ಕಿರಣ್ ಖೇರ್
ಕಿರಣ್ ಖೇರ್
ಕಿರಣ್ ಖೇರ್ ರಂಗಭೂಮಿ, ಕಿರುತೆರೆ ಮತ್ತು ರಂಗಭೂಮಿಗಳಲ್ಲಿ ನಟಿಯಾಗಿ, ಗಾಯಕಿಯಾಗಿ, ನಿರೂಪಕಿಯಾಗಿ ಹೀಗೆ ವೈವಿಧ್ಯಪೂರ್ಣ ಪ್ರತಿಭೆ ಎನಿಸಿರುವವರು.
ಕಿರಣ್ ಖೇರ್ 1952ರ ಜೂನ್ 14ರಂದು ಮುಂಬೈನಲ್ಲಿ ಜನಿಸಿದರು. ಆಕೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ಶಾಲೆಯ ವಿದ್ಯಾಭ್ಯಾಸ ಮತ್ತು ಪಂಜಾಬ್ನ ಚಂಡಿಗಢದಲ್ಲಿ ಕಾಲೇಜು ಓದಿ, ಪಂಜಾಬ್ ವಿಶ್ವವಿದ್ಯಾಲಯದ, ಡಿಪಾರ್ಟ್ಮೆಂಟ್ ಆಫ್ ಥಿಯೇಟರ್ನಲ್ಲಿ ಪದವಿ ಪಡೆದರು. ಶಾಲೆಯಲ್ಲಿ ಈಕೆ ತನ್ನ ಸಹೋದರಿ ಅರ್ಜುನ ಪ್ರಶಸ್ತಿ ವಿಜೇತೆ ಕನ್ವಾಲ್ ತಾಕರ್ ಸಿಂಗ್ ಜೊತೆಗೆ ಹುರುಪಿನ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದರು. ಕಿರಣ್ ಮತ್ತು ಅನುಪಮ್ ಖೇರ್ ರಂಗಭೂಮಿಯಲ್ಲಿ ಜೊತೆಯಾಗಿ ನಟಿಸಿ ಸ್ನೇಹಿತರಾಗಿ ಮುಂದೆ ಸತಿಪತಿಯರಾದರು.
ಕಿರಣ್ ಖೇರ್ 1983ರಲ್ಲಿ ಪಂಜಾಬಿ ಚಲನಚಿತ್ರ 'ಆಸ್ರಾ ಪ್ಯಾರ್ ದಾ'ದಲ್ಲಿ ನಟಿಸಿದರು, ಮಗ ಸಿಕಂದರ್ ಖೇರ್ನನ್ನು ಬೆಳೆಸಲು ಚಲನಚಿತ್ರ ರಂಗದಿಂದ ಹಿಂದಕ್ಕೆ ಸರಿದಿದ್ದರು. ಪತಿ ಅನುಪಮ್ ಖೇರ್ಗೆ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಮಾಡಿದ್ದ ಅವರು, 1988ರಲ್ಲಿ ಪೆಸ್ಟೋಂಜೀ ಚಿತ್ರದಲ್ಲಿ ಪತಿ ಅನುಪಮ್ ಖೇರ್ ಜೊತೆಗೆ ಅಭಿನಯಿಸಿದ್ದರು.
ಈ ಮಧ್ಯೆ ಕಿರಣ್ ಖೇರ್ 'ಸಾಲ್ಗಿರಾಹ್' ನಾಟಕದಲ್ಲಿ ಅಭಿನಯಿಸಿದರು. ಇದನ್ನು ನಾಟಕ ರಚನೆಕಾರ ಜಾವೆದ್ ಸಿದ್ದಿಕ್ವಿ ರಚಿಸಿ ಫಿರೋಜ್ ಅಬ್ಬಾಸ್ ಖಾನ್ ನಿರ್ದೇಶಿಸಿದರು. ಮುಂದೆ ಮೂರು ದೂರದರ್ಶನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಜೀ ಟಿವಿಯಲ್ಲಿ 'ಪುರುಷ್ ಕ್ಷೇತ್ರ'ದಲ್ಲಿ ಮೊದಲ ಬಾರಿಗೆ ಲೈಂಗಿಕತೆಯ ಬಗೆಗಿನ ಚರ್ಚೆಯನ್ನು ನ್ಯಾಯಸ್ಥಾನಕ್ಕೆ ತಂದುದಕ್ಕಾಗಿ ಹಾಗೂ ಮಹಿಳೆಯರ ಸಮಸ್ಯೆಗಳಿಗೆ ಒತ್ತು ನೀಡಿದುದಕ್ಕಾಗಿ ಪ್ರಶಂಸೆ ಪಡೆದರು. ನಂತರ 'ಕಿರಣ್ ಖೇರ್ ಟುಡೆ' ಮತ್ತು 'ಜಾಗ್ತೇ ರಹೊ ವಿತ್ ಕಿರಣ್ ಖೇರ್' ನಡೆಸಿಕೊಟ್ಟರು.
ಕಿರಣ್ ಖೇರ್ 1995ರಲ್ಲಿ 'ಕರಣ್ ಅರ್ಜುನ್' ಚಿತ್ರದಲ್ಲಿ ನಟಿಸಿದರು. ಶ್ಯಾಮ್ ಬೆನೆಗಲ್ ಅವರ 'ಸರ್ದಾರಿ ಬೇಗಂ' (1996) ಚಿತ್ರದ ಅಭಿನಯ ಅವರಿಗೆ ಮತ್ತಷ್ಟು ಹೆಸರು ತಂದುಕೊಟ್ಟಿತು. ಈ ಚಿತ್ರಕ್ಕಾಗಿ ಆಕೆ 1997ರ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿಯನ್ನು ಗಳಿಸಿದರು.
2000ದಲ್ಲಿ ಅವರು ರಿತುಪರ್ನೊ ಘೋಶ್ ಅವರ ಬಂಗಾಳಿ ಚಿತ್ರ 'ಬರಿವಾಲಿ' ಚಿತ್ರದಲ್ಲಿ ನಟಿಸಿದರು.ಈ ಚಿತ್ರಕ್ಕಾಗಿ ಆಕೆ ಅತ್ಯುತ್ತಮ ನಟನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಿಸಿದರು.
2002ರಲ್ಲಿ ಕಿರಣ್ ಅವರ ದೇವದಾಸ್ ಚಿತ್ರದಲ್ಲಿ ಶಾರುಖ್ ಖಾನ್, ಮಾಧುರಿ ದೀಕ್ಷಿತ್ ಮತ್ತು ಐಶ್ವರ್ಯ ರೈ ಒಂದಿಗೆ ನಟಿಸಿದರು. ಈ ಚಿತ್ರದಲ್ಲಿನ ನಟನೆಗಾಗಿ ಆಕೆ ಫಿಲ್ಮ್ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು.
ಖಾಮೋಶ್ ಪಾನಿ (ಸೈಲೆಂಟ್ ವಾಟರ್ಸ್) ಚಿತ್ರದಲ್ಲಿನ ಆಕೆಯ ಪಾತ್ರವು ಭಾರತ ವಿಭಜನೆಯ ಸಂದರ್ಭದಲ್ಲಿ ಅಪಹರಿಸಲ್ಪಟ್ಟ ಮಹಿಳೆಯೊಬ್ಬಳ ಅವಸ್ಥೆಯ ಬಗ್ಗೆ ಕಥೆ ಹೊಂದಿದೆ. ಈ ಪಾತ್ರ ನಿರ್ವಹಣೆಗಾಗಿ ಆಕೆ ಸ್ವಿಟ್ಜರ್ಲ್ಯಾಂಡ್ನ ಲೊಕಾರ್ನೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ, ಕರಾಚಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಹಾಗೂ ಅರ್ಜೆಂಟೈನಾದ ಸೈಪೀ ಮತ್ತು ದಕ್ಷಿಣಾ ಆಫ್ರಿಕಾದ ಕೇಪ್ ಟೌನ್ನ ಅಂತಾರಾಷ್ಟ್ರೀಯ ಉತ್ಸವಗಳಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡರು. ಈ ಚಿತ್ರವು ಲೊಕಾರ್ನೊದಲ್ಲಿ ಅತ್ಯುತ್ತಮ ಚಿತ್ರ - ಗೋಲ್ಡನ್ ಲಿಯೊಪಾರ್ಡ್, ಫೆಸ್ಟಿವಲ್ ಗ್ರ್ಯಾಂಡ್ ಪ್ರೈಜ್ ಅನ್ನು ಗೆದ್ದುಕೊಂಡಿತು.
2004ರ ಅಕ್ಟೋಬರ್ನಲ್ಲಿ ಕಿರಣ್ ಅಮೆರಿಕಾದ ಟಿವಿ ಸರಣಿಯೊಂದರಲ್ಲಿ ತಮ್ಮ ಪತಿಯೊಂದಿಗೆ ಪರ್ಮಿಂದರ್ ನಾಗ್ರಾನ ತಾಯಿ ಶ್ರೀಮತಿ ರಸ್ಗೋತ್ರ ಆಗಿ "ಡ್ಯಾಮೇಜ್ಡ್ ಎಪಿಸೋಡ್ನಲ್ಲಿ ನಟಿಸಿದರು."
2005ರಲ್ಲಿ ಆಕೆ ಸಹಾರ ಒನ್ ಚಾನೆಲ್ನ ಟೆಲಿ-ಸರಣಿ ಪ್ರತಿಮಾದಲ್ಲಿ ಸುನಂದ ಪಾತ್ರದಲ್ಲಿ ಅಭಿನಯಿಸಿದರು. ಅದಕ್ಕಿಂತ ಮೊದಲು ಆಕೆ ದಿಲ್ ನ ಜಾನೆ ಕ್ಯೂ (ಜಿ ಟಿವಿ), ಇಸಿ ಬಹಾನೆ ಮತ್ತು ಚೌಸಾತ್ ಪನ್ನೆ ಮೊದಲಾದ ಟಿವಿ ಸರಣಿಗಳಲ್ಲಿ ಕಾಣಿಸಿಕೊಂಡಿದ್ದರು.
ಕಿರಣ್ ಖೇರ್ ಅವರ ಯಶಸ್ವೀ ಚಿತ್ರಗಳಲ್ಲಿ ಮೈ ಹೂ ನಾ, ಹಮ್ ತುಮ್, ವೀರ್-ಝರ, ಮಂಗಳ್ ಪಾಂಡೆ, ರಂಗ್ ದೆ ಬಸಂತಿ, ಫನಾ, ಕಭಿ ಅಲ್ವಿದ ನಾ ಕೆಹ್ನಾ, ಸಿಂಗ್ ಈಸ್ ಕಿಂಗ್, ಸಾಸ್ ಬಹು ಔರ್ ಸೆನ್ಸೆಕ್ಸ್ , ದೋಸ್ತಾನ ಮುಂತಾದವು ಸೇರಿವೆ. 2009ರಲ್ಲಿ ಅವರು ಇಂಡಿಯಾಸ್ ಗಾಟ್ ಟ್ಯಾಲೆಂಟ್ ರಿಯಾಲಿಟಿ ಪ್ರತಿಭೆ ಪ್ರದರ್ಶನ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡರು.
ಕಿರಣ್ ಖೇರ್ ಅವರು ಲಾಡ್ಲಿ ಎಂಬ ಹೆಣ್ಣು ಭ್ರೂಣಹತ್ಯೆ ವಿರುದ್ಧದ ಚಳುವಳಿ ಮತ್ತು ಕ್ಯಾನ್ಸರ್ ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡರು. 2009ರಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಿದರು. 2014 ಮತ್ತು 2019ರಲ್ಲಿ ಚಂಡೀಗಢದಲ್ಲಿ ಲೋಕಸಭಾ ಅಭ್ಯರ್ಥಿಯಾಗಿ ಜಯಗಳಿಸಿದರು.
On the birthday of actress Kirron Kher
ಕಾಮೆಂಟ್ಗಳು