ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬೆಂಶ್ರೀ ರವೀಂದ್ರ

ಬೆಂಶ್ರೀ ರವೀಂದ್ರ

ಬೆಂಶ್ರೀ ರವೀಂದ್ರ ಅವರ ಚಿತ್ರಗಳನ್ನು ನೋಡುತ್ತಿದ್ದಂತೆ ಅವರ ಕಂಗಳ ಕಾಂತಿಗೆ ಪರವಶವಾಗುವಂತಾಯಿತು.  ಅಡಿಗರ ಮಾತು ನೆನಪಾಯಿತು.  "ಹುತ್ತಗಟ್ಟದೆ ಚಿತ್ತ ಕೆತ್ತೀತೆ!” ಅದನ್ನೇ ಯೋಚಿಸಿದಾಗ ಹಾಗೆ ಚಿತ್ತ ಕೆತ್ತದೆ ಇಂತ ಸಹಜ ನಗು ಅರಳೀತೆ ಅನಿಸಿತು.

ಫೆಬ್ರವರಿ 22,  ರವೀಂದ್ರರ ಹುಟ್ಟುಹಬ್ಬ.  1954 ಹುಟ್ಟಿದ ವರ್ಷ.  ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗದಲ್ಲಿದ್ದವರು. ಅಲ್ಲಿದ್ದಾಗಲೂ ಕನ್ನಡ ಇವರ ಉಸಿರಾಗಿತ್ತು.  ಇಂದೂ ಅದು ಅವರ ಉಸಿರು. 

ರವೀಂದ್ರರು ಎಲ್ಲ ರೀತಿಯ ಬರಹ ಮಾಡಿದ್ದಾರೆ.  ಸಂಘಟಕರಾಗಿ ಅವರು ಪ್ರಸಿದ್ಧರು. ಅನೇಕ ಸಾಧಕರ ಕುರಿತು ನಾಡಿಗೆ ಬೆಳಕು ತಂದಿದ್ದಾರೆ. ಅಂತೆಯೇ ಅನೇಕ ಪ್ರತಿಭೆಗಳಿಗೂ ಬೆಳಕು ನೀಡುತ್ತಿದ್ದಾರೆ.  

ಅಪೂರ್ವ ತೇಜದ ಬೆಂಶ್ರೀ ಅಂತಹವರು ಕನ್ನಡದ ನೈಜ ಶಕ್ತಿ.  ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ. 

Happy birthday B S Ravindra 🌷🙏🌷


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ