ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಯರು ಬಂದರು ಮಾವನ ಮನೆಗೆ

ರಾಯರು ಬಂದರು ಮಾವನ ಮನೆಗೆ
ರಾತ್ರಿಯಾಗಿತ್ತು
;
ಹುಣ್ಣಿಮೆ ಹರಸಿದ ಬಾನಿನ ನಡುವೆ
ಚಂದಿರ ಬಂದಿತ್ತು
- ತುಂಬಿದ
ಚಂದಿರ ಬಂದಿತ್ತು
.

ಮಾವನ ಮನೆಯಲಿ ಮಲ್ಲಿಗೆ ಹೂಗಳ
ಪರಿಮಳ ತುಂಬಿತ್ತು
.
ಬಾಗಿಲ ಬಳಿ ಕಾಲಿಗೆ ಬಿಸಿ ನೀರಿನ
ತಂಬಿಗೆ ಬಂದಿತ್ತು
- ಒಳಗಡೆ
ದೀಪದ ಬೆಳಕಿತ್ತು
.

ಘಮಘಮಿಸಿವ ಮೃಷ್ಟಾನ್ನದ ಭೋಜನ
ರಾಯರ ಕಾದಿತ್ತು
.
ಬೆಳ್ಳಿಯ ಬಟ್ಟಲ ಗಸಗಸೆ ಪಾಯಸ
ರಾಯರ ಕರೆದಿತ್ತು
- ಭೂಮಿಗೆ
ಸ್ವರ್ಗವೇ ಇಳಿದಿತ್ತು
.

ಚಪ್ಪರಗಾಲಿನ ಮಂಚದ ಮೇಗಡೆ
ಮೆತ್ತನೆ ಹಾಸಿತ್ತು
.
ಅಪ್ಪಟ ರೇಶಿಮೆ ದಿಂಬಿನ ಅಂಚಿಗೆ
ಚಿತ್ರದ ಹೂವಿತ್ತು
- ಪದುಮಳು
ಹಾಕಿದ ಹೂವಿತ್ತು
.

ಚಿಗುರೆಲೆ ಬಣ್ಣದ ಅಡಿಕೆಯ ತಂದಳು
ನಾದಿನಿ ನಗುನಗುತ
;
ಬಿಸಿ ಬಿಸಿ ಹಾಲಿನ ಬಟ್ಟಲು ತಂದರು
ಅಕ್ಕರೆಯಲಿ ಮಾವ
,  ಮಡದಿಯ
ಸದ್ದೇ ಇರಲಿಲ್ಲ
.

ಮಡದಿಯ ತಂಗಿಯ ಕರೆದಿಂತೆಂದರು:
ಅಕ್ಕನ ಕರೆಯಮ್ಮ’.

ಮೆಲುದನಿಯಲಿ ನಾದಿನಿ ಇಂತೆಂದಳು:
‘ಪದುಮಳು ಒಳಗಿಲ್ಲ’  ನಕ್ಕಳು.
ರಾಯರು ನಗಲಿಲ್ಲ.

ಏರುತ ಇಳಿಯುತ ಬಂದರು ರಾಯರು
ದೂರದ ಊರಿಂದ.

ಕಣ್ಣನು ಕಡಿದರು ನಿದ್ದೆಯು ಬಾರದು
ಪದುಮಳು ಒಳಗಿಲ್ಲ,  ಪದುಮಳ
ಬಳೆಗಳ ದನಿಯಿಲ್ಲ.

ಬೆಳಗಾಯಿತು; ‘ಸರಿ, ಹೊರಡುವೆ’ನೆಂದರು
ರಾಯರು ಮುನಿಸಿನಲಿ.

ಒಳಮನೆಯಲಿ ‘ನೀರಾಯಿತು!’ ಎಂದಳು
ನಾದಿನಿ ರಾಗದಲಿ.  ‘ಯಾರಿಗೆ?’
ಎನ್ನಲು ಹರುಷದಲಿ,

ಪದುಮಳು ಬಂದಳು ಹೂವನು ಮುಡಿಯುತ
ರಾಯರ ಕೋಣೆಯಲಿ.

ಸಾಹಿತ್ಯ: ಕೆ. ಎಸ್. ನರಸಿಂಹಸ್ವಾಮಿ
ಸಂಗೀತ: ಸಿ. ಅಶ್ವಥ್
ಗಾಯನ: ರತ್ನಮಾಲ ಪ್ರಕಾಶ್




Tag: Rayaru bandaru maavana manege

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ