ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿರಸವೆಂಬ ವಿಷಕೆ ಬಲಿಯಾದೆ ಏತಕೆ?

ವಿರಸವೆಂಬ ವಿಷಕೆ ಬಲಿಯಾದೆ ಏತಕೆ?
ಸುಖ ಶಾಂತಿ ನಾಶಕೆ
ಮರುಳಾ!

ಗೆಲುವ ಛಲವಾ ಹೊಂದಿ ಮನದಲೀ
ಸೇಡಿನಿಂದಲೀ ಕಿಡಿಯಾಗಿ ಹಠದಲಿ
ಸಾಲವೆನ್ನುವಾ ಆ ಶೂಲವೇರುವಾ
ಗತಿಯಾಯ್ತೆ ಮಾನವ

ಬಂಧು, ಬಳಗ, ನೆಂಟರೆಲ್ಲರೂ
ಗಂಟು ಹೋಗಲೂ ಇನ್ನೆಲ್ಲಿ ನಿಲುವರು?
ಲಾಭ ಯಾರಿಗೋ, ಸಂತಾಪ ಯಾರಿಗೋ
ವಿಧಿ ಲೀಲೆ ಏನಿದೋ!

ಚಿತ್ರ: ಭೂತಯ್ಯನ ಮಗ ಅಯ್ಯು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ ಮತ್ತು ಗಾಯನ: ಚಿ. ಕೆ. ವೆಂಕಟೇಶ್


Tag: Virasavemba Vishake

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ