ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ತಿರುಪ್ಪಾವೈ21


 ತಿರುಪ್ಪಾವೈ 21

ಭುವನ ಬ್ರಹ್ಮಾಂಡವೆಲ್ಲಾ ನಿನಗೆ ಸುಪ್ರಭಾತವನ್ನು ಹಾಡುತ್ತಿದೆ

Thiruppavai 21


ಏಟ್ರಕಲಂಗಳೆದಿರ್ ಪೋಂಗಿ ಮೀದಳಿಪ್ಪ

ಮಾಟ್ರಾದೇ ಪಾಲ್‍ಶೋರಿಯುಂ ವಳ್ಳಲ್ ಪೆರುಂ ಪಶುಕ್ಕಲ್

ಆಟ್ರ ಪಡೆಯ್ತಾನ್  ಮಗನೇ ಅರಿವುರಾಯ್

ಊಟ್ರ ಮುಡೈಯಾಯ್  ಪೆರಿಯಾಯ್ ಉಲಗಿನಿಲ್

ತೋಟ್ರಮಾಯ್ ನಿನ್ರ ಶುಡರೇ ತುಯಿಲೆಳಾಯ್

ಮಾಟ್ರಾರ್  ಉನಕ್ಕು ವಲಿತೊಲೈಂದುನ್ ವಾಶಲ್‍ಕಣ್ 

ಆಟ್ರಾದು  ವಂದುನ್ನಡಿಪಣಿಯುಮಾಪ್ಪೋಲೇ

ಪೋಟ್ರಿಯಾಮ್  ವಂದೋಂ ಪುಗಳಿನ್ದೇಲೋರೆಂಬಾವಾಯ್


ಭಾವಾನುವಾದ - ೨


ಕಾಮಧೇನುಗಳೊಡೆಯನೆ ಮಹಾನಿಧಿಯೇ ವಾತ್ಸಲ್ಯ ವಾರಿಧಿಯೇ

ಮಾರ್ಗಶಿರ ನೋಂಪಿಯನಾಚರಿಸಿ ಬಂದಿರುವೆಮ್ಮಸಲಹಯ್ಯ 

ಬೆಳಗಿಹರು ಶಶಿಸೂರ್ಯ ಕೋಟಿಕೋಟಿ ತಾರಾ ಮಂಡಲಾಧಿಪರು 

ನೀ ಪರಮ ಪರಮಪುರುಷ ಪರಂಧಾಮ ಜನಕ ಜನನಿ ಚರಾಚರಕೆ 

ಸುಪ್ರಭಾತವು ನಿನಗೆ ಯಾದವಾಚಲವಾಸ ಶ್ರೀತುಳಸಿ ವನಮಾಲಿ 

ಸುಪ್ರಭಾತವು ನಿನಗೆ ಗರುಡಾದ್ರಿವಾಸ ವಿಶ್ವವಂದಿತ ಚರಣ ಶ್ರೀಶ್ರೀನಿವಾಸ ಸಹಿಸಲಾಗದು ನಿನ್ನಗಲಿಕೆಯ ದರ್ಶನವ ನೀಡೆಮಗೆ ಸ್ವಸ್ತಿದಕ್ಷಿಣನೆ ಫಲಿಸಲಿಂತೆಲ್ಲರನುಪಮ ನೋಂಪಿ ತುಂಬುತೆಲ್ಲಡೆ ಮಂಗಳದ

ಮುಂಬೆಳಕು


ಭಾವಾರ್ಥ 21

ಇಲ್ಲಿಂದ ಮುಂದೆ ಶರಣಾಗತಿಯನ್ನು ನಾವು ಕಾಣುತ್ತೇವೆ. ಹೇ ಕೃಪಾಸಿಂಧು, ನೀನು ಗೋಕುಲದಲ್ಲಿ ಹುಟ್ಟಿ ಕಾಮಧೇನುಗಳ ಒಡೆಯನೆನಿಸಿ ದುಷ್ಟ ದಾನವರನ್ನೆಲ್ಲ ಕೊಂದು, ನಿನ್ನ ಬಾಲಲೀಲೆಗಳಿಂದ ಲೋಕ ಕಲ್ಯಾಣವನ್ನು ಮಾಡಿದವನು. ಸಕಲರಿಗೂ ಜೀವನಾಧಾರನಾಗಿರುವೆ.

ನೀನು ಯುಗಯುಗಳಲ್ಲಿಯೂ ಧರ್ಮರಕ್ಷಣೆಗಾಗಿ ಅವತಾರ ಮಾಡುತ್ತಾ ಬಂದಿರುವ ಕಮಲನಾಭ ಶ್ರೀಯಃಪತಿ. ಶಶಿಸೂರ್ಯ ಕೋಟಿ ತಾರಾಮಂಡಲಗಳೂ ನಿನ್ನಿಂದಲೇ ಬೆಳಗುತ್ತಿವೆ. ಭುವನ ಬ್ರಹ್ಮಾಂಡವೆಲ್ಲಾ ನಿನಗೆ ಸುಪ್ರಭಾತವನ್ನು ಹಾಡುತ್ತಿದೆ. ಓಂಕಾರ ನಾದಮಯವಾಗಿದೆ ಸೃಷ್ಟಿ. ಇಂತಹ ಶುಭ ಮಾರ್ಗಶಿರ ಮಾಸದಲ್ಲಿ ವ್ರತವನ್ನಾಚರಿಸಿ ನಿನಗೆ ಸುಪ್ರಭಾತವನ್ನು ಆಚರಿಸುತ್ತಿದ್ದೇವೆ. ಕಣ್ತೆರೆದು ನೋಡು, ನಿನ್ನ ಯೋಗನಿದ್ರೆಯ ಆಟ ಸಾಕು. ಭಕ್ತರ ಕರೆಗಾಗಿಯೇ ಕಾದು ಕಣ್ಮುಚ್ಚಿಕೊಂಡು ಕುಳಿತಿರುವ ಭಕ್ತಭವದೀಯನಲ್ಲವೇ ನೀನು? ಕಣ್ತೆರೆದು ನೋಡು. ಬೇಗೆದ್ದು ಬಾ.  ನಿನ್ನನ್ನಗಲಿ ನಮಗೆ ಬದುಕಿಲ್ಲ. ಆದ್ದರಿಂದ ತ್ವರೆಮಾಡಿ ಬಂದು ನಮ್ಮನ್ನು ಕರುಣಿಸು.

ಇದರಿಂದ ನಮ್ಮವ್ರತವೂ ಈಡೇರಿ ಸಮಸ್ತಲೋಕಕ್ಕೂ ಮಂಗಳವಾಗಲಿ.

Art credits: Keshav (©KrishnaforToday)


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ