ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುದ್ಧಿಯ ಸದ್ದು


 ಸುದ್ಧಿಯ ಸದ್ದು 


ನಾವು ಬದುಕಿರುವ ಯಾರನ್ನು ಸರಿಯಾಗಿ ನೆನೆಯುತ್ತೇವೆ. ಪಕ್ಕದಲ್ಲಿದ್ದರೂ ಗಮನಿಸುವುದಿಲ್ಲ.  ಕಾರಣ ಸಿಕ್ಕರೆ ಹಾಗೆ ಹೀಗೆ ಟೀಕಿಸುತ್ತೇವೆ. ಅವರು ಸತ್ತಾಗ ಅವರನ್ನು ನಮ್ಮ ಸುದ್ಧಿಯಾಗಿಸಿಕೊಳ್ಳುತ್ತೇವೆ. ಎರಡು ಮೂರು ದಿನ ಯಾಕೆ ಕೆಲವು ಗಂಟೆಗಳಲ್ಲಿ ಮತ್ತೊಂದು ಸುದ್ಧಿ ಹಿಡಿಯುತ್ತೇವೆ. ನಮಗೆ ನಮ್ಮೊಳಗೆ ಸುದ್ಧಿಯ ಸದ್ದು ಮುಖ್ಯ. ನಿನ್ನೆಯಿಂದ ಇಲ್ಲಿ ಹರಿದಾಡುತ್ತಿರುವ ಅವರ ಚಿತ್ರಗಳ ಮಹಾಪೂರ ಕಾಣುತ್ತಿದೆ.  ಹಾಗೆಯೇ ಅವರ ಈ ಕವನ ಕೂಡಾ ಕಂಡಿತು. ಇದು ಅವರದ್ದಲ್ಲ ಕ್ರಿಸ್ಟಿನಾ ರೊಸೆಟ್ಟಿಯ ಪ್ರಸಿದ್ಧ ಕವನದ ಅನಾಮಿಕ ಕನ್ನಡ ಅನುವಾದ ಎನ್ನಲಾಗಿದೆ.

ಇದನ್ನು ನಿಜಕ್ಕೂ ಕಾಣುತ್ತೇವೆಯೆ! "ಕಂಡವರಿಗಲ್ಲ ಕಂಡವರಿಗಷ್ಟೆ ತಿಳಿದದ ಇದರ ಬೆಲೆಯು - ನೆಲೆಯು ..."

ನಾನು ಸತ್ತರೆ ನೀವು ಅಳುವಿರಿ
ನಿಮ್ಮ ಕೂಗು ನನಗೆ ಕೇಳಿಸದು
ನನ್ನ ನೋವಿಗೆ ಈಗಲೇ ಮರುಗಲಾಗದೇ 

ನೀವು ಹೂಮಾಲೆ ಹೊದಿಸುವಿರಿ
ನೋಡಲಾದೀತೇನು ನನಗೆ
ಚೆಂದನೆಯ ಹೂವೊಂದ ಈಗಲೇ
ನೀಡಲಾಗದೇ 

ನನ್ನ ಗುಣಗಾನ ಮಾಡುವಿರಿ
ನನಗೆ ಕೇಳೀತೇ ಹೇಳಿ
ಒಂದೆರಡು ಹೊಗಳಿಕೆಯ ಮಾತು
ಈಗಲೇ ಆಡಲಾರಿರೇ ..

ನನ್ನ ತಪ್ಪುಗಳನ್ನು ಮನ್ನಿಸುವಿರಿ
ನನಗರಿವಾಗುವುದೇ ಇಲ್ಲ
ಜೀವ ಇರುತ್ತಾ ಕ್ಷಮಿಸಲಾಗದೇ ...

ನನ್ನ ಅನುಪಸ್ಥಿತಿಗೆ ಕೊರಗುವಿರಿ
ನನಗೆ ತಿಳಿಯುವುದೇ ಇಲ್ಲ
ಈಗಲೇ ಭೇಟಿ ಮಾಡಲೇನು ..

ನನ್ನ ನಿರ್ಗಮನದ ಸುದ್ದಿ ತಿಳಿಯುತ್ತಲೇ
ಮನೆಯತ್ತ ಧಾವಿಸುವಿರಿ ಶ್ರದ್ಧಾಂಜಲಿ ಹೇಳೋ ಬದಲು  ಈವಾಗಲೇ 
ಸುಖ ದುಃಖ ಹಂಚಿಕೊಳ್ಳಲಾಗದೇನು .

ಮಿಂಚಿ ಹೋಗುವ ಮುನ್ನ ಹಂಚಿ
ಬಾಳುವ ಬದುಕು ಸಹ್ಯವಲ್ಲವೇನು 


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ