ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮರೆಯಬೇಡ ಮನವೆ ನೀನು


ಮರೆಯಬೇಡ ಮನವೆ ನೀನು
ಹರಿಯ ಸ್ಮರಣೆಯ

ಯಾಗಯಜ್ಞ ಮಾಡಲೇಕೆ 
ಯೋಗಿಯತಿಯು ಆಗಲೇಕೆ
ನಾಗಶಯನ ನಾರದನುತನ 
ಕೂಗಿ ಭಜನೆಮಾಡೋ

ಸತಿಯು ಸುತರು ಹಿತರು ಎಂದು 
ಮತಿಯುಗೆಟ್ಟು ಕೆಡಲಿಬೇಡ
ಗತಿಯು ತಪ್ಪಿ ಹೋಗುವಾಗ 
ಸತಿಯು ಸುತರು ಬರುವರೇ             

ಹರಿಯ ಸ್ಮರಣೆ ಮಾತ್ರದಿಂದ
ಘೋರದುರಿತವೆಲ್ಲ ನಾಶ
ಪರಮಪುರುಷ  ಶ್ರೀ ಪುರಂದರ 
ವಿಠಲರಾಯ ಪದವಿ ಕೊಡುವ

ಸಾಹಿತ್ಯ: ಪುರಂದರದಾಸರು

Tag: Mareyabeda manave neenu

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ