ಸಾಹಿತಿಗಳ ಸ್ಮೃತಿ
ಸಾಹಿತಿಗಳ ಸ್ಮೃತಿ
ಬೆಳಗೆರೆ ಕೃಷ್ಣಶಾಸ್ತ್ರಿಗಳ ಬರಹವನ್ನು ಓದುವುದೆಂದರೆ ಅಕ್ಕರೆಯ ಸಕ್ಕರೆ ಸವಿದಂತೆ.
ಸಾಮಾನ್ಯವಾಗಿ ಯಾವುದೇ ಪುಸ್ತಕವನ್ನೂ ಮಂದಗತಿಯಲ್ಲಿ ಓದುವನಾದ ನಾನು ಈ ಪುಸ್ತಕವನ್ನು ಅದು ಹೇಗೆ ಇಂದು ಕೆಲವೇ ಗಂಟೆಗಳಲ್ಲಿ ಅಷ್ಟು ಶೀಘ್ರವಾಗಿ ಓದಿ ಮುಗಿಸಿದೆ ಎಂದು ಅಚ್ಚರಿ ಆಗುತ್ತಿದೆ. ಬೆಳಗೆರೆ ಕೃಷ್ಣಶಾಸ್ತ್ರಿಗಳು ಇಲ್ಲಿ ಸ್ಮರಿಸಿರುವ ಮಹಾನ್ ಸಾಹಿತ್ಯ ಚೇತನಗಳಾದ ಮಾಸ್ತಿ, ಡಿವಿಜಿ, ವಿ.ಸೀ, ರಾಜರತ್ನಂ, ಬೇಂದ್ರೆ ಮತ್ತು ದೇವುಡು ಅವರುಗಳ ಮಹಿಮೆ ಹಾಗೂ ಕೃಷ್ಣಶಾಸ್ತ್ರಿಗಳು ಅದನ್ನ ಸ್ಮರಿಸಿರುವ ರೀತಿ ಅಂತದ್ದು.🙏
ಕಾಮೆಂಟ್ಗಳು