ಮನದೀಪ್ ರಾಯ್
ಮನದೀಪ್ ರಾಯ್
ಮನದೀಪ್ ರಾಯ್ ಕನ್ನಡ ಚಿತ್ರರಂಗ ಕಂಡ ಅದ್ಭುತ ಹಾಸ್ಯನಟರಲ್ಲೊಬ್ಬರು
ಮನ್ ದೀಪ್ ರಾಯ್ 1949ರ ಏಪ್ರಿಲ್ 4ರಂದು ಮುಂಬೈನಲ್ಲಿ ಜನಿಸಿದರು.
ರಂಗಭೂಮಿ ಕಲಾವಿದರಾಗಿದ್ದ ಮನದೀಪ್ ರಾಯ್ ಮುಂಬೈನಲ್ಲಿ ತಮ್ಮ ನೆರೆಯಲ್ಲಿದ್ದ ಕಿರಿಯ ಗೆಳೆಯ ಶಂಕರ ನಾಗ್ ಅವರನ್ನು ನಾಟಕದ ಅಭಿನಯಕ್ಕೆ ಪರಿಚಯಿಸಿದವರು. ಮುಂದೆ ಶಂಕರ ನಾಗ್ ನಿರ್ದೇಶನದ 'ಮಿಂಚಿನ ಓಟ'ದಿಂದ ಚಿತ್ರರಂಗಕ್ಕೆ ಬಂದು ರಾಜ್ ಕುಮಾರ್, ವಿಷ್ಣುವರ್ಧನ್, ನಾಗ್ ಸಹೋದರರು, ಅಂಬರೀಷ್ ಸೇರಿದಂತೆ ಇಂದಿನ ಯುಗದ ಯುವಕಲಾವಿದರ ಜೊತೆಗೂ ಸೇರಿ ಸುಮಾರು 500 ಚಿತ್ರಗಳಲ್ಲಿ ನಟಿಸಿದ್ದರು. ಪ್ರಸಿದ್ಧ 'ಪುಷ್ಪಕ ವಿಮಾನ' ಚಿತ್ರದಲ್ಲಿ ಕಮಲ ಹಾಸನ್ ಅಭಿನಯದ ಚಿತ್ರದಲ್ಲೂ ಅವರ ಅಭಿನಯ ಅವಿಸ್ಮರಣೀಯ.
ತಮ್ಮ ಕಿರಿಯ ಬಾಲ್ಯ ಗೆಳೆಯ ಶಂಕರನಾಗ್ ಅಂದರೆ ಅಪಾರ ಅಭಿಮಾನ ಹೊಂದಿದ್ದ ಮನದೀಪ ರಾಯ್ ಶಂಕರ ನಾಗ್ ಅವರಿಂದ ನಾ ಕಲಿತದ್ದೆಂದರೆ "Be happy and be friendly with everyone and anyone you are with ಹಾಗೂ ಎಲ್ಲರನ್ನೂ ಗೌರವಿಸು ಎಂಬುದನ್ನು" ಎನ್ನುತ್ತಿದ್ದರು.
74 ವರ್ಷದ ಮನದೀಪ ರಾಯ್ ಸಂದರ್ಶನವೊಂದರಲ್ಲಿ "ಕಲಾವಿದ ಯಾವತ್ತೂ ಮುದುಕ ಆಗಲ್ಲ" ಎಂದಿದ್ದರು. ಅವರೆಷ್ಟೇ ವಿಶಾಲ ಮನೋಭಾವದವರಾದರೂ ಹಿರಿಯ ವಯಸ್ಸಿನ ಅವರನ್ನೂ ಹೃದಯಾಘಾತ, ನಂತರದ ಅನಾರೋಗ್ಯಗಳು ಸಾವಿನ ಬಳಿ ಕೊಂಡೊಯ್ಯದಿರಲಿಲ್ಲ. ಮನದೀಪ್ ರಾಯ್ 2023ರ ಜನವರಿ 29ರಂದು ಈ ಲೋಕವನ್ನಗಲಿದರು. ದೇಹಕ್ಕೆ ಮುಪ್ಪು, ಕಾಹಿಲೆ, ಸಾವು ಎಲ್ಲ ಇದೆ, "ಆದರೆ ಮನದೀಪ್ ರಾಯ್ ಅವರೇ ಹೇಳುವಂತೆ ಅವರಂತಹ ಕಲಾವಿದರಿಗೆ ಅದ್ಯಾವುದೂ ಇಲ್ಲ. ಅವರು ಅಮರ."
Respects to departed soul actor Mandeep Rai
ಕಾಮೆಂಟ್ಗಳು