ಎದೆ ತುಂಬಿ ಹಾಡಿದೆನು
ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು.
ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ
ಹಾಡುಹಕ್ಕಿಗೆ ಬೇಕೆ ಬಿರುದು ಸನ್ಮಾನ ?
ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
ಹಾಡುವುದು ಅನಿವಾರ್ಯ ಕರ್ಮ ನನಗೆ.
ಕೇಳುವವರಿಹರೆಂದು ನಾಬಲ್ಲೆನದರಿಂದ
ಹಾಡುವೆನು ಮೈದುಂಬಿ ಎಂದಿನಂತೆ.
ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ.
ಕವಿತೆ: ತೃಪ್ತಿ
ಸಾಹಿತ್ಯ : ಜಿ.ಎಸ್.ಶಿವರುದ್ರಪ್ಪ
(ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ತಮ್ಮ ಗುರುಗಳೂ ಮತ್ತು ಆಪ್ತರೂ ಆದ ತ.ಸು ಶಾಮರಾಯರ ಮೇಲಣ ಗೌರವದಿಂದ ಈ ಪದ್ಯ ಬರೆದರು ಎಂದು ಕೇಳಿದ ನೆನಪು.)
ಕಾಮೆಂಟ್ಗಳು