ಕೆ.ಟಿ. ಶಿವಪ್ರಸಾದ್
ಕೆ.ಟಿ. ಶಿವಪ್ರಸಾದ್ ನಿಧನ
ಹೆಸರಾಂತ ಕಲಾವಿದ ಕೆ.ಟಿ. ಶಿವಪ್ರಸಾದ್ ನಿಧನರಾಗಿದ್ದಾರೆ.
ಕೆ.ಟಿ. ಶಿವಪ್ರಸಾದ್ ಅವರು ನಾಡಿನ ಹೆಸರಾಂತ ಚಿತ್ರಕಲಾವಿದರಾಗಿ, ಶಿಲ್ಪ ಕಲಾವಿದರಾಗಿ, ಛಾಯಾಗ್ರಾಹಕಗಾಗಿ, ಸಾಮಾಜಿಕ ಬದ್ಧತೆಯ ಚಿಂತಕರಾಗಿ ಮತ್ತು ಹೋರಾಟಗಾರರಾಗಿ ಹೆಸರಾಗಿದ್ದವರು. ತಮಗೆ ಸಂದ ದೊಡ್ಡ ಪ್ರಶಸ್ತಿಯಾದ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿಯನ್ನೂ, ಅದರ ಹಣವನ್ನೂ ಸರ್ಕಾರಕ್ಕೆ ಹಿಂದೆ ಮುಂದೆ ನೋಡದೆ ಹಿಂದಿರುಗಿಸಿದವರು.
ಹಾಸನದ ಮೂಲದವರಾದ ಶಿವಪ್ರಸಾದ್ ಕಾರ್ಲೆ ಅವರು 1947ರ ಆಗಸ್ಟ್ 5ರಂದು ಜನಿಸಿದರು. ತಮ್ಮ ತಂದೆ ರಾಜಕೀಯ ಮತ್ತು ಉದ್ಯಮದಲ್ಲಿ ಹೆಸರಾಗಿದ್ದರೂ, ತಾವು ಸಾಮಾನ್ಯತೆಯ ಬಾಳನ್ನು ಹಿಡಿದವರು. ಮುಂಬೈ ವಿಶ್ವವಿದ್ಯಾಲಯದಲ್ಲಿ ಓದಿದರು.
ಕಲಾವಿದರಾಗಿ ಪ್ರಯೋಗಶೀಲರಾಗಿ ಹೆಸರಾದ ಶಿವಪ್ರಸಾದ್ ಅವರ ಕಲಾಕೃತಿಗಳು, ಅನೇಕ ಪ್ರದರ್ಶನಗಳು, ಚಿತ್ರ ಗ್ಯಾಲರಿಗಳು ಮತ್ತು ಕಲಾರಸಿಕರ ಸಂಗ್ರಹಗಳಲ್ಲಿ ಕಂಗೊಳಿಸಿವೆ.
ಅವರು ರೈತ ಸಂಘ ಮತ್ತು ದಲಿತ ಸಂಘರ್ಷ ಸಮಿತಿಯೊಂದಿಗೆ ಸಕ್ರಿಯರಾದವರು. ಅವರು ವಾಸ್ತುಶಿಲ್ಪಿ ಮತ್ತು ಛಾಯಾಗ್ರಾಹಕರಾಗಿಯೂ ಕ್ರಿಯಾಶೀಲರಾಗಿದ್ದರು.
ಶಿವಪ್ರಸಾದ್ ಅವರ ಕಲಾಕೃತಿಗಳಿಗಾಗಿ ಅನೇಕ ಪ್ರಶಸ್ತಿಗಳು ಸಂದಿದ್ದವು. ಸೈದ್ಧಾಂತಿಕ ನೆಲೆಯಲ್ಲಿ ಹಲವು ಗೌರವಗಳನ್ನು ಹಿಂದಿರುಗಿಸಿದ್ದರು.
ಹಿರಿಯ ಸಮಾಜಮುಖಿ ಕಲಾವಿದರಾದ ಶಿವಪ್ರಸಾದ್ ಅವರು 2026ರ ಜೂನ್ 30ರಂದು ನಿಧನರಾದರು. ಅಗಲಿದ ಕಲಾಚೇತನಕ್ಕೆ ನಮನ.
Respects to departed soul our Great Artiste Shivaprasadkarle Karle🌷🙏🌷

ಕಾಮೆಂಟ್ಗಳು