ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೂಡಾರೈವೆಲ್ಲುಂ

ಕೂಡಾರೈವೆಲ್ಲುಂ ಎಂಬ ಅವನೊಂದಿಗಿನ ಸವಿ

ತಿರುಪ್ಪಾವೈನ 27ನೇ ದಿನದ ಪ್ರಾರ್ಥನೆಯಲ್ಲಿ, ಬೆಲ್ಲ ಬೇಳೆ ಬೆಣ್ಣೆಗಳ ಸವಿಯೊಂದಿಗಿನ ತಿನಿಸನ್ನು ನಿನ್ನೊಂದಿಗೆ ಸವಿಯಲು ತಂದಿದ್ದೇವೆ ಎನ್ನುತ್ತಾಳೆ ಆಂಡಾಳ್. 

“ಕೂಡಾರೈವೆಲ್ಲುಂ ಶೀರ್‌ಗೋವಿಂದಾ ಉನ್ತನ್ನೈ ಪ್ಪಾಡಿಪರೈಕೊಂಡು ಯಾಂ ಪೆರುಶಮ್ಮಾನಂ ನಾಡು ಪುಹಳುಂ ಪರಿಶಿನಾಲ್ ನನ್ರಾಹ ... “ 

ಆ ಕುರಿತು ನಿನ್ನೆ ನನ್ನ ಪ್ರತ್ಯೇಕ ಬರಹ ಕಾಣಬಹುದು.  ಬರಹ ಮಾಡಿದರೆ ನನ್ನೊಳಗಿನ ಪರಮಾತ್ಮನಿಗೆ ತಣಿಸಿದಂತಾಗುತ್ತದೆಯೇ!  ಅದಕ್ಕಾಗಿ ಸಿಹಿಪೊಂಗಲ್ ಮತ್ತು ಪೊಂಗಲ್ ಮಾಡಿ ಅವನಿಗರ್ಪಿಸಿ, ನನಗರ್ಪಿಸಿಕೊಂಡಿದ್ದನ್ನು,  ನಿಮಗೆ ತೋರಿಸುತ್ತಿದ್ದೇನೆ 🙈.  

ಅವನೊಂದಿಗೆ ಸವಿಭೋಜಿಸುವ ಸವಿಜೀವನ ನಮ್ಮೆಲ್ಲರದಾಗಲಿ. 😇

ಅಂದ ಹಾಗೆ, ಇಂದು ತಿರುಪ್ಪಾವೈನ 28 ದಿನ.  ಗೋದಾದೇವಿಯ ತಿರುಪ್ಪಾವೈನ 30 ಪ್ರೇಮ ನಿವೇದನೆಗಳ ಒಂದೊಂದು ಪಾಶುರವೂ ಸವಿಯಾದದ್ದೇ.  ಅದನ್ನು ನೆನೆಯುವುದು ನಮ್ಮ ಸುಕೃತ🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ