ಮಂಗಳಾರತಿ ತಂದು ಬೆಳಗಿರೆ
ಮಂಗಳಾರತಿ ತಂದು ಬೆಳಗಿರೆ
ಅಂಬುಜಾಸನ ರಾಣಿಗೆ
ಅಂಬೆಗೆ ಜಗದಾಂಬೆಗೆ ಮೂಕಾಂಬೆಗೆ
ಶಶಿ ಬಿಂಬೆಗೆ
ಶುದ್ಧ ಸ್ನಾನವ ಮಾಡಿ ನದಿಯಲಿ
ವಜ್ರಪೀಠದಿ ನೆಲೆಸಿರೆ
ತಿದ್ದಿ ತಿಲಕವ ತೀಡಿದಂಥ
ಮುದ್ದು ಮಂಗಳ ಗೌರಿಗೆ
ಎರೆದು ಪೀತಾಂಬರವನುಡಿಸಿ
ಸರ್ವಾಭರಣವ ರಚಿಸಿದ
ಹರಳಿನೋಲೆ ವಜ್ರಮೂಗುತಿ
ವರಮಹಾಲಕ್ಷ್ಮಿ ದೇವಿಗೆ
ಹುಟ್ಟುಬಡವೆಯ ಕಷ್ಟಕಳೆದು
ಕೊಟ್ಟಳರಸನ ಸಿರಿಯನು
ಹೆತ್ತ ಕುಮರನ ತೋರಿದಂಥ
ಶುಕ್ರವಾರದ ಲಕ್ಷ್ಮಿಗೆ
ನಿಗಮ ವೇದ್ಯಳೆ ನಿನ್ನ ಗುಣಗಳ
ಬಗೆಬಗೆಯಲಿ ವರ್ಣಿಪೆ
ತೆಗೆದು ಭಾಗ್ಯವ ನೀಡು ಏನುತ
ಜಗದೊಡೆಯ ಭೀಮೇಶ ಕೃಷ್ಣನ ರಾಣಿಗೆ
ಸಾಹಿತ್ಯ: ಭೀಮೇಶ ಕೃಷ್ಣ
(ಹರಪನಹಳ್ಳಿ ಭೀಮವ್ವ)
Tag: Mangalarati Tandu Belagire
ಕಾಮೆಂಟ್ಗಳು