ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸೂರ್ಯಕೀರ್ತಿ


ಸೂರ್ಯಕೀರ್ತಿ


ಕೀರ್ತಿ ಪಿ. ಬೆಟ್ಟಳ್ಳಿ ಮಹತ್ವದ ಕನ್ನಡ ಯುವಪ್ರತಿಭೆ.‍. ಅವರು 'ಸೂರ್ಯಕೀರ್ತಿ' ಎಂಬ ಹೆಸರಿನಲ್ಲಿ ಸಾಹಿತ್ಯ ಸಾಧನೆ ಮಾಡುತ್ತ ಬಂದಿದ್ದಾರೆ. 

ಜನವರಿ 29 ಸೂರ್ಯಕೀರ್ತಿ ಅವರ ಜನ್ಮದಿನ.  ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಬೆಟ್ಟಹಳ್ಳಿ ಅವರ ಹುಟ್ಟೂರು.  ಬೆಂಗಳೂರು ವಿಶ್ವವಿದ್ಯಾಲಯದಿಂದ ಉನ್ನತ ಶ್ರೇಣಿಯಲ್ಲಿ ವಾಣಿಜ್ಯಶಾಸ್ತ್ರದಲ್ಲಿ  ಸ್ನಾತಕೋತ್ತರ ಪದವಿಯನ್ನು ( ಎಂ.ಕಾಂ),  ಸಾಹಿತ್ಯದ ಕನ್ನಡ ಎಂ.ಎ, ಸಾಹಿತ್ಯ ಪರಿಷತ್ತಿನ ಕನ್ನಡ‍ ಪರೀಕ್ಷೆಗಳಲ್ಲಿ ರ್‍ಯಾಂಕ್ ಹೀಗೆ ವಿಭಿನ್ನ ನೆಲೆಗಳ ಕಲಿಕೆಯ ಆಸಕ್ತ ಮನಸ್ಸು ಇವರದು. ಸೂರ್ಯಕೀರ್ತಿ ಬೆಂಗಳೂರಿನ ಸುರಾನಾ ಕಾಲೇಜಿನಲ್ಲಿ ಸಹಪ್ರಾಧ್ಯಾಪಕ ವೃತ್ತಿ ನಿರ್ವಹಿಸುತ್ತಿದ್ದಾರೆ. ಇವರು ಸಂಸ್ಕೃತ ಕಾವ್ಯಗಳ ಓದು, ಬೌದ್ಧ ಸಾಹಿತ್ಯ, ಶಾಸನ ಮತ್ತು ಪುರಾತತ್ವ, ಹಳಗನ್ನಡ ಓದು,  ವ್ಯಾಕರಣ, ರಂಗಭೂಮಿ ಮುಂತಾದ ಕ್ಷೇತ್ರಗಳಲ್ಲಿ ಆಸಕ್ತರಾಗಿದ್ದಾರೆ. ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. 

ಸೂರ್ಯಕೀರ್ತಿ ಅವರ ವಿಮರ್ಶೆ, ಕವಿತೆ, ಪ್ರಬಂಧ, ಕತೆ, ಅಂಕಣ ಬರಹಗಳು ಕನ್ನಡದ ಎಲ್ಲ ನಿಯತಕಾಲಿಕಗಳಲ್ಲಿ ನಿರಂತರ ಮೂಡಿಬರುತ್ತಿವೆ.  ಇವರು 2017ನೇ ಸಾಲಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯದಿಂದ  "ಚೈತ್ರಾಕ್ಷಿ" ಎಂಬ ಕವಿತಾ ಸಂಕಲನ  ಪ್ರಕಟಿಸಿದರು.  ಈ ಕೃತಿ 2018ನೇ ಸಾಲಿನ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ "ಸುಮನ್ ಸೋಮಶೇಖರ ಸೋಮವಾರ ಪೇಟೆ ದತ್ತಿ" ಪ್ರಶಸ್ತಿ  ಗಳಿಸಿತು. ಇವರ 'ಮೀನು ಕುಡಿದ ಕಡಲು'  ಕೃತಿಗೆ ಅಲ್ಲಮ ಪ್ರಶಸ್ತಿ ಸಂದಿದೆ.

ಸೂರ್ಯಕೀರ್ತಿ ನಿರ್ದೇಶನದ 'ಜಲಗಾರ',  'ಹೆಣದ ಬಟ್ಟೆ', 'ಅನಿಮಲ್ ಫಾರ್ಮ್' ನಾಟಕಗಳು ಯಶಸ್ವಿಯಾಗಿ ಪ್ರದರ್ಶನಗೊಂಡಿವೆ.

ಸೂರ್ಯಕೀರ್ತಿ ಅವರ ಕವಿತೆಗಳು ಚೀಣಿ, ಬಂಗಾಳಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ.

ಆತ್ಮೀಯರಾದ ಸೂರ್ಯಕೀರ್ತಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು.

Happy birthday Surya Keerthy

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ