ಗೀತಗೋವಿಂದ14
ಜಯದೇವಕವಿಯ ಗೀತಗೋವಿಂದ
ಅಷ್ಟಪದಿ 13
*ಸಂಕ್ಷಿಪ್ತ ಭಾವ*
ಮಾಧವನ ಬರವಿಗಾಗಿ ಪರಿತಪಿಸುತ್ತಿರುವ ರಾಧೆಯ ವಿಲಾಪದ ನುಡಿಗಳು ಇಲ್ಲಿವೆ.
ಚಂದ್ರೋದಯವಾಗಿದೆ. ಬೆಳದಿಂಗಳು ಎಲ್ಲೆಡೆ ಪಸರಿಸುತ್ತಿದೆ. ನುಡಿದಂತೆ ಕಾಲಕ್ಕೆ ಸರಿಯಾಗಿ ಮಾಧವನು ಬರದಿದ್ದರೆ ಈ ರೂಪವಿದ್ದು ಫಲವೇನು? ಈ ಹರೆಯವು ಹಾಳು ಎನ್ನುವಳು. ಯಾರು ಬರುವರೆಂದು ನಾನು ಈ ರಾತ್ರಿಯಲ್ಲಿ ಅಲೆದೆನೋ, ಕುಸುಮಶರನ ಬಾಧೆಯಲ್ಲಿ ಬೆಂದೆನೋ ಅವನು ಬರಲಿಲ್ಲವಾಗಿ ನನಗಿನ್ನು ಮರಣವೇ ಮಹಾನವಮಿ. ನಾನು ಬದುಕಿದ್ದು ಪ್ರಯೋಜನವಿಲ್ಲವೆನ್ನುವಳು.
ಮಧುರವಾದ ಈ ರಾತ್ರಿಯು ನನ್ನನ್ನು ಪರಿಭವಕ್ಕೆ ಒಳಮಾಡಿರುವುದು. ಯಾರೋ ಪುಣ್ಯವಂತೆ ಮುರಾರಿಯನ್ನು ಪಡೆದಿರುವಳು ಎಂದು ಶಂಕಿಸುವಳು.
ಈ ಒಡವೆಗಳೆಲ್ಲವೂ ಹರಿಯ ವಿರಹದಿಂದ ದೂಷಣಗಳಾಗಿರುವವು. ಸುಕುಮಾರಳಾದ ನನ್ನನ್ನು ಕೊರಳ ಸರವೂ ಇರಿಯುತ್ತಿಹುದು. ಬಿದಿರು ಬೆಳೆದಿರುವ ಈ ಮೆಳೆಯಲ್ಲಿ ಹೆದರದೆ ನಾನು ಬಂದು ನಿಂತು ಕಾದಿರುವೆನು. ಆದರೆ ಹರಿಯು ಇದನ್ನು ಗಮನಿಸುವನೆ ಇಂದು?
ಜಯದೇವ ಕವಿಯು ಹರಿಚರಣಗಳಲ್ಲಿ ಶರಣಾಗಿ ರಚಿಸಿದ ಈ ನುಡಿಗಳು ಕಲಾವತಿಯಾಗಿ ವಾಣಿಯಲ್ಲಿ ನೆಲೆಸಿರಲಿ.
*ಪರಮೇಶ್ವರ ಭಟ್ಟರ ಕನ್ನಡ ರೂಪ*
ಅಳಿಜನವಂಚಿತಳು ನಾನಾರ ಮರೆಹೊಗಲಿ ಹೇಳು
ನುಡಿದಂತೆ ಕಾಲಕೆ ಮುರಾರಿ ಅಹ ವನಕೆ ಬರದಿರಲು
ಅಮಲತರ ರೂಪವಿರಲೇನು ಫಲ ಹರೆಯವಿದು ಹಾಳು. 1
ಅವನೈತಹನೆಂದು ಗಹನವನು ನಿಶಿಯೊಳಾನಲೆದೆ ಕೀಲಿಸಿಹುದೆನ್ನೆದೆಯೊಳಾತನಿಂದ ಸುಮಶರವಿರದೆ. 2
ಕೊನೆಗೆ ಮನೆ ಬರಿದಾಗೆ ಮರಣವೆ ಮಹಾನವಮಿಯೆನಗೆ
ವಿರಹದುರಿಬೇಗೆಯನು ಬಗೆಗುಂದಿ ಸಹಿಸಿದಪೆನೆಹಗೆ. 3
ಮಧುರಮಧು ನಿಶಿಯನ್ನನಹಹ ಪರಿಭವಿಸುತಿಹುದಿಂತು
ಕೃತಪುಣ್ಯಳಾವಳೊ ಮುರಾರಿಯನು ಪಡೆಗಳು ಸಮಂತು. 4
ವಲಯಾದಿ ಮಣಿಭೂಷಣಂಗಳಿವು ದೂಷಣಗಳೆಂದು
ಅಹಹ ಪರಿಗಣಿಸುವೆನು ಹರಿವಿರಹದುರಿಯೊಳುರೆ ನೊಂದು. 5
ಅತಿ ವಿಷಮಲೀಲನೆನುವತನು ಶರಲೀಲೆಯೊಳು ಸಂದು
ಕುಸುಮ ಸುಕುಮಾರಳನು ಕೊರಳ ಸರವಿರಿಯುತಿಹುದಿಂದು. 6
ಬೆತ್ತ ಬೆಳೆದೆಡೆಯೊಳಿದನೆಣಿಸದೆಯೆ ನಿಂದೆ ನಾ ಬಂದು
ಆದೊಡೇನೆಣ್ಣುವನೆ ನನ್ನನು ಮುರಾರಿ ತಾನಿಂದು. 7
ಹರಿಚರಣ ಶರಣ ಜಯದೇವಕವಿ ವಾಣಿ ತಾನುರದೆ
ಸಲೆ ನಲಿದು ನೆಲಸಿರಲಿ ಕೋಮಲ ಕಲಾವತಿಯ ತೆರದೆ. 8
*ಮೂಲ ಭಾಗ*
ಗೀತಂ ಅಪ್ಪಪದೀ_13 ನಾಗರನಾರಾಯಣ
ರಾಸಾವಲಯಮ್
ಮಾಲವರಾಗ, ಯತಿತಾಲ
ಕಥಿತಸಮಯೇsಪಿ ಹರಿರಹಹ ನ ಯಯೌವನಂ
ಮಮ ವಿಫಲಮಿದನಮಲರೂಪಮಪಿ ಯೌವನಂ
ಯಾಮಿ ಹೇ ಕಮಿಹ ಶರಣಂ ಸಖೀಜನವಚನವಂಚಿತಾ ||ಧ್ರುವಮ್||
ಯದನುಗಮನಾಯ ನಿಶಿ ಗಹನಮಪಿ ಶೀಲಿತಂ ತೇನ ಮಮ ಹೃದಯಮಿದಮಸಮಶರಕೀಲಿತಂ ೨
ಮಮ ಮರಣಮೇವ ವರಮಿತಿ ವಿತಥಕೇತನಾ
ಕಿಮಿತಿ ವಿಷಹಾಮಿ ಏರಹಾನಲಮಚೇತನಾ ೩
ಮಾಮಹಹ ವಿಧುರಯತಿ ಮಧುರಮಧುಯಾಮಿನೀ
ಕಾಪಿ ಹರಿಮನುಭವತಿ ಕೃತಸುಕೃತಕಾಮಿನೀ ೪
ಅಹಹ ಕಲಯಾಮಿ ವಲಯಾದಿಮಣಿಭೂಷಣಂ ಹರಿವಿರಹದಹನವಹನೇನ ಬಹುದೂಷಣಂ ೫
ಕುಸುಮಸುಕುಮಾರತನುಮಸಮಶರಲೀಲಯಾ
ಸ್ರಗಪಿ ಹೃದಿ ಹಂತಿ ಮಾಮತಿವಿಷಮಲೀಲಯಾ ೬
ಅಹಮಿಹ ನಿವಸಾಮಿ ನಗಣಿತವನವೇತಸಾ ಸ್ಮರತಿಮಧುಸೂದನೋ ಮಾಮಪಿ ನ ಚೇತಸಾ ೭
ಹರಿಚರಣಶರಣಜಯದೇವಕವಿಭಾರತೀ
ವಸತು ಹೃದಿ ಯುವತಿರಿವ ಕೋಮಲಕಲಾವತೀ ೮
ತತ್ಕಿಂ ಕಾಮಪಿ ಕಾಮಿನೀಮಭಿಸೃತಃ ಕಿಂ ವಾ ಕಲಾಕೇಲಿಭಿ_
ರ್ಬದ್ಧೋ ಬಂಧುಭಿರಂಧಕಾರಿಣಿ ವನಾಭ್ಯರ್ಣೇ ಕಿಮುದ್ಭ್ರಾಮ್ಯತಿ
ಕಾಂತಃ ಕ್ಷಾಂತಮನಾ ಮನಾಗಪಿ ಪಥಿ ಪ್ರಸ್ಥಾತುಮೇವಾಕ್ಷಮಃ ಸಂಕೇತೀಕೃತಮಂಜುವಂಜುಲಲತಾಕುಂಜೇsಪಿ ಯನ್ನಾಗತಃ ೯
ಅಥಾಗತಾಂಮಾಧವಮಂತರೇಣ
ಸಖೀಮಿಯಂ ವೀಕ್ಷ್ಯ ವಿಚಾದಮೂಕಾಂ
ವಿಶಂಕಮಾನಾ ರಮಿತಂ ಕಯಾsಪಿ
ಜನಾರ್ದನಂ ದೃಷ್ಟವದೇತದಾಹ. ೧೦
ಕೃತಜ್ಣತೆ:
1. ಮೂಲ: ಜಯದೇವ ಕವಿಯ 'ಗೀತಗೋವಿಂದ'
2. ಎಸ್. ವಿ. ಪರಮೇಶ್ವರ ಭಟ್ಟರ ಕನ್ನಡ ಕಾವ್ಯರೂಪ
3. ಸಂಕ್ಷಿಪ್ತ ಭಾವ ನೀಡಿದ: ಸುಬ್ಬುಲಕ್ಷ್ಮಿ
Lrphks Kolar
ಕಾಮೆಂಟ್ಗಳು