ಭುವನೇಶ್ವರಿಯ ನೆನೆ ಮಾನಸವೇ
ಭವಬಂಧಂಗಳ ಭೀತಿಯ ಬಿಡುವೆ
ಭವದಲಿ ಬರಿದೇ ನವೆಯದೇ ನೋಯದೇ
ತವ ಸುವಿಲಾಸದಿ ತಣಿಯುವೆ ಸುಖಿಸುವೆ
ವೃಜಿನಂಗಳನು ವಿದಲಿಪ ಮಾತೆಯ
ತ್ರಿಜಗಜ್ಜನನಿಯ ತ್ರಿಗುಣಾತೀತೆಯ
ನಿಜ ಭಕ್ತಾವನ ಸುರವರ ಸುರಭಿಯ
ಅಜ ಸನ್ನುತೆ ಶ್ರೀ ಹರಿಕೇಶಾಂಗಿಯ
ಸಾಹಿತ್ಯ:
ಮುತ್ತಯ್ಯ ಭಾಗವತರು
ಗಾಯನ:
ಮಹಾರಾಜಪುರಂ ಸಂತಾನಂ
ಕಾಮೆಂಟ್ಗಳು