ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಇಂದು ಕೆಂದಾವರೆಯ ದಳದಳಿಸಿ ದಾರಿಯಲಿ

ಇಂದು ಕೆಂದಾವರೆಯ ದಳ
ದಳಿಸಿ ದಾರಿಯಲಿ ಗಂಧದೌತಣ
ಹೋಗಿ ಬರುವ ಜನಕೆ
ಮಂದ ಮಾರುತವಿರಲಿ ಮರಿ
ದುಂಬಿ ಇರಲಿ ಆನಂದವಿರೆ
ಅತಿಥಿಗಳ ಕರೆಯಬೇಕೆ

ನಗುತಲಿರೆ ನೀರು ಹೊಂಬಿಸಿಲು
ಕಚಗುಳಿ ಇಡಲು
ದುಂಬಿಗಳು ಒಲವನೆ ಗುಂಜಿಸಿರಲು
ನಾಚಿ ತಲೆ ಬಾಗಿಸಿತು ಕಮಲ
ದೂರದ ಬಾನದಾರಿಯಲಿ
ಸಪ್ತಾಷ್ವವೇರಿ ಬಹನು

ತನ್ನ ಕೈ ಕೈಯೊಳು
ಒಲವು ಬಲೆಗಳನಿಟ್ಟು
ನೀರಿನಾಳದೊಲವನು ಬಿಂಬಿಸುವನು
ಮೈ ಮರೆತುದಾ ಪದ್ಮ
ಪರಮೇಗಳಾ ಪರಿವಾರ
ಮಂಜಾಗಿ ಕರಗಿತ್ತು ಸುತ್ತ ಮುತ್ತ

ಇರುವ ದುಂಬಿಯ ಬಿಟ್ಟು
ಬರುವ ನೇಸರ ಕರೆಗೆ
ಓಗುಟ್ಟುದೆನ್ನ ಕೆಂದಾವರೆ
ಬರುವ ಬಾಳಿನ ಕನಸು
ರವಿಯಾಗಿ ಬಹುದೇನು
ಕಾಯಬೇಕು ಅದಕೆ ಎಲ್ಲಿವರೆಗೆ


ಸಾಹಿತ್ಯ:  ಎಂ.ಗೋಪಾಲಕೃಷ್ಣ ಅಡಿಗ


Tag: Indu Kendavareya Dala Dalisi Daariyali

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ