ತಿರುಪ್ಪಾವೈ30
ತಿರುಪ್ಪಾವೈ 30
ಬನ್ನಿ ಅವನನ್ನು ಸ್ಮರಿಸಿ ಅವನೊಳಗೊಂದಾಗೋಣ
Thiruppavai 30
ವಂಗಕ್ಕಡಲ್ ಕಡೈಂದ ಮಾಧವನೈ ಕ್ಕೇಶವನೈ
ತಿಂಗಳ್ ತಿರುಮುಹುತ್ತುಶೇಯಿಳೈಯಾರ್ ಶೆನ್ನಿರೈಂಜಿ
ಅಂಗಪ್ಪರೈ ಕೊಂಡ ವಾತ್ತೈ ಅಣಿಪುದುವೈ ಪೈಂಗಮಲತ್ತ ನಂ ದರಿಯಲ್ ಪಟ್ಟರ್ಪಿರಾನ್ ಕೊದೈಶೊನ್ನ
ಶಂಗತ್ತಮಿಳ್ ಮಾಲೈ ಮುಪ್ಪದುಂ ತಪ್ಪಾಮೇ
ಇಂಗಪ್ಪರಿಶುರೈಪ್ಪಾರ್ ಈರಿರಂಡು ಮಾಲ್ವರೈತ್ತೋಳ್
ಶೆಂಗಳ್ ತಿರುಮುಹತ್ತು ಚೆಲ್ವರುಮಾಲಾಲ್
ಎಂಗುಂ ತಿರುವರುಳ್ ಪೆಟ್ರು ಇನ್ಬ್ ಅರುಳ್ಎಂಬಾವಾಯ್
ಮಂಗಳಾಶಾಸನಂ
ಕೋದೈ ಪಿರಂದ ಊರ್ ಗೋವಿಂದನ್ ವಾಳುಂ ಊರ್
ಶೋದಿ ಮಣಿಮಾಡಮ್ ತೊನ್ರುಮ್ ಊರ್
ನೀತಿಯಾಲ್ ನಲ್ಲ ಪತ್ತರ್ ವಾಳುಮೂರ್
ನಾನ್ ಮರೈಗಳ್ ಓದುಮೂರ್ ವಿಲ್ಲಿಪುತ್ತೂರ್ ವೇದಕ್ಕೋನೂರ್
ಪಾತಕಂಗಳ್ ತೀರ್ಕುಮ್ ಪರಮನ್ ಅಡಿ ಕಾಟ್ಟುಮ್
ವೇದಂ ಅನೈತ್ತುಕ್ಕುಮ್ ವಿತ್ತಾಗುಮ್ ಕೋದೈ ತಮಿಳ್
ಐನ್ದ್ ಐಂದುಮ್ ಅರಿಯಾದ ಮಾನಿದರೈ
ವೈಯುಮ್ ಶಮಪ್ಪದುಂ ವಂಬು
ತಿರುವಾಡಿ ಪೂರತ್ತು ಶೆಗತ್ತು ಉದಿತ್ತಾಳ್ ವಾಳಿಯೆ
ತಿರುಪ್ಪಾವೈ ಮುಪ್ಪದುಮ್ ಶೇಪ್ಪಿಟ್ಟಾಳ್ ವಾಳಿಯೆ
ಪೆರಿಯಾಳ್ವಾರ್ ಪೈಟ್ರೆಡುತ್ತ ಪೆಣ್ ಪಿಳ್ಳೈ ವಾಳಿಯೆ
ಪೆರಂಬೂದೂರ್ ಮಾಮುನಿಕ್ಕು ಪಿನ್ನ್ ಆನಾಳ್ ವಾಳಿಯೆ
ಒರು ನೂಟ್ರು ನಾರ್ ಪಟ್ರೊರು ಮೂನ್ರು ಉರೈತ್ತಾಳ್ ವಾಳಿಯೆ
ಉಯರ್ ಅರಂಗರ್ಕೇ ಕನ್ನಿ ಉಗಂದು ಅಳಿತ್ತಾಳ್ ವಾಳಿಯೆ
ಮರುವಾರುಮ್ ತಿರುಮಲ್ಲಿ ವಳನಾಡು ವಾಳಿಯೆ
ವಣ್ ಪುದುವೈ ನಗರ್ ಕೋದೈ ಮಲರ್ ಪದಂಗಳ್ ವಾಳಿಯೆ
ಆಂಡಾಳ್ ತಿರುವಡಿಗಳೇ ಶರಣಂ
ಭಾವಾನುವಾದ 30
ಭವಸಾಗರದನಂತ ನಾವೆಗಳ ನಾವಿಕನ ಜ್ಞಾನಗಮ್ಯಾದಿ ದೇವನನು
ಮಾರ್ಗಶಿರ ನೋಂಪಿಯಿಂಪಾಡಿಕೊಂಡಾಡುತ ಪರಮನಡಿ ಸೇರೋಣ
ಬನ್ನಿ ಬನ್ನಿರೆನ್ನೆಲ್ಲ ಬಾಂಧವರೆ ಮೋಕ್ಷ ಕಾಮಿಗಳಾಗುವ ಬನ್ನಿರೊಲವಿಂದ ಗೋದೆ ರಚಿಸಿದೀ ಆರೈದು ಹೊನ್ತಮಿಳ ಗೀತೆಗಳ ತಪ್ಪದೆಲೆ ಪಾಡಿ
ನೋಂಪಿಯನಾಚರಿಸಿ
ಈ ಪರಿಯೊಳಪ್ರಮೇಯನನು ಪಾಡಿ ಬದುಕಿದೊಡೆ ಮಂಗಳವು ಸಕಲರಿಗೆ ಧನ್ಯವೀ ಗೋದೆಯ ಜನ್ಮಧನ್ಯವೀ ಸಿರಿಗೋದೆ ತೌರೂರು ಸಿರಿವಿಲ್ಲಿಪುತ್ತೂರು ಧನ್ಯಳೆನ್ನೆಮ್ಮ ಭಾರತಿಯು ಧನ್ಯರೆನ್ನೊಲಮೆಯಲಿ ಸಲಹಿದೆನ್ನಯ್ಯ
ಶ್ರೀವಿಷ್ಣುಚಿತ್ತಮುನಿ ಫಲಿಸಲಿಂತೆಲ್ಲರನುಪಮ ನೋಂಪಿ ತುಂಬುತೆಲ್ಲಡೆ ಮಂಗಳದ ಮುಂಬೆಳಕು
ಭಾವಾರ್ಥ 30
ಬನ್ನಿ ಎಲ್ಲರೊಂದಾಗಿ ಬನ್ನಿ, ಓ ನನ್ನೆಲ್ಲ ಗೆಳತಿಯರೇ, ಭವಸಾಗರದ ನೌಕೆಗಳನ್ನು ಮುಳುಗದಂತೆ ಕಾಪಿಡುವ ಆ ಕ್ಷೀರಸಾಗರ ಶಯನನಾದ ಕಮಲನಾಭನನ್ನು ತದೇಕಚಿತ್ತದಿಂದ ಧ್ಯಾನಿಸಿ ಕೀರ್ತಿಸಿ ಧನ್ಯರಾಗೋಣ.
ಜನನ ಮರಣಗಳ ಜಾಲದಿಂದ ಬಿಡಿಸಿಕೊಳ್ಳೋಣ. ಭವದಾಸೆಗಳ ತೊರೆದು ಮೋಕ್ಷಕಾಮಿಗಳಾಗುವ ಬನ್ನಿ.
ಶ್ರೀಮನ್ನಾರಾಯಣನು ತಪ್ಪದೇ ನಮ್ಮನ್ನು ಸಲಹುತ್ತಾನೆ. ಈ ಮಂಗಳಕರವಾದ ಮಾರ್ಗಶಿರ ಮಾಸದಲ್ಲಿ ಶ್ರೀವಿಷ್ಣುಚಿತ್ತಮುನಿ ಕರಕಮಲ ಸಂಜಾತೆ ಗೋದಾದೇವಿ ರಚಿಸಿರುವ ಈ ಮೂವತ್ತು ಪದ್ಯಗಳನ್ನೂ ತಪ್ಪದೆಯೇ ಅನುಸಂಧಾನ ಮಾಡಿ ವ್ರತವನ್ನಾಚರಿಸಿ, ದಾನ ಧರ್ಮಗಳನ್ನು ಮಾಡಿ, ಗುರುಹಿರಿಯರಿಗೆ ನಮಸ್ಕರಿಸಿ ಆಶೀರ್ವಾದಗಳನ್ನು ಪಡೆದು ಶ್ರೀಹರಿಯ ಕೃಪೆಗೆ ಪಾತ್ರರಾದಲ್ಲಿ ಈ ಸಿರಿವಿಲ್ಲಿ ಪುತ್ತೂರಿನ ಸಿರಿಗುವರಿಯ ಜನ್ಮಸಾರ್ಥಕ. ನನ್ನನ್ನೆತ್ತಿ ಪೋಷಿಸಿದೆನ್ನಯ್ಯ ವಿಷ್ಣುಚಿತ್ತರ ಜನ್ಮಸಾರ್ಥಕ.
ನಮ್ಮೆಲ್ಲರಿಗೂ ಜನ್ಮದಾತೆಯಾದ ವಿಶ್ವಮಾತೆಯಾದ ಭಾರತಿಯು ಧನ್ಯಳು. ನನ್ನ ತವರೂರು ಸಿರಿವಿಲ್ಲಿಪುತ್ತೂರು ಧನ್ಯ.
ಕೃಪೆ: ದಾಸಗೋಪಾಲ ಕಾವ್ಯನಾಮದ ಅರ್ಚಕ ವೇಣುಗೋಪಾಲ್ ಬಿ. ಎಸ್ ಅವರ ಶ್ರೀಗೋದಾದೇವಿ ಅನುಗ್ರಹಿಸಿದ ತಿರುಪ್ಪಾವೈ ಗೀತಮಾಲೆ
Art credits: Keshav (©KrishnaforToday)

ಕಾಮೆಂಟ್ಗಳು