ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹೇಮಲತಾ ವಸ್ತ್ರದ


 ಹೇಮಲತಾ ವಸ್ತ್ರದ


ಹೇಮಲತಾ ವಸ್ತ್ರದ ಅವರು ಕವಯಿತ್ರಿಯಾಗಿ ಮತ್ತು ಸಂಘಟನಕಾರರಾಗಿ ಹೆಸರಾಗಿದ್ದಾರೆ.

ಡಿಸೆಂಬರ್ 21, ಹೇಮಲತಾ ವಸ್ತ್ರದ ಅವರ ಜನ್ಮದಿನ. ವಿಜಾಪುರ ಜಿಲ್ಲೆಯ ಸಿಂದಗಿ ಇವರ ಹುಟ್ಟೂರು. ತಂದೆ ಸಿದ್ರಾಮಯ್ಯ ಹಿರೇಮಠ.  ತಾಯಿ ಸುವರ್ಣಲತಾ ಸಿ. ಹಿರೇಮಠ. ಎಂಎ, ಎಂಇಡಿ, ಪಿಜಿ ಡಿಪ್ಲೋಮಾ ಇನ್ ಇಂಗ್ಲಿಷ್ ಇವರ ವಿದ್ಯಾಸಾಧನೆಗಳಲ್ಲಿ ಸೇರಿವೆ.

ಹೇಮಲತಾ ವಸ್ತ್ರದ ಅವರು ವಿಜಯಪುರ ಗ್ರಾಮೀಣ ಶಾಲೆಯಲ್ಲಿ ಶಿಕ್ಷಕಿಯಾಗಿ, ಕವಯಿತ್ರಿಯಾಗಿ ಮತ್ತು ಉತ್ತಮ ವಾಗ್ಮಿಗಳಾಗಿ ಹೆಸರಾಗಿದ್ದಾರೆ. ‘ನೋವಿಗೆ ವ್ಯಾಖ್ಯಾನವಾದವರು’ ಕಥಾ ಸಂಕಲನ, ’ಅವ್ವನಿಗೊಂದು ಪತ್ರ’ ಕವನ ಸಂಕಲನ ಇವರ ಕೃತಿಗಳಲ್ಲಿ ಸೇರಿವೆ. ಪೃಥ್ವಿಯೊಡಲು ಕಥಾಸಂಕಲನ, ಗಜಲ್ ಸಂಕಲನ, ಅಕ್ಕನಾಗಮ್ಮ  ಎಂಬ ನಾಟಕ ಅಚ್ಚಿನಲ್ಲಿವೆ.  ಶೈಕ್ಷಣಿಕ, ಸಾಹಿತ್ಯಕ ಲೇಖನಗಳು, ಮಕ್ಕಳ ಕಥೆಗಳು, ಕವನಗಳು ಮತ್ತು ಬಾಲಕಾರ್ಮಿಕಪದ್ಧತಿ ಎಂಬ ಸಂಶೋಧನೆ ಸಹ ಇವರ ವಿಸ್ತೃತ ಬರಹ ವ್ಯಾಪ್ತಿಯಲ್ಲಿವೆ. ನಾಡಿನ ಎಲ್ಲ ಪ್ರಸಿದ್ಧ ಪತ್ರಿಕೆ ಮತ್ತು ನಿಯತಕಾಲಿಕಗಳಲ್ಲಿ ಇವರ ಬರಹ ಮೂಡಿಬಂದಿದೆ.

ಹೇಮಲತಾ ವಸ್ತ್ರದ ಅವರು ಪ್ರಸ್ತುತದಲ್ಲಿ ವಿಜಯಪುರ ಜಿಲ್ಲೆಯ ಲೇಖಕಿಯರ ಸಂಘದ ಅಧ್ಯಕ್ಷರಾಗಿದ್ದಾರೆ. ಅನೇಕ ಪ್ರಸಿದ್ದ ವೇದಿಕೆಗಳಲ್ಲಿ ಮತ್ತು ಆಕಾಶವಾಣಿ, ಕಿರುತೆರೆ ಮಾಧ್ಯಮಗಳಲ್ಲಿ ಕಾವ್ಯಮಂಡನೆ ಮತ್ತು ಉಪನ್ಯಾಸಗಳನ್ನು ಮಾಡಿದ್ದಾರೆ. 

ಹೇಮಲತಾ ವಸ್ತ್ರದ ಅವರಿಗೆ ಲಯನ್ಸ್ ಕ್ಲಬ್ ಇಂದ ಉತ್ತಮ ಶಿಕ್ಷಕಿ ಪ್ರಶಸ್ತಿ,  ಉತ್ತಮ ಸಂಪನ್ಮೂಲ ವ್ಯಕ್ತಿ ಗೌರವ, ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ಶಿಕ್ಷಣ ಕ್ಷೇತ್ರದ ‘ಗುರುಶ್ರೇಷ್ಠ ‘ ಪುರಸ್ಕಾರ, ಸಿಪಿಕೆ ಕಾವ್ಯ ಪ್ರಶಸ್ತಿಗಳೂ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.

ಹೇಮಲತಾ ವಸ್ತ್ರದ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Hemalatha Vastrada 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ