ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕಾಡು ಮಲ್ಲಿಗೆಯೊಂದು ಕಾಡಿನಲಿ ನರಳುತಿದೆ


ಕಾಡು ಮಲ್ಲಿಗೆಯೊಂದು ಕಾಡಿನಲಿ ನರಳುತಿದೆ
ಬಾಡಿ ಹೋಗುವ ಮುನ್ನ ಕೀಳುವವರಾರೆಂದು

ಅರಳಿ ನಿಂತರು ದೇವಾ, ನೆರಳಿನಲಿ ನಾನಿಲ್ಲ
ಪಸರಿಸುವ ಪರಿಮಳವ ಆಘ್ರಾಣಿಸುವವರಿಲ್ಲ
ಏಕೆನಿತೋ ಕಾಡಿನಲಿ ಮುನಿದು ನಿಲ್ಲಿಸಿದೆ
ಯಾವ ಪಾಪಕೆ ನನ್ನ ಇಂದು ಎಸೆದೆ

ಕಾಡು ಮಲ್ಲಿಗೆಯೊಂದು ಕಾಡಿನಲಿ ನರಳುತಿದೆ
ಬಾಡಿ ಹೋಗುವ ಮುನ್ನ ಕೀಳುವವರಾರೆಂದು

ಅಡಿಯ ಸೇರುವ ಭಾಗ್ಯ ಪಡೆದು ಬರಲಿಲ್ಲ
ಮುಡಿಯನೇರುವ ದಾರಿ ನಾ ಕಾಣಲಿಲ್ಲ
ಕನವರಿಸಿ ಕೇಳುತಿಹೆ ಕರುಣೆ ತೋರೆಂದು
ಮುಡಿವ ಮಲ್ಲಿಗೆಯಾಗಿ ಬಾಳಬೇಕೆಂದು

ಕಾಡು ಮಲ್ಲಿಗೆಯೊಂದು ಕಾಡಿನಲಿ ನರಳುತಿದೆ
ಬಾಡಿ ಹೋಗುವ ಮುನ್ನಾ...... ಕೀಳುವವರಾರೆಂದು

ಸಾಹಿತ್ಯ:  ವ್ಯಾಸರಾಯ ಬಲ್ಲಾಳ

Tag: Kaadu malligeyondu kaadinali naralutide, Kadu malligeyondu kadinali naralutide

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ