ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕವಿ – ವೇದಾಂತಿ




ವೇದಾಂತಿ ಹೇಳಿದನು :

ಹೊನ್ನೆಲ್ಲ ಮಣ್ಣು ;

ಕವಿಯೊಬ್ಬ ಹಾಡಿದನು :

ಮಣ್ಣೆಲ್ಲ ಹೊನ್ನು !

ವೇದಾಂತಿ ಹೇಳಿದನು :

ಈ ಹೆಣ್ಣು ಮಾಯೆ ;

ಕವಿಯು ಕನವರಿಸಿದನು :

ಓ ಇವಳೆ ಚೆಲುವೆ

ಇವಳ ಜೊತೆಯಲಿ ನಾನು
ಸ್ವರ್ಗವನೆ ಗೆಲುವೆ !


ವೇದಾಂತಿ ಹೇಳಿದನು :

ಈ ಬದುಕು ಶೂನ್ಯ ;

ಕವಿ ನಿಂತು ಸಾರಿದನು :

ಇದು ಅಲ್ಲ ಅನ್ಯ,

ಜನ್ಮ ಜನ್ಮದಿ ಸವಿವೆ
ನಾನೆಷ್ಟು ಧನ್ಯ !


ಸಾಹಿತ್ಯ: ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ

ಚಿತ್ರ: ಮಾನಸ ಸರೋವರ
ಸಂಗೀತ: ವಿಜಯಭಾಸ್ಕರ್
ಗಾಯನ: ಪಿ. ಬಿ. ಶ್ರೀನಿವಾಸ್



Tag: Vedanti Helidanu

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ