ಕಟ್ಟು | ವನ್ನೇಷಣದೊಳಾಹವಕೆ ನಡೆಯುತತಿಬಲ ಸ | ಮನ್ವಿತಕುಮಾರನಂ ಸೇನೆಯೊಳ್ ಕಾಣದೆ ಕೆರಳಂ ಮರಾಳಕೇತು | ೨೬ |
ಪೊರೆಯೊಳಿಹ ಸಚಿವರಂ ನೋಡುತವರೊಳ್ ಸುಮತಿ | ಗರಸಂ ನಿರೂಪಿಸಲವಂ ಕಡುಗಡಿಕರಾದ | ಚರರನಟ್ಟಿದೊಡವರ್ ಬರೆಸೆಳೆದು ನಗುತಿಹ ಸುಧನ್ವನಂ ತುಡುಕಿ ಪಿಡಿದು || ಕರಯುಗಳಮಂ ನೇಣ್ಗಳಿಂ ಬಿಗಿದು ತಂದರತಿ | ಭರದಿಂದೆ ರಾಯನಿದ್ದೆಡೆಗಾಗಿ ಪೌರಜನ | ಪುರಜನಂ ಬೆರಗಾಗೆ ಕದ್ದಾತನಂ ಕೊಂಡು ಬರ್ಪಂತೆ ನಿಷ್ಠುರದೊಳು | ೨೭ |
ಕಟ್ಟು ಸಹಿತಾ ಸುಧನ್ವಂ ತಾತನಡಿಗೆ ಪೊಡ | ಮಟ್ಟೊಡೆ ಕೆರಳ್ದೆಲವೊ ಮೂಢಾತ್ಮ ನೀನೆನ್ನ | ಕಟ್ಟಳೆಯನರಿದು ಕೃಷ್ಣನ ದೀಕ್ಷೆಯಂ ಮರೆದು ರಣದುತ್ಸವವನೆ ತೊರೆದು || ಪಟ್ಟಣದೊಳೇಕೆ ತಳುವಿದೆಯೆಂದು ಕುವರನಂ | ಧಟ್ಟಿಸಿ ಮರಾಳಧ್ವಜಂ ಕೇಳ್ದೊಡಡಿಗಿಟ್ಟ | ದಿಟ್ಟಿಯಿಂದಂಜುತೊಯ್ಯನೆ ಲಜ್ಜೆ ವೆರಸಿ ಬಿನ್ನೈಸಿದನವಂ ಪಿತಂಗೆ||೨೮||
ಸತಿ ಸಂತತಿಗೆ ಬಯಸಿ ದಿನಗಳೆದುದಿನ್ನಿಲ್ಲ | ಋತುಸಮಯವೆಂದೆನಗೆ ಪೇಳ್ದೊಡಲ್ಲಿದ್ದೆನೆನೆ | ಕೃತಕಮಿದು ನೂಕೀತನಂ ಕೃಷ್ಣ ದರ್ಶನದ ಕಾಲಮೊದಗಿರಲಿತ್ತಲು| | ಇತರಧರ್ಮದ ವೇಳೆ ಗಡ ತನಗೆ ಕರೆ ಪುರೋ | ಹಿತ ಶಂಖ ಲಿಖಿತರಂ ಬೆಸಗೊಳ್ವೆವಿದಕೆ ನಿ | ಷ್ಕೃತಿಯನೆನಲರಸಾಜ್ಞೆಯೊಳವರ ಪೊರೆಗೆ ಚರರೈತಂದದಂ ಪೇಳ್ದರು || ೨೯ ||
ಆ ಚರರ ನುಡಿಗೇಳ್ದು ಶಂಖಲಿಖಿತರ್ ಬಂದು | ವಾಚಿಸಿದರೆಲೆ ಹಂಸಕೇತು ನೀನೇನನಾ | ಲೋಚಿಸುವೆ ನಿನ್ನ ತನಯನ ಮೇಲಣಾಶೆಯಿಂ ಭಾಷೆದಪ್ಪಿದೆಯಾದೊಡೆ || ಈ ಚಂಪಕಾಪುರದೊಳಿಹುದಿಲ್ಲ ನಾವು ಸ | ತ್ಯಾಚರಣೆಗಾಗಿ ರುಕ್ಕಾಂಗದ ಹರಿಶ್ಚಂದ್ರ | ಭೂಚಕ್ರಪಾಲರಾಜರ ಮೊಗನೋಡಿದರೆ ಹೇಳೆಂದು ನುಡಿದರವರು ॥ ೩೦ ||
ಬಳಿಕರಸನಾ ಸುಮತಿಯಂ ಕರೆದು ಪೇ ಳ್ದನೀ | ಖಳನಂ ಕಟಾಹ ಪೂರಿತ ತಪ್ತತೈಲದೊಳ್ | ಮುಳುಗಿಸೆನಲವನೊಡೆಯನಾಜ್ಞೆಯಂ ಮ ಮೀರದಾತನ ಕೈಗಳಂ ಕಟ್ಟಿಸಿ | ತಳಪಳನೆ ಕುದಿವೆಣ್ಣೆಗೊಪ್ಪರಿಗೆ ಕಾಯ್ವಲ್ಲಿ | ಗೆಳತರಿಸಿ ಮತ್ತೆ ಪೊತ್ತು ವೊಲುರಿವ ಪೆರ್ಗೊರಡು | ಗಳನಿಡಿಸಿ ಕಳಕಳಿಸುತಿಹ ಸುಧನ್ವಂಗೆ ಮರುಗುತೆ ಸಚಿವನಿಂತೆಂದನು ॥೩೧||
ತಾತ ನಿನಗಿಂತಾಗಬಹುದೆ ಲೋಕೈಕ ವಿ | ಖ್ಯಾತನಭಿಮಾನಿ ಹರಿಸೇವಕಂ ಸುಂದರಂ | ಮಾತಾಪಿತೃಪ್ರಿಯಂ ಕೋವಿದಂ ಕೋಮಲಂ ಸುಖ ಸಕಲಸಜ್ಜನಸಖಂ || ನೀತಿವಿದನಾಚಾರಸಂಪನ್ನ ನುತ್ತಮಂ । ಡಾತನೆಂಬಿನಿಸು ಗುಣಮುಳ್ಳ ಕುವರಂ ನಿನ್ನ | ನೀತಪ್ತತೈಲದೊಳಗೆಂತಕಟ ಬೀಳಿಸುವೆನೆಂದೊಡವನಿಂತೆಂದನು||೩೨||
ಅಂಜಬೇಡೆಲೆ ಸುಮತಿ ನೀನೀಗಳಿದಕೆ ಮನ | ಮಂ ಜರಿವಿಡುವನಲ್ಲ ತಾನಿನ್ನೆಗಂ ಧ ರ್ಮ | ಮಂ ಜಡಿದು ನಡೆದುದಿಲ್ಲಾಹವದೊಳಹಿತರೊಳ್ ಪೊಯ್ದಾಡಿ ಮಡಿವೊಡಲಿದು || 'ಜಂಜಡದೊಳಳಿವುದೆಂಬೊಂದು ಭಯಮಿಹುದಾದೊ | ಡಂ ಜನಾರ್ದನನಂ ಶರಣು ಗುವೆನಳುಕದೆ | ನ್ನಂ ಜನಕನಾಜ್ಞೆ ದಪ್ಪದೆ ಹಾಯ್ಕಿ ಸೆನಲವಂ ತೆಗೆದೆತ್ತಿ ಬಿಸುಡಿಸಿದನು ||೩೩||
ಭೋ ಯೆಂದುದಖಿಳ ಪರಿವಾರ ಮಡಿಗಡಿಗೆ ಹಾ । ಹಾ ಯೆಂದು ಮರುಗಿದುದು ನೀನಿಂತಳಿವರೆ ತಾ | ತಾ ಯೆಂದು ಪೊರ ಳ್ದು ದೊಡೆತನಕೆ ಬೇಸತ್ತು ಸತ್ತಾಯೆಂದು ಸೈಗೆಡೆದುದು || ವಾಯಕಿಂತಕಟ ಸುಕುಮಾರನಂ ಕೊಂದನೀ | ರಾಯನರಿವಂ ನೆರೆ ಸುಡಲಿ ಶಂಖಲಖಿತರೆಂ | ಬೀಯಮೋಪಮರೇಕೆ ಜನಿಸಿದರೋ ಭೂಸುರರೊಳೆಂದು ಮೊರೆಯಿಡುತ್ತಿರ್ದುದು||೩೪|
ಹಿಂದೆ ಪ್ರಹ್ಲಾದನಂ ಪಾಲಿಸಿದೆ ಗಡ ದ್ರುಪದ | ನಂದನೆಯ ಮಾನಮಂ ಕಾದೆ ಗಡ ಭಕ್ತರ್ಗೆ | ಬಂದೆಡರನಾವಗಂ ಪರಿಹರಿಪೆ ಗಡ ದೇವ ನಿನ್ನಂ ಪೆಸರ್ಗೊಂಡೊಡೆ ||ಇಂದು ಮೊರೆವೊಗುವೊಡಾರಂ ಕಾಣೆನಕಟ ಗೋ । ವಿಂದ ನೀನಲ್ಲದೆ ವಿಚಾರಿಸುವರಿಲ್ಲ ಸಲ | ಹೆಂದವಂ ಚಿತ್ತದೊಳ್ ಕೃಷ್ಣನಂ ಧ್ಯಾನಿಸುತೆ ನಿರ್ಭಯದೊಳಿರುತಿರ್ದನು || ೩೫ |
ಜಯಜಯ ಜನಾರ್ದನ ಮುಕುಂದ ಮುರಮರ್ದನ ವಿ | ಜಯಮಿತ್ರ ಗೋವಿಂದ ಪಕ್ಷಿವಾಹನ ಕಮಲ | ನಯನ ಪೀತಾಂಬರ ಘನಶ್ಯಾಮ ಹರಿ ಕೃಷ್ಣ ವೈಕುಂಠ ನಾರಾಯಣ || ಕ್ಷಯರಹಿತ ರಾಮ ಲಕ್ಷ್ಮೀರಮಣ ನತಸುರಾ | ಲಯಧೇನು ಭಕ್ತವತ್ಸಲ ಕೃಪಾಕರ ಮಹಾ | ಭಯನಿವಾರಣ ನೃಸಿಂಹ ತ್ರಾಹಿಯೆನುತಿರ್ದನಾ ಸುಧನ್ವಂ ಮರೆಯದೆ ॥ ೩೬||
ಅರನ ಕೇಳಾಶ್ಚರ್ಯಂ ನೋಡಲೆವೆ ಸೀವೊ |ಲುರಿಗೊಂಡು ಕಡುಗಾಯ್ದು ತಳಪಳದೆ ಕುದಿದುಕ್ಕಿ | ಮೊರೆವುರುಕಟಾಹತೈಲಂ ಮೈಗೆ ಸೊಗೆಯಿಸುವ ಬಾವನ್ನದಾಗಿರೆ || ಕೊರಗದಾತನ ರೋಮ ವಡಗದಂಗದ ಸೊಂಪು | ಕೊರಳ ತುಲಸಿಯ ದಂಡೆ ಬಾಡದು ಮುಡಿದ ಪೂಗ | ಳರೆಗಂದವರ ಳ್ದುದು ಸುಧನ್ವನ ಮುಖಾಂಬುಜಮಿನೋದಯದ ಕಮಲದಂತೆ||೩೭||
ಕಂಡು ಬೆರಗಾದುದೆಲ್ಲಾ ಜನಂ ಸ್ತುತಿಸಿದರ್ | ಪುಂಡರೀಕಾಕ್ಷನಂ ಬಳಿಕ ಲಿಖಿತಂ ಖಾತಿ | ಗೊಂಡಿವಂ ಬಲ್ಲನಗ್ನಿ ಸ್ತಂಭಮಂ ನಾರಿಕೇಳಂಗಳಂ ತರಿಸೆನೆ || ಕೊಂಡು ಬಂದೆಳನೀರ್ಗಳಂ ಸುರಿಯಲುರಿ ನ ಭೋ | ಮಂಡಲವನಪ್ಪಳಿಸೆ ಹೊಡೆದುವು ಪುರೋಹಿತರ | ಗಂಡಸ್ಥಳಂಗಳಂ ಸಿಡಿವೋಲ್ಗಳಾಗಳುಂ ನಗುತಿರ್ದನಾಕುವರನು||೩೮||
ನಿಶ್ಚಲಹೃದಯನಾಗಿ ವಿಷ್ಣು ನಾಮಂಗಳ ಪು | ನ ಶ್ಚರಣಿಯಿಂದವಂ ಸುಖದೊಳಿರುತಿರೆ ಕಂಡು | ಪಶ್ಚಾದ್ವಿವೇಕದಿಂದುರೆ ನೊಂದು ಹರಿಕಿಂಕರದ್ರೋಹಮಂ ಮಾಡಿದ | ದುಶ್ಚರಿತಕಾವುದು ನಿಷ್ಕೃತಿಗಳಿಲ್ಲೆಂಬ | ನಿಶ್ಚಯದೊಳಾಗ ಮರಣಾಂತವೇ ತನಗೆ ಪ್ರಾ | ಯಶ್ಚಿತ್ತವೆಂದಾಕಟಾಹದೊಳ್ ಕುದಿವೆಣ್ಣೆ ಯೊಳ್ ಬಿದ್ದನಾ ಲಿಖಿತನು 1೩೯||
ಆ ತಪ್ತತೈಲದ ಕಟಾಹದೆಡೆ ಲಿಖಿತಂಗೆ | ಶೀತಳಸ್ಥಳಮಾದುದಾ ಸುಧನ್ವನ ಸಂಗ | ಮೇತರತಿತಯಮೊ ಹರಿಭಕ್ತರಂ ಸಾರ್ದಂಗೆ ತಾಪಮಿರ್ದಪುದೆ ಬಳಿಕ | |ಆತಗಳ್ ಕುದಿವೆಣ್ಣೆಯೊಳ್ ಸುಖದೊಳಿರೆ ಹಂಸ | ಕೇತು ವಿಸ್ಮಿತನಾಗಿ ಮಂತ್ರಿಗಳೊಡನೆ ಬಂದು | ಪ್ರೀತಿಯಿಂದವರೀರ್ವರಂ ತೆಗೆದು ತಕ್ಕೈ ಸಿದಂ ಸುತಪುರೋಹಿತರನು | ೪೦ ||
ಪನ್ನೀರಮಿಂದು ದಿವ್ಯಾಂಬರವನುಟ್ಟು ಬಾ | ವನ್ನ ದಿಗುರಂ ಗೆಲ್ದು ಕಮ್ಮ ಲರ್ಗಳಂ ಸೂಡಿ | ಸನ್ನು ತ ಸುಯಕ್ಷಕರ್ದಮವೆನನುಕರಿಸಿ ಕತ್ತುರಿತಿಲಕವಿಟ್ಟು ಪಣಿಗೆ|| ರನ್ನ ದೊಡವುಗಳನಳವಡಿಸಿ ವೀಳೆಯಗೊಂಡು ; ತನ್ನ ನುಳುಹಿದ ದೇವಪುರದ ಲಕ್ಷ್ಮೀಪತಿಯ | ನಿನ್ನು ಕಂಡಪೆನೆಂಬ ಹರ್ಷದಿಂ ಕಳೆಯೇರಿ ಮೆರೆದಂ ಸುಧನ್ವನಂದು | ೪೧ ||
( ಮುಂದುವರೆಯುತ್ತದೆ )





















ಕಾಮೆಂಟ್ಗಳು