ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಷ್ಟ್ರಗೀತೆ


 ಭಾರತದ ರಾಷ್ಟ್ರಗೀತೆ 


ಜನಗಣಮನ ಅಧಿನಾಯಕ ಜಯಹೇ ಭಾರತದ ರಾಷ್ಟ್ರಗೀತೆರವೀಂದ್ರನಾಥ ಠಾಕೂರ್ ಅವರು1911ರಲ್ಲಿ ಬಂಗಾಲಿ ಭಾಷೆಯಲ್ಲಿ ರಚಿಸಿದ ದೀರ್ಘಗೀತೆಯ ಐದುಪದ್ಯಗಳಲ್ಲಿ ಮೊದಲ ಪದ್ಯದಸಾಲುಗಳನ್ನು ಮಾತ್ರ ಆಯ್ದಕೊಂಡು  ರಾಷ್ಟ್ರಗೀತೆಯನ್ನು ರೂಪಿಸಲಾಯಿತು


ಸ್ವತಂತ್ರ ಭಾರತದ ಸಂವಿಧಾನ ರಚನಾಸಭೆ 1950 ಜನವರಿ 24ರಂದು ಇದನ್ನು ರಾಷ್ಟ್ರಗೀತೆ ಎಂದುಅಂಗೀಕರಿಸಿತು


ಠಾಕೂರ್ ಸಂಪಾದಕರಾಗಿದ್ದ ತತ್ತ್ವಬೋಧಿನಿ ಪತ್ರಿಕಾ ಎಂಬ ಪತ್ರಿಕೆಯಲ್ಲಿ ಇದು 1912ರಲ್ಲಿಮೊದಲಿಗೆ ಪ್ರಕಟವಾಗಿತ್ತುಪ್ರಕಟಣೆಗೆ ಮೊದಲು  ಗೀತೆಯನ್ನು 27 ಡಿಸೆಂಬರ್ 1911ರಂದುಕಲ್ಕತ್ತದಲ್ಲಿ ನೆರೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಗಿತ್ತುಠಾಕೂರ್ ಅವರುಇದನ್ನು 'ಮಾರ್ನಿಂಗ್ ಸಾಂಗ್ ಆಫ್ ಇಂಡಿಯಾ ಎಂಬ ಹೆಸರಿನಲ್ಲಿ 1919ರಲ್ಲಿ ಇಂಗ್ಲಿಷಿಗೆಅನುವಾದಿಸಿದ್ದರುಇದು ಭಾರತ ಇಬ್ಬಾಗವಾಗುವುದಕ್ಕೆ ಮೊದಲು ಬರೆದ ಗೀತೆಯಾದರೂಇದರಲ್ಲಿ ಬರುವ ರಾಷ್ಟ್ರದ ವಿವಿಧ ಪ್ರದೇಶಗಳ ಹೆಸರುಗಳನ್ನು ಬದಲಾಯಿಸಿಲ್ಲ ಹೆಸರುಗಳುವಿವಿಧ ಭಾರತೀಯ ಜನಾಂಗಗಳನ್ನು ಸೂಚಿಸುತ್ತವೆಹಾಗಾಗಿ  ಗೀತೆಯನ್ನು ರಾಷ್ಟ್ರಗೀತೆಯಾಗಿಅಂಗೀಕರಿಸಿದಾಗ ಮೂಲಗೀತೆಯಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಯಥಾವತ್ತಾಗಿಉಳಿಸಿಕೊಳ್ಳಲಾಯಿತು


ರಾಷ್ಟ್ರಗೀತೆಗೆ ಗೌರವಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯಅಗೌರವಸೂಚಿಸುವುದುಅದರ ಹಾಡುವಿಕೆಗೆ ಅಡ್ಡಿಪಡಿಸುವುದು ಶಾಸನದ ಪ್ರಕಾರ ಶಿಕ್ಷಾರ್ಹ ಅಪರಾಧವೈವಿಧ್ಯದಲ್ಲಿ ಏಕತೆ ಭಾರತೀಯ ಸಂಸ್ಕ್ರತಿಯ ವೈಶಿಷ್ಟ್ಯ ಎಂಬುದಕ್ಕೆ  ಗೀತೆ ಸಂಕೇತವಾಗಿದೆಗೀತೆಯನ್ನು ಹಾಡಲು ಬೇಕಾಗುವ ಕಾಲಾವಧಿ ಸುಮಾರು 52 ಸೆಕೆಂಡುಗಳು


ರಾಷ್ಟ್ರಗೀತೆಯ ಪೂರ್ಣಪಾಠ ಹೀಗಿದೆ:


ಜನಗಣಮನ ಅಧಿನಾಯಕ ಜಯ ಹೇ

ಭಾರತ ಭಾಗ್ಯವಿಧಾತಾ

ಪಂಜಾಬ ಸಿಂಧು ಗುಜರಾತ ಮರಾಠಾ

ದ್ರಾವಿಡ ಉತ್ಕಲವಂಗ

ವಿಂಧ್ಯ ಹಿಮಾಚಲ ಯಮುನಾ ಗಂಗಾ

ಉಚ್ಛಲ ಜಲಧಿತರಂಗ

ತವ ಶುಭ ನಾಮೇ ಜಾಗೇ

ತವ ಶುಭ ಆಶಿಸ ಮಾಗೇ

ಗಾಹೇ ತವ ಜಯಗಾಥಾ

ಜನಗಣ ಮಂಗಲದಾಯಕ ಜಯ ಹೇ

ಭಾರತ ಭಾಗ್ಯವಿಧಾತಾ

ಜಯ ಹೇ ಜಯ ಹೇ ಜಯ ಹೇ

ಜಯ ಜಯ ಜಯ ಜಯ ಹೇ


ಸಂವಿಧಾನದಲ್ಲಿ ರಾಷ್ಟ್ರಗೀತೆಯ ಸಮಾನ ಸ್ಧಾನಮಾನ ಪಡೆದಿರುವಬಂಕಿಮಚಂದ್ರಚಟ್ಟೋಪಾಧ್ಯಾಯರು ರಚಿಸಿದ; 'ವಂದೇಮಾತರಂರಾಷ್ಟ್ರಗಾನ ಎನಿಸಿದೆರಾಷ್ಟ್ರೀಯ ಸಭೆಸಮಾರಂಭಗಳಲ್ಲಿ 'ವಂದೇಮಾತರಂಅನ್ನು ಪ್ರಾರ್ಥನಾ ಗೀತೆಯಾಗಿಯೂ 'ಜನಗಣಮನ'ವನ್ನುಮಂಗಳಗೀತೆಯಾಗಿಯೂ ಹಾಡಲಾಗುತ್ತಿದೆ.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ