ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಿ. ಟಿ. ರಾಘವೇಂದ್ರ


 ಜಿ. ಟಿ. ರಾಘವೇಂದ್ರ


ಇಂದು ಹಿರಿಯರಾದ ಜಿ. ಟಿ. ರಾಘವೇಂದ್ರರ ಜನ್ಮದಿನ.  

ರಾಘವೇಂದ್ರ ಅವರು ಮಂಗಳೂರಿನಲ್ಲಿ ಪಾಲಿಟೆಕ್ನಿಕ್ ಓದಿ, ಅಸ್ಸಾಮ್ನಲ್ಲಿ ಮಿಲಿಟರಿಯಲ್ಲಿ 5 ವರ್ಷ ಕೆಲಸಮಾಡಿದರು.  ಆಮೇಲೆ ಅನಿವಾರ್ಯವಾಗಿ ಬಿಟ್ಟು ಬಂದು ಮಡಿಕೇರಿ ಯಲ್ಲಿ  ತೋಟದ ಜವಾಬ್ದಾರಿಯನ್ನು ಹೊತ್ತರು . ಜೊತೆಜೊತೆಗೆ ಸಂಗೀತ, ಸಾಹಿತ್ಯ ,ಬರವಣಿಗೆ ಇತ್ಯಾದಿ ಪ್ರವೃತ್ತಿಯಲ್ಲಿ ತೊಡಗಿಸಿಕೊಂಡರು. 

ರಾಘವೇಂದ್ರರಿಗೆ ಕೃಷಿಯಲ್ಲಿ ಅಪಾರ ಆಸಕ್ತಿ. ಅವರು ತಮ್ಮ ಕೃಷಿಲೋಕವನ್ನು 'ಅಂಗೈ ಬ್ರಹ್ಮಾಂಡ  ಕೃಷಿಕ್ಷೇತ್ರ' ಎನ್ನುತ್ತಾರೆ.  ತಮ್ಮ ಈ ಬ್ರಹ್ಮಾಂಡದಲ್ಲಿ ಅವರ ಸಂಶೋಧನಾಪರ ಕೃಷಿ ಚಟುವಟಿಕೆಗಳು ಅಪರಿಮಿತ.  ಕಾಫಿ, ಭತ್ತ, ತರಕಾರಿ ಹೀಗೆ ಅವರ ಅನೇಕ ಸಾಹಸಗಳನ್ನು ಅವರ ಅಂಕಣಗಳಲ್ಲಿ ಓದುವುದೆ ಚಂದ.  ಈ ಹಿರಿಯ ವಯಸ್ಸಿನಲ್ಲೂ, ಜೀವನದಲ್ಲಿ ಎದುರಿಸಿದ ಹಲವು ತೊಂದರೆಗಳ ನಡುವೆಯೂ, ಅವರು ಎಂದೂ ಕೃಷಿಪ್ರೀತಿ ಕಳೆದುಕೊಂಡವರಲ್ಲ.  ಈ ಹಿರಿಯ ವಯಸ್ಸಿನಲ್ಲೂ ಅವರದ್ದು ಅದೇ ನಲುಗದ ಉತ್ಸಾಹ.

ಈ ಹಿರಿಯರಿಗೆ ಪ್ರೀತಿ ತುಂಬಿ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

G. T.  Raghavendra





ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ