ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಒಬ್ಬ ತಾಯಿಗೆ


 ಒಬ್ಬ ತಾಯಿಗೆ

-ಕುವೆಂಪು


ಜಗದೀಶ್ವರನೆ ವಿಶ್ವಸಂಸಾರಿಯಾಗಿರಲು

ಸಂಸಾರ ಪಾಶವೆಂದೆನಬೇಡವೈ.

ಹುಟ್ಟುಹಾಕಲು ನಿನಗೆ ಬಾರದಿರೆಕೂಡದಿರೆ,

ಬರಿದೆ ನೀಂ ದೋಣಿಯನು ಶಪಿಸಬೇಡೈ!


ಮಾಡುವುದನೆಲ್ಲ ತನ್ನಾತ್ಮಸಾಧನೆಯೆಂದು

ಕರ್ಮಗೈಅದುವೆ ಪೂಜೆಯ ಮರ್ಮವೈ.

ಶಿವನ ಕಾರ್ಯದೊಳಾವು ಶಿರಬಾಗಿ ನೆರವಾಗೆ

ನಮಗದುವೆ ಪರಮಪಾವನ ಧರ್ಮವೈ.


ಹಸುಳೆಯನು ಮೀಯಿಸಲು ಹರನಿಗಭಿಷೇಕವದು;

ಶಿಶುವಿಗೂಡಿಸೆ ಶಿವಗೆ ನೈವೇದ್ಯವೈ!

ಕಂದನಲಿ ಶಿವನ ಕಾಣುವ ಬಂಧನವೆ ಮುಕ್ತಿ;

ತಪಕೊಲ್ಲದದು ತಾಯ್ತನಕೆ ಸಾಧ್ಯವೈ!



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ