ಕವಿ – ವೇದಾಂತಿ
ವೇದಾಂತಿ ಹೇಳಿದನು :
ಹೊನ್ನೆಲ್ಲ ಮಣ್ಣು ;
ಕವಿಯೊಬ್ಬ ಹಾಡಿದನು :
ಮಣ್ಣೆಲ್ಲ ಹೊನ್ನು !
ವೇದಾಂತಿ ಹೇಳಿದನು :
ಈ ಹೆಣ್ಣು ಮಾಯೆ ;
ಕವಿಯು ಕನವರಿಸಿದನು :
ಓ ಇವಳೆ ಚೆಲುವೆ
ಇವಳ ಜೊತೆಯಲಿ ನಾನು
ಸ್ವರ್ಗವನೆ ಗೆಲುವೆ !
ವೇದಾಂತಿ ಹೇಳಿದನು :
ಈ ಬದುಕು ಶೂನ್ಯ ;
ಕವಿ ನಿಂತು ಸಾರಿದನು :
ಇದು ಅಲ್ಲ ಅನ್ಯ,
ಜನ್ಮ ಜನ್ಮದಿ ಸವಿವೆ
ನಾನೆಷ್ಟು ಧನ್ಯ !
ಸಾಹಿತ್ಯ: ರಾಷ್ಟ್ರಕವಿ ಜಿ. ಎಸ್.
ಶಿವರುದ್ರಪ್ಪ
ಚಿತ್ರ: ಮಾನಸ ಸರೋವರ
ಸಂಗೀತ: ವಿಜಯಭಾಸ್ಕರ್
ಗಾಯನ: ಪಿ. ಬಿ. ಶ್ರೀನಿವಾಸ್
Tag: Vedanti Helidanu
ಕಾಮೆಂಟ್ಗಳು