ಕಿರಣ್ ದೇಸಾಯಿ
ಕಿರಣ್ ದೇಸಾಯಿ
ಭಾರತದಲ್ಲಿ ಜನಿಸಿದ ಕಿರಣ್ ದೇಸಾಯಿ ವಿಶ್ವಪ್ರಸಿದ್ಧ ಲೇಖಕಿ.
ಕಿರಣ್ ದೇಸಾಯಿ 1971ರ ಸೆಪ್ಟಂಬರ್ 3ರಂದು ನವದೆಹಲಿಯಲ್ಲಿ ಜನಿಸಿದರು. ಇವರ ತಾಯಿ ಅನಿತಾ ದೇಸಾಯಿ ಅವರೂ ಪ್ರಸಿದ್ಧ ಲೇಖಕಿಯಾಗಿದ್ದು ಅವರ ಮೂರು ಪುಸ್ತಕಗಳು ಬೂಕರ್ ಪ್ರೈಜ್ ಸ್ಪರ್ಧೆಯ ಅಂತಿಮ ಕಣವನ್ನು ಪ್ರವೇಶಿಸಿದ್ದವು.
ತಮ್ಮ ಬಾಲ್ಯವನ್ನು ಪುಣೆ ಮತ್ತು ಮುಂಬೈನಲ್ಲಿ ಕಳೆದ ಕಿರಣ್ ದೇಸಾಯಿ ತಮ್ಮ 14ನೇ ವಯಸ್ಸಿನಲ್ಲಿ ತಾಯಿ ಅನಿತಾ ದೇಸಾಯಿ ಅವರೊಂದಿಗೆ ಇಂಗ್ಲೆಂಡಿಗೆ ತೆರಳಿದರು. ಅಲ್ಲಿ ಒಂದು ವರ್ಷವಿದ್ದು ಅಮೆರಿಕಕ್ಕೆ ಹೋದರು. ಅಲ್ಲಿ ಹಾಲಿನ್ಸ್ ವಿಶ್ವವಿದ್ಯಾಲಯದ ಬೆನ್ನಿಂಗ್ಟನ್ ಕಾಲೇಜಿನಲ್ಲಿ ಹಾಗೂ ಕೊಲಂಬಿಯಾ ವಿಶ್ವವಿದ್ಯಾಲಯಗಳಲ್ಲಿ ಸೃಜನಾತ್ಮಕ ಬರವಣಿಗೆಯನ್ನು ಅಧ್ಯಯನ ಮಾಡಿದರು.
ಕಿರಣ್ ದೇಸಾಯಿ 1998ರಲ್ಲಿ ಪ್ರಕಟಿಸಿದ ಮೊದಲ ಕಾದಂಬರಿ 'ಹುಲ್ಲಾಬಲೂ ಇನ್ ದಿ ಗುವಾ ಆರ್ಚರ್ಡ್' ಸಲ್ಮಾನ್ ರಷ್ದಿ ಅಂತಹ ಬರಹಗಾರರ ಮೆಚ್ಚುಗೆ ಗಳಿಸಿತು. ಅದಕ್ಕೆ ಪ್ರತಿಷ್ಟಿತ ಬೆಟ್ಟಿ ಟಾಸ್ಕ್ ಪ್ರಶಸ್ತಿ ಸಂದಿತು.
ಕಿರಣ್ ದೇಸಾಯಿ ಅವರ 'ದಿ ಇನ್ಹರಿಟೆನ್ಸ್ ಆಫ್ ಲಾಸ್' ಕಾದಂಬರಿಗೆ 2006ರ ಮ್ಯಾನ್ ಬೂಕರ್ ಪ್ರೈಜ್ ಮತ್ತು ನ್ಯಾಷನಲ್ ಬುಕ್ ಕ್ರಿಟಿಕ್ಸ್ ಸರ್ಕಲ್ ನ ಫಿಕ್ಷನ್ ಪ್ರಶಸ್ತಿ ಸಂದಿತು.
2013ರಲ್ಲಿ ಕಿರಣ್ ದೇಸಾಯಿ ಅವರಿಗೆ ಅಮೆರಿಕನ್ ಅಕಾಡಮಿ ಇನ್ ಬರ್ಲಿನ್ ಅವರಿಂದ ಬರ್ಲಿನ್ ಪ್ರೈಜ್ ಫೆಲೋಷಿಪ್ ಸಂದಿತು.
ಕಿರಣ್ ದೇಸಾಯಿ ಪ್ರಶಸ್ತಿ, ಜನಪ್ರಿಯತೆ, ಹಣ ಇತ್ಯಾದಿ ಬಂತು ಎಂದು ಸುಮ್ಮನೆ ಬರೆಯುತ್ತ ಹೋದವರಲ್ಲ. ನಾನು "ಅಧಿಕಾರದ ಬಗ್ಗೆ, ಭಾರತದ ಹೊರಗಿರುವ ಭಾರತೀಯ ಮಹಿಳೆಯೊಬ್ಬಳ ಬಗ್ಗೆ ಕಾದಂಬರಿಯೊಂದನ್ನು ಮೂಡಿಸಲು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ತೊಡಗಿಕೊಂಡಿದ್ದೇನೆ" ಎಂದಿದ್ದಾರೆ. ಹಾಗೆ ಮಾಡುವುದು - ಮಾಡದಿರುವುದು - ಮಾಡಿದರೆ ಶ್ರೇಷ್ಠವಾದದ್ದನ್ನೇ ಮಾಡುತ್ತೇನೆ ಎನ್ನುವುದು ಎಲ್ಲರಿಗೂ ಸಾಧ್ಯವಿಲ್ಲ.
On the birth day Booker Prize winner Kiran Desai
ಕಾಮೆಂಟ್ಗಳು