ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸವಿತಾ ಶಾಸ್ತ್ರಿ



 ಸವಿತಾ ಶಾಸ್ತ್ರಿ


ಸವಿತಾ ಶಾಸ್ತ್ರಿ ಅವರು ಬರಹಗಾರ್ತಿಯಾಗಿ, ಕನ್ನಡದ ಸಕ್ರಿಯ ಕಾರ್ಯಕರ್ತೆಯಾಗಿ, ಸಂಘಟನಾ ಚತುರೆಯಾಗಿ ಮತ್ತು ಉಪನ್ಯಾಸಕಿಯಾಗಿ ಹೆಸರಾಗಿದ್ದಾರೆ. 

ಜುಲೈ 24 ಸವಿತಾ ಮಾಧವ ಶಾಸ್ತ್ರಿ ಅವರ ಜನ್ಮದಿನ.  ಅವರ ಮೂಲ ಊರು ಮರವಂತೆ. ಮಾಧವ‍ ಶಾಸ್ತ್ರಿಗಳ ಜೊತೆ ವಿವಾಹವಾಗಿ ಉಡುಪಿಯ ಸಾಲಿಗ್ರಾಮದ ನಿವಾಸಿಯಾಗಿದ್ದಾರೆ. ಬಿ.ಎಸ್ಸಿ ಮತ್ತು ಇಂಗ್ಲಿಷ್ ಎಂ. ಎ. ವಿದ್ಯಾಸಾಧನೆಗಳನ್ನು ಮಾಡಿ ಶಿಕ್ಷಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕಥೆ, ಕವನ, ಪ್ರಬಂಧ, ಚಿಂತನೆ, ಅಡುಗೆ ರುಚಿ ಹೀಗೆ ಸವಿತಾ ಶಾಸ್ತ್ರಿ ಅವರ ಬರಹಗಳು ಕನ್ನಡದ ಎಲ್ಲ ನಿಯತಕಾಲಿಕಗಳು ಮತ್ತು ವಿಶೇಷಾಂಕಗಳಲ್ಲಿ ರಾರಾಜಿಸುತ್ತ ಸಾಹಿತ್ಯಲೋಕದಲ್ಲಿ ಗಮನ ಸೆಳೆದಿವೆ. 'ನೀರ್ ದೋಸೆ' ಎಂಬುದು ಇವರ ಲಲಿತ ಪ್ರಬಂಧಗಳ ಸಂಕಲನ. 'ಆತ್ಮಸಖಿ' ಮತ್ತು 'ಅರುಂಧತಿ' ಇವರ ಕಥಾಸಂಕಲನಗಳು.

ಸದಾ ಸಾಹಿತ್ಯ ಲೋಕದಲ್ಲಿ, ವಿದ್ಯಾಸಂಸ್ಥೆಗಳಲ್ಲಿ ವಿಚಾರ ಸಂಕಿರಣ ಮತ್ತು ಮಕ್ಕಳಿಗೆ ಪ್ರೇರಣೆಯಾಗಿ ಮಾತಿಗೆ ಆಹ್ವಾನಿತರಾದ ಸವಿತಾ ಶಾಸ್ತ್ರಿ ಅವರು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿಯಾಗಿ ನೇಮಕಗೊಂಡು ಉತ್ತಮ ಕೆಲಸಕ್ಕೂ ಹೆಸರಾಗಿದ್ದಾರೆ. 

ಸವಿತಾ ಶಾಸ್ತ್ರಿ ಅವರ ವಿಜಯ ಕರ್ನಾಟಕ ಕಥಾ ಸ್ಪರ್ಧೆ ಸೇರಿದಂತೆ ಅನೇಕ ಬಹುಮಾನ ಗೆದ್ದಿದ್ದಾರೆ.  ಉಡುಪಿ ಜಿಲ್ಲಾಮಟ್ಟದ 4ನೇ ಮಹಿಳಾ ಕಾಲಮಿತಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಗೌರವ ಪಡೆದಿದ್ದಾರೆ. 

ಪ್ರತಿಭಾವಂತೆ, ಸಕ್ರಿಯೆ, ಉತ್ಸಾಹಿ, ಹಸನ್ಮುಖಿ ಸವಿತಾ ಶಾಸ್ತ್ರಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Savita Shastri

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!