ನೀ ಸಿಗದೇ ಬಾಳೊಂದು ಬಾಳೇ ಕೃಷ್ಣಾ
ನೀ ಸಿಗದೇ ಬಾಳೊಂದು ಬಾಳೇ
ಕೃಷ್ಣಾ
ನಾ ತಾಳಲಾರೆ ಈ
ವಿರಹತೃಷ್ಣಾ
ಕಮಲವಿಲ್ಲದ ಕೆರೆ ನನ್ನ
ಬಾಳು;
ಚಂದ್ರ ಇಲ್ಲದ ರಾತ್ರಿ
ಬೀಳು;
ನೀ ಸಿಗದೆ ಉರಿ ಉರಿ ಕಳೆದೆ
ಇರುಳ
ಮಾತಿಲ್ಲ, ಬಿಗಿದಿದೆ
ದುಃಖ ಕೊರಳ
ಅನ್ನ ಸೇರದು, ನಿದ್ದೆ
ಬಂದುದೆಂದು?
ಕುದಿವೆ ಒಂದೇ ಸಮ ಕೃಷ್ಣಾ
ಎಂದು;
ಯಾರು ಅರಿವರು ಹೇಳು ನನ್ನ
ನೋವ
ತಲ್ಲಣಿಸಿ ಕೂಗುತಿದೆ ದಾಸಿ
ಜೀವ
ಒಳಗಿರುವ ಗಿರಿಧರನೆ ಹೊರಗೆ
ಬಾರೊ,
ಕಣ್ಣೆದುರು ನಿಂತು ಆ ರೂಪ
ತೋರೊ;
ಜನುಮ ಜನುಮದ ರಾಗ
ನನ್ನ ಪ್ರೀತಿ,
ನಿನ್ನೊಳಗೆ ಹರಿವುದೇ ಅದರ
ರೀತಿ.
ಸಾಹಿತ್ಯ: ಎನ್. ಎಸ್.
ಲಕ್ಷ್ಮೀನಾರಾಯಣ ಭಟ್ಟ
ಗಾಯನ: ಪಲ್ಲವಿ
ಕಾಮೆಂಟ್ಗಳು