ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಿ. ಎಸ್. ರಾಮಮೂರ್ತಿ


ಬಿ. ಎಸ್. ರಾಮಮೂರ್ತಿ

ಬಿ.ಎಸ್‌. ರಾಮಮೂರ್ತಿ ಅವರು ಹಿರಿಯ ರಂಗಕರ್ಮಿ ಮತ್ತು ರಂಗಸಂಪದ ತಂಡದ ಹಿರಿಯ ರಂಗನಟರಾಗಿ, ಬೆಂಗಳೂರಿನ ನಾಟಕ ವಲಯದಲ್ಲಿ ಅಪಾರ ಹೆಸರು ಮಾಡಿದ್ದ ಕಲಾವಿದರು.

ಸಿಎಂಟಿಐ ಸಂಸ್ಥೆಯ ನಿವೃತ್ತ ಉದ್ಯೋಗಿಯಾಗಿದ್ದ ರಾಮಮೂರ್ತಿ ಅವರು ರಂಗಸಂಪದ ತಂಡದ ಎಲ್ಲ ನಾಟಕಗಳಲ್ಲಿಯೂ ತಮ್ಮ ಕ್ರಿಯಾಶೀಲ ನಟನೆಯನ್ನು ಹೊರಹೊಮ್ಮಿಸಿದ್ದರು. 

ರಾಮಮೂರ್ತಿ ಅವರು ರಂಗಸಂಪದದ ತ್ರಿಶಂಕು ನಾಟಕದ ಮೂಲಕ ರಂಗಪ್ರವೇಶ ಮಾಡಿದ್ದರು. ಮುಂದೆ ಅನೇಕ ನಾಟಕಗಳ ಅಭಿನಯ ಮತ್ತು ನಿರ್ದೇಶನಗಳಲ್ಲಿ ಪಾಲ್ಗೊಂಡಿದ್ದರು. ಹರಕೆಯ ಕುರಿ, ಮಹಾಚೈತ್ರ, ಒಡಲಾಳ ಮುಂತಾದ ನಾಟಕಗಳಲ್ಲಿ ನಟಿಸಿದ್ದ ಅವರು ಜೈಸಿದನಾಯ್ಕ, ಸಂಗ್ಯಾಬಾಳ್ಯಾ ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದರು.

ರಾಮಮೂರ್ತಿ ಅವರುಕೊಟ್ರೇಶಿ ಕನಸು, ಆರಂಭ, ಅಸಂಭವ ಮುಂತಾದ ಅನೇಕ ಚಲನಚಿತ್ರಗಳು ಮತ್ತು ಕಿರುತೆರೆಯ ಧಾರಾವಾಹಿ‌ಗಳಲ್ಲಿಯೂ ನಟಿಸಿದ್ದರು.

ಸ್ವಾರಸ್ಯಕರ ಹರಟೆಗಳಿಂದ ಎಲ್ಲರ ಮನಸ್ಸಿಗೆ ಆಹ್ಲಾದ ನೀಡುತ್ತಿದ್ದ ರಾಮಮೂರ್ತಿ ಅವರಿಗೆ ಅಪಾರ ಗೆಳೆತನವಿತ್ತು.  ಪ್ರಸಿದ್ಧ ನಿರ್ದೇಶಕ ಆರ್.ನಾಗೇಶ್ ಅವರಿಗೆ ರಾಮಮೂರ್ತಿ ಎಂದರೆ ಬಹಳ ಅಚ್ಚುಮೆಚ್ಚು.  ಅವರು ಉದ್ಯೋಗ ನಿರ್ವಹಿಸುತ್ತಿದ್ದ ಸಿಎಮ್‍ಟಿಐ ಸಮೀಪವಿದ್ದ ನಮ್ಮ ಎಚ್‍ಎಮ್‍ಟಿ ಘಟಕಗಳಲ್ಲಿ ನಾಟಕ ಚಟುವಟಿಕೆಗಳಿಗೂ ಪ್ರೇರಕರಾಗಿದ್ದ ಅವರು ನಮ್ಮ ಎಚ್‍ಎಮ್‍ಟಿ ಕನ್ನಡ‍ ಸಂಪದದಲ್ಲೂ ನಾಟಕ ನಿರ್ದೇಶಿಸಿ ನಟಿಸಿದ್ದರು.

ಗೋವಾ ಫಿಲಂ ಫೆಸ್ಟಿವಲ್‌ನಲ್ಲಿ ಭಾಗವಹಿಸಲು ಹೋಗಿದ್ದ ರಾಮಮೂರ್ತಿ ಅವರು ನಂತರದಲ್ಲಿ ಹೃದಯಾಘಾತದಿಂದ ಡಿಸೆಂಬರ್ 3ರಂದು
ನಿಧನರಾದರು. ಅವರ ಪುತ್ರ ಅನೂಪ್‌ ಅವರೂ ನಟ ಹಾಗೂ ನಿರ್ದೇಶಕರಾಗಿ ಹೆಸರಾಗಿದ್ದಾರೆ.


Great artiste B. S. Ramamurthy

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ