ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕಂಡು ಧನ್ಯನಾದೆ ಶ್ರೀ ಉಡುಪಿ ಕೃಷ್ಣನಾ


ಕಂಡು ಧನ್ಯನಾದೆ ಶ್ರೀ ಉಡುಪಿ ಕೃಷ್ಣನಾ
ಕಣ್ಣಾರೆ ನಾ ಕಂಡು ಧನ್ಯನಾದೆ ನಾ
ಶ್ರೀ ಉಡುಪಿ ಕೃಷ್ಣನಾ

ಕಂಡು ಧನ್ಯನಾದೆನು
ಬ್ರಹ್ಮಾಂಡ ನಖದಿಯೊಡೆದ ಹರಿಯ
ತಂಡ ತಂಡದಿ ಪೂಜೆಗೊಳುತ
ಪಾಂಡವರನು ಸಲಹಿದವನ
ಕಂಡು ಧನ್ಯನಾದೆ ನಾ ಶ್ರೀ
ಉಡುಪಿ ಕೃಷ್ಣನಾ

ಎಂಟು ಮಠದ ಯತಿಗಳು
ತನ್ನ ಬಂಟರೆಂದು ಪೂಜೆಗೊಳುತ
ಕಂಟಕ ಕಂಸಾದಿಗಳನೆ
ದಂಟಿನಂದದಿ ಸೀಳಿದವನ
ಕಂಡು ಧನ್ಯನಾದೆ ನಾ
ಶ್ರೀ ಉಡುಪಿ ಕೃಷ್ಣನಾ

ಏಸು ಜನ್ಮದ ಸುಕೃತವೊ
ಕಮಲೇಶ ವಿಠಲರಾಯ ತನ್ನ
ದಾಸರ ಅಭಿಲಾಷೆಯಿತ್ತು
ಕೂಸಿನಂದದಿ ಪೋಷಿಸುವನ
ಕಂಡು ಧನ್ಯನಾದೆ ನಾ
ಶ್ರೀ ಉಡುಪಿ ಕೃಷ್ಣನಾ
ಕಣ್ಣಾರೆ ನಾ
ಕಂಡು ಧನ್ಯನಾದೆ ನಾ
ಶ್ರೀ ಉಡುಪಿ ಕೃಷ್ಣನಾ

ರಚನೆ: ಕಮಲೇಶ ವಿಠ್ಠಲರು



ಗಾಯನ: ಆರ್ ಕೆ ಶ್ರೀಕಂಠನ್


Tag: Kandu Dhanyanaade Naa




ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ