ಪ್ರಭಾ ಮಟಮಾರಿ
ಪ್ರಭಾ ಮಟಮಾರಿ ಅವರು ಬರಹಗಾರರಾಗಿ, ಕನ್ನಡ ನಾಡಿನ ಹೊರಗಿನ ಹೈದರಾಬಾದಿನಲ್ಲಿಸಕ್ರಿಯ ಕನ್ನಡ ರಾಯಭಾರಿಯಾಗಿ ಮತ್ತು ಬಹುಭಾಷಾ ಸಂಸ್ಕೃತಿಗಳ ಸಕ್ರಿಯ ಸೇತುವೆಯಾಗಿಮಹತ್ವದ ಕಾರ್ಯಾಮಾಡುತ್ತಾ ಬಂದಿದ್ದಾರೆ.
ಪ್ರಭಾ ಅವರು 1943ರ ಫೆಬ್ರವರಿ 6ರಂದು ನವಲಗುಂದದಲ್ಲಿ ಜನಿಸಿದರು. ತಂದೆ ಧಾರವಾಡದಸುಪ್ರಸಿದ್ಧ ವಕೀಲರಾದ ಬಿ.ಜಿ. ವೈದ್ಯರು. ಮನೆಯ ಸುಸಂಪನ್ನ ಮತ್ತು ಸಾಹಿತ್ಯಿಕ ವಾತಾವರಣ
ಅವರ ಬೆಳವಣಿಗೆಯ ಮೇಲೆ ಸಾಕಷ್ಟು ಪ್ರಭಾವ ಬೀರಿತು. ತಂದೆ ಬಿ.ಜಿ.ವೈದ್ಯರು "ಕರ್ನಾಟಕವಿದ್ಯಾವರ್ಧಕ ಸಂಘದಲ್ಲಿ" ಸಕ್ರಿಯರಾಗಿದ್ದರು. ಹೀಗಾಗಿ ಹೆಸರಾಂತ ಸಾಹಿತಿ ಗಳೆಲ್ಲ ಮನೆಗೆಬರುತ್ತಿದ್ದರು. ಬೇಂದ್ರೆ, ಗೋಕಾಕ, ಮುಗಳಿ, ಬೆಟಗೇರಿ
ಕೃಷ್ಣಶರ್ಮಾ ಮುಂತಾದವರೆಲ್ಲ ತಂದೆಯವರ ಅಪ್ತ ಸ್ನೇಹಿತರು. ಸುಪ್ರಸಿದ್ಧ ಕನ್ನಡ ಸಾಹಿತಿಗಳಾದ ಶ್ರೀನಿವಾಸ ವೈದ್ಯರು ಪ್ರಭಾ ಅವರ ಅಣ್ಣ.
ಪ್ರಭಾ ಅವರ ವಿದ್ಯಾಭ್ಯಾಸ ಹಾಗೂ ವಿವಾಹ ಪೂರ್ವದ ಜೀವನವೆಲ್ಲ ಧಾರವಾಡಲ್ಲಿ ನಡೆಯಿತು. 1949ಕ್ಕೆ ಇವರ ಪ್ರಾಥಮಿಕ ಶಿಕ್ಷಣ ಆರಂಭವಾಯಿತು. ರೊದ್ದ ಶ್ರೀನಿವಾಸರಾಯರಮನೆಗಂಟಿದಂತಿದ್ದ ಇವರ ಶಾಲೆಯ ಮೊದಲ ಹೆಸರು "ಕನ್ನಡ ಒಂದನೇ ನಂ ಪ್ರಾಥಮಿಕ ಶಾಲೆ" ಎಂದಾಗಿತ್ತು. ನಂತರದಲ್ಲಿ ಅದರ ಹೆಸರು ಕನ್ನಡ ವೀರಾಗ್ರಣಿ ಪ್ರಾಥಮಿಕ ಶಾಲೆ ಎಂದುಬದಲಾಯಿತು. ಮಾಧ್ಯಮಿಕ ಶಾಲೆ "ಆಂಗ್ಲೋ ಕನ್ನಡ ಗರ್ಲ್ಸ್ ಹೈಸ್ಕೂಲ"
ಎಂದೇ ಇತ್ತು. ಇನ್ನೂ ಅಂಗ್ರೇಜಿಗಳ ಪ್ರಭಾವ ಆ ಪರಿಸರದಲ್ಲೆಲ್ಲ ಎದ್ದು ಕಾಣುತ್ತಿತ್ತು. ಸ್ಕೂಲಿನಎದುರುಗಡೆಯೇ ವಿಶಾಲವಾದ ಕಲೆಕ್ಟರ್ಸ್ ಬಂಗಲೋ, ಸ್ಕೂಲಿನ ಪಕ್ಕಕ್ಕೇ “ಕಾನ್ವೆಂಟ್" ಶಾಲೆಇದ್ದುದರಿಂದ ಆ ಪರಿಸರವೆಲ್ಲಾ ಅಂಗ್ರೇಜಿಗಳದೇ ಆಗಿತ್ತು. ಹೀಗಾಗಿ ಎರಡೂ ದೇಶಗಳ ರೀತಿನೀತಿಗಳನ್ನು ಅಂದಿನ ದಿನಗಳಲ್ಲಿ ಅನುಸರಿಸ ಬೇಕಾಗುತ್ತಿತ್ತು. ಕ್ರಮೇಣ ಭಾರತೀಯ ಪದ್ದತಿಗಳಶಾಲೆ ಕಾಲೇಜುಗಳು ಬಂದವು. ಮುಂದೆ ಪ್ರಭಾ ಅವರು ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿಪಡೆದರು.
ಪ್ರಭಾ ಮಟಮಾರಿ ಅವರ ಅಣ್ಣ ಶ್ರೀನಿವಾಸ ವೈದ್ಯರ ಸಾಹಿತ್ಯಿಕ ಅಭಿರುಚಿ ಬೆಳೆಯಲುಮನೋಹರ ಗ್ರಂಥಮಾಲಾ ಮೂಲವಾಗಿತ್ತು. ಶ್ರೀನಿವಾಸ ವೈದ್ಯರಿಗೆ ಗಿರೀಶ್ ಕಾನಾಡ್, ಕೀರ್ತಿನಾಥ ಕುರ್ತಕೋಟಿ ಅವರೊಡನೆ ಆಪ್ತ ಸ್ನೇಹವಿತ್ತು. ಹೀಗಾಗಿ ಶ್ರೀಮತಿ ಪ್ರಭಾ ಅವರಿಗೆಪುಸ್ತಕ ಓದುವ ಗೀಳು ಜೊತೆಗೂಡಿತು. ಇವರ ತಾಯಿಯ ತಂದೆಯವರು "ಕರ್ನಾಟಕ ಏಕೀಕರಣ" ಚಳವಳಿಕಾರ ಶ್ರೀ ರಾಮರಾವ್ ನರಗುಂದಕರ ಅವರು. ದ.ರಾ.ಬೇಂದ್ರೆ ಅವರ ಸ್ನೇಹಿತರಾದರೆ, ಆಲೂರ ವೆಂಕಟ ರಾಯರು ಅವರ ಗುರುಗಳು. ಪ್ರಭಾ ಅವರ ತಾಯಿಕೂಡ ಓದುವಗೀಳಿದ್ದವರು. ಹೀಗಾಗಿ ಪ್ರಭಾ ಅವರ ಬರಹಗಳು ಹಲವಾರು ಮಾಸಪತ್ರಿಕೆ, ಮತ್ತುವಾರಪತ್ರಿಕೆಗಳಲ್ಲಿ ಮೂಡುತ್ತಿತ್ತು. ಜೊತೆಗೆ ತಾವು ಓದಿದ ಲೇಖನಗಳ ಕುರಿತು ತಮ್ಮದೇ ಆದಅಭಿಪ್ರಾಯ ಬರೆದಿಡುವದೂ ಇವರ ನಿತ್ಯದ ರೂಢಿಯಾಗಿತ್ತು.
ಪ್ರಭಾ ಮಟಮಾರಿ ಅವರ ಮೇಲೆ ಬೀchi ಅವರ ಲೇಖನಗಳ ಪ್ರಭಾವ ವಿಶೇಷವಾಗಿತ್ತು. ತ್ರಿವೇಣಿ, ಎಂ. ಕೆ. ಇಂದಿರಾ ಮತ್ತು ಅನುಪಮಾ ನಿರಂಜನ ಪ್ರಭಾ ಅವರ ಮೆಚ್ಚಿನ ಲೇಖಕಿಯರು.
ಮುಂದೆ ಪ್ರಭಾ ಅವರು ಉಪೇಂದ್ರ ಮಟಮಾರಿಯವರೊಂದಿಗೆ
ವಿವಾಹವಾಗಿ ಹೈದರಾಬಾದಿನಲ್ಲಿ ವಾಸ್ತವ್ಯ ಹೂಡಿದರು. ಪ್ರಭಾ ಅವರ ಪತಿ ಉಪೇಂದ್ರಮಟಮಾರಿ ಅವರು "ಎಮ್. ಉಪೇಂದ್ರ" ಎಂಬ ಹೆಸರಿನಿಂದ ಹಿಂದೀ ಭಾಷೆಯ ಸುಪ್ರಸಿದ್ಧಲೇಖಕರು. ಉಪೇಂದ್ರ ಅವರ ಕುಟುಂಬವೂ ಹೈದ್ರಾಬಾದ್ ಕನ್ನಡಿಗರಲ್ಲಿ ಅಗ್ರಗಣ್ಯವಾಗಿದ್ದು ಈಸಾಹಿತ್ಯಕ ಅಭಿರುಚಿ ಯುಳ್ಳ ಕುಟುಂಬದಿಂದ ಪ್ರಭಾ ಅವರಿಗೆ ಸಾಕಷ್ಟು ಉತ್ತೇಜನ ದೊರಕಿತು.
ಪ್ರಭಾ ಮಟಮಾರಿ ಅವರು ಬರಹಗಳನ್ನು ಸುಧಾ, ಮಯೂರ, ಮಲ್ಲಿಗೆ, ಕಸ್ತೂರಿ ಕರ್ಮವೀರಮುಂತಾದ ನಿಯತಕಾಲಿಕಗಳಿಗೆ ಕಳಿಸುತ್ತಿದ್ದರು. ಆಕಾಶವಾಣಿ ಹೈದ್ರಾಬಾದ್ನಲ್ಲಿ ಸಾಕಷ್ಟುಕಾರ್ಯಕ್ರಮಗಳನ್ನು ಕೊಟ್ಟರು. ರೇಡಿಯೋ ನಾಟಕಗಳು, ವೇದಿಕೆಯ ನಾಟಕಗಳನ್ನೂ ಬರೆದರು. ಕತೆ, ಕವಿತೆ, ಹಾಸ್ಯಲೇಖನ, ಮುಂತಾದವುಗಳು ಪ್ರಕಟಗೊಂಡವು.
ಪ್ರಭಾ ಮಟಮಾರಿ ಅವರು ಹೈದರಾಬಾದಿನ "ಕರ್ನಾಟಕ ಸಾಹಿತ್ಯ ಮಂದಿರ" ಎಂಬ ಪ್ರಸಿದ್ಧಸಂಸ್ಥೆಯಲ್ಲಿ ಅತ್ಯಂತ ಚಟುವಟಿಕೆಯ ಸದಸ್ಯರಾಗಿದ್ದಾರೆ . ಸಾಹಿತ್ಯಮಂದಿರದ ಹವ್ಯಾಸಿ ಯುವಾಸಾಹಿತಿಗಳು ಹೊರಡಿಸಿದ "ಪರಿಚಯ" ಪತ್ರಿಕೆಗೆ ಪ್ರಾರಂಭದಿಂದಲೂ ತಮ್ಮ ಲೇಖನಗಳನ್ನು ಬರೆದು ಜನಪ್ರಿಯತೆ ಗಳಿಸಿದರು. ಇಲ್ಲಿ ನಡೆಯುವ ನಾಡಹಬ್ಬ ನವರಾತ್ರಿಯ ಒಂಬತ್ತೂ ದಿನದಚಟುವಟಿಕೆಗಳಲ್ಲೂ ಸಕ್ರಿಯ ಪಾತ್ರ ನಿರ್ವಹಿಸುತ್ತಾ ಬಂದರು. ಕವಿ ಸಮ್ಮೇಳನ, ಬಹುಭಾಷಾಕವಿಸಮ್ಮೇಳನದಲ್ಲಿ ತಾವು
ಬರೆದ ಕನ್ನಡ ಕವಿತೆಗಳ ಹಿಂದೀ ಭಾಷಾಂತರ ಮಾಡಿ ಓದಿ ಪ್ರೇಕ್ಷಕರನ್ನು ನಗೆಗಡಲಲ್ಲಿಯೂತೇಲಿಸಿದ್ದಾರಲ್ಲದೆ ಭಾವುಕರನ್ನಾಗಿಯೂ ಮಾಡಿದ್ದಾರೆ. ಇವರು ಮೂಡಿಸಿದ ಹಿಂದೀ ಬರಹಗಳು "ದಕ್ಷಿಣ ಸಮಾಚಾರ" "ಪುಷ್ಪಕ", "ಹಿಂದೀ ವಾರ್ತಾ"
" ಮಿಲಾಪ", "ರಾಷ್ಟ್ರೊತ್ಥಾನ" ಮುಂತಾದ ಹಿಂದೀ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. 1997ರಲ್ಲಿ “ದೆಹಲಿ ಕನ್ನಡಿಗ" ಪತ್ರಿಕೆಯ ಮೂಲಕ ಸಾ.ಮ.ಗ.ಅವರ ನೇತೃತ್ವದಲ್ಲಿ ನಡೆದ "ಅಖಿಲ ಭಾರತಕನ್ನಡ ಸಮ್ಮೇಳನದಲ್ಲಿ , ಕಿತ್ತೂರ ಅವರು ಬರೆದ " ಅಜ್ಜಿ" ನಾಟಕದ ನಿರ್ದೇಶನ ಮಾಡಿದರು. ಇದೇ ಸಮಾರಂಭದಲ್ಲಿ ಬಹುಭಾಷಾ ಕವಿಸಮ್ಮೇಲನದಲ್ಲಿ "ಆಂಟಿಕ್ ಪೀಸ್" ಎಂಬ ಶೀರ್ಶಿಕೆಯಹಾಸ್ಯ ಪ್ರಧಾನ ಕವಿತೆಯನ್ನು ಕನ್ನಡ ಹಾಗೂ ಹಿಂದೀ ಎರಡೂ ಭಾಷೆಗಳಲ್ಲಿ ವಾಚಿಸಿ
ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದ್ದರು.
ಈ ಸಂದರ್ಭದಲ್ಲಿ"ಕನ್ನಡ ಪ್ರಚಾರಕಿ" ಎಂದು ಪುಸ್ತಕ ಪ್ರಾಧಿಕಾರದ "ಲಕ್ಕಪ್ಪ" ಅವರಿಂದಪ್ರಶಂಶಾ ಪತ್ರದ ಜೊತೆಗಿನ ಸನ್ಮಾನ ಪಡೆದರು.
2003ರಲ್ಲಿ ಪ್ರಭಾ ಮಾಟಮಾರಿ ಅವರ "ಏಕದಂತ" ಎಂಬ ಹಾಸ್ಯಲೇಖನ, ಕತೆಗಳ
ಮಿಶ್ರ ಸಂಕಲನದ ಪುಸ್ತಕ ಬಿಡುಗಡೆಗೊಂಡಿತು. ಈ ಪುಸ್ತಕ ಪ್ರಕಟಣೆಗೆ ಮಕ್ಕಳಾದ ಕಾರ್ತೀಕಹಾಗೂ ಪಲ್ಲವಿಯರ ಸರ್ವತೋಮುಖ ಸಹಾಯ ಸಂದಿತು.
ಪ್ರಭಾ ಮಟಮಾರಿ ಅವರಿಗೆ
"ರಾಷ್ಟ್ರೋತ್ಥಾನ" ಪತ್ರಿಕೆಯವರಿಂದ ಝಾಂಸೀ ರಾಣಿ ಪ್ರಶಸ್ತಿ, ಉತ್ತಮ ಸಮಾಜ ಸೇವಕಿ ಸನ್ಮಾನಸಂದಿತು. "ದೇಶಬಂಧು" ಪತ್ರಿಕೆಯಲ್ಲಿ ಧರ್ಮೇಂದ್ರ ಪೂಜಾರೀ ಬಗ್ದೂರಿ ಎಂಬ ದಕ್ಷಪತ್ರಕರ್ತರಿಂದ ವಿಶೇಷ ಸಂದರ್ಶನ ನಡೆದು ಅದು ಒಂದು ಪೂರ್ತಿ
ಪುಟವಾಗಿ "ದೇಶ ಬಂಧು" ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು.
ಪ್ರಭಾ ಮಟಮಾರಿ ಅವರು ಹೈದರಾಬಾದಿನ ಸಾಕಷ್ಟು ಕನ್ನಡ ಸಂಸ್ಥೆಗಳಿಗೆ ಆಜೀವ
ಸದಸ್ಯರಾಗಿದ್ದಾರೆ. ಕರ್ನಾಟಕ ಮಹಿಳಾಮಂಡಳಿಯ ದಕ್ಷ ಕಾರ್ಯದರ್ಶಿ ಯಾಗಿ ಸತತ 18 ವರ್ಷಸೇವೆ ಸಲ್ಲಿಸಿದ್ದಾರೆ.
ಸುಸಂಸ್ಕೃತ ಕುಟುಂಬದ ಉತ್ತಮ ಗೃಹಿಣಿಯಾಗಿ, ಜನಪ್ರಿಯ "ಸಮಾಜಸೇವಕಿ" ಯಾಗಿತುಂಬಿದ ಸಂಸಾರದಲ್ಲಿ ಹಿರಿವಯಸ್ಸಿನ ನಿಶ್ಚಿಂತ ಜೀವನ ನಡೆಸುತ್ತಿದ್ದಾರೆ.
ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿರುವ ಆತ್ಮೀಯರೂ, ಸಕ್ರಿಯ ಚಟುವಟಿಕೆಗಳ
ಕ್ರಿಯಾಶೀಲರೂ ಆದ ಪ್ರಭಾ ಮಟಮಾರಿ ಅವರಿಗೆ ಶುಭಹಾರೈಕೆಗಳು.
(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ)
ಪ್ರಭಾ ಮಟಮಾರಿ ಯವರ ಪರಿಚಯಾತ್ಮಕ ಲೇಖನ ಓದಿ ಖುಷಿ ಆಯಿತು. ಅವರು ಮತ್ತು ಉಪೇಂದ್ರ ಮಟಮಾರಿ ಯವರ ಮತ್ತು ನನ್ನ ಸಂಬಂದ ಅನೇಕ ದಶಕಗಳದಿಂದ ಸಾಗಿ ಬಂದಿದೆ.ಉಪೇಂದ್ರ ಅವರ ಅನೇಕ ಕಥೆಗಳನ್ನು ಕನ್ನಡೀಕರಿಸಿದ ಮತ್ತು ಪ್ರಭಾ ಅವರ ಏಕದಂತ ಕೃತಿಗೆ ಮುನ್ನುಡಿ ಬರೆದ ಸಂಗತಿ ಇಲ್ಲಿ ಉಲ್ಲೇಖನೀಯ. ಪ್ರಭಾ ಮಟಮಾರಿ ಮತ್ತು ಸಲ್ಲಾಪ ತಂಡಕ್ಕೆ ಅಭಿನಂದನೆಗಳು.
ಪ್ರತ್ಯುತ್ತರಅಳಿಸಿ