ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ರೀಕೃಷ್ಣ ಜನಿಸಿದ ಧರೆಯಲ್ಲಿ

ಗಾಡಾಂಧಕಾರದ ಇರುಳಲ್ಲಿ
ಕಾರ್ಮೋಡ ನೀರಾದ ವೇಳೆಯಲಿ

ಶ್ರೀಕೃಷ್ಣ ಜನಿಸಿದ ಧರೆಯಲ್ಲಿ
ದೇವಕಿ ಇರುವಾಗ ಸೆರೆಯಲ್ಲಿ
ತಂದೆಯು ಕಣ್ಣೀರ ಕಡಲಲ್ಲಿ
ಮಾವನ ಕಾವಲು ಬಾಗಿಲಲಿ

ತಾಯ ಸೆರೆಯ ಬಿಡಿಸಲೆಂದೇ
ಕೃಷ್ಣನಂತೆ ಬಂದೆಯೇನು?
ಗೀತೆಯನ್ನು ಬೋಧಿಸಲೆಂದೇ
ಭುವಿಗೆ ಇಳಿದು ಬಂದೆಯೇನು?
ನೀನು ಬಂದ ಗಳಿಗೆಯಿಂದ
ಶೋಕವೆಲ್ಲ ತೀರಲಿ
ಶಾಂತಿ ಸೌಖ್ಯ ತುಂಬಲಿ

ನೂರು ಒಗಟು ಬಿಡಿಸಿ ನಗುವ
ಜಾಣೆ ನಿನ್ನ ತಾಯಿ ಅಂದು
ಬಾಳಿನೊಗಟ ಒಡೆವ ದಾರಿ
ಕಾಣದಾಗಿ ಅಳುವಳಿಂದು
ನೂರು ನೋವ ನೀಗಿ ನಲಿವ
ದಾರಿ ಬೇಗ ತೋರಿಸು
ತಾಯ ಆಸೆ ತೀರಿಸು

ಚಿತ್ರ: ದೇವರಗುಡಿ
ಸಾಹಿತ್ಯ: ಚಿ. ಉದಯಶಂಕರ
ಸಂಗೀತ: ರಾಜನ್ ಮತ್ತು ನಾಗೇಂದ್ರ
ಗಾಯನ: ವಾಣಿ ಜಯರಾಂ.


Tag: Srikrishna janisida dhareyalli, Sri krishna janisida dareyalli


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ