ಎಚ್. ಎಸ್. ಶಿವಪ್ರಕಾಶ್
ಎಚ್. ಎಸ್. ಶಿವಪ್ರಕಾಶ್
ಎಚ್. ಎಸ್. ಶಿವಪ್ರಕಾಶರು ನಾಟಕಕಾರರಾಗಿ ಮತ್ತು ಕವಿಯಾಗಿ ಹೆಸರಾದವರು.
ಎಚ್.ಎಸ್.ಶಿವಪ್ರಕಾಶ್ ಅವರು 1954ರ ಜೂನ್ 15ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಪ್ರಸಿದ್ಧ ಸಾಹಿತಿಗಳು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಶಿವಮೂರ್ತಿ ಶಾಸ್ತ್ರಿಗಳು. ಬೆಂಗಳೂರು ವಿಶ್ವವಿದ್ಯಾಲಯದಿಂದ ಶಿವಪ್ರಕಾಶರು ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದರಲ್ಲದೆ, ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ ಗಳಿಸಿದರು.
ಎಚ್.ಎಸ್.ಶಿವಪ್ರಕಾಶ್ ಎರಡು ದಶಕಗಳಿಗೂ ಹೆಚ್ಚು ಕಾಲ ಕರ್ನಾಟಕದ ವಿವಿಧ ಕಾಲೇಜುಗಳಲ್ಲಿ ಬೋಧಿಸಿದರು. ನೆಹರೂ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದರು. ಕೇಂದ್ರ ಸಾಹಿತ್ಯ ಅಕಾಡಮಿಯ ದ್ವಿಭಾಷಾ ಪತ್ರಿಕೆಯಾದ 'ಇಂಡಿಯನ್ ಲಾಂಗ್ವೇಜಸ್' ದ್ವೈಮಾಸಿಕದ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. ಅಯೋವಾ ವಿಶ್ವವಿದ್ಯಾಲಯದ ಫೆಲೋಶಿಪ್ ದೊರಕಿತು. ಜರ್ಮನಿಯ ಬರ್ಲಿನ್ ನಗರದಲ್ಲಿರುವ ರವೀಂದ್ರನಾಥ ಠಾಕೂರ್ ಅಧ್ಯಯನ ಕೇಂದ್ರದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದರು.
ಪ್ರೊ. ಎಲ್. ಎಸ್. ಶೇಷಗಿರಿರಾಯರು "ಮೌಲ್ಯಗಳು ಮಾಯವಾಗುತ್ತಿರುವ ಯಾಂತ್ರಿಕ ಬದುಕಿನ ಇಂದಿನ ದಿನಗಳಲ್ಲಿ ಶಿವಪ್ರಕಾಶರು ಧಾರ್ಮಿಕ ಪರಂಪರೆಯಲ್ಲಿ ಶಕ್ತಿಯನ್ನು ಕಂಡುಕೊಳ್ಳುವ ಅತ್ಯಂತ ಕುತೂಹಲಕಾರಿಯಾದ ಪ್ರಯತ್ನಗಳನ್ನು ಕಾವ್ಯದಲ್ಲಿ ಮಾಡಿದ್ದಾರೆ" ಎಂದು ಗುರುತಿಸುತ್ತಾರೆ. ಶಿವಪ್ರಕಾಶರ ಮೊದಲ ಕವನ ಸಂಕಲನ 'ಮಿಲರೇಪ'. ಶಿವಪ್ರಕಾಶರು ತಮ್ಮ ಹುಡುಕಾಟವನ್ನು 'ಪವಿತ್ರತೆಯ ಹುಡುಕಾಟ' ಎನ್ನುತ್ತಾರೆ. ವಚನ ಸಾಹಿತ್ಯ, ಭಕ್ತಿ ಚಳವಳಿ, ಸೂಫಿ ಸಾಹಿತ್ಯ ಮೊದಲಾಗಿ ಅನುಭಾವ ಸಾಹಿತ್ಯದಲ್ಲಿ ವ್ಯಾಪಕವಾದ ಅಧ್ಯಯನ ನಡೆಸಿದವರು ಶಿವಪ್ರಕಾಶ್. ಶಿವಪ್ರಕಾಶರ 'ಸಿಂಗಿರಾಜ ಸಂಪಾದನೆ', 'ಸಾಮಗಾರ ಭೀಮವ್ವ', 'ವಾಸವದತ್ತೆ' ಕನ್ನಡ ವಿಮರ್ಶೆಯ ಗಮನ ಸೆಳೆದಿರುವ ಪ್ರಮುಖ ಕಥನ ಕವನಗಳು. ಮಳೆ ಬಿದ್ದ ನೆಲದಲ್ಲಿ, ಅಣುಕ್ಷಣ ಚರಿತೆ, ಮತ್ತೆ ಮತ್ತೆ, ಸೂರ್ಯಜಲ, ಮಳೆಯೇ ಮಂಟಪ ಅವರ ಇತರ ಕವನ ಸಂಕಲನಗಳು.
‘ಐ ಕೀಪ್ ವಿಜಿಲ್ ಆಫ್ ರುದ್ರ' ಹಾಗೂ 'ಆತ್ಮನ್ ವೇಸ್' ಶಿವಪ್ರಕಾಶರ ಇಂಗ್ಲಿಷ್ ಕವನ ಸಂಕಲನಗಳು. 'ಇನ್ಕ್ರೆಡಿಬಲ್ ಇಂಡಿಯನ್ ಟ್ರೆಡಿಷನಲ್ ಥಿಯೇಟರ್' ಭಾರತೀಯ ರಂಗಭೂಮಿಯನ್ನು ಕುರಿತ ಕೃತಿ. 'ಎವೆರಿ ಡೇ ಯೋಗಿ' ಮತ್ತೊಂದು ಆಂಗ್ಲ ಕೃತಿ. ಶಿವಪ್ರಕಾಶ್ ಕನ್ನಡದ ಮಹತ್ವದ ಕವಿಗಳನ್ನು ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ. ಅಂತೆಯೇ ಯೂರೋಪ್, ದಕ್ಷಿಣ ಅಮೆರಿಕ, ಆಫ್ರಿಕಾ ದೇಶಗಳ ಹಲವಾರು ಸಾಹಿತ್ಯ ಕೃತಿಗಳನ್ನು ಕನ್ನಡಕ್ಕೆತಂದಿದ್ದಾರೆ. ಶಿವಪ್ರಕಾಶರ ಕಾವ್ಯ ಇಂಗ್ಲಿಷ್, ಪ್ರೆಂಚ್, ಜರ್ಮನ್, ಸ್ಪಾನಿಶ್, ಪೋಲಿಶ್, ಇಟಾಲಿಯನ್ ಭಾಷೆಗಳಿಗೆ ಅನುವಾದಗೊಂಡಿವೆ. ಭಾರತದ ಇತರ ಭಾಷೆಗಳಿಗೂ ತರ್ಜುಮೆಗೊಂಡಿವೆ.
ಶಿವಪ್ರಸಾದ್ 15ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದಾರೆ. 'ಮಹಾಚೈತ್ರ' ಜನಪ್ರಿಯತೆಯ ಜೊತೆಗೆ ಕನ್ನಡದ ಅತ್ಯುತ್ತಮ ನಾಟಕಗಳಲ್ಲಿ ಒಂದು ಎಂದು ವಿದ್ವಾಂಸರಿಂದ ಪರಿಗಣಿತಗೊಂಡಿದೆ. ಹನ್ನೆರಡನೆ ಶತಮಾನದ ಶರಣ ಚಳವಳಿಯ ಸಂದರ್ಭದಲ್ಲಿ ಕೆಳಜಾತಿಗಳು ತಮ್ಮ ಅಸ್ತಿತ್ವಕ್ಕಾಗಿ ನಡೆಸಿದ ಹೋರಾಟವನ್ನು ಚಿತ್ರಿಸುವ 'ಮಹಾಚೈತ್ರ' ಸಿ.ಜಿ. ಕೃಷ್ಣಸ್ವಾಮಿಯವರ ನಿರ್ದೇಶನದಲ್ಲಿ ರಂಗದಮೇಲೆ ಮೂಡಿಬಂದು ಜನಪ್ರಿಯಗೊಂಡಿದೆ.
'ಸುಲ್ತಾನ್ ಟಿಪ್ಪೂ' ಶಿವಪ್ರಕಾಶ್ ಅವರ ಇನ್ನೊಂದು ಮಹತ್ವದ ನಾಟಕ. ಶೇಕ್ಸ್ಪಿಯರನ ಸ್ವಪ್ನ ನೌಕೆ, ಸತಿ, ಕಸಾಂದ್ರಾ, ಮದುವೆಯ ಹೆಣ್ಣು, ಮಾಳವಿಕಾ ಮತ್ತು ನಟ್ಟಿರುಳಾಟ-ಇನ್ನೊಂದು ಮ್ಯಾಕ್ಬೆತ್, ಜಾನಪದ ಸತ್ವದ 'ಮಂಟೇಸ್ವಾಮಿ ಕಥಾ ಪ್ರಸಂಗ, ಮಾದಾರಿ ಮಾದಯ್ಯ ಮುಂತಾದವು ಶಿವಪ್ರಕಾಶರ ಇತರ ಪ್ರಮುಖ ನಾಟಕಗಳು. ಕಿಂಗ್ ಲಿಯರ್ ಅನುವಾದ.
'ಕವಿತೆಗಳು 1984' ಎಚ್.ಎಸ್. ಶಿವಪ್ರಕಾಶರ ಸಂಪಾದನೆ.
ಎಚ್. ಎಸ್. ಶಿವಪ್ರಕಾಶರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಗೌರವ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ, ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ ನಾಲ್ಕು ಕೃತಿಗಳಿಗೆ ಬಹುಮಾನ, ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಪ್ರಶಸ್ತಿ, ಪುಣೆಯ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಕುಸುಮಾಗ್ರಜ ರಾಷ್ಟ್ರೀಯ ಪುರಸ್ಕಾರ ಮುಂತಾದ ಅನೇಕ ಗೌರವಗಳು ಸಂದಿವೆ.
ಎಚ್. ಎಸ್. ಶಿವಪ್ರಕಾಶ್
Our great playwright and poet Dr. H. S. Shivaprakash
ಎಚ್. ಎಸ್. ಶಿವಪ್ರಕಾಶರು ನಾಟಕಕಾರರಾಗಿ ಮತ್ತು ಕವಿಯಾಗಿ ಹೆಸರಾದವರು.
ಎಚ್.ಎಸ್.ಶಿವಪ್ರಕಾಶ್ ಅವರು 1954ರ ಜೂನ್ 15ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಪ್ರಸಿದ್ಧ ಸಾಹಿತಿಗಳು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಶಿವಮೂರ್ತಿ ಶಾಸ್ತ್ರಿಗಳು. ಬೆಂಗಳೂರು ವಿಶ್ವವಿದ್ಯಾಲಯದಿಂದ ಶಿವಪ್ರಕಾಶರು ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದರಲ್ಲದೆ, ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ ಗಳಿಸಿದರು.
ಎಚ್.ಎಸ್.ಶಿವಪ್ರಕಾಶ್ ಎರಡು ದಶಕಗಳಿಗೂ ಹೆಚ್ಚು ಕಾಲ ಕರ್ನಾಟಕದ ವಿವಿಧ ಕಾಲೇಜುಗಳಲ್ಲಿ ಬೋಧಿಸಿದರು. ನೆಹರೂ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದರು. ಕೇಂದ್ರ ಸಾಹಿತ್ಯ ಅಕಾಡಮಿಯ ದ್ವಿಭಾಷಾ ಪತ್ರಿಕೆಯಾದ 'ಇಂಡಿಯನ್ ಲಾಂಗ್ವೇಜಸ್' ದ್ವೈಮಾಸಿಕದ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. ಅಯೋವಾ ವಿಶ್ವವಿದ್ಯಾಲಯದ ಫೆಲೋಶಿಪ್ ದೊರಕಿತು. ಜರ್ಮನಿಯ ಬರ್ಲಿನ್ ನಗರದಲ್ಲಿರುವ ರವೀಂದ್ರನಾಥ ಠಾಕೂರ್ ಅಧ್ಯಯನ ಕೇಂದ್ರದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದರು.
ಪ್ರೊ. ಎಲ್. ಎಸ್. ಶೇಷಗಿರಿರಾಯರು "ಮೌಲ್ಯಗಳು ಮಾಯವಾಗುತ್ತಿರುವ ಯಾಂತ್ರಿಕ ಬದುಕಿನ ಇಂದಿನ ದಿನಗಳಲ್ಲಿ ಶಿವಪ್ರಕಾಶರು ಧಾರ್ಮಿಕ ಪರಂಪರೆಯಲ್ಲಿ ಶಕ್ತಿಯನ್ನು ಕಂಡುಕೊಳ್ಳುವ ಅತ್ಯಂತ ಕುತೂಹಲಕಾರಿಯಾದ ಪ್ರಯತ್ನಗಳನ್ನು ಕಾವ್ಯದಲ್ಲಿ ಮಾಡಿದ್ದಾರೆ" ಎಂದು ಗುರುತಿಸುತ್ತಾರೆ. ಶಿವಪ್ರಕಾಶರ ಮೊದಲ ಕವನ ಸಂಕಲನ 'ಮಿಲರೇಪ'. ಶಿವಪ್ರಕಾಶರು ತಮ್ಮ ಹುಡುಕಾಟವನ್ನು 'ಪವಿತ್ರತೆಯ ಹುಡುಕಾಟ' ಎನ್ನುತ್ತಾರೆ. ವಚನ ಸಾಹಿತ್ಯ, ಭಕ್ತಿ ಚಳವಳಿ, ಸೂಫಿ ಸಾಹಿತ್ಯ ಮೊದಲಾಗಿ ಅನುಭಾವ ಸಾಹಿತ್ಯದಲ್ಲಿ ವ್ಯಾಪಕವಾದ ಅಧ್ಯಯನ ನಡೆಸಿದವರು ಶಿವಪ್ರಕಾಶ್. ಶಿವಪ್ರಕಾಶರ 'ಸಿಂಗಿರಾಜ ಸಂಪಾದನೆ', 'ಸಾಮಗಾರ ಭೀಮವ್ವ', 'ವಾಸವದತ್ತೆ' ಕನ್ನಡ ವಿಮರ್ಶೆಯ ಗಮನ ಸೆಳೆದಿರುವ ಪ್ರಮುಖ ಕಥನ ಕವನಗಳು. ಮಳೆ ಬಿದ್ದ ನೆಲದಲ್ಲಿ, ಅಣುಕ್ಷಣ ಚರಿತೆ, ಮತ್ತೆ ಮತ್ತೆ, ಸೂರ್ಯಜಲ, ಮಳೆಯೇ ಮಂಟಪ ಅವರ ಇತರ ಕವನ ಸಂಕಲನಗಳು.
‘ಐ ಕೀಪ್ ವಿಜಿಲ್ ಆಫ್ ರುದ್ರ' ಹಾಗೂ 'ಆತ್ಮನ್ ವೇಸ್' ಶಿವಪ್ರಕಾಶರ ಇಂಗ್ಲಿಷ್ ಕವನ ಸಂಕಲನಗಳು. 'ಇನ್ಕ್ರೆಡಿಬಲ್ ಇಂಡಿಯನ್ ಟ್ರೆಡಿಷನಲ್ ಥಿಯೇಟರ್' ಭಾರತೀಯ ರಂಗಭೂಮಿಯನ್ನು ಕುರಿತ ಕೃತಿ. 'ಎವೆರಿ ಡೇ ಯೋಗಿ' ಮತ್ತೊಂದು ಆಂಗ್ಲ ಕೃತಿ. ಶಿವಪ್ರಕಾಶ್ ಕನ್ನಡದ ಮಹತ್ವದ ಕವಿಗಳನ್ನು ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ. ಅಂತೆಯೇ ಯೂರೋಪ್, ದಕ್ಷಿಣ ಅಮೆರಿಕ, ಆಫ್ರಿಕಾ ದೇಶಗಳ ಹಲವಾರು ಸಾಹಿತ್ಯ ಕೃತಿಗಳನ್ನು ಕನ್ನಡಕ್ಕೆತಂದಿದ್ದಾರೆ. ಶಿವಪ್ರಕಾಶರ ಕಾವ್ಯ ಇಂಗ್ಲಿಷ್, ಪ್ರೆಂಚ್, ಜರ್ಮನ್, ಸ್ಪಾನಿಶ್, ಪೋಲಿಶ್, ಇಟಾಲಿಯನ್ ಭಾಷೆಗಳಿಗೆ ಅನುವಾದಗೊಂಡಿವೆ. ಭಾರತದ ಇತರ ಭಾಷೆಗಳಿಗೂ ತರ್ಜುಮೆಗೊಂಡಿವೆ.
ಶಿವಪ್ರಸಾದ್ 15ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದಾರೆ. 'ಮಹಾಚೈತ್ರ' ಜನಪ್ರಿಯತೆಯ ಜೊತೆಗೆ ಕನ್ನಡದ ಅತ್ಯುತ್ತಮ ನಾಟಕಗಳಲ್ಲಿ ಒಂದು ಎಂದು ವಿದ್ವಾಂಸರಿಂದ ಪರಿಗಣಿತಗೊಂಡಿದೆ. ಹನ್ನೆರಡನೆ ಶತಮಾನದ ಶರಣ ಚಳವಳಿಯ ಸಂದರ್ಭದಲ್ಲಿ ಕೆಳಜಾತಿಗಳು ತಮ್ಮ ಅಸ್ತಿತ್ವಕ್ಕಾಗಿ ನಡೆಸಿದ ಹೋರಾಟವನ್ನು ಚಿತ್ರಿಸುವ 'ಮಹಾಚೈತ್ರ' ಸಿ.ಜಿ. ಕೃಷ್ಣಸ್ವಾಮಿಯವರ ನಿರ್ದೇಶನದಲ್ಲಿ ರಂಗದಮೇಲೆ ಮೂಡಿಬಂದು ಜನಪ್ರಿಯಗೊಂಡಿದೆ.
'ಸುಲ್ತಾನ್ ಟಿಪ್ಪೂ' ಶಿವಪ್ರಕಾಶ್ ಅವರ ಇನ್ನೊಂದು ಮಹತ್ವದ ನಾಟಕ. ಶೇಕ್ಸ್ಪಿಯರನ ಸ್ವಪ್ನ ನೌಕೆ, ಸತಿ, ಕಸಾಂದ್ರಾ, ಮದುವೆಯ ಹೆಣ್ಣು, ಮಾಳವಿಕಾ ಮತ್ತು ನಟ್ಟಿರುಳಾಟ-ಇನ್ನೊಂದು ಮ್ಯಾಕ್ಬೆತ್, ಜಾನಪದ ಸತ್ವದ 'ಮಂಟೇಸ್ವಾಮಿ ಕಥಾ ಪ್ರಸಂಗ, ಮಾದಾರಿ ಮಾದಯ್ಯ ಮುಂತಾದವು ಶಿವಪ್ರಕಾಶರ ಇತರ ಪ್ರಮುಖ ನಾಟಕಗಳು. ಕಿಂಗ್ ಲಿಯರ್ ಅನುವಾದ.
'ಕವಿತೆಗಳು 1984' ಎಚ್.ಎಸ್. ಶಿವಪ್ರಕಾಶರ ಸಂಪಾದನೆ.
ಎಚ್. ಎಸ್. ಶಿವಪ್ರಕಾಶರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಗೌರವ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ, ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ ನಾಲ್ಕು ಕೃತಿಗಳಿಗೆ ಬಹುಮಾನ, ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಪ್ರಶಸ್ತಿ, ಪುಣೆಯ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಕುಸುಮಾಗ್ರಜ ರಾಷ್ಟ್ರೀಯ ಪುರಸ್ಕಾರ ಮುಂತಾದ ಅನೇಕ ಗೌರವಗಳು ಸಂದಿವೆ.
Dr. H. S. Shivaprakash
ಕಾಮೆಂಟ್ಗಳು