ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅನಂತ ಚತುರ್ದಶಿ


 ಅನಂತ ಚತುರ್ದಶಿ


ಭಾದ್ರಪದ ಶುಕ್ಲ ಪಕ್ಷ ಚತುರ್ದಶಿಯನ್ನು 'ಅನಂತ ಚತುರ್ದಶಿ' ಎಂದು ಕರೆಯುತ್ತಾರೆ. ಚತುರ್ಥಿಯಿಂದ ಪ್ರಾರಂಭವಾಗುವ ಗಣೇಶನ ಹಬ್ಬವನ್ನು ಹೆಚ್ಚು ದಿನ ಆಚರಿಸುವವರು ಈ ದಿನವನ್ನು ಆ ಹಬ್ಬದ ಕೊನೆಯ  ದಿನವಾಗಿ ಆಚರಿಸುತ್ತಾರೆ. ಈ ದಿನದಂದು ಅನೇಕರು ಅನಂತ ವ್ರತವನ್ನು ಆಚರಿಸುತ್ತಾರೆ. ಈ ದಿನದಂದು ಶ್ರೀ ವಿಷ್ಣು ಅನಂತ ಪದ್ಮನಾಭ ದೇವರಾಗಿ ಭೂಮಿಯಲ್ಲಿ ಅವತಾರ ತಾಳಿದರು ಎಂದು ನಂಬಿಕೆಯಿದೆ

ಕೌಂಡಿಲ್ಯ ಮುನಿಯು ವಿವಾಹದ ನಂತರ ಸಪತ್ನೀಕನಾಗಿ ಮನೆಯಿಂದ ಹೊರಟನಂತೆ. ದಾರಿಯಲ್ಲಿ ನದಿಯ ತೀರದಲ್ಲಿ ಅವರು ನಿತ್ಯ ಕರ್ಮಗಳಿಗೆ ನಿಂತಾಗ, ಅವರ ಪತ್ನಿಯು ಕೆಲವು ಮಹಿಳೆಯರನ್ನು ಒಂದು ವ್ರತವನ್ನು ಆಚರಿಸುತ್ತಿರುವುದನ್ನು ನೋಡಿದಳು. ಇದರಿಂದ ಪ್ರಭಾವಿತರಾದ ಕೌಂಡಿಲ್ಯ ಮುನಿಯ ಪತ್ನಿಯೂ ಕೂಡ ಶೇಷಶಯನನಾದ ಶ್ರೀ ವಿಷ್ಣುವನ್ನು ಪ್ರಸನ್ನಗೊಳಿಸಲು ಅನಂತ ವ್ರತವನ್ನು ಆಚರಿಸತೊಡಗಿದಳು. ಇದರಿಂದಾಗಿ ಈ ದಂಪತಿಗಳಿಗೆ ಭಾಗ್ಯ ಲಭಿಸಿತು.

ಪಾಂಡವರು ಕೌರವರಿಗೆ ರಾಜ್ಯವನ್ನು ಸೋತು 14 ವರ್ಷಗಳ ಕಾಲ ವನವಾಸವನ್ನು ಅನುಭವಿಸಬೇಕಾಯಿತು. ಈ ಸಮಯದಲ್ಲಿ ಶ್ರೀ ಕೃಷ್ಣನು ಪಾಂಡವರಿಂದ ಅನಂತ ವ್ರತವನ್ನು ಆಚರಿಸಿದನು, ಇದರ ಫಲವಾಗಿ ಅವರಿಗೆ ರಾಜ್ಯ ಭಾಗ್ಯ ಮರಳಿ ದೊರೆಯಿತು ಎಂಬ ನಂಬಿಕೆಯೂ ಇದೆ.

ಬಾಲ್ಯದಿಂದಲೂ ಈ ಹಬ್ಬವನ್ನು ಅನೇಕ ಕುಟುಂಬಗಳು ಅತ್ಯಂತ ಶ್ರದ್ಧೆಯಿಂದ ಆಚರಿಸುವುದನ್ನು ಕಂಡಿದ್ದೇನೆ.  ನಾವು ಮೈಸೂರಿನಲ್ಲಿ ವಠಾರದಲ್ಲಿ ಬಾಲ್ಯವನ್ನು ಕಳೆದಾಗ ನಮ್ಮನ್ನು ಕರೆದು ಪುಷ್ಕಳ ಭೋಜನ ನೀಡುತ್ತಿದ್ದ ಮಾತೃಹೃದಯಿ ರಾಜಮ್ಮ ಸುಬ್ಬರಾವ್ ಅವರಂತೂ ನನಗೆ ಸದಾ ಸ್ಮರಣೀಯರು.   ಎಂತೆಂಥ ದಿವ್ಯ ಜೀವಿಗಳ ಅಕ್ಕರೆಯಲ್ಲಿ ನಮ್ಮ ಬಾಳು ಅರಳಿತು ಎಂದು ಹೃದಯ ಧನ್ಯತೆ ಅನುಭವಿಸುತ್ತಿದೆ.  ಇಂತಹ ನೆನಪುಗಳೇ ನನಗೆ ನಿಜವಾದ ಹಬ್ಬ.

Ananta Chaturdashi

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ