ಜನಾರ್ಧನ ತುಂಗ
ಜನಾರ್ಧನ ತುಂಗ
ಜನಾರ್ಧನ ತುಂಗ ಅವರು ಕನ್ನಡ ಭಾಷೆಯಲ್ಲಿ ಸುಂದರವಾಗಿ ಬರೆಯುತ್ತಿರುವವರಲ್ಲಿ ಒಬ್ಬರು.
ಜನಾರ್ಧನ ತುಂಗ ಅವರು ಜನಿಸಿದ್ದು 1957ರ ಆಗಸ್ಟ್ 29ರಂದು. ಕೋಟದ ಮೂಲದವರಾದ ಇವರು ವಿದ್ಯಾಭ್ಯಾಸದ ನಂತರದಲ್ಲಿ ಬ್ಯಾಂಕ್ ಆಫ್ ಬರೋಡದಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಜನಾರ್ಧನ ಅವರ ಸಾಹಿತ್ಯ ಮತ್ತು ತತ್ವಶಾಸ್ತ್ರದಲ್ಲಿನ ಓದು ಮತ್ತ ಆಸಕ್ತಿಗಳು ಆಳವಾದದ್ದು ಮತ್ತು ವಿಶಾಲವ್ಯಾಪ್ತಿಯ ನೆಲೆ ಉಳ್ಳದ್ದು. ಅವರ ಅನೇಕ ವ್ಯಕ್ತಿ ಚಿತ್ರಣಗಳು, ವಿಮರ್ಶೆ ಮತ್ತು ತಾತ್ವಿಕ ನೆಲೆಯ ಬರಹಗಳನ್ನು ನಾನು ಆನಂದಿಸಿದ್ದೇನೆ.
ಜನಾರ್ಧರ ತುಂಗರ ಜೊತೆ ಕಳೆದ ಗಳಿಗೆಳು ತುಂಬ ಆಪ್ತವಾಗಿತ್ತು. ಅವರ ಬರಹಗಳ ಬಗ್ಗೆ ಅರಿಯುವುದು ಇನ್ನೂ ತುಂಬ ಇದೆ. ಹೀಗಾಗಿ ನನ್ನ ಅವರ ಕುರಿತ ಈ ಬರಹ ಅಲ್ಪಮತಿಯದ್ದು. ಪ್ರಮುಖವಾಗಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳುವ ಸದುದ್ದೇಶದ್ದು.
ಆತ್ಮೀಯ ಸಹೃದಯಿ ಪ್ರಾಜ್ಞ ಬರಹಗಾರರಾದ ಜನಾರ್ಧನ ತುಂಗರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday K Janardhana Thunga Thunga 🌷🙏🌷
ಕಾಮೆಂಟ್ಗಳು