ಅನನ್ಯಾ ಕಾಸರವಳ್ಳಿ ಚಿತ್ರಕ್ಕೆ ಪ್ರಶಸ್ತಿ
ಅನನ್ಯಾ
ಕಾಸರವಳ್ಳಿ ಚಿತ್ರಕ್ಕೆ ಪ್ರಶಸ್ತಿ
ಅನನ್ಯಾ ಕಾಸರವಳ್ಳಿ ನಿರ್ದೇಶನದ
‘ಕಪ್ಪು ಕಲ್ಲಿನ ಸೈತಾನ’ ಕಿರುಚಿತ್ರವು ಪುಣೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಕಿರುಚಿತ್ರ
ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿದೆ.
ಈ ಚಿತ್ರವು ಬೊಳುವಾರು ಮಹಮದ್
ಕುಂಞ್ ಅವರ ಕಥೆಯನ್ನಾಧರಿಸಿದೆ. ಈ ಚಲನಚಿತ್ರೋತ್ಸವದಲ್ಲಿನ ಕಿರುಚಿತ್ರ ವಿಭಾಗದಲ್ಲಿ ಫ್ರಾನ್ಸ್, ಫಿನ್ಲ್ಯಾಂಡ್, ಬ್ರಿಟನ್, ಸ್ಪೇನ್, ರಷ್ಯಾ
ಮುಂತಾದ ವಿವಿಧ ದೇಶಗಳ ಚಿತ್ರಗಳು ಸ್ಪರ್ಧಾ ಕಣದಲ್ಲಿದ್ದವು.
ಗಿರೀಶ್
ಕಾಸರವಳ್ಳಿ – ದಿವಂಗತ ವೈಶಾಲಿ ಕಾಸರವಳ್ಳಿ ದಂಪತಿಗಳ ಪುತ್ರಿಯಾದ ಅನನ್ಯಾ ಅವರು ಚೆನ್ನೈನ ಎಲ್
ವಿ ಪ್ರಸಾದ್ ಫಿಲಂ ಅಂಡ್ ಟೆಲಿವಿಷನ್ ಅಕಾಡೆಮಿಯಲ್ಲಿ ನಿರ್ದೇಶನವನ್ನು ಅಧ್ಯಯನ ಮಾಡಿದವರಾಗಿದ್ದು
ಇದುವರೆವಿಗೂ ನಾಲ್ಕು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರ ‘ಕಪ್ಪು ಕಲ್ಲಿನ ಸೈತಾನ’ ಕಿರುಚಿತ್ರವು ಇದೀಗ ಈ ಪ್ರಶಸ್ತಿಯನ್ನು ಗಳಿಸಿರುವುದರ ಜೊತೆಗೆ ಮುಂಬರುವ
ಮುಂಬೈ, ಸಿಲಿಗುರಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಿಗೂ ಆಯ್ಕೆಗೊಂಡಿದೆ.
ಅನನ್ಯಾ ಅವರ ಈ
ಅನನ್ಯ ಸಾಧನೆಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸೋಣ.
Tag: Ananya Kasaravalli
ಕಾಮೆಂಟ್ಗಳು