ಲಕ್ಕಪ್ಪಗೌಡ
ಎಚ್.ಜೆ. ಲಕ್ಕಪ್ಪಗೌಡ
ಪ್ರೊ. ಎಚ್.ಜೆ. ಲಕ್ಕಪ್ಪಗೌಡ ಅವರು ಜಾನಪದತಜ್ಞ, ಶಿಕ್ಷಣತಜ್ಞ ಮತ್ತು ಸಾಹಿತಿಗಳಾಗಿಹೆಸರಾಗಿದ್ದವರು.
ಲಕ್ಕಪ್ಪಗೌಡ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಅಲಪನಾಯಕನ ಹಳ್ಳಿಯಲ್ಲಿ1939ರ ಮೇ 8ರಂದು ಜನಿಸಿದರು. ತಂದೆ ಜವರೇಗೌಡ. ತಾಯಿ ಕಾಳಮ್ಮ. ಪ್ರಾಥಮಿಕ ಶಿಕ್ಷಣಹುಟ್ಟಿದೂರಿನಲ್ಲಿ ನಡೆದು ಪ್ರೌಢಶಾಲೆಗೆ ಬೆಟ್ಟದಪುರದ ಹೈಸ್ಕೂಲು ಸೇರಿದರು. ಪಿ.ಯು. ಕೊಣನೂರಿನಲ್ಲಿ ಓದಿದರು. ಮೈಸೂರಿನ ಮಹಾರಾಜಾ ಕಾಲೇಜಿನಿಂದ ಬಿ.ಎ. ಪದವಿ, ಮೈಸೂರುವಿ.ವಿ.ದಿಂದ ಎಂ.ಎ. ಪದವಿ ಮತ್ತು ‘ಶ್ರೀ ರಾಮಾಯಣ ದರ್ಶನಂ’ ಒಂದು ವಿಮರ್ಶಾತ್ಮಕಅಧ್ಯಯನ’ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಗಳಿಸಿದರು.
ಲಕ್ಕಪ್ಪಗೌಡ ಅವರು ಹಾಸನದ ಹೊಳೆನರಸೀಪುರದಲ್ಲಿ ಪ್ರೌಢಶಾಲಾಶಿಕ್ಷಕರಾಗಿ ಬೋಧನಕ್ಷೇತ್ರವನ್ನೂ ಪ್ರವೇಶಿಸಿ ನಂತರ ಶಾರದಾ ವಿಲಾಸ ಕಾಲೇಜಿನಲ್ಲಿ ಮತ್ತು ಮಹಾರಾಜಾ ಕಾಲೇಜಿನಲ್ಲಿಉಪನ್ಯಾಸಕರಾಗಿ, ಮಾನಸ ಗಂಗ್ರೋತಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನಸಹಾಯಕರಾಗಿ ಸೇವೆ ಸಲ್ಲಿಸಿದರು. ಮಂಗಳೂರಿನ ಸ್ನಾತಕೋತ್ತರ ಕೇಂದ್ರದಲ್ಲೂ ಕೆಲಕಾಲಉಪನ್ಯಾಸಕರ ಹುದ್ದೆ ನಿರ್ವಹಿಸಿದರು.
ಕೇಂದ್ರ ಮತ್ತು ರಾಜ್ಯಕ್ಕೆ ಸಂಬಂಧಿಸಿದ ಅಧಿನಿಯಮಗಳನ್ನೂ ಕನ್ನಡಕ್ಕೆ ಭಾಷಾಂತರಿಸಲುಕರ್ನಾಟಕ ಸರಕಾರವು ಭಾಷಾಂತರ ಇಲಾಖೆಯನ್ನು ಪ್ರಾರಂಭಿಸಿದಾಗ ಲಕ್ಕಪ್ಪಗೌಡರುಆಯೋಗದ ಸದಸ್ಯರಾಗಿ
ನೇಮಕಗೊಂಡರು. ಏಳು ವರ್ಷಗಳ ಕಾಲ ಆಯೋಗದಲ್ಲಿ ಕಾರ್ಯನಿರ್ವಹಿಸಿದರು.
ಲಕ್ಕಪ್ಪಗೌಡ ಅವರು ಪಿ.ಯು. ಓದುತ್ತಿದ್ದಾಗಲೇ ‘ಹೆಮ್ಮೆ’ ಎಂಬ ಕವನವನ್ನು ಬರೆದಿದ್ದುಮಾಸ್ತಿಯವರ ಜೀವನ ಪತ್ರಿಕೆಯಲ್ಲಿ ಪ್ರಕಟಗೊಂಡಿತು. ನಂತರ ಬರೆದ ಹಲವಾರು ಕವನಗಳುಗೋಕುಲ ಪತ್ರಿಕೆಯಲ್ಲಿ ಪ್ರಕಟವಾಯಿತು. ನಂತರ ಪ್ರೌಢಶಾಲಾ ಶಿಕ್ಷಕರಾಗಿದ್ದ ಸಂದರ್ಭದಲ್ಲಿಪುರಂದರ ದಾಸರ ಪೂರ್ವಾಶ್ರಮವನ್ನು ಕುರಿತು ‘ತಮಸ್ಸಿನಿಂದ ಜ್ಯೋತಿಗೆ’ ಎಂಬ ನಾಟಕವನ್ನುರಚಿಸಿದಾಗ ಸ್ನೇಹಿತರಾದ ರಾಮಪ್ರಸಾದ್ ರಂಗಕ್ಕೆ ತಂದರು. ಈ ಸಂದರ್ಭದಲ್ಲಿ ಪ್ರಕಟವಾದಮೊದಲ ಕವನ ಸಂಕಲನ ‘ವಸಂತಗೀತ’. ನಂತರ ಶಿವಮೊಗ್ಗದ ಬಿ.ಆರ್. ಪ್ರಾಜೆಕ್ಟ್ನ ಸ್ನಾತಕೋತ್ತರಕೇಂದ್ರದಲ್ಲಿ ರೀಡರ್ ಆಗಿ ನೇಮಕಗೊಂಡು ಬಂದ ನಂತರ ಪ್ರೊ.ಎಚ್. ತಿಪ್ಪೆರುದ್ರಸ್ವಾಮಿಯವರೊಡನೆ ಸೇರಿ ಜಾನಪದ ವಿಚಾರ ಸಂಕಿರಣಗಳು, ಜಾನಪದ ಮೇಳಗಳನ್ನುನಡೆಸಿದ್ದಲ್ಲದೆ ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಯ ಅಜ್ಞಾತ ಜಾನಪದಕಲಾವಿದರನ್ನು ಬೆಳಕಿಗೆ ತಂದು ಕಲಾವಿದರನ್ನು ಸನ್ಮಾನಿಸುವ ಯೋಜನೆಯನ್ನುಜಾರಿಗೊಳಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿದ್ದ ಕನ್ನಡ ಅಧ್ಯಯನ ಕೇಂದ್ರದಂತೆ ಕುವೆಂಪುವಿಶ್ವವಿದ್ಯಾಲಯದಲ್ಲೂ ‘ಕನ್ನಡ ಭಾರತಿ’ ಎಂದು ನಾಮಕರಣ ಮಾಡಿ ಅಧ್ಯಯನ ಕೇಂದ್ರದಸ್ಥಾನಮಾನಕ್ಕೆ ಅರ್ಹರಾಗುವಂತೆ ಮಾಡಿದರು. ಈ ಅವಧಿಯಲ್ಲಿ 1985ರಲ್ಲಿ ಶ್ರೀರಂಗರ ಸಾಹಿತ್ಯ, ಕರ್ನಾಟಕ ಜಾತ್ರೆಗಳು, ಜಾನಪದ ಮತ್ತು ಪೂರಕ ಕ್ಷೇತ್ರಗಳು, 1986ರಲ್ಲಿ ಸಾಹಿತ್ಯ ಮತ್ತುಸಮಾಜವಾದಿ ಒಲವುಗಳು, 1987ರಲ್ಲಿ ಕನ್ನಡ ಸಾಹಿತ್ಯ ಮತ್ತು ಸಮಕಾಲೀನತೆ, 1989ರಲ್ಲಿನವಸಾಕ್ಷರರ ಸಾಹಿತ್ಯ ರಚನಾ ಕಮ್ಮಟ, 1990ರಲ್ಲಿ ಜಾನಪದ ಆಧುನಿಕ ಪ್ರವೃತ್ತಿಗಳು, ಬಂಡಾಯಸಾಹಿತ್ಯ ಚಳುವಳಿಗಳು ಮುಂತಾದ ವಿಷಯಗಳ ಮೇಲೆ ವಿಚಾರ ಸಂಕಿರಣ, ಕಮ್ಮಟಗಳು ನಡೆದು ‘ಕನ್ನಡ ಭಾರತಿ’ ಕಾರ್ಯಕ್ರಮಗಳನ್ನೂ ಇತರ ವಿಶ್ವವಿದ್ಯಾಲಯಗಳುಗಮನಿಸುವಂತೆ ಮಾಡಿದರು.
ಪ್ರಾಧ್ಯಾಪಕರಾಗಿ ನಿಯೋಜಿತರಾಗಿದ್ದ ಲಕ್ಕಪ್ಪ ಗೌಡ ಅವರು 1990ರಿಂದ 93 ರವರೆಗೆಕುಲಸಚಿವರಾಗಿದ್ದರು. ಕನ್ನಡ ಭಾರತಿಯ ನಿರ್ದೇಶಕರಾಗಿಯೂ ದುಡಿದು 1999ರಲ್ಲಿನಿವೃತ್ತರಾದರು. 1995ರಲ್ಲಿ ‘ಕರ್ನಾಟಕದ ಜಾನಪದ ಮತ್ತು ಯಕ್ಷಗಾನ ಆಕಾಡಮಿ’ಯಅಧ್ಯಕ್ಷರಾಗಿ ನೇಮಕಗೊಂಡರು. ಜಾನಪದ ಅಕಾಡಮಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿಹಲವಾರು ಯೋಜನೆಗಳನ್ನೂ ರೂಪಿಸಿ ಕಾರ್ಯಗತಗೊಳಿಸಿದರು. ಪಾಶ್ಚಾತ್ಯ ಜಾನಪದಸಂಶೋಧಕರ ಪರಿಚಯ ಪುಸ್ತಕಗಳು, ಸರ್ವಜ್ಞಜಾನಪದ, ಕುಮಾರವ್ಯಾಸ ಜಾನಪದ ಮೊದಲಾದರತ್ನತ್ರಯ ಸಂಚಿಕೆಗಳ ಪ್ರಕಟಣೆ, ಸುವರ್ಣ ಜಾನಪದ ಸಂಪುಟಗಳು, ಜಾನಪದ ನಿಘಂಟು, ಜಾನಪದ ವಿಶ್ವಕೋಶ ಮುಂತಾದವುಗಳ ಪ್ರಕಟಣೆ, ಜಾನಪದ ವಸ್ತು ಸಂಗ್ರಹಾಲಯಗಳಯೋಜನೆಯನ್ನೂ ರೂಪಿಸಿದರು. ಮುಸ್ಲಿಂ ಜಾನಪದ ಕ್ಷೇತ್ರದ ಮಹತ್ವವನ್ನು ಅರಿಯಲು ಮುಸ್ಲಿಂಕಟ್ಟಡ ಶೈಲಿ, ಲೋಹಶಿಲ್ಪ, ಸಾಹಿತ್ಯ, ಸಂಗೀತ, ಜಾನಪದ ಮುಂತಾದವುಗಳ ಬಗ್ಗೆ ವಿಚಾರಸಂಕಿರಣಗಳನ್ನೂ ಆಯೋಜಿಸಿದರು. ಕನಕಪುರದಲ್ಲಿ ‘ಜಾನಪದ ಮತ್ತು ಜಾಗತಿಕ ಪರಿಕಲ್ಪನೆ’, ಸಕಲೇಶಪುರದಲ್ಲಿ ‘ಪರಿಸರ ಜಾನಪದ’, ಬೆಂಗಳೂರಿನಲ್ಲಿ ‘ಅಖಿಲ ಕರ್ನಾಟಕ ಜಾನಪದಸಮಾವೇಶ’ ತುಮಕೂರಿನಲ್ಲಿ ‘ಫ್ಲೋಕ್ಲೋರ್’ ಪದ ಸೃಷ್ಟಿಯಾಗಿ 150 ವರ್ಷಗಳು, ‘ಜಾನಪದ’ ಪದ ಸೃಷ್ಟಿಯಾಗಿ 30 ವರ್ಷಗಳಾದ ಚಾರಿತ್ರಿಕ ಸಂಗತಿಯನ್ನು ದಾಖಲಿಸಲು ವಿಚಾರಸಂಕಿರಣಗಳನ್ನೂ ನಡೆಸಿದರು. ಜಾನಪದ ಕಲಾವಿದರಿಗೆ ಪ್ರಶಸ್ತಿ ಕೊಡುವುದರ ಮೂಲಕಜಾನಪದ ವಿದ್ವಾಂಸರನ್ನು ಸನ್ಮಾನಿಸುವ ಪರಂಪರೆಯನ್ನೂ ಜಾನಪದ ಅಕಾಡಮಿಯ ಮೂಲಕಕಾರ್ಯ ರೂಪಕ್ಕೆ ತಂದು ‘ಕರ್ನಾಟಕ ಜಾನಪದ ರತ್ನ’ ಪ್ರಶಸ್ತಿ ಪ್ರದಾನವನ್ನೂ ಆರಂಭಿಸಿದರು.
‘ಜಾನಪದ ಗಂಗ್ರೋತ್ರಿ’ ಮತ್ತು ಜಾನಪದ ಸಮಾಚಾರ ನಿಯತಕಾಲಿಕೆಗಳನ್ನುಪ್ರಕಟಿಸತೊಡಗಿದರು. 1999ರಲ್ಲಿ ಇವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಪದವಿಸ್ವೀಕರಿಸಿದರು. ನಂತರ ಇವರು ವಹಿಸಿಕೊಂಡ ಗುರುತರ ಜವಾಬ್ದಾರಿ ಎಂದರೆ ಹಂಪಿ ಕನ್ನಡವಿಶ್ವವಿದ್ಯಾಲಯದ ಕುಲಪತಿಗಳ ಸ್ಥಾನ. ಮಂಗಳೂರು ಮತ್ತು ಕುವೆಂಪು ವಿ.ವಿ.ಗಳ ಶೈಕ್ಷಣಿಕಸಲಹೆಗಾರರಾಗಿ, ಕಲಾ ವಿಭಾಗದ ಕ್ಷೇಮಪಾಲಕರಾಗಿ, ಸಿಂಡಿಕೇಟ್ ಸದಸ್ಯರಾಗಿ, ಕುಪ್ಪಳಿಯರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿಯಾಗಿ, ದಕ್ಷಿಣ ಭಾರತದ ಭಾಷೆಗಳ ಜಾನಪದಅಧ್ಯಯನ ಕೇಂದ್ರದ ಅಧ್ಯಕ್ಷರಾಗಿ – ಹೀಗೆ ಹಲವಾರು ಸಾಹಿತ್ಯಿಕ, ಸಾಂಸ್ಕೃತಿಕ ಸಂಘ ಸಂಸ್ಥೆಗಳಲ್ಲಿದುಡಿದರು.
ಲಕ್ಕಪ್ಪ ಗೌಡ ಅವರ ಕೃತಿಗಳಲ್ಲಿ ವಸಂತಗೀತ, ಊರಮುಂದಿನ ಬಾವಿ, ಪದ್ದು-ಹದ್ದು, ಅಕ್ಷತೆ, ಕಿರುಗೆಜ್ಜೆ, ಸೂಜಿಸಂಪಿಗೆ, ವಚನತೋರಣ ಮೊದಲಾದವು ಕಾವ್ಯ ಕೃತಿಗಳು. ಹೊನ್ನಾರು, ಹುಲಿಯಹೆಜ್ಜೆ ಕಥಾ ಸಂಗ್ರಹಗಳು. ಸಿದ್ಧರಾಮ, ತಮಸ್ಸಿನಿಂದ ಜ್ಯೋತಿಗೆ, ಕಾಯಕಯೋಗಿ ನಾಟಕಗಳು. ದಲಿತಸೂರ್ಯ, ಸಮತೆಯಶಿಲ್ಪಿ, ವಿಶ್ಚಕವಿ ಕುವೆಂಪು, ಡಾ. ಅಂಬೇಡ್ಕರ್ ಜೀವನಚರಿತ್ರೆಗಳು. ಇವರ ಸಾಹಿತ್ ಯವಿಮರ್ಶೆಗಳಲ್ಲಿ ಅಂತರಂಗ, ಸಂಗಮ, ಕಥಾಲೋಕನ, ಗೋಪುರದ ದೀಪಗಳು, ಅಂತರಾಳ, ಬಾಳದೇಗುಲದ ನೋಟಗಳು, ಸಾಹಿತ್ಯ ಬಹುಮುಖೀ ಚಿಂತನೆ ಸೇರಿವೆ. ಮಕ್ಕಳಸಾಹಿತ್ಯದಲ್ಲಿ ಇಲಿಯಡ್, ಒಡಿಸ್ಸಿ, ಕಾಯಕವೇ ಕೈಲಾಸ, ದೀನ ಬಂಧು ಸೇರಿವೆ. ಇಬ್ಬನಿ ಎಂಬಸ್ವತಂತ್ರ ಗಾದೆಗಳು, ಅನ್ಯಾರ್ಥಕೋಶ ಇವರ ಇತರ ಕೃತಿಗಳು. ರಸ ಋಷಿ ಕುವೆಂಪು, ಮಂಗಳಗಂಗೆ, ಸಾಧನೆಯ ಹಾದಿಯಲ್ಲಿ, ನಾಗ ಸಂಪಿಗೆ, ರಾಷ್ಟ್ರಕವಿ, ಸಿಂಗಾರ, ಗ್ರಂಥ ಸರಸ್ವತಿ, ಮುತ್ತು ಬಂದಿದೆ ಕೇರಿಗೆ, ಕನಕಭಾರತಿ, ಜನಪ್ರಿಯ ಕನಕ ಸಂಪುಟ, ಜೀಶಂಪ ಸಂಸ್ಮರಣೆಮುಂತಾದವು ಸಂಪಾದನೆಗಳು. ಇವರ ಇಂಗ್ಲಿಷ್ ಕೃತಿಗಳಲ್ಲಿ ಲಿಂಗರಿಂಗ್ ಫ್ರಾಗ್ರೆನ್ಸ್, ಶ್ರೀಗಂಧ, ಎಬೊಕೆ ಆಫ್ ಫ್ಲವರ್ಸ್, ಪ್ರೈಸ್ಲೆಸ್ ಗೋಲ್ಡ್ ಮಂತಾದವು ಸೇರಿವೆ. ಜಾನಪದ ಕೃತಿಗಳಲ್ಲಿಜಾನಪದ ಕಥಾವಳಿ, ಒಗಟುಗಳು, ಮಲೆನಾಡು ಜಾನಪದ,ವಿಶಿಷ್ಟ ಜಾನಪದ, ಮಲ್ಲಿಗೆಮೊಗ್ಗುಸುರಿದಾವೆ ಮತ್ತು ಹೊಂಬಾಳೆ ಸೇರಿವೆ. ಇವುಗಳಲ್ಲದೆ ಲೇಖನಗಳ ಸಂಕಲನಗಳು, ಮುನ್ನುಡಿಗಳಸಂಕಲನಗಳು ಸೇರಿ 70ಕ್ಕೂ ಹೆಚ್ಚು ಕೃತಿ ಪ್ರಕಟಗೊಂಡಿವೆ.
ಲಕ್ಕಪ್ಪಗೌಡರಿಗೆ 2004ರಲ್ಲಿ ಸ್ನೇಹಿತರು, ಶಿಷ್ಯರು, ಹಿರಿಯರು ಹಾರೈಸಿ ಬರೆದು ಅರ್ಪಿಸಿದಅಭಿನಂದನ ಗ್ರಂಥ ‘ಹೊನ್ನಾರು’. ಮೈಸೂರು ಸರಕಾರದ ದೇವರಾಜ ಬಹದ್ದೂರ್ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ವಿಶ್ವಮಾನವ ಸಾಹಿತ್ಯ ಪ್ರಶಸ್ತಿ, ಜಾನಪದ ಅಕಾಡಮಿಜಾನಪದ ತಜ್ಞ ಪ್ರಶಸ್ತಿ, ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ ಹಾಸನ ಜಿಲ್ಲೆಯ ೫ನೆಯಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಧಾರವಾಡದಲ್ಲಿ ನಡೆದ ಅಖಿಲ ಕರ್ನಾಟಕ ಜಾನಪದಸಮ್ಮೇಳಾನಧ್ಯಕ್ಷತೆ ಮುಂತಾದ ಗೌರವ, ಪುರಸ್ಕಾರಗಳು ಸಂದಿದ್ದವು.
ಎಚ್.ಜೆ. ಲಕ್ಕಪ್ಪಗೌಡ ಅವರು 2021ರ ಜುಲೈ 26ರಂದು ನಿಧನರಾದರು.
ಸ್ವಾಗತಿಸುತ್ತಿದ್ದೇವೆ. ನಮಸ್ಕಾರ)
ಕಾಮೆಂಟ್ಗಳು