ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂಪತ್‍ಕುಮಾರ್


ದೇಶದ ಏಕೈಕ ಸಂಸ್ಕೃತ ಪತ್ರಿಕೆ 'ಸುಧರ್ಮಾ'ದ ಸಂಪತ್‍ಕುಮಾರ್ ಇನ್ನಿಲ್ಲ


ದೇಶದ ಏಕೈಕ ಸಂಸ್ಕೃತ ದಿನ ಪತ್ರಿಕೆ 'ಸುಧರ್ಮಾ' ಅನ್ನು ನಡೆಸುತ್ತಿದ್ದ ನನ್ನ ಗೆಳೆಯ ಮತ್ತು ಬಂಧು, ಪದ್ಮಶ್ರೀ ಪುರಸ್ಕೃತ ಕೆ. ವಿ. ಸಂಪತ್‍ಕುಮಾರ್ ಇಂದು ಮೈಸೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.  ಅವರಿಗೆ 64ವರ್ಷ ವಯಸ್ಸಾಗಿತ್ತು. 

ಸಂಪತ್‍ಕುಮಾರ್ ಅವರ ತಂದೆ ದಿವಂಗತ ವರದರಾಜ ಅಯ್ಯಂಗಾರ್ ಅವರು ಈ ಪತ್ರಿಕೆಯನ್ನು 1970ರ ವರ್ಷದಲ್ಲಿ ಮೈಸೂರಿನಲ್ಲಿ ಪ್ರಾರಂಭಿಸಿದ್ದರು. ತಮ್ಮ ತಂದೆಯವರ ನಿಧನಾನಂತರದಲ್ಲಿ ಸಂಪತ್‍ಕುಮಾರ್ ಮತ್ತು ಅವರ ಪತ್ನಿ ಜಯಲಕ್ಷ್ಮಿ ಅವರು ಈ ಪತ್ರಿಕೆಯನ್ನು ಕಳೆದ 30 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ.   ದೇಶದಲ್ಲಿ ಏಕೈಕ ಸಂಸ್ಕೃತ ಪತ್ರಿಕೆಯಾದ 'ಸುಧರ್ಮಾ' ಅನ್ನು  ನಡೆಸುತ್ತಿರುವ ಕೈಂಕರ್ಯಕ್ಕೆ ಸಂಪತ್‍ಕುಮಾರ್ ಮತ್ತು ಜಯಲಕ್ಷ್ಮೀ ದಂಪತಿಗಳಿಗೆ 2020 ವರ್ಷದಲ್ಲಿ ಪದ್ಮಶ್ರೀ ಗೌರವ ಸಂದಿತ್ತು.

ನನ್ನ ಹಿರಿಯ ಸಹಪಾಠಿ, ಗೆಳೆಯ ಮತ್ತು ಬಂಧುವಾಗಿದ್ದ ಕೆ. ವಿ. ಸಂಪತ್‍ಕುಮಾರ್ ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು.  ಆತ್ಮೀಯರಾದ ಅವರ ಪತ್ನಿ ಜಯಲಕ್ಷ್ಮೀ ಮತ್ತು ಬಂಧುಗಳಿಗೆ ಈ ನಷ್ಟವನ್ನು ಸಹಿಸುವ ಶಕ್ತಿ ಒದಗಲಿ.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ