ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಉತ್ತಿಷ್ಠತ ಜಾಗ್ರತ, ಮನುಜ


ಉತ್ತಿಷ್ಠತ ಜಾಗ್ರತ, ಮನುಜ

ಗುರಿಯನು ಸೇರುವವರೆಗೂ, ನೀ
ಅರೆಕ್ಷಣ ನಿಲ್ಲದೆ ಮುನ್ನಡೆ ಸಖನೇ.

ನಿನ್ನಯ ಗುರಿಯು ಆತ್ಮದರುಶನ
ನಿನ್ನೊಳಗೆಯೆ ಇದೆ ಆ ರತುನ.
ಬನ್ನಪಡುತ ಈ ಕ್ಷುದ್ರ ಜೀವನದಿ
ಇನ್ನು ತೊಳಲದಿರು ಮುನ್ನಡೆ ಸಖನೇ.

ಮಮತೆಯ ಈ ದೇಹವೆ ನೀನೆಂದು
ಭ್ರಮಿಸದಿರೈ ನೀ ಎಂದೆಂದೂ.
ಅಮರ ಆತ್ಮ ನೀ ಅಮೃತಪುತ್ರನೇ
ಅಮಲಾನಂದದಿ ಪರಿಪೂರ್ಣನು ನೀ.

ಕೃಪೆ: ರಾಮಕೃಷ್ಣ ಮಠದ ಕೀರ್ತನ ಸಂಗ್ರಹ


Tag: Uttishtata Jagrata Manuja

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ