ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೋಕುಲ ನಿರ್ಗಮನ 16


 

ಗೋಕುಲ ನಿರ್ಗಮನ 16

(ಮಹಾನ್ ಕವಿ ಪುತಿನರಸಿಂಹಾಚಾರ್ಯರ ಕೃತಿ)


ಕೃಷ್ಣ


ಎಂದುಮಿಲ್ಲದೀ ಸಂದೆಗವೇಕೆ 

ಪ್ರಿಯೆ ಬಾ ಬಾ ನೆಡು ಪ್ರೇಮಪತಾಕೆ ಮನದೊಳೆನ್ನ ಹೆಣ್ಣೆ - ಚೆನ್ನೆ 

ಶಂಕೆ ಸೋತಿತೆನ್ನೆ


ಕಂಪುಗೂಡಿದೀ ತಂಪಿನ ಇರುಳು 

ತರಮಾಗಿದೆ ಒಲವೊಳು ಕರಗಿರಲು 

ನಂಬಿ ಬಾರೆದೆಯ ಕಣ್ಣೆ - ಚೆನ್ನೆ 

ಶಂಕೆ ಸೋತಿತೆನ್ನೆ


ಮುಗಿಲು-ಮಿಂಚಂತೆ ಶಿವ-ಶಿವೆಯಂತೆ

ಕೂಡುವ ಬಾರೌ ದಿಟ – ಚೆಲುವಂತೆ 

ಲೋಕ ಚೆನ್ನು ಎನ್ನೆ - ಚೆನ್ನೆ

ಶಂಕೆ ಸೋತಿತೆನ್ನೆ


ನಾಳೆಗೆಂತಂದು ಇಂದನು ತೊರೆಯೆ 

ಸೂಸಿ ಬಂದ ಸೊಗವಾರಲು ಸರಿಯೆ

ಇಂದೆ ಎಂದೆಂದು ಎನ್ನೆ - ಚೆನ್ನೆ

ಶಂಕೆ ಸೋತಿತೆನ್ನೆ


ರಾಧೆ

[ಕೃಷ್ಣವಶಳಾಗಿ]

ಹಾಡು : ರಾಗ - ನಾಟಕುರಂಜಿ


ಆಡು ಬಾ ಮುದುವೂಡು ಬಾ ಭಯದೂಡು ಬಾ ಒಲವೇ

ಕಾರಮುಗಿಲ ಚೆಲುವಾ ವನಮಾಲೀ

ಜಗನ್ಮೋಹನಾ ನುತಗುಣಶಾಲೀ

ಒಡನಾಡು ಬಾ ಭಯದೂಡು ಬಾ ಮುದನೀಡು ಬಾ ಒಲವೇ


ಇರುಳು ಜೊನ್ನದೊಲು ನಾವೊಲಿದಿರುವ ಪ್ರಾಣದೇಹದಂತಗಲದೆ ಇರುವ

ಜಗದೊಡಲು ನುಡಿಯಿಡಲು 

ನಾನೆ ನಲ್ಲೆ ನೀನೆ ನಲ್ಲನೆನೆ ಆಡು ಬಾ -


ಚಿಮ್ಮಲಿ ಸೊಗವೆಮ್ಮಿಂ ಜಗಕೆಲ್ಲ 

ಬೆಳಗಲಿ ನಮ್ಮೊಲವಿಂ ಮನವೆಲ್ಲ

ನಲಿದು ತಿರೆ ಉಲಿಯುತಿರೆ

ನಾನೇ ಚೆನ್ನಿ ನೀನೆ ನನ್ನಿ ಎನುತಾಡು ಬಾ -


ಶಂಕೆಯಳಿದೆ ಬಾ ಮೇಘಸುಂದರ

ಬಿಂಕವಳಿದೆ ಬಾ ಹೃದಯಮಂದಿರ

ಅಂಕೆ ಆತಂಕ ತುಸುವು ಇಲ್ಲದೊಲು

ಕೊಂಕನುಳಿದು ನೀ ಶಂಕರನೆಂಬೆನೊ - ಆಡು ಬಾ

ನೀಲಮೇಘಸುಂದರ ವನಮಾಲಿ ಜಗನ್ಮೋಹನ ಶುಭಗುಣಶಾಲೀ – ಒಡನಾಡು ಬಾ


ಕೃಷ್ಣ

ರಾಗಕೇದಾರಗೌಳ

ಕರಣ ಮನವನು ಮನವು ಬುದ್ದಿಯ

ಬುದ್ಧಿ ಹೃದಯನ ಹೃದಯ ಮಮತೆಯನು

ಮಮತೆ ಪ್ರಾಣದ ಮುಂಚೆ ಹರಿದುವೊ ಎನ್ನಲೇಪರಿಯಾಯ್ತು ಸೊಗಮೆನಗೆ!


ಹಾಡು : ರಾಗ - ಕಲ್ಯಾಣಿ

ಎದೆಗೆ ಬರುತಿದೆ ಜಗದ ಮುದ

ಕುಣಿದಲ್ಲದೆ ನಾ ತಾಳೆನಿದ |||

ಹಾಡಿಯಾಡಿ ಕುಣಿದಾಡಿಯಲ್ಲದೆ

ತಾಳಬಲ್ಲೆನೇ ಇಂಥ ಮುದ ||.||


ಬಾಳು ಬಂದಿತೆನೆ ಹರಕೆ ಸಂದಿತೆನೆ

ಬಯಕೆಯ ಮರ ಫಲ ಬಿಟ್ಟಿತೆನ

ಆತ್ಮರಸಕೆ ರುಚಿಯೂರಿತು ಇಂತೆನೆ

ರಾಧೆ ನೀನಿಂತು ಬಾಳಿಗೆ ಬಂದಿರೆ – ಎದೆಗೆ ಬರುತಿದೆ


ಹರುಷದೊಳುಬ್ಬುತ ಹಬ್ಬಿರುವೆನ್ನಯ

ಜಟೆಯೆನೆ ಮರದೊಳು ಚಂದ್ರಮ ತಂಗಿರೆ

ಗಿರಿಜೆಯಂತೆ ನೀ ಬಳಿಯೊಳೆ ನಿಂದಿರೆ

ಶಿವನ ಸುಮ್ಮಾನವಾಗಿದೆ ನನಗೆ – ಎದೆಗೆ ಬರುತಿದೆ 


ತೆಂಗು ತೂಗುವೊಲು ಕೌಂಗು ಬಾಗುವೊಲು

ಅಂಗವಾಡಿಸುವ ಸನ್ನೆಗೈವ ದಾ

ತುಂಬಿ ಬರುತಿಹಾನಂದ ಮುಂದಾಗಿ

ತಿರೆಯ ನೆರೆಯಲಿದೆ ಇದೆ ಇದೆ ಬಳಿಯೆನೆ

ನೆರೆದು ಬರುತಿದೆ ಜಗದ ಮುದ

ಕುಣಿದಲ್ಲದೆ ನಾ ತಾಳೆನಿದ


**********

ಶಂಕೆಯನ್ನು ಬಿಟ್ಟು ನನ್ನವಳಾಗು ಎನ್ನುವನು ಕೃಷ್ಣನನ್ನೆದೆಯಲ್ಲಿ ಪ್ರೇಮದ ಧ್ವಜವನ್ನು ನೆಡುಇರುಳು ಒಲವಿನಲ್ಲಿ ಕರಗಿ ತಂಪಾಗಲಿನನ್ನನ್ನು ನಂಬು ಎನ್ನುವನು.

ಮುಗಿಲು ಮಿಂಚುಗಳಂತೆಶಿವ ಶಿವೆಯರಂತೆ ನಾವು ಕೂಡೋಣನಾಳೆಯ ಚಿಂತೆಯಲ್ಲಿ ಇಂದಿನಸುಖವನ್ನು ತೊರೆಯುವುದು ಬೇಡಇಂದು ಎನ್ನುವುದು ಎಂದೆಂದೂ ಆಗಲಿಸಂದೇಹಗಳನ್ನುಬಿಟ್ಟು ಬಾ ಎನ್ನುವನು.

ರಾಧೆಯು ಕೃಷ್ಣನ ವಶಳಾಗುವಳು.

ಆಡಲು ಬಾಮುದವನ್ನು ನೀಡಲು ಬಾಭಯವನ್ನು ದೂಡು ಬಾ ಚೆಲುವವನಮಾಲಿಜಗನ್ಮೋಹನಗುಣಶಾಲಿಒಡನಾಡು ಬಾ.


 ಇರುಳಿನ ಬೆಳದಿಂಗಳಲ್ಲಿ ಪ್ರಾಣ ದೇಹಗಳಂತೆ ನಾನು ನಲ್ಲೆನೀನು ನಲ್ಲ ಎಂದು ಆಡೋಣ ಬಾ ನಮ್ಮಿಂದ ಜಗಕೆಲ್ಲ ಸೊಗಸು ಚಿಮ್ಮಲಿನಮ್ಮ ಒಲವಿನಿಂದ ಮನ ಬೆಳಗಲಿಭೂಮಿ ನಲಿಯಲಿನಾನು ಚೆನ್ಬಿನೀನು ಚೆನ್ನಆಡೋಣ ಬಾ 

ನನ್ನ ಮನದ ಶಂಕೆಯನ್ನು ತೊರೆದೆಬಿಂಕವನ್ನು ಅಳಿದೆಆತಂಕವಿಲ್ಲಕೊಂಕನ್ನು ಬಿಟ್ಟೆನೀನುವನಮಾಲಿ.

ನೀಲಮೇಘಸುಂದರಶುಭಗುಣಶಾಲಿಒಡನಾಡು ಬಾ ಎನ್ನುವಳು.


ಕೃಷ್ಣನಿಗೆ ಸಂತಸವಾಗುವುದು.

ಕರಣವು ಮನವನ್ನುಮನವು ಬುದ್ಧಿಯನ್ನುಬುದ್ಧಿಯು ಹೃದಯವನ್ನುಹೃದಯ ಮಮತೆಯನ್ನುಮಮತೆಯು ಪ್ರಾಣವನ್ನು ಮುಂಚೆಯೇ ಸೇರಿ ಹೊರಟವೋ ಎಂಬಂತೆ ಆಗಿದೆ  ಸೊಗಸುನಮಗೆ ಎನ್ನುವನು.

ಜಗದ ಸಂತಸವು ಎದೆಗೆ ಬರುತ್ತಿದೆಕುಣಿದಲ್ಲದೆ ಇದನ್ನು ನಾನು ತಾಳಲಾರೆಹಾಡಿಆಡಿಕುಣಿದರೇ  ಮುದ ಚಂದ.

ಬಯಕೆಯ ಮರ ಫಲ ಬಿಟ್ಟಂತೆಹರಕೆ ಸಂದಂತೆಆತ್ಮರಸಕ್ಕೆ ರುಚಿಯು ಬಂದಂತೆ ನೀನು ನನ್ನಬಾಳಿನಲ್ಲಿ ಬಂದೆಹರ್ಷದಲ್ಲಿ ನನ್ನ ಕೂದಲು ಉಬ್ಬುತ್ತಿದೆ ಅದರಂತೆ ಮರದಲ್ಲಿ ಚಂದ್ರಕಾಣುತ್ತಿದ್ದಾನೆಗಿರಿಜೆಯಂತೆ ನೀನು ಬಳಿ ಬಂದರೆ ಶಿವ ನಾನಾಗುವೆಬಾ.


ತೆಂಗು ತೂಗುವಂತೆಅಡಕೆ ಬಾಗುವಂತೆ ನಾವೂ ಆಟವಾಡುವಆನಂದ ತುಂಬಿ ಬರುತ್ತಿದೆಜಗತ್ತಿನ ಮುದ ಹರಿದು ಬರುತ್ತಿದೆಕುಣಿದಲ್ಲದೆ ಇದನ್ನು ನಾನು ತಾಳಲಾರೆಕುಣಿಯೋಣ ಬಾ.


ಭಾವಾರ್ಥಸುಬ್ಬುಲಕ್ಷ್ಮಿ



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ