ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಏನು ಮಾತು


 
ಏನು ಮಾತು, ಏನು ಮಾತೂ
ಏನು ಮಾತಮ್ಮ ಇದು ಸುಳ್ಳು
ಹೋಗಿ, ಹೋಗಿ…ಏನು ಮಾತು...


ನಮ್ಮ ಮನೆಯಲ್ಲಿ ಇಲ್ಲವೇ ಕೆನೆ,
ಯಾತಕೀ ಕೃಷ್ಣನಿಗೆ ನಿಮ್ಮ ಬೆಣ್ಣೆ.
ನಮ್ಮ ಮನೆಯಲ್ಲಿ ಇಲ್ಲವೇ ಮೊಸರು
ಯಾತಕೀ ಕೃಷ್ಣನಿಗೆ ಕೆಟ್ಟ ಹೆಸರು...
ಏನು ಮಾತು, ಏನು ಮಾತೂ 
ಏನು ಮಾತಮ್ಮ ಇದು ಸುಳ್ಳು
ಹೋಗಿ, ಹೋಗಿ, ಏನು ಮಾತು...

ಹಸು ಕಂದಮ್ಮಗಳೆ ಮನೆಯ  ಬೆಳಕಲ್ಲವೆ?
ನೀವವರ ಬಯಕೆ ತೀರಿಪ, ತಾಯಂದಿರೆ ಅಲ್ಲವೆ?
ಅವನ ಕಳ್ಳನೆಂದು ಹೇಳುವುದು ಸರಿಯೆ?
ನಿಮ್ಮ ಮನ, ಮನೆತನ ರಕ್ಷಿಸುವ ಹರಿಯೆ.
ಏನು ಮಾತು, ಏನು ಮಾತೂ 
ಏನು ಮಾತಮ್ಮ ಇದು ಸುಳ್ಳು

ನಿಮಗೆ ಮತ್ಸರವು ಯಾತಕೇ ನನ್ನ ಕುರಿತು
ಅವನ ಎಣಿಸಬಹುದೇ ಭಕ್ತಿಭಾವ ಮರೆತು
ಮಕ್ಕಳಲ್ಲಿ ಕೃಷ್ಣನೆಂದರೆ, ಸಾಮಾನ್ಯನೇ
ಬಾಯಿಯಲ್ಲಿ ವಿಶ್ವತೋರಿಸಿದ ಮಾನ್ಯನೇ
ಏನು ಮಾತು, ಏನು ಮಾತೂ
ಏನು ಮಾತಮ್ಮ ಇದು ಸುಳ್ಳು 
ಹೋಗಿ ಹೋಗಿ... ಏನು ಮಾತೂ....

ಸಾಹಿತ್ಯ: ರಾಘವ (ಎಂ.ವಿ. ಸೀತಾರಾಮಯ್ಯ)
ಗಾಯನ:‍ ವಾಣಿ ಜಯರಾಮ್ಕ
ಸಂಗೀತ: ಬಿ. ರಜನೀಕಾಂತರಾವ್




ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ