ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ತೊರೆದು ಜೀವಿಸಬಹುದೆ



ತೊರೆದು ಜೀವಿಸಬಹುದೆ
ಹರಿ ನಿನ್ನ ಚರಣಗಳ‌
ಬರಿದೇ ಮಾತೇಕಿನ್ನೂ
ಅರಿತು ಪೇಳುವೆನಯ್ಯ...  ||||

ತಾಯಿ ತಂದೆಯ ಬಿಟ್ಟು
ತಪವ ಮಾಡಲುಬಹುದು
ದಾಯಾದಿ ಬಂಧುಗಳ ಬಿಡಲುಬಹುದು
ರಾಯ ತಾ ಮುನಿದರೆ
ರಾಜ್ಯವನೆ ಬಿಡಬಹುದು
ಕಾಯಜಾ ಪಿತನಿನ್ನ ಅಡಿಯ ಬಿಡಲಾಗದು... ||||

ಒಡಲು ಹಸಿದರೆ ಮತ್ತೆ
ಅನ್ನವನೆ ಬಿಡಬಹುದು
ಪಡೆದ ಕ್ಷೇತ್ರವ ಬಿಟ್ಟು ಹೊರಡಬಹುದು
ಮಡದಿ ಮಕ್ಕಳ ಕಡೆಗೆ
ತೊಲಗಿಸಿಯೆ ಬಿಡಬಹುದು
ಕಡಲೊಡೆಯ ನಿನ್ನಡಿಯ ಘಳಿಗೆ ಬಿಡಲಾಗದು...||||

ಪ್ರಾಣವನು ಪರರು
ಬೇಡಿದರೆತ್ತಿ ಕೊಡಬಹುದು
ಮಾನಾಭಿಮಾನವ ತಗ್ಗಿಸಲುಬಹುದು
ಪ್ರಾಣದಾಯಕಾನಾದ ಆದಿಕೇಶವರಾಯ‌
ಜಾಣ ಶ್ರೀ ಕೃಷ್ಣ ನಿನ್ನಡಿಯ‌ ಬಿಡಲಾಗದು....||||

ಸಾಹಿತ್ಯ: ಕನಕದಾಸರು



Tag: Toredu jeevisabahude

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ