ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಘವೇಂದ್ರ ಸ್ವಾಮಿಗಳು


 ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 
429 ನೇ ವರ್ಧಂತಿ🙏🙏🙏🙏

On 429th Biirth anniversary of Sri Raghavendra Swamiji 🌷🙏🌷


ಇಂದು ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 429 ನೇ ವರ್ಧಂತಿ ಅವರು ಜನಿಸಿದಪುಣ್ಯದಿನ


16ನೇ ಶತಮಾನದಲ್ಲಿ ತಿಮ್ಮಣ್ಣ ಭಟ್ಟರು ಹಾಗೂ ಗೋಪಮ್ಮ ಎಂಬ ಸಾಧ್ವಿ ದಂಪತಿಗಳಿಗೆ ತಿರುಪತಿತಿಮ್ಮಪ್ಪನ ಅನುಗ್ರಹದಿಂದ ಜನಿಸಿದ ಶಿಶುವೇ ಗುರು ರಾಘವೇಂದ್ರತೀರ್ಥರುರಾಯರಪೂರ್ವಾಶ್ರಮದ ಹೆಸರು ವೆಂಕಟನಾಥ ಅಥವಾ ವೀಣಾ ವೆಂಕಣ್ಣಭಟ್ಟಎಲ್ಲ ಮಕ್ಕಳಂತೆವೆಂಕಟನಾಥರೂ ತಮ್ಮ ಬಾಲ್ಯವನ್ನು ಕಳೆದರುಸಮಗ್ರ ಬ್ರಹ್ಮ ಮೀಮಾಂಸಾ ಶಾಸ್ತ್ರವನ್ನುಅಭ್ಯಸಿಸಿ ಪ್ರಕಾಂಡ ಪಾಂಡಿತ್ಯ ಗಳಿಸಿದರುಶ್ರೀಸುಧೀಂದ್ರತೀರ್ಥರಿಂದ ಸರ್ವಜ್ಞಪೀಠವನ್ನುಅಲಂಕರಿಸಿದ ಬಳಿಕ ಹಗಲಿರುಳು ಸಂಚರಿಸಿ ದೀನದಲಿತರ ಉದ್ಧಾರಕ್ಕೆ ಕಾರಣರಾದರುತಮ್ಮಅಪೂರ್ವ ತಪೋಬಲದಿಂದ ದೇಹೀ ಎಂದು ಬರುವ ಭಕ್ತರ ಮನೋಕಾಮನೆಯನ್ನು ಈಡೇರಿಸುವಕಲಿಯುಗದ ಕಾಮಧೇನು ಎಂದೆನಿಸಿ ಶ್ರೀ ಗುರುರಾಘವೇಂದ್ರರಾದರು.


ರಾಯರು ಕೇವಲ ಯತಿಗಳಷ್ಟೇ ಅಲ್ಲಸಾಹಿತ್ಯ ಸರಸ್ವತಿ ಮತ್ತು ಸಂಗೀತ ಸರಸ್ವತಿಯ ವರಪುತ್ರರುಸಂಸ್ಕೃತದಲ್ಲಿ ‘ಪರಿಮಳ’, ‘ನ್ಯಾಯ ಮುಕ್ತಾವಳಿ’ , ‘ತತ್ವ ಮಂಜರಿ’, ‘ಸೂತ್ರಭಾಷ್ಯ’, ‘ಭಾರದೀಪ’, ‘ತಾತ್ಪರ್ಯ ನಿರ್ಣಯವೇ ಮುಂತಾದ ಅಮೂಲ್ಯ ಕೃತಿಗಳನ್ನು ಬರೆದಿರುವ ಗುರು ರಾಘವೇಂದ್ರತೀರ್ಥರು ಮಹಾಭಾರತವೇ ಮೊದಲಾದ ಕೃತಿಗಳಿಗೆ ಅರ್ಥವಿವರಣೆ ಹಾಗೂ ಭಾಷ್ಯಗಳನ್ನೂಬರೆದಿದ್ದಾರೆ


ಗುರುರಾಯರು ಕನ್ನಡದಲ್ಲಿಯೂ ಅನೇಕ ಕೃತಿಗಳನ್ನು ರಚಿಸಿದ್ದಾರೆ ಎನ್ನಲಾಗಿದೆಆದರೆಈವರೆಗೆದೊರೆತಿರುವುದು ‘ಇಂದು ಎನಗೆ ಗೋವಿಂದ’ ಎಂಬ ಕೃತಿರತ್ನ ಮಾತ್ರ.


ಗುರುರಾಯರ ಕಾಲ ಕಾಲ ಕ್ರಿ. 1595-1671.  ಗುರುರಾಯರು ಸಶರೀರದೊಂದಿಗೆಬೃಂದಾವನಸ್ಥರಾಗಿ ಮೂರೂವರೆವಶತಮಾನಗಳಿಗೂ ಹೆಚ್ಚು ಕಾಲ ಕಳೆದಿದೆಕಲಿಯುಗದಕಾಮಧೇನು ಗುರುರಾಯರು ಬೃಂದಾವನದಲ್ಲಿಯೇ ಇದ್ದು ಸರ್ವರನ್ನೂ ಸಲಹುತ್ತಾರೆ ಎಂಬನಂಬಿಕೆ ಅವರ ಭಕ್ತರದುರಾಯರು ಬೃಂದಾವನವನ್ನು ಪ್ರವೇಶಿಸುವ ಮೊದಲು ತಾವು ಒಟ್ಟು 700 ವರ್ಷಗಳ ಕಾಲ ಸಶರೀರದೊಂದಿಗೆ ಬೃಂದಾವನದಲ್ಲಿದ್ದುಭಕ್ತರ ಸಂಕಷ್ಟ ಪರಿಹರಿಸುವುದಾಗಿವಚನವಿತ್ತಿದ್ದರಂತೆ.


ಗುರು ರಾಘವೇಂದ್ರರನ್ನು ಭಕ್ತ ಶ್ರೇಷ್ಠ ಪರಂಪರೆಗೆ ಸೇರಿದ ಪೌರಾಣಿಕ ಪ್ರಸಿದ್ಧ ಭಕ್ತ ವೃಂದಕ್ಕೆಸೇರಿದ ಪ್ರಹ್ಲಾದ ಪುನರಾವತಾರ ಎಂಬ ಚಿಂತನೆ ಕೂಡಾ ಜನಮನದಲ್ಲಿದೆ ಹಲವಾರು ಪವಾಡಪ್ರಧಾನ ಚಿಂತನೆಗಳ ಸುತ್ತ ಕೂಡಾ ರಾಯರ ಬದುಕು ಪ್ರಸಿದ್ಧಗೊಂಡಿದೆ ಗುರು ಪರಂಪರೆಯಲ್ಲಿಮೂಡಿ ಬಂದ ಆಚಾರ್ಯರಲ್ಲಿ ರಾಘವೇಂದ್ರ ಸ್ವಾಮಿಗಳಿಗೆ ಇರುವ ಅಸಂಖ್ಯಾತ ದೇವಸ್ಥಾನಗಳುಅವರ ಕುರಿತಾದ ಭಕ್ತಿ ಶ್ರದ್ಧೆಗಳಿಗೆ ಸಾಕ್ಷಿ ಎಂಬಂತಿವೆ.


ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ವ್ರತಾಯಚ

ಭಜತಾಂ ಕಲ್ಪ ವ್ರುಕ್ಷಾಯ ನಮತಾಂ ಕಾಮಧೇನವೆ.


ಶ್ರೀ ರಾಘವೇಂದ್ರರ ದಿವ್ಯಕೃಪೆ ನಮ್ಮೆಲ್ಲರ ಮೇಲಿರಲಿ ಎಂದು  ಮಹಾತ್ಮರಿಗೆ ನಮಿಸೋಣರೋಗಗಳಿಂದ ಮುಕ್ತಿನೀಡುವ ಕೃಪಾಸಾಗರ ಶ್ರೀರಾಘವೇಂದ್ರರೆ  ಲೋಕವನ್ನುರೋಗರುಜಿನಗಳಿಂದ ಕಾಪಾಡಿ ಸದ್ವಿವೇಕದಲ್ಲಿ ಇರುವಂತೆ ಅನುಗ್ರಹಿಸಿ ಎಂದು ಬೇಡುತ್ತೇನೆ ದಯಮಾಡಿ ಕೃಪೆ ಮಾಡಿ.



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ