ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಒಬ್ಬ ತಾಯಿಗೆ


ಒಬ್ಬ ತಾಯಿಗೆ

ಜಗದೀಶ್ವರನೆ ವಿಶ್ವಸಂಸಾರಿಯಾಗಿರಲು
ಸಂಸಾರ ಪಾಶವೆಂದೆನಬೇಡವೈ.
ಹುಟ್ಟುಹಾಕಲು ನಿನಗೆ ಬಾರದಿರೆ, ಕೂಡದಿರೆ,
ಬರಿದೆ ನೀಂ ದೋಣಿಯನು ಶಪಿಸಬೇಡೈ!

ಮಾಡುವುದನೆಲ್ಲ ತನ್ನಾತ್ಮಸಾಧನೆಯೆಂದು
ಕರ್ಮಗೈ; ಅದುವೆ ಪೂಜೆಯ ಮರ್ಮವೈ.
ಶಿವನ ಕಾರ್ಯದೊಳಾವು ಶಿರಬಾಗಿ ನೆರವಾಗೆ
ನಮಗದುವೆ ಪರಮಪಾವನ ಧರ್ಮವೈ.

ಹಸುಳೆಯನು ಮೀಯಿಸಲು ಹರನಿಗಭಿಷೇಕವದು;
ಶಿಶುವಿಗೂಡಿಸೆ ಶಿವಗೆ ನೈವೇದ್ಯವೈ!
ಕಂದನಲಿ ಶಿವನ ಕಾಣುವ ಬಂಧನವೆ ಮುಕ್ತಿ;
ತಪಕೊಲ್ಲದದು ತಾಯ್ತನಕೆ ಸಾಧ್ಯವೈ!

ಸಾಹಿತ್ಯ: ಕುವೆಂಪು

Photo Courtesy: www.cini.org.uk

Tag: Obba Thaayige, Jagadeeshvarane Vishwa Sanchari Agiralu

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ