ಕೂಡಾರೈವೆಲ್ಲುಂ
ತಿರುಪ್ಪಾವೈನ 27ನೇ ದಿನದ ಪ್ರಾರ್ಥನೆಯಲ್ಲಿ, ಬೆಲ್ಲ ಬೇಳೆ ಬೆಣ್ಣೆಗಳ ಸವಿಯೊಂದಿಗಿನ ತಿನಿಸನ್ನು ನಿನ್ನೊಂದಿಗೆ ಸವಿಯಲು ತಂದಿದ್ದೇವೆ ಎನ್ನುತ್ತಾಳೆ ಆಂಡಾಳ್.
“ಕೂಡಾರೈವೆಲ್ಲುಂ ಶೀರ್ಗೋವಿಂದಾ ಉನ್ತನ್ನೈ ಪ್ಪಾಡಿಪರೈಕೊಂಡು ಯಾಂ ಪೆರುಶಮ್ಮಾನಂ ನಾಡು ಪುಹಳುಂ ಪರಿಶಿನಾಲ್ ನನ್ರಾಹ ... “
ಆ ಕುರಿತು ನಿನ್ನೆ ನನ್ನ ಪ್ರತ್ಯೇಕ ಬರಹ ಕಾಣಬಹುದು. ಬರಹ ಮಾಡಿದರೆ ನನ್ನೊಳಗಿನ ಪರಮಾತ್ಮನಿಗೆ ತಣಿಸಿದಂತಾಗುತ್ತದೆಯೇ! ಅದಕ್ಕಾಗಿ ಸಿಹಿಪೊಂಗಲ್ ಮತ್ತು ಪೊಂಗಲ್ ಮಾಡಿ ಅವನಿಗರ್ಪಿಸಿ, ನನಗರ್ಪಿಸಿಕೊಂಡಿದ್ದನ್ನು, ನಿಮಗೆ ತೋರಿಸುತ್ತಿದ್ದೇನೆ 🙈.
ಅವನೊಂದಿಗೆ ಸವಿಭೋಜಿಸುವ ಸವಿಜೀವನ ನಮ್ಮೆಲ್ಲರದಾಗಲಿ. 😇
ಅಂದ ಹಾಗೆ, ಇಂದು ತಿರುಪ್ಪಾವೈನ 28 ದಿನ. ಗೋದಾದೇವಿಯ ತಿರುಪ್ಪಾವೈನ 30 ಪ್ರೇಮ ನಿವೇದನೆಗಳ ಒಂದೊಂದು ಪಾಶುರವೂ ಸವಿಯಾದದ್ದೇ. ಅದನ್ನು ನೆನೆಯುವುದು ನಮ್ಮ ಸುಕೃತ🌷🙏🌷
ಕಾಮೆಂಟ್ಗಳು