ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂಕ್ರಾಂತಿ

 




ಹೊಸ ಬಗೆಯಲಿ ಬರಲಿ

ಸುಖ ಸಾವಿರ ತರಲಿ

ಹರಿಸಿ ನಮ್ಮ ಕಣ್ಣ ಕವಿದ ಭ್ರಾಂತಿ

ಮನ್ನಿಸಿ ನಡೆಸಲಿ ಶುಭ ಸಂಕ್ರಾಂತಿ


ತುಳಿದು ಆಳಲಾಗದಂಥ ಬಾಳಿಗೆ

ಹೊನ್ನಿನ ತೋರಣವ ಬಿಗಿದ ನಾಳೆಗೆ

ಹೊಂಬಿಸಿಲಿನ ಹಾದಿಗೆ

ಕೇದಗೆ ಹೂ ಬೀದಿಗೆ

ಮಾತೆಲ್ಲವೂ ಕೃತಿಯಾಗುವ ಜಾಡಿಗೆ|


ಹೊಸ ಬಗೆಯಲಿ ಬರಲಿ

ಸುಖ ಸಾವಿರ ತರಲಿ


ಕಣ್ಣೆರಡೂ ಉರಿವ ದೀಪಸ್ತಂಭ

ಮೇಲೆತ್ತಿದ ತೋಳುಗಳೇ ಕಂಬ

ದೇಹವೇ ಗುಡಿಯಾಗಿ

ನಾಡೇ ಇಡಿಯಾಗಿ

ಸ್ವಾಗತಿಸಲಿ ಸಂಕ್ರಾಂತಿಯ ಕೂಗಿ|


ಸಾಹಿತ್ಯ: ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ