ಶ್ರೀನಿವಾಸ ಎನ್ನ ಬಿಟ್ಟು ನೀನಗಲದೆ
ಶ್ರೀನಿವಾಸ ಎನ್ನ ಬಿಟ್ಟು ನೀನಗಲದೆ
ಮನವೆಂಬೊ ಮಂಟಪ
ತನುವೆಂಬೊ ಹಾಸು ಮಂಚ
ಜ್ಞಾನವೆಂಬೊ ದಿವ್ಯದೀಪದ ಬೆಳಕಲಿ
ಸನಕಾದಿ ವಂದ್ಯ ನೀ ಬೇಗ ಬಾರೊ
ಪಂಚದೈವರು ಯಾವಾಗಲೂ ಎನ್ನ
ಹೊಂಚು ಹಾಕಿ ನೋಡುತಾರೆ
ಹೊಂಚುಗಾರರು ಆರು ಮಂದಿ
ಆವ ಹಿಂದು ಮುಂದಿಲ್ಲದೆ ಎಳೆಯುತಾರೆ
ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆನೊ
ಇನ್ನಾದರೂ ಎನ್ನ ಕೈ ಪಿಡಿಯೊ
ಘನ್ನ ಮಹಿಮ ಸಿರಿ ಪುರಂದರ ವಿಠ್ಠಲ
ಮನ್ನಿಸಿ ಎನ್ನನು ಕಾಯಬೇಕೊ
ಸಾಹಿತ್ಯ: ಶ್ರೀ ಪುರಂದರದಾಸರು
Tag: Srinivasa Enna bittu nee agalade
ಕಾಮೆಂಟ್ಗಳು