ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಮ್ಮೂರೆ ಚಂದ ನಮ್ಮವರೆ ಅಂದ




ದೇಶ ದೇಶವ ತಿರುಗಿ
ಪರದೇಶಿಯಾಗಿ ಪರಿತಪಿಸಿದೆನೊ
ಪುರಂದರ ವಿಠಲ
ಭಾಷೆ ಸಾವಿರ ಕಲಿತು
ಮೂತಿ ಹೊಡೆದರೋ
ಕಾದು ಕಾಣದೆ ಹೋದೆ
ಕೂಡಲ ಸಂಗಮ ದೇವ
ಲೇಸಾದ ನಡೆ ನುಡಿಯ
ಜನರ ಕಾಣದೆ
ಬಲು ಹೇಸಿ ಹಿಂತುರಿಗಿದೆನೊ
ಹರ ಹರ ಶ್ರೀ ಚೆನ್ನ ಸೋಮೇಶ್ವರ
ದೇಶಾದ ಊರೆ ನಮ್ಮೂರು
ಇದಕೆಲ್ಲು ಸಾಟಿ ಕಾಣೇ...
ನೀನೊಲಿದು ಕಾಪಾಡು ಶ್ರೀ ಗೋಮಟೇಶ್ವರ

ನಮ್ಮೂರೆ ಚಂದ
ನಮ್ಮವರೆ ಅಂದ
ಕನ್ನಡ ಭಾಷೆ ಕರ್ಣಾನಂದ
ಉನ್ನತ ಕೀರ್ತಿಗೆ ತೌರೂರಾದ
ಕನ್ನಡ ನಾಡಿನ ಇತಿಹಾಸ ಚಂದ
ಕನ್ನಡ ನಾಡಿನ ಇತಿಹಾಸ ಚಂದ
ನಮ್ಮೂರೆ ಚಂದ
ನಮ್ಮವರೆ ಅಂದ
ಕನ್ನಡ ಭಾಷೆ ಕರ್ಣಾನಂದ

ಮೈಸೂರು ರಾಯ್ಚೂರು
ಬೆಂಗ್ಳೂರು ಮಂಗ್ಳೂರು
ಧಾರ್ವಾರ ಕಾರ್ವಾರ ಬಳ್ಳಾರಿ ಬೇಲೂರು
ಬಿಜಾಪುರ ಕಲ್ಬುರ್ಗಿ ಸಿದ್ಧಾಪುರವೂ
ಬಿಜ್ಜಳ ಹೊಯ್ಸಳ ಒಡೆಯರ ರಾಜ್ಯವು
ಎಲ್ಲಾ ಕನ್ನಡ ತಾಯಿಯ ಕುಲವು
ಎಲ್ಲೆಲ್ಲೂ ಹಾರಲು ಕೀರ್ತಿಯ ಗೆಲುವು
ನಮ್ಮೂರೆ ಚಂದ
ನಮ್ಮವರೆ ಅಂದ
ಕನ್ನಡ ಭಾಷೆ ಕರ್ಣಾನಂದ

ಶಂಕರ ಮಾಧವ ರಾಮಾನುಜರು
ಬಸವಣ್ಣ ಮತ್ತೆ ತೀರ್ಥಂಕರರು
ಜಕಣಾಚಾರಿ ದುರ್ಗದ ಓಬ್ಬವ
ಸಂಚಿಕೆ ಹೊನ್ನಮ್ಮ
ಕಿತ್ತೂರು ಚೆನ್ನಮ್ಮ
ಪಂಪ ರನ್ನ ಮೊದಲಾದವರೆಲ್ಲ
ಮೆರೆದಂತ ನಾಡಿದು ಸಾಮಾನ್ಯವಲ್ಲ
ನಮ್ಮೂರೆ ಚಂದ
ನಮ್ಮವರೆ ಅಂದ
ಕನ್ನಡ ಭಾಷೆ ಕರ್ಣಾನಂದ

ಕನ್ನಡ ಸಾಹಿತ್ಯ ಸಂಗೀತ ಚಂದ
ಕನ್ನಡ ಹೆಣ್ಣಿನ ನಡೆ ನುಡಿ ಚಂದ
ಕನ್ನಡ ಎಂಬುವ ಮಾತೇ ಚಂದ
ಕನ್ನಡಿಗರ ಕಲೆಯೆ ಪರಮಾನಂದ
ಚಂದ ಚಂದ ಎಲ್ಲವು ಚಂದ
ನೀ ಕೇಳು ಮುದ್ದಿನ ಕನ್ನಡ ಕಂದ
ನಮ್ಮೂರೆ ಚಂದ
ನಮ್ಮವರೆ ಅಂದ
ಕನ್ನಡ ಭಾಷೆ ಕರ್ಣಾನಂದ
ಉನ್ನತ ಕೀರ್ತಿಗೆ ತೌರೂರಾದ
ಕನ್ನಡ ನಾಡಿನ ಇತಿಹಾಸ ಚಂದ

ಚಿತ್ರ: ಮುತ್ತೈದೆಭಾಗ್ಯ
ಸಾಹಿತ್ಯ: ಗೌತಮ
ಸಂಗೀತ: ರಾಜನ್ ನಾಗೇಂದ್ರ
ಗಾಯಕ: ನಾಗೇಂದ್ರ




Tag: Nammoore chanda, nammavare anda, kannada bhaashe karnaananda

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ