ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ
ಆಗದು ಎಂದು ಕೈ ಕಟ್ಟಿ ಕುಳಿತರೆ
ಸಾಗದು ಕೆಲಸವು ಮುಂದೆ
ಮನಸೊಂದಿದ್ದರೆ ಮಾರ್ಗವು ಉಂಟು
ಕೆಚ್ಚೆದೆ ಇರಬೇಕೆಂದು ಕೆಚ್ಚೆದೆ ಇರಬೇಕೆಂದೆಂದು
ಕೆತ್ತಲಾಗದು ಕಗ್ಗಲ್ಲೆಂದು ಎದೆಗುಂದಿದ್ದರೆ ಶಿಲ್ಪಿ
ಆಗುತಿತ್ತೆ ಕಲೆಗಳ ಬೀಡು
ಗೊಮ್ಮಟೇಶನ ನೆಲೆನಾಡು
ಬೇಲೂರು ಹಳೆಬೀಡು, ಬೇಲೂರು ಹಳೆಬೀಡು
ಕಾವೇರಿಯನು ಹರಿಯಲು ಬಿಟ್ಟು
ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ
ಕನ್ನಂಬಾಡಿಯ ಕಟ್ಟದಿದ್ದರೆ
ಬಂಗಾರ ಬೆಳೆವ ಹೊನ್ನಾಡು,
ಆಹಾ, ಬಂಗಾರ ಬೆಳೆವ ಹೊನ್ನಾಡು,
ಆಗುತಿತ್ತೆ ಈ ನಾಡು
ಕನ್ನಡ ಸಿರಿನಾಡು, ನಮ್ಮ ಕನ್ನಡ ಸಿರಿನಾಡು
ಕೈಕೆಸರಾದರೆ ಬಾಯಿ ಮೊಸರೆಂಬ
ಹಿರಿಯರ ಅನುಭವ ಸತ್ಯ,
ಇದ ನೆನಪಿಡಬೇಕು ನಿತ್ಯ,
ದುಡಿಮೆಯ ನಂಬಿ ಬದುಕು,
ಅದರಲೆ ದೇವರ ಹುಡುಕು,
ಬಾಳಲಿ ಬರುವುದು ಬೆಳಕು,
ನಮ್ಮ ಬಾಳಲಿ ಬರುವುದು ಬೆಳಕು
ಚಿತ್ರ: ಬಂಗಾರದ ಮನುಷ್ಯ
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ಜಿ.ಕೆ.ವೆಂಕಟೇಶ್
ಗಾಯನ: ಪಿ. ಬಿ. ಶ್ರೀನಿವಾಸ್
ಸಾಗದು ಕೆಲಸವು ಮುಂದೆ
ಮನಸೊಂದಿದ್ದರೆ ಮಾರ್ಗವು ಉಂಟು
ಕೆಚ್ಚೆದೆ ಇರಬೇಕೆಂದು ಕೆಚ್ಚೆದೆ ಇರಬೇಕೆಂದೆಂದು
ಕೆತ್ತಲಾಗದು ಕಗ್ಗಲ್ಲೆಂದು ಎದೆಗುಂದಿದ್ದರೆ ಶಿಲ್ಪಿ
ಆಗುತಿತ್ತೆ ಕಲೆಗಳ ಬೀಡು
ಗೊಮ್ಮಟೇಶನ ನೆಲೆನಾಡು
ಬೇಲೂರು ಹಳೆಬೀಡು, ಬೇಲೂರು ಹಳೆಬೀಡು
ಕಾವೇರಿಯನು ಹರಿಯಲು ಬಿಟ್ಟು
ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ
ಕನ್ನಂಬಾಡಿಯ ಕಟ್ಟದಿದ್ದರೆ
ಬಂಗಾರ ಬೆಳೆವ ಹೊನ್ನಾಡು,
ಆಹಾ, ಬಂಗಾರ ಬೆಳೆವ ಹೊನ್ನಾಡು,
ಆಗುತಿತ್ತೆ ಈ ನಾಡು
ಕನ್ನಡ ಸಿರಿನಾಡು, ನಮ್ಮ ಕನ್ನಡ ಸಿರಿನಾಡು
ಕೈಕೆಸರಾದರೆ ಬಾಯಿ ಮೊಸರೆಂಬ
ಹಿರಿಯರ ಅನುಭವ ಸತ್ಯ,
ಇದ ನೆನಪಿಡಬೇಕು ನಿತ್ಯ,
ದುಡಿಮೆಯ ನಂಬಿ ಬದುಕು,
ಅದರಲೆ ದೇವರ ಹುಡುಕು,
ಬಾಳಲಿ ಬರುವುದು ಬೆಳಕು,
ನಮ್ಮ ಬಾಳಲಿ ಬರುವುದು ಬೆಳಕು
ಚಿತ್ರ: ಬಂಗಾರದ ಮನುಷ್ಯ
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ಜಿ.ಕೆ.ವೆಂಕಟೇಶ್
ಗಾಯನ: ಪಿ. ಬಿ. ಶ್ರೀನಿವಾಸ್
Tag: Aagadu endu kaikatti kulitare
ಕಾಮೆಂಟ್ಗಳು