ವಿವೇಕಾನಂದ ಕಾಮತ್
ವಿವೇಕಾನಂದ ಕಾಮತ್
ಆತ್ಮೀಯರಾದ ವಿವೇಕಾನಂದ ಕಾಮತ್ ಕತೆ ಕಾದಂಬರಿಗಳ ಲೋಕದಲ್ಲಿ ಅಗಾಧ ಕೆಲಸ ಮಾಡುತ್ತಾ ಬಂದಿದ್ದಾರೆ. ಇಂದು ಅವರ ಜನ್ಮದಿನ.
ಚಿಕ್ಕಮಗಳೂರು ಜಿಲ್ಲೆಯ ಕಳಸದವರಾದ ವಿವೇಕಾನಂದ ಕಾಮತ್ 1976ರ ಜನವರಿ 21ರಂದು ಜನಿಸಿದರು. ಮಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮ ಪದವಿ ಪಡೆದ ಕಾಮತ್ ಅಲ್ಲಿಯೇ ಸ್ವಂತ ಉದ್ಯೋಗದಲ್ಲಿ ತೊಡಗಿದ್ದಾರೆ.
1994ರಲ್ಲಿ ಬರವಣಿಗೆ ಆರಂಭಿಸಿದ ವಿವೇಕಾನಂದ ಕಾಮತ್ 100ಕ್ಕೂ ಹೆಚ್ಚು ಕತೆ , 40 ಕಾದಂಬರಿಗಳು ಹಾಗೂ 20 ಮಿನಿ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಪ್ರಕಟಿಸಿದ್ದಾರೆ. 'ಸುಧಾ' ವಾರಪತ್ರಿಕೆಯಲ್ಲಿ ’ಅತಿಕ್ರಮಣ’, ’ನೆಲಮುಗಿಲು’, ‘ಅಜ್ಞಾತ', 'ಸ್ವೀಕಾರ' ಕಾದಂಬರಿಗಳು ಪ್ರಕಟವಾಗಿವೆ. ಸುಧಾದಲ್ಲಿ ಅವರ ಎರಡು ಫೋಟೊ ಕಾಮಿಕ್ಸ್ ಮತ್ತು ಅನೇಕ ಕಥೆಗಳೂ ಪ್ರಕಟವಾಗಿವೆ. 'ತರಂಗ'ದಲ್ಲಿ ನಾಲ್ಕು, 'ಕರ್ಮವೀರ'ದಲ್ಲಿ ನಾಲ್ಕು, 'ಮಂಗಳ' ಎಂಟು ಧಾರಾವಾಹಿಗಳು ಪ್ರಕಟಗೊಂಡಿವೆ. ಇದಲ್ಲದೆ ಎಲ್ಲ ತರಹದ ಇನ್ಜಿತರ ಪ್ರಮುಖ ನಿಯತಕಾಲಿಕಗಳಲ್ಲೂ ಇವರ ಕತೆ, ಕಾದಂಬರಿಗಳು ಮೂಡಿಬಂದಿವೆ.
ವಿವೇಕಾನಂದ ಕಾಮತ್ ಅವರ 'ಬೇಟೆ' ಕಾದಂಬರಿಗೆ ಕನ್ನಡ ಸಾಹಿತ್ಯ ಪರಿಷತ್ ಮತ್ತು ಸಾರಿಗೆ ಸಂಸ್ಥೆ ನೀಡುವ ಅರಳು ಪ್ರಶಸ್ತಿ(2010), 'ದೂರ ದಾರಿಯ ತೀರ' ಕಾದಂಬರಿಗೆ ಬೆಂಗಳೂರಿನ ಲೇಖಿಕಾ ಸಾಹಿತ್ಯ ವೇದಿಕೆ ನೀಡುವ 'ಲೇಖಿಕಾಶ್ರೀ' ಪ್ರಶಸ್ತಿ (2011), ಕಾದಂಬರಿ ಸಾಹಿತ್ಯದಲ್ಲಿನ ಕೊಡುಗೆಗಳಿಗಾಗಿ ಕಾಂತಾವರ ಪ್ರಶಸ್ತಿ ಮುಂತಾದ ಗೌರವಗಳು ಸಂದಿವೆ.
ನಿರಂತರ ಉತ್ತಮ ಬರವಣಿಗೆ ಮಾಡುತ್ತಾ ಬಂದಿರುವ ಆತ್ಮೀಯರಾದ ವಿವೇಕಾನಂದ ಕಾಮತ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ಅವರಿಗೆ ಎಲ್ಲ ರೀತಿಯ ಯಶಸ್ಸು, ಸಂತೋಷ ಮತ್ತು ಸಂತೃಪ್ತಿ ಸದಾ ಜೊತೆಗೂಡಿರಲಿ.
Happy birthday Vivekananda Kamath
ಕಾಮೆಂಟ್ಗಳು